ಪೋಸ್ಟ್‌ಗಳು

ಡಿಸೆಂಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಧರ್ಮಶಾಸ್ತ್ರ

ಧರ್ಮಶಾಸ್ತ್ರ ಮಾಸಿಕಾನ್ಯಸಮಾಪ್ಯೈವ ನಾಂದೀಶ್ರಾದ್ಧಂ ನ ಕಾರಯೇತ್| ಸಮಾಪ್ಯ ಚ ಪುನಃ ಕಾಲೇ ಪಿತ್ರೋರ್ಮಾಸಿಕಮಾಚರೇತ್|| ತಂದೆ ತಾಯಿ  ತೀರಿದ ವರ್ಷ ಮಾಸಿಕಗಳನ್ನು ಮುಗಿಸದೇ ನಾಂದೀಶ್ರಾದ್ಧ ಮಾಡುವಂತಿಲ್ಲ. ಶುಭಕಾರ್ಯಕ್ಕೆ ಒಂದು ವೇಳೆ ನಿವೃತ್ತಿ ಮಾಡಿದರೂ ಅದು ಮುಗಿದ ಮೇಲೆ ಮಾಸಿಕವನ್ನು ಮುಂದುವರಿಸಬೇಕು. ನಾವು ಮಕ್ಕಳಾಗಿದ್ದಾಗ ನಮಗೆ ಮೊದಲ ವರ್ಷ ತಿಂಗಳು  ತಿಂಗಳು ಉಪಚಾರ ಮಾಡಿದಂತೆ ಪಿತೃಗಳ ಬಾಧಾಪರಿಹಾರಕ್ಕೆ ಮಾಸಿಕಗಳೂ  ಅವಶ್ಯಕವಾಗಿವೆ. ಸಂಗ್ರಹ ಶ್ರೀನಿಧಿ ಅಭ್ಯಂಕರ್

ಧರ್ಮಶಾಸ್ತ್ರ

                ಧರ್ಮಶಾಸ್ತ್ರ ಅಕ್ಷಯ್ಯಾಸನಯೋಃ ಷಷ್ಠೀ ದ್ವಿತೀಯಾವಾಹನೇ ತಥಾ|ಅನ್ನದಾನೇ ಚತುರ್ಥೀ ಸ್ಯಾಚ್ಛೇಷಾಃ ಸಂಬುದ್ಧಯಃ ಸ್ಮೃತಾಃ|| ನಾರದೀಯ ಪುರಾಣ|| ಶ್ರಾದ್ಧದಲ್ಲಿ ಸಂಕಲ್ಪ, ಅಕ್ಷಯ್ಯ ಹಾಗೂ ಆಸನ ಕೊಡುವಾಗ ಷಷ್ಠೀ ವಿಭಕ್ತಿಯನ್ನೂ ( ಧುರಿಲೋಚನಸಂಜ್ಞಕಾನಾಂ ) ಆವಾಹನೆ ಮಾಡುವಾಗ ದ್ವಿತೀಯಾ ವಿಭಕ್ತಿಯನ್ನೂ ( ಧುರಿಸಂಜ್ಞಕಂ, ಪಿತರಂ) ಅನ್ನದಾನ ಮಾಡುವಾಗ ಚತುರ್ಥೀ ವಿಭಕ್ತಿಯನ್ನೂ ( ಪಿತೃಪಿತಾಮಹಪ್ರಪಿತಾಮಹೇಭ್ಯಃ) ಉಳಿದ ಕಡೆಗಳಲ್ಲಿ ಸಂಬೋಧನಾವಿಭಕ್ತಿಯನ್ನು ಬಳಸಬೇಕು.(ಪಿತಃ ಇದಂತೇ ಅರ್ಘ್ಯಮ್) ಸಂಗ್ರಹ  ಶ್ರೀನಿಧಿ ಅಭ್ಯಂಕರ್

ಧರ್ಮಶಾಸ್ತ್ರ

            ಧರ್ಮಶಾಸ್ತ್ರ ಆಮಂತ್ರಿತೋ ಜಪೇದ್ಧೋಗ್ಧ್ರೀಂ ಆಸೀನಸ್ತು ನಿಷಂಗಿಣಃ| ಶ್ರಾದ್ಧಾಂತೇ ವಾಮದೇವೀಯಂ ಶ್ರಾದ್ಧಭೋಕ್ತಾ ನ ದೋಷಭಾಕ್|| ವಾಯುಪುರಾಣ|| ಶ್ರಾದ್ಧಕ್ಕಾಗಿ ನಿಮಂತ್ರಣ ಬಂದ ಕೂಡಲೇ *ಉಪಹ್ವಯೇ ಸುದುಘಾಂ* *ಹಿಂಕೃಣ್ವತೀ* *ಆ ಬ್ರಹ್ಮನ್ ಬ್ರಾಹ್ಮಣೋ*  ಮಂತ್ರವನ್ನೂ  ಕುಳಿತಾಗ *ಇಂದ್ರ ದೃಹ್ಯಯಾಮ* *ವಾಶೀಮಂತ ಋಷ್ಟಿಮಂತ* *ಸ ಇಷುಹಸ್ತೈಃ* *ನಮಃ ಕಕುಭಾಯ ನಮೋ ನಿಷಂಗಿಣೇ* ಶ್ರಾದ್ಧದ ಕೊನೆಗೆ ವಿಸರ್ಜನೆ ಆದ ಮೇಲೆ *ಕಯಾನಶ್ಚಿತ್ರ* ಅಥವಾ ವಾಮದೇವೀಯ ಸಾಮವನ್ನು ಪಠಿಸಿದರೆ ಶ್ರಾದ್ಧ ಭೋಕ್ತೃವು ದೋಷಕ್ಕೆ ಒಳಗಾಗುವುದಿಲ್ಲ.  ಭಗವಂತನ ಸ್ಮರಣೆಯು ಮಂತ್ರಗಳ ಪಠನೆಯು ಪರಾನ್ನದ ದೋಷವನ್ನು ದೂರ ಮಾಡುತ್ತದೆ. ಸಂಗ್ರಹ ಶ್ರೀನಿಧಿ ಅಭ್ಯಂಕರ್

ಧರ್ಮಶಾಸ್ತ್ರ

          ಧರ್ಮಶಾಸ್ತ್ರ ನ ಬ್ರಾಹ್ಮಣಂ ಪರೀಕ್ಷೇತ ದೈವೇ ಕರ್ಮಣಿ ಧರ್ಮವಿತ್| ಪಿತ್ರ್ಯೇ ತು ಕರ್ಮಣಿ ಪ್ರಾಪ್ತೇ ಪರೀಕ್ಷೇತ ಪ್ರಯತ್ನತಃ | ದೇವಕಾರ್ಯಾದ್ದ್ವಿಜಾತೀನಾಂ ಪಿತೃಕಾರ್ಯಂ ವಿಶಿಷ್ಯತೇ|| ಮನುಸ್ಮೃತಿ|| ದೈವಿಕ ಕರ್ಮಗಳಲ್ಲಿ ಪಾಲ್ಗೊಳ್ಳುವ ಬ್ರಾಹ್ಮಣರ ವಿದ್ಯೆ ಆಚಾರ ಮುಂತಾದವನ್ನು ಹೆಚ್ಚು ಪರೀಕ್ಷೆಗೆ ಒಳಪಡಿಸಬಾರದು. ಅದೇ ಪಿತೃಗಳ ಕರ್ಮ ಶ್ರಾದ್ಧ ಮಹಾಲಯ ಮೊದಲಾದವುಗಳಿಗೆ ಆಹ್ವಾನಿಸುವಾಗ ಅವರ ಅಚಾರ-ವಿಚಾರ-ವಿದ್ಯೆ ಮೊದಲಾದವುಗಳ ಬಗೆಗೆ ತುಂಬಾ ಗಮನ ಕೊಡಬೇಕು. ಏಕೆಂದರೆ ದೇವಕಾರ್ಯಕ್ಕಿಂತ ಪಿತೃಗಳ ಕಾರ್ಯವು ದ್ವಿಜರಿಗೆ ವಿಶಿಷ್ಟವಾಗಿದೆ.ಯಾರಾದರೂ ನಡೀತದೆ ಎಂಬ ಮನೋಭಾವ ಸಲ್ಲದು. ಸಂಗ್ರಹ ಶ್ರೀನಿಧಿ ಅಭ್ಯಂಕರ್

ಧರ್ಮಶಾಸ್ತ್ರ

      ಧರ್ಮಶಾಸ್ತ್ರ ಸೂಕ್ತ ಸ್ತೋತ್ರ ಜಪಂ ತ್ಯಕ್ತ್ವಾ ಪಿಂಡಾಘ್ರಾಣಂ ಚ ದಕ್ಷಿಣಾಮ್| ಆಹ್ವಾನಂ ಸ್ವಾಗತಂ ಚ ಅರ್ಘ್ಯಂ ವಿನಾ ವ ಪರಿವೇಷಣಮ್| ವಿಸರ್ಜನಂ ಸೌಮನಸ್ಯಮಾಶಿಷಾಂ ಪ್ರಾರ್ಥನಾಂ ತಥಾ| ವಿಪ್ರಪ್ರದಕ್ಷಿಣಾಂ ಚೈವ ಸ್ವಸ್ತಿವಾಚನಕಂ ತಥಾ| ಪಿತೃನುದ್ದಿಶ್ಯ ಕರ್ತವ್ಯಂ ಪ್ರಾಚೀನಾವೀತಿನಾ ಸದಾ| ಜಮದಗ್ನಿ| ನಿರ್ಣಯಸಿಂಧು. ಅನ್ನಸೂಕ್ತ, ವರುಣ ಸೂಕ್ತ ಮೊದಲಾದ ಪಠನದಲ್ಲಿ, ಅರ್ಘ್ಯ ಕೊಡುವ ಕಾಲದಲ್ಲಿ, ವಿಪ್ರರಿಗೆ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡುವ ಕಾಲದಲ್ಲಿ, ಸ್ವಸ್ತಿ ದಾತಾರೋ ಇತ್ಯಾದಿ ವಾಚನ ಕಾಲದಲ್ಲಿ ಸವ್ಯವಾಗಿ ಇರಬೇಕು. ಉಳಿದಂತೆ ಆವಾಹನೆ, ಪಿಂಡದ ಆಘ್ರಾಣ, ದಕ್ಷಿಣೆ ನೀಡುವಾಗ, ಸ್ವಾಗತ ಮತ್ತು ಪರಿವೇಷಣ ಕಾಲದಲ್ಲಿ, ವಿಸರ್ಜನೆ ಹಾಗೂ ಸೌಮನಸ್ಯವನ್ನು ಮತ್ತು ಪ್ರಾರ್ಥನೆ ಮಾಡುವ ಕಾಲದಲ್ಲಿ ಪಿತೃಗಳ  ಉದ್ದೇಶ ಇದ್ದಾಗ ಅಪಸವ್ಯದಲ್ಲೇ ಮಾಡಬೇಕು. ಸಂಗ್ರಹ ಶ್ರೀನಿಧಿ ಅಭ್ಯಂಕರ್ 

ಧರ್ಮಶಾಸ್ತ್ರ

            ಧರ್ಮಶಾಸ್ತ್ರ ದಂತಧಾವನ ತಾಂಬೂಲಂ ತೈಲಾಭ್ಯಂಗಂ ಚ ಭೋಜನಮ್ | ರತ್ಯೌಷಧಪರಾನ್ನಂ ಚ ಶ್ರಾದ್ಧಕೃತ್ಸಪ್ತ ವರ್ಜಯೇತ್ || ಜಾಬಾಲಃ|| ಶ್ರಾದ್ಧ ಮಾಡುವ ವ್ಯಕ್ತಿಯು ಶ್ರಾದ್ಧ ದಿನದಂದು ಹಲ್ಲುಜ್ಜುವುದು, ಎಲೆ ಅಡಿಕೆ ತಿನ್ನುವುದು, ಎಣ್ಣೆ ಹಚ್ಚಿ ಅಭ್ಯಂಗ ಮಾಡುವುದು,  ತಿನ್ನುವುದು, ಮೈಥುನ, ಔಷಧಿ ಸೇವನೆ, ಇನ್ನೊಬ್ಬರ ಊಟ ಹಾಗೂ ಪರಿಗ್ರಹ ಇಷ್ಟು ವಿಷಯಗಳನ್ನು ಬಿಡಬೇಕು. ತನ್ನ ಮನೆಯಲ್ಲಿ ಶ್ರಾದ್ಧ ಮುಗಿಸಿ ಇನ್ನೊಬ್ಬರ ಮನೆಯಲ್ಲಿ ಊಟ ಮಾಡುವುದು ಅಥವಾ ದಕ್ಷಿಣೆ ತೆಗೆದುಕೊಳ್ಳುವುದು ಮಾಡಿದರೆ ಶ್ರಾದ್ಧ ಮಾಡಿಯೂ ಪ್ರಯೋಜನವಿಲ್ಲ. ಸಂಗ್ರಹ  ಶ್ರೀನಿಧಿ ಅಭ್ಯಂಕರ್

ಧರ್ಮಶಾಸ್ತ್ರ

ಧರ್ಮಶಾಸ್ತ್ರ काममामरणात् तिष्ठेत् गृहे कन्यर्तुमत्यपि। न चैवैनां प्रयच्छेत्तु गुणहीनाय कर्हिचित्।। ಮನುಸ್ಮೃತಿ. ಮನುವು ಸ್ತ್ರೀಯರ ವಿಷಯದಲ್ಲಿ ಎಷ್ಟು ಒಳ್ಳೆಯ ಭಾವನೆ ಹೊಂದಿದ್ದನೆಂದು ಇಲ್ಲಿ ಗಮನಿಸಬಹುದು. ಪ್ರಾಪ್ತ ವಯಸ್ಕಳಾದ ತನ್ನ ಮಗಳಿಗೆ ಯೋಗ್ಯನಾದ ವರ ಅಕಸ್ಮಾತ್ ದೊರಕಲಿಲ್ಲ ಎಂದರೆ ಜೀವನಪೂರ್ತಿ ಮನೆಯಲ್ಲಿ ಅಪ್ಪನೇ ಸಾಕಿದರೂ ಅಡ್ಡಿಯಿಲ್ಲ. ಅದು ಧರ್ಮವಿರುದ್ಧ ಆಗದು ಅಥವಾ ಆಶ್ರಮ ಧರ್ಮ ಲೋಪ ಆಗದು.ಆದರೆ ಎಂದೆಂದಿಗೂ ಅಯೋಗ್ಯನೊಬ್ಬನಿಗೆ  ಗಂಡು ಎಂಬ ಏಕೈಕ ಕಾರಣಕ್ಕೆ ಕೊಟ್ಟು ಮದುವೆ ಮಾಡಬಾರದು. ಹಾಗಾಗಿಯೇ ಸಾವಿತ್ರಿಯ ವಿಷಯದಲ್ಲಿ ಅವಳ ತಂದೆ ಉದಾರವಾಗಿದ್ದನು. ಸ್ತ್ರೀ ಎನ್ನುವುದು ಪೂಜ್ಯತೆಯ ಸಂಕೇತ. ಅವಳು ಎಂದಿಗೂ ಅಯೋಗ್ಯರ ಪಾಲಾಗಬಾರದು ಎಂಬ ಎಚ್ಚರ ಮನುವಿನ ಆದೇಶದಲ್ಲಿ ಇದೆ. ಸಂಗ್ರಹ ಶ್ರೀನಿಧಿ ಅಭ್ಯಂಕರ್

ಧರ್ಮಶಾಸ್ತ್ರ

                  ಧರ್ಮಶಾಸ್ತ್ರ ಆದದೀತ ನ ಶೂದ್ರೋಪಿ ಶುಲ್ಕಂ ದುಹಿತರಂ ದದತ್ | ಶುಲ್ಕಂ ಗೃಹ್ಣನ್ ಕುರುತೇ ಛನ್ನಂ ದುಹಿತೃವಿಕ್ರಯಮ್|| ಮನುಸ್ಮೃತಿ. ನಾಲ್ಕು ವರ್ಣದವರಲ್ಲಿ ಯಾರೊಬ್ಬರೂ ತನ್ನ ಮಗಳನ್ನು ಧಾರೆ ಎರೆದುಕೊಡುವಾಗ ಪ್ರತಿಯಾಗಿ ಧನವನ್ನು ಪಡೆಯಬಾರದು. ಒಂದು ವೇಳೆ ಹಾಗೆ ತೆಗೆದುಕೊಂಡರೆ ಅದು ಧನಕ್ಕಾಗಿ ಆ ಕನ್ಯೆಯನ್ನು ಮಾರಿದಂತಾಗುತ್ತದೆ. ರಹಸ್ಯವಾಗಿ ಮಾರುವುದೂ ಒಂದೇ, ಬಹಿರಂಗವಾಗಿ ಬೇಡಿಕೆ ಇಟ್ಟು ಹಣ ಪಡೆಯುವುದೂ ಒಂದೇ ಆಗಿದೆ. ಪತಿಯ ಅಕಾರ್ಯದ ಬಗ್ಗೆ ಅಥವಾ ಬೇಜವಾಬ್ದಾರಿಯ ಬಗ್ಗೆ ಪ್ರಶ್ನೆ ಮಾಡುವ ಹಕ್ಕೂ ಇಲ್ಲದಂತಾಗುತ್ತದೆ. ಹಾಗಾಗಿ ಎಂದಿಗೂ ಹೆಣ್ಣು ಹೆತ್ತವರು ದುಡ್ಡಿನ ಆಸೆಗೋ ಇನ್ಯಾವುದೋ ಆಮಿಷಕ್ಕೆ ಒಳಗಾಗಿ ಮಗಳನ್ನು ಅಯೋಗ್ಯರ ಕೈಯಲ್ಲಿ ಇರಿಸಬಾರದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಧರ್ಮ ಸೂಕ್ಷ್ಮ

         ಧರ್ಮಸೂಕ್ಷ್ಮ सत्यामपि तपःसिद्धौ नियमापेक्षया मुनिः। कल्पवित् कल्पयामास वन्यामेवास्य संविधाम्।। रघुवंशम्। ದಿಲೀಪನು ವ್ರತದ ನಿಯಮ ಪಾಲಿಸಿ ಫಲ ಪಡೆಯಲೆಂಬ ಇಚ್ಛೆಯಿಂದ ವಸಿಷ್ಠನು ರಾಜನಿಗೆ ಬೇಕುಬೇಕಾದ್ದನ್ನು ಅನುಕೂಲ ಮಾಡಿಕೊಡುವ ಸಾಮರ್ಥ್ಯ ಇದ್ದರೂ ಗುಡಿಸಲ ವಾಸವನ್ನೇ ಒದಗಿಸಿದನು. ಒಂದು ಕಾಮನೆ ಇಟ್ಟುಕೊಂಡು ಕರ್ಮದಲ್ಲಿ ತೊಡಗಿದಾಗ ಆ ಕರ್ಮೋಕ್ತ ನಿಯಮ ಪಾಲಿಸುವುದು ಅತ್ಯಂತ ಅವಶ್ಯಕ. ಯಜಮಾನನ ಕರ್ಮವನ್ನು ತಾನು ಮಾಡುವ ಪುರೋಹಿತನು ಈ ವಿಷಯದಲ್ಲಿ ಎಚ್ಚರ ವಹಿಸಬೇಕು. ಶ್ರೀಮಂತ ಅಥವಾ ಪ್ರತಿಷ್ಠಿತ ಇತ್ಯಾದಿ ಕಾರಣದಿಂದ ಕರ್ಮದ ನಿಯಮಗಳ ವಿನಾಯಿತಿ ಅಥವಾ ಔದಾಸೀನ್ಯವು ಎಂದಿಗೂ ಸಲ್ಲದು. ಹಾಗೆ ಮಾಡಿದರೆ ಕಾರಯಿತಾ ಚ ಸಮಭಾಗೀ ಎಂಬಂತೆ ನಾವು ಪಾಪಭಾಗಿಗಳಾಗಬೇಕಾದೀತು. ವಸಿಷ್ಠರ ನಡೆಯೇ ನಮಗೆ ಆದರ್ಶ. ಲೇಖನ: ಶ್ರೀನಿಧಿ ಅಭ್ಯಂಕರ್.