ಪ್ರತಿಮಾನಾಟಕ
🌺 ಪ್ರತಿಮಾನಾಟಕದ ಒಂದು ಸುಮ🌺
*यत्सत्यं परितोषितोस्मि भवता निष्कल्मषात्मा भवान् त्वद्वाक्यस्य वशानुगोस्मि भवत: ख्यातैर्गुणैर्निर्जित: | किन्त्वेन्नृपतेर्वचस्तदनृतं कर्तुं न युक्तं त्वया किञ्चोत्पाद्य भवद्विधं भवतु मे मिथ्याभिधायी पिता ||*
_ರಾಮನು ಭರತನಿಗೆ ನುಡಿಯುವ ಮಾತು. ನಿಜವಾಗಿಯೂ ಈ ನಿನ್ನ ಸ್ನೇಹಮಯವಾದ ಹಾಗೂ ಸರಳತಯಿಂದ ಕೂಡಿದ ನಿನ್ನ ವರ್ತನೆಯು ನನ್ನ ಮನಸ್ಸನ್ನು ಮರುಮಾತಿಲ್ಲದೆ ಒಪ್ಪಿಸುತ್ತಿದೆ. ಲೋಕದಲ್ಲಿ ವಿರಳವಾದ ಈ ನಿನ್ನ ಸೌಜನ್ಯ ಸರಳತೆ ಭ್ರಾತೃವಾತ್ಸಲ್ಯ ಮುಂತಾದ ಗುಣಗಳಿಂದ ನೀನು ನನ್ನನ್ನು ಗೆದ್ದಿರುವಿ. ನೀನು ಹೇಳಿದಂತೆ ಕೇಳಲು ನಾನು ಸಿದ್ಧನಿದ್ದೇನೆ. ನಿನ್ನ ಗುಣಗಳೇ ನನಗೆ ಹಾಗೆ ಮಾಡುವಂತೆ ಪ್ರಚೋದಿಸುತ್ತಿವೆ. ಭರತನ ಮಾತನ್ನು ಯಾವ ಕಾರಣದಿಂದ ನಿರಾಕರಿಸಲು ಸಾಧ್ಯ? ಆದರೆ ಈ ರಾಜ್ಯದಲ್ಲಿ ಭರತನು ಅಭಿಷಿಕ್ತನಾಗಲೆಂಬ ಅಪ್ಪನ ಸುಳ್ಳು ಮಾಡುವುದು ನಿನಗೆ ಸಾಧ್ಯವಿಲ್ಲ. ನಾನು ರಾಜನಾದರೆ ಭರತನು ಕೈಕೇಯಿಯನ್ನು ಕುರಿತು ಕೊಟ್ಟ ಭರತ ರಾಜನಾಗಲೆಂಬ ಮಾತು ಸುಳ್ಳಾಗಿ ಅಪ್ಪನ ಮಾತನ್ನು ತಿರಸ್ಕರಿಸಿದ ಅಥವಾ ಸತ್ಯಪ್ರತಿಜ್ಞ ದಶರಥ ಅಸತ್ಯ ನುಡಿದನೆಂಬ ಅಪಕೀರ್ತಿ ಆವರಿಸುವುದು. ನಿನ್ನಂತಹ ಲೋಕೋತ್ತರ ಗುಣಶಾಲಿಗೆ ಜನ್ಮಕೊಟ್ಟ ನಮ್ಮ ತಂದೆ ಇಂತಹ ಮಾತನ್ನು ಕೇಳಿಸಿಕೊಳ್ಳಬೇಕೆ? ಮಕ್ಕಳು ಸಜ್ಜನರಾಗದಿದ್ದಾಗ ಸುಳ್ಳಾಡಿದರೆ ಒಪ್ಪಬಹುದೇನೋ? ( ಅವರ ಉದ್ಧಾರಕ್ಕೆಂದು) ಆದರೆ ಇಲ್ಲಿ ಹಾಗಿಲ್ಲ. ನೀನು ಅಪ್ಪನನ್ನು ಅಪ್ಪನ ಮಾತನ್ನು ಗೌರವಿಸುವ ಸೌಜನ್ಯಶಾಲಿ ಪುತ್ರನು. ಹಾಗಿರುವಾಗ ನಿನ್ನ ಮಾತಿನಂತೆ ನಾನು ಆಳಿದರೆ ಅಪ್ಪನ ಕೀರ್ತಿ ಮಣ್ಣಾಗುವುದಿಲ್ಲವೇ? ಅಥವಾ ನಮ್ಮ ವಂಶಕ್ಕೆ ಇದು ಕೆಟ್ಟದಲ್ಲವೇ? ಹಾಗಾಗಿ ಅಪ್ಪನ ಮಾತನ್ನು ನಡೆಸಲಾದರೂ ನಾನು ವನವಾಸವನ್ನು ನೀನು ಆಡಳಿತವನ್ನು ನಡೆಸಲೇಬೇಕು. ಭರತನನ್ನು ತರ್ಕಬದ್ಧವಾಗಿ ನಯವಾಗಿ ರಾಮನು ಒಪ್ಪಿಸುತ್ತಿದ್ದಾನೆ. ಅವರ ನಡುವಿನ ಆತ್ಮೀಯತೆ ಕೆಲವು ಸಂದರ್ಭಗಳಲ್ಲಿ ರಾಮ- ಲಕ್ಷ್ಮಣರನ್ನೂ ಮೀರಿಸಿದೆಯೇನೋ ಎಂದೆನಿಸುತ್ತದೆ.ನಾವೂ ನಮ್ಮವರಲ್ಲಿ ಇಂತಹ ಆತ್ಮೀಯತೆ ಬೆಳೆಸಿಕೊಳ್ಳೊಣ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ