ರಾಮಾಯಣ ೧೯೫
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೯೫🏝📖 *ಯದಾ ಸ್ವಯಂ ನ ಯಜ್ಞಸ್ಯ ವಿಘ್ನಕರ್ತಾ ಮಹಾಬಲಃ | ತೇನ ಸಂಚೋದಿತೌ ದ್ವೌ ತು ರಾಕ್ಷಸೌ ಸುಮಹಾಬಲೌ||* _ವಿಶ್ವಾಮಿತ್ರರ ಮಾತು. ಯಾರವರು ನಿಮಗೆ ತೊಂದರೆ ನೀಡುತ್ತಿರುವವರು ಎಂಬ ದಶರಥನ ಪ್ರಶ್ನೆಗೆ ಹೇಳುತ್ತಿದ್ದಾರೆ-ರಾವಣನೆಂಬ ಲೋಕೈಕವೀರನು ನೇರವಾಗಿ ತಾನು ಯಜ್ಞಕ್ಕೆ ವಿಘ್ನ ತರದೇ ತನ್ನ ಅನುಚರರ ಮೂಲಕ ತೊಂದರೆ ಕೊಡುತ್ತಿರುವನು. ರಾವಣನಿಗೆ ನಿಜಕ್ಕಾದರೆ ವಿಶ್ವಾಮಿತ್ರರಿಂದ ಯಾವ ತೊಂದರೆಯೂ ಇಲ್ಲ. ವಿಶ್ವಾಮಿತ್ರರು ಲೋಕ ಸದಾ ಸುಭಿಕ್ಷವಾಗಿರಲಿ ಎಂದು ಬಯಸುವವರು. ಯಾರಿಗೂ ಕೇಡನ್ನು ಬಯಸದ ತಪಸ್ವಿ. ಅಂತಹ ಋಷಿಗಳ ತಪಸ್ಸು ಕೆಡಿಸುವ ಕುಕೃತ್ಯವೇ ರಾವಣನನ್ನು ಕೊಲ್ಲಲು ಪ್ರಮುಖ ಕಾರಣ. ಅನೇಕರ ಆಕ್ಷೇಪಕ್ಕೆ ವಾಲ್ಮೀಕಿಗಳು ಅಲ್ಲಲ್ಲಿ ರಾವಣನ ದುಷ್ಕೃತ್ಯಗಳನ್ನು ವರ್ಣಿಸುತ್ತಾ ಹೋಗಿ ಸ್ಪಷ್ಟನೆ ಕೊಟ್ಟಿದ್ದಾರೆ. ರಾಮ ಕೇವಲ ಸೀತೆಗಾಗಿ ಅಲ್ಲದೆ ಸೀತೆಗೆ ಜನ್ಮ ನೀಡಿದ ಭೂತಾಯಿಯ ಉದ್ಧಾರಕ್ಕಾಗಿಯೂ ರಾವಣನಂತಹ ಕಟುಕರನ್ನು ಕೊಂದದ್ದು. ಲೋಕಕ್ಕೆ ಒಳಿತನ್ನು ಬಯಸುವ ಎಲ್ಲರ ಕ್ಷೇಮ ಬಯಸುವ ತನ್ನ ಆಳ್ವಿಕೆಗೆ ಕಿಂಚಿತ್ತೂ ಭಂಗ ಬರದ ಅಥವಾ ಸಂಬಂಧಪಡದ ವಿಶ್ವಾಮಿತ್ರರ ಯಜ್ಞಕ್ಕೆ ವಿಘ್ನ ತರುವ ಅವನ ಮನಸ್ಥಿತಿ ಎಷ್ಟು ದುಷ್ಟವಿದ್ದೀತು! ತಮ್ಮ ದೇಶಕ್ಕೆ ಸಂಬಂಧಿಸದ ವಿಷಯದಲ್ಲಿ ಮತ್ತೊಂದು ದೇಶ ತಲೆ ಹಾಕಿದರೆ ಈಗಿನ ಕಾಲದಲ್ಲಿ ಯುದ್ಧ. ಹಿಂದೆಯೂ ಅದೇ ರೀತಿ._ *ದೇವದಾನವಗಂಧರ್ವಾ ಯಕ್ಷಾಃ ಪತಗಪನ್ನಗಾಃ|| ಸ ಹಿ...