ಪೋಸ್ಟ್‌ಗಳು

ಜೂನ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಮಾಯಣ-೧೬೨

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೨🏝📖       *ಋಷ್ಯಶೃಂಗೋ ವನಚರಸ್ತಪಃಸ್ವಾಧ್ಯಾಯನೇ ರತಃ | ಅನಭಿಜ್ಞಃ ಸ ನಾರೀಣಾಂ ವಿಷಯಾಣಾಂ ಸುಖಸ್ಯ ಚ||* _ದಶರಥನು ಋಷ್ಯಶೃಂಗನನ್ನು ಕರೆತಂದ ಬಗೆಯನ್ನು ವಿವರಿಸಬೇಕೆಂದು ಸುಮಂತ್ರನಲ್ಲಿ ಕೇಳಿದಾಗ ಸುಮಂತ್ರ ವಿವರಿಸುತ್ತಿದ್ದಾನೆ. ಈ ಸುಮಂತ್ರ ಸೂತ ಹಾಗೂ ಮಂತ್ರಿಯೂ ಹೌದು. ಸನತ್ಕುಮಾರನ ಬಳಿ ಈ ಆಖ್ಯಾನ ಅವನು ಕೇಳಿದನೆಂದರೆ ಅವನ ಜ್ಞಾನ ಎಷ್ಟಿತ್ತೆಂದು ನಾವು ಊಹಿಸಬಹುದು. ದಶರಥನಿಗೂ ಮಿಗಿಲಾದ ಜ್ಞಾನ ಅವನಿಗಿತ್ತು. ಹಾಗಾಗಿ ಜ್ಞಾನ ಸಂಪಾದನೆಗೆ ಜಾತಿ- ಮತ- ಧನ ಎಂದಿಗೂ ಕಾರಣವಲ್ಲ. ಅದೊಂದು ಭ್ರಮೆ ಅಷ್ಟೇ. ಋಷ್ಯಶೃಂಗನ ದಿನಚರಿ ಹೇಗಿತ್ತೆಂದರೆ ಈಗಿನ ಕಾಲದ ನಮ್ಮ ಕಲ್ಪನೆಗೂ ಬರಲಾರದು. ಯಾವ ಸ್ತ್ರೀಯನ್ನೂ ಅವನು ಈವರೆಗೆ ನೋಡಿಲ್ಲ. ಕಾಡಿನಲ್ಲಿ ಸಂಚಾರ, ತಪಸ್ಸು, ಸ್ವಾಧ್ಯಾಯ, ಅಧ್ಯಯನ ಇವುಗಳಲ್ಲೇ ನಿರತನು ಅವನು. ವಿಷಯಗಳಾದ ರೂಪ-ರಸ-ಗಂಧ-ಶಬ್ದ-ಸ್ಪರ್ಶಗಳ ಸುಖವೇನೆಂದೇ ಅವನಿಗೆ ಗೊತ್ತಿಲ್ಲ. ಇದು ರುಚಿ, ಇದು ಚಂದ, ಇದು ಇಂಪು, ಇದು ತಂಪು, ಇದು ಪರಿಮಳ ಎನ್ನುವ ಭೇದ ಅವನಿಗೆ ತಿಳಿದಿಲ್ಲ. ತನಗೆ ಸಿಕ್ಕಿರುವಲ್ಲೇ ಆನಂದ ಅನುಭವಿಸುತ್ತಾ ಆನಂದರೂಪಿಯಾಗಿ ವಿಹರಿಸುತ್ತಿದ್ದಾನೆ. ಹಾಗಾಗಿಯೇ ಅವನ ಶಕ್ತಿ ಬರಗಾಲದಲ್ಲೂ ಅತಿವೃಷ್ಟಿ ಬರಿಸುವಷ್ಟಿದೆ. ನಾವೂ ಋಷ್ಯಶೃಂಗನ ದಾರಿ ಸ್ವಲ್ಪ ಕ್ರಮಿಸಿದರೂ ಬಹುಶಃ ನಮ್ಮ ಗಮನಾಗಮನಗಳು ಒಳಿತನ್ನು ಉಂಟು ಮಾಡಿಯಾವು._ *ಪಿತುಃ ಸ ನಿತ್...

ಪದಶಕ್ತಿ-೩೮

🏹*ಪದಶಕ್ತಿ* ---೩೮🌄  _*ವೈಶ್ವಾನರ*_ _ಅಗ್ನಿಯ ಇನ್ನೊಂದು ಹೆಸರಿನ ಬಗ್ಗೆ ಇವತ್ತು ನೋಡೋಣ. *ವಿಶ್ವಶ್ಚಾಸೌ ನರಶ್ಚ* ಎಂಬಂತೆ ವಿಶ್ವದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರುವವನಾದ್ದರಿಂದ ಇವನು ವೈಶ್ವಾನರ._  _ಉದರದಲ್ಲಿನ ಆಹಾರ ಜೀರ್ಣವಾಗಲು ವೈಶ್ವಾನರ ಎಂಬ ಬೆಂಕಿ ಮುಖ್ಯ ಕಾರಣ. ಜಿಡ್ಡು ಈ ಅಗ್ನಿಯನ್ನು ಜಾಗೃತವಾಗಿ ಇಡುತ್ತದೆ. ಎಣ್ಣೆ- ತುಪ್ಪ ಮೊದಲಾದವುಗಳ ಸೇವನೆ ಇದೇ ಕಾರಣದಿಂದ ಮಾಡುವಂತಹದು._ _*ವಿಶ್ವಾನ್ನರಾನ್ ಇತಃ ನಯತಿ* ಜನರನ್ನು ಇಲ್ಲಿಂದ ಇನ್ನೊಂದು ಲೋಕಕ್ಕೆ ಕರೆದೊಯ್ಯುವುದು ಎಂಬ ಅರ್ಥದಲ್ಲಿ ಬೆಂಕಿಗೆ ವೈಶ್ವಾನರ ಎಂಬ ಹೆಸರು. ದಹನ ಮಾಡಿದಾಗ ಆತ್ಮವು ಶರೀರದ ವ್ಯಾಮೋಹ ತೊರೆದು ಇನ್ನೊಂದು ಕಡೆ ಪ್ರಯಾಣ ಬೆಳೆಸಲು ಅಗ್ನಿ ಮುಖ್ಯ ಕಾರಣ._ _*ವಿಶ್ವಾನ್ ಜಂತೂನ್ ನಯತಿ* ಜೀವಿಗಳಿಗೆ ಪ್ರಲಯಕಾಲದಲ್ಲಿ ಒಂದು ಗತಿ ಕಾಣಿಸುವ ಮುಖ್ಯ ಸಾಧನಗಳಲ್ಲಿ ಒಂದು ಬೆಂಕಿ. ಹಾಗಾಗಿ ವೈಶ್ವಾನರ._ _*ವಿಶ್ವಾನರಸ್ಯ ಅಪತ್ಯಂ ಇತಿ* ವೈಶ್ವಾನರ. ಎಲ್ಲಾ ಜೀವಿಗಳಲ್ಲಿ  ವಿಶ್ವಾನರ ಎಂಬ ಪ್ರಾಣವಾಯುವಿನಿಂದ ಜನಿಸುವುದು ಈ ವೈಶ್ವಾನರ. ಗೀತೆಯಲ್ಲಿ ಇದನ್ನೇ ಹೇಳಿದ್ದು- *# ಅಹಂ ವೈಶ್ವಾನರೋ ಭೂತ್ವಾ#*  ಭಗವಂತನು ವೈಶ್ವಾನರನಾಗಿ ಜೀವಿಗಳ ಭಕ್ಷ್ಯ- ಭೋಜ್ಯ- ಲೇಹ್ಯ- ಚೋಷ್ಯಗಳೆಂಬ ನಾಲ್ಕು ವಿಧದ ಅನ್ನವನ್ನು ಜೀರ್ಣಮಾಡುತ್ತಾನೆ ಅಥವಾ ತಿನ್ನುತ್ತಾನೆ._ _ಚಿತ್ರಕ ಎಂಬ ಮರಕ್ಕೂ ವೈಶ್ವಾನರ ಎಂಬ ಹೆಸರಿದೆ. ಬಹುಶಃ ಆ ಮರ ಉರಿಯುವ ಬೆಂಕಿಯಂತ...

ರಾಮಾಯಣ-೧೬೧

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೧🏝📖      *ತಸ್ಯ ವ್ಯತಿಕ್ರಮಾದ್ರಾಜ್ಞೋ ಭವಿಷ್ಯತಿ ಸುದಾರುಣಾ ಅನಾವೃಷ್ಟಿಃ ಸುಘೋರಾ ವೈ ಸರ್ವಭೂತದಯಾವಹಾ* _ಸೂತನಾದ ಸುಮಂತ್ರನು ದಶರಥನಿಗೆ ಋಷ್ಯಶೃಂಗನ ಕಥೆ ಹೇಳುತ್ತಾ ನುಡಿಯುವ ಮಾತು. ಮಹಾಬಲಶಾಲಿಯಾದ ರೋಮಪಾದನು ಅಂಗದೇಶವನ್ನು ಆಳುತ್ತಿದ್ದಾಗ ಧರ್ಮವ್ಯತಿಕ್ರಮ ಆಚರಿಸಿದ ಕಾರಣ ಅನಾವೃಷ್ಟಿ ತಲೆದೋರಿತು. ರೋಮಪಾದನು ಬಹಳ ಅಧ್ಯಯನ ನಡೆಸಿದ್ದನು ಹಾಗೂ ಒಳ್ಳೆಯ ರೀತಿಯಲ್ಲಿ ರಾಜ್ಯವಾಳುತ್ತಿದ್ದನು. ಆದರೂ ಯಾವುದೋ ಸಂದರ್ಭದಲ್ಲಿ ಅವನು ಮಾಡಿದ ಅನರ್ಥ ಇಡೀ ದೇಶಕ್ಕೆ ಗಂಡಾಂತರ ತಂದುಕೊಟ್ಟಿತು. ರಾಜನ ಒಂದು ಅನರ್ಥ ಲಕ್ಷಾಂತರ ಪ್ರಜೆಗಳ, ಜೀವಿಗಳ ಪ್ರಾಣಕ್ಕೆ ಕುತ್ತು ತಂದಿತು. ಹಾಗಾಗಿ ನಾವು ರಾಜನನ್ನು ಆಯ್ಕೆ ಮಾಡುವಾಗ ಧರ್ಮಿಷ್ಠರನ್ನು ಆರಿಸುವುದು ನಮ್ಮ ಕ್ಷೇಮಕ್ಕಾಗಿ ತುಂಬಾ ಆವಶ್ಯಕ. ಧರ್ಮ ಮೀರಿ ನಡೆಯುವನೆಂದರೆ ನಾವೇ ಮುಂದೆ ಕಷ್ಟ ಅನುಭವಿಸಬೇಕು ಎಂದು ಅರ್ಥ._ *ಭವಂತಃ ಶ್ರುತಧರ್ಮಾಣೋ ಲೋಕಚಾರಿತ್ರವೇದಿನಃ ಸಮಾದಿಶಂತು ನಿಯಮಂ ಪ್ರಾಯಶ್ಚಿತ್ತಂ ಯಥಾ ಭವೇತ್* _ತಪ್ಪು ಮಾಡಿ ಅದನ್ನು ತಿದ್ದಿಕೊಳ್ಳುವ ಮನಸ್ಸು ರೋಮಪಾದನಿಗಿತ್ತು. ಹಾಗಾಗಿ ಜ್ಞಾನಿಗಳನ್ನು ಕರೆದು ಹೀಗೆ ಅರಿಕೆ ಮಾಡಿಕೊಳ್ಳುತ್ತಾನೆ- ನಾನು ತಪ್ಪೆಸಗಿದ್ದು ಹೌದು, ನೀವು ಅದನ್ನು ಅರಿತಿರುವಿರಿ, ನನ್ನ ತಪ್ಪಿಗೆ ಸರಿಯಾದ ಪ್ರಾಯಶ್ಚಿತ್ತ ವಿಧಿಸಿರಿ. ಏನು ಮಾಡಿದರೆ ಧರ್ಮವ್ಯತಿಕ್ರಮದ ದೋಷ ಪರಿಹಾರ ಆಗುವುದೋ ಅಂ...

ಪದಶಕ್ತಿ-೩೭

🏹*ಪದಶಕ್ತಿ* ---೩೭🌄  *ಅಗ್ನಿ* _*ಅಂಗತಿ ಊರ್ಧ್ವಂ ಗಚ್ಛತಿ* ಎಂದರೆ ಮೇಲಕ್ಕೆ ಹೋಗುವಂತಹ ವಸ್ತುವೇ ಅಗ್ನಿ. ಬೆಂಕಿ ಉರಿದು ಎತ್ತರೆತ್ತರಕ್ಕೆ ಚಾಚುವುದು ಅದರ ಸಹಜತೆ._ _ಚಲನೆಯಿಲ್ಲದ ವಸ್ತುವಿಗೂ ಚಲನೆ ಕೊಡುವ ಕಾರಣ ಅಗ್ನಿ ಎಂದು ಇನ್ನೊಂದು ಅರ್ಥ._ _ಅಗ್ನಿ ಮುಖ್ಯವಾಗಿ ಮೂರು ವಿಧ. ಭೌಮ,ದಿವ್ಯ,ಜಾಠರ. ಕಟ್ಟಿಗೆ ಮೊದಲಾದ ಉರುವಲುಗಳಿಂದ ಉರಿಸುವಂತಹ ಬೆಂಕಿ ಭೌಮ. ನೀರು-ಗಾಳಿ ಮೊದಲಾದವುಗಳ ಜೊತೆಗೆ ಹುಟ್ಟುವಂತಹದು ದಿವ್ಯ. ಮಿಂಚು ಮೊದಲಾದದ್ದು. ಇವೆರಡಕ್ಕೂ ಊರ್ಧ್ವಗತಿ. ಮೂರನೆಯ ಅಗ್ನಿ ತಿಂದ ಆಹಾರ ಕರಗಿಸಿ ದೇಹದ ಉಷ್ಣಾಂಶವನ್ನು ರಕ್ಷಿಸುವಂತಹದು. ಇದು ಹೆಚ್ಚಾದರೆ ದೇಹಕ್ಕೆ ಸೇರಬೇಕಾದ ಎಲ್ಲವನ್ನೂ ಸುಟ್ಟು ಭಸ್ಮಕ ಎಂದು ಕರೆಸಿಕೊಳ್ಳುತ್ತದೆ._ _ನಿತ್ಯ ಆರಾಧಿಸುವ ಅಗ್ನಿಯು ಮೂರು ಕಾಲಕ್ಕೆ ಮೂರು ವಿಧ. ಆಹವನೀಯ-ದಕ್ಷಿಣ- ಗಾರ್ಹಪತ್ಯ._ _ಋಗ್ವೇದದಲ್ಲಿ ಸುಮಾರು ಇನ್ನೂರ ಐವತ್ತಕ್ಕೂ ಮೀರಿ ಸೂಕ್ತಗಳು ಈ ಅಗ್ನಿಯನ್ನು ಸ್ತುತಿಸಿವೆ. ಅಗ್ನಿಯನ್ನು ಹೊಗಳುವ ಮಂತ್ರಗಳು ಎಲ್ಲಾ ವೇದಗಳಲ್ಲೂ ಸಹಜವಾಗಿವೆ. ಅಗ್ನಿಯು ಬರೀ ವೇದಪರಂಪರೆಯವರಿಗೆ ಮಾತ್ರ ದೇವನಾಗಿರದೆ ಯಹೂದಿಯರಿಗೆ-ಪಾರ್ಸಿಗಳಿಗೆ- ಜ್ಯೂಗಳಿಗೆ- ರೋಮನ್ನರಿಗೆ ಹೀಗೆ ಹೆಚ್ಚಿನ ಧರ್ಮಗಳಲ್ಲಿ ಪೂಜ್ಯನಾಗಿರುವುದು ಅವನ ಮಹತ್ವಕ್ಕೆ ಸಾಕ್ಷಿ._ _ವೇದದ ನುಡಿಯಂತೆ ಹಿಂದೊಮ್ಮೆ ಅಗ್ನಿ ಕೋಪಿಸಿಕೊಂಡು ಲೋಕದಲ್ಲಿ ಅವ್ಯವಸ್ಥೆ ತೋರಿದಾಗ ದೇವತೆಗಳು ಅವನಿಗೂ ಅವನ ಮೂವರು ತಮ್ಮಂದಿರಿಗೂ ಹವಿರ್ಭಾ...

ರಾಮಾಯಣ-೧೬೦

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೦🏝📖     *ಛಿದ್ರಂ ಹಿ ಮೃಗಯಂತೇತ್ರ ವಿದ್ವಾಂಸೋ ಬ್ರಹ್ಮರಾಕ್ಷಸಾಃ | ನಿಹತಸ್ಯ ಚ ಯಜ್ಞಸ್ಯ ಸದ್ಯಃ ಕರ್ತಾ ವಿನಶ್ಯತಿ||* _ದಶರಥನ ಮಾತು.ಅಶ್ವಮೇಧ ಯಜ್ಞವನ್ನು ಯಾವ ರಾಜರು ಬೇಕಾದರೂ ಮಾಡಬಹುದು. ಆದರೆ ತಪ್ಪಿಲ್ಲದಂತೆ ಮಾಡಬೇಕಾದುದು ಮುಖ್ಯ.ಈ ಯಜ್ಞದಲ್ಲಿ ಸ್ವಲ್ಪ ನ್ಯೂನ ಅತಿರಿಕ್ತ ಉಂಟಾದರೂ ಒಡನೆಯೇ ಕರ್ತೃವಿಗೆ ಅನರ್ಥವಾಗುತ್ತದೆ. ವಿದ್ವಾಂಸರಾದ ಬ್ರಹ್ಮರಾಕ್ಷಸರು ಈ ಯಜ್ಞದಲ್ಲಿ ಏನು ತಪ್ಪು ನಡೆಯುವುದೆಂದು ಹುಡುಕುತ್ತಿರುತ್ತಾರೆ. ಅದರ ಫಲದಿಂದ ದೋಷವಾದರೆ ಕರ್ತೃವು ನಾಶ ಹೊಂದುವನು. ಹಾಗಾಗಿ ತುಂಬಾ ಜಾಗರೂಕರಾಗಿ._ _ಇಲ್ಲಿ ದಶರಥನ ಮುಂಜಾಗೃತೆ ತುಂಬಾ ಸಾಧುವಾಗಿದೆ. ಯಾರು  ಸಾಂಗ ವೇದ ಓದಿ ಇತರರಿಗೆ ಒಂದಕ್ಷರವೂ ಪಾಠ ಹೇಳಲಾರನೋ, ದಾನ ತೆಗೆದುಕೊಂಡು ಅದಕ್ಕೆ ತಕ್ಕ ಪ್ರಾಯಶ್ಚಿತ್ತ ಏನನ್ನೂ ಮಾಡದೇ ಉಳಿಯುವನೋ, ಯಾಗ ಮಾಡಲು ಅನರ್ಹರಾದವರಿಗೆ ಯಜ್ಞ ಯಾಗ ಮಾಡಿಸುತ್ತಾ , ತನ್ನ ನಿತ್ಯದ ಅನುಷ್ಠಾನದಲ್ಲಿ ಆಸಕ್ತಿ ಹೊಂದದೇ ಇರುವನೋ ಅಂತಹ ಬ್ರಾಹ್ಮಣನು ಬ್ರಹ್ಮರಾಕ್ಷಸನಾಗುವನು._ _ಇಷ್ಟಲ್ಲದೆ *ಪರಸ್ಯ ಯೋಷಿತಂ ಹೃತ್ವಾ ಪರಸ್ವಮಪಹೃತ್ಯ ಚ | ಅರಣ್ಯೇ ನಿರ್ಜನೇ ದೇಶೇ ಭವತಿ ಬ್ರಹ್ಮರಾಕ್ಷಸಃ ||*  ಎಂಬಂತೆ ಪರಸ್ತ್ರೀ ಅಪಹಾರಕ, ಪರರ ಸ್ವತ್ತಿನ ಅಪಹಾರಕನಾದ ಬ್ರಾಹ್ಮಣನು ಬ್ರಹ್ಮರಾಕ್ಷಸನಾಗುವನು._ _ಇನ್ನೂ  ನೋಡುವುದಾದರೆ *ಸಂಯೋಗಂ ಪತಿತೈರ್ಗತ್ವಾ ಪರಸ್ಯೈವ ಚ...

ರಾಮಾಯಣ-೧೫೯

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೯🏝📖     *ಚಿಂತಯಾನಸ್ಯ ತಸ್ಯೇಯಂ ಬುದ್ಧಿರಾಸೀನ್ಮಹಾತ್ಮನಃ | ಸುತಾರ್ಥೀ ಹಯಮೇಧೇನ ಕಿಮರ್ಥಂ ನ ಯಜಾಮ್ಯಹಮ್ ||* _ಎಲ್ಲಾ ರೀತಿಯಿಂದಲೂ ಸಮೃದ್ಧವಾಗಿದ್ದ ಅಯೋಧ್ಯೆಯಲ್ಲಿ ರಾಜನಾದ ದಶರಥನ ಮನದಲ್ಲಿ ಒಮ್ಮೆ ಇಂತಹ ಯೋಚನೆ ಮೂಡಿತು. ಕ್ಷತ್ರಿಯರಿಗೆ ಯೋಗ್ಯವಾದ ಯಜ್ಞಗಳಲ್ಲಿ ರಾಜಸೂಯ, ಅಶ್ವಮೇಧ, ವಿಶ್ವಜಿತ್ ಮೊದಲಾದವು ಪ್ರಮುಖವಾದವು. ಇವುಗಳಲ್ಲಿ ಪುತ್ರಾರ್ಥಿಯಾಗಿ ಅಶ್ವಮೇಧ ಯಾಗವನ್ನು ಮಾಡಬೇಕೆಂದು ನಿಶ್ಚಯಿಸಿದನು. ಇದನ್ನು ನೋಡಿದರೆ ಚಕ್ರವರ್ತಿ ಆಗಬೇಕೆಂದು ಅಥವಾ ತನ್ನ ಪರಾಕ್ರಮ ತೋರಬೇಕೆಂಬ ಇಚ್ಛೆ ಮಾತ್ರವಲ್ಲದೆ ಬೇರೆ ಕಾಮನೆಗಳ ಈಡೇರಿಕೆಗೂ  ಅಶ್ವಮೇಧ ಮಾಡಬಹುದೆಂಬ ಸಂಗತಿ ತಿಳಿಯುತ್ತದೆ._ *ಪಾಪ್ಮಾನಂ ತರತಿ ತರತಿ ಬ್ರಹ್ಮಹತ್ಯಾಂ ಯೋಶ್ವಮೇಧೇನ ಯಜತೇ* ಯಜುರ್ವೇದ ಸಂಹಿತೆ *ರಾಜಾ ಸಾರ್ವಭೌಮೋಶ್ವಮೇಧೇನ ಯಜೇತ* ಸ್ಮೃತಿ _ಇವೆರಡನ್ನು ಗಮನಿಸಿದಾಗ ಪಾಪ ಪರಿಹಾರಕವಾಗಿ ಹಾಗೂ ಸಾರ್ವಭೌಮತ್ವ ಪ್ರತಿಪಾದನೆ ಹೀಗೆ ಎರಡೂ ಕಾರಣಗಳಿಂದ ಹಯಮೇಧ ಮಾಡಬಹುದೆನ್ನುವುದು ಸ್ಪಷ್ಟವಾಗಿ ತೋರುತ್ತದೆ. ಕ್ಷತ್ರಿಯರಿಗೆ ಮಾತ್ರ ಏಕೆಂದರೆ ಯುದ್ಧ ಮಾಡುವ ಸಾಮರ್ಥ್ಯ ಹಾಗೂ ಆಡಳಿತ ನಡೆಸುತ್ತಿದ್ದುದು ಅವರು ಮಾತ್ರ._ *ಸರ್ವಥಾ ಪ್ರಾಪ್ಸ್ಯಸೇ ಪುತ್ರಾನಭಿಪ್ರೇತಾಂಶ್ಚ ಪಾರ್ಥಿವ | ಯಸ್ಯ ತೇ ಧಾರ್ಮಿಕೀ ಬುದ್ಧಿರಿಯಂ ಪುತ್ರಾರ್ಥಮಾಗತಾ||* _ದಶರಥನ ಮಾತಿನಿಂದ ತುಂಬಾ ಸಂತೋಷಗೊಂಡ ವಸಿಷ್ಠ ಜಾಬಾಲ ...

ಪದಶಕ್ತಿ-೩೬

🏹*ಪದಶಕ್ತಿ* ---೩೬🌄 *ಗಂಧರ್ವ* _ಗಂಧಂ ಅರ್ವತಿ ಎಂದರೆ ಸುಗಂಧವನ್ನು ಹರಡುವವರು ಎಂಬ ಅರ್ಥದಲ್ಲಿ ಗಂಧರ್ವರು ಇದ್ದಾರೆ.  ಗಾಃ ಧಾರಯತಿ ಇತಿ ಎಂದರೆ ಸ್ತೋತ್ರರೂಪವಾದ ಮಾತನ್ನು ಸದಾ ಉಚ್ಚರಿಸುತ್ತಿರುತ್ತಾರೆ ಅಥವಾ ಹಾಡುತ್ತಿರುತ್ತಾರೆ ಎಂಬ ಅರ್ಥದಲ್ಲಿ ಗಂಧರ್ವರು. ಒಟ್ಟಾರೆ ಗಂಧರ್ವರು ಸುಗಂಧಭರಿತ, ಸಂಗೀತ ಸುಧೆಯ, ಮೃದು ಮಾತಿನ ದೇವ ಪ್ರಭೇದರು._ _ಕುದುರೆಗೂ ಗಂಧರ್ವ ಎಂಬ ಹೆಸರಿದೆ. ಕಸ್ತೂರೀ ಮೃಗಕ್ಕೂ ಈ ಹೆಸರಿದೆ. ವೇಗವಾಗಿ ಸಂಚರಿಸುವ ಕಾರಣ ಕುದುರೆಗೆ, ಪರಿಮಳ ಹೊರಸೂಸುವ ಕಾರಣ ಕಸ್ತೂರಿಗೆ ಈ ಹೆಸರು._ _ಗಂಧಂ ಆಮೋದಂ ಅರ್ವತಿ ಎಂದರೆ ಸದಾ ಸಂತೋಷವನ್ನು ಹರಡುತ್ತಾರೆ ಅಥವಾ ಸುಖಜೀವಿಗಳು ಎಂಬ ಅರ್ಥವೂ ಇವರಿಗೆ ಹೊಂದುತ್ತದೆ._ _ಸುಶ್ರುತ ಸಂಹಿತೆಯಲ್ಲಿ ನರರು ಯಾರಾದರೂ ಹಾಡು- ಕುಣಿತ- ಮೈಗೆ ಗಂಧ ಪೂಸಿಕೊಂಡು- ಮಾಲೆ ಮೊದಲಾದವನ್ನು ಧರಿಸಿ ಹುಚ್ಚರಂತೆ ವರ್ತಿಸುತ್ತಿದ್ದರೆ ಅದು ಗಂಧರ್ವ ಗ್ರಹ ಪೀಡಿತ ಎಂದಿದ್ದಾರೆ. ಇಸ್ಕಾನ್ ಪಂಥದವರು ಇಷ್ಟಲ್ಲದಿದ್ದರೂ ಕೆಲವು ಲಕ್ಷಣ ಹೊಂದಿದ್ದಾರೆ. ಆದರಲ್ಲಿ ಭಕ್ತಿಯಿಂದ ಮೈ ಮರೆಯುವ ಸಂಕೇತ ಹೊರತು ಗ್ರಹಪೀಡೆ ಅಲ್ಲ._ _ಹರಳೆಣ್ಣೆಗೂ ಗಂಧರ್ವತೈಲವೆಂಬ ಹೆಸರಿದೆ. ಬಹುಶಃ ತಂಪಾಗುವ ಕಾರಣದಿಂದ ಬಂದಿರಬಹುದು._ _ಗಾಃ ಧಾರಯತಿ ಕಿರಣಗಳನ್ನು ಹೊರಸೂಸುವ ಚಂದ್ರಾದಿತ್ಯರೂ ಗಂಧರ್ವರೇ ಸರಿ._ _ದೇವಗಾಯಕರೂ ಗಂಧರ್ವರು. ಹಾಹಾ- ಹೂಹೂ ಎಂಬಿಬ್ಬರು ಗಂಧರ್ವರು ಈಗಿನ ಗಾಗಾ- ಸಾಗಾರಂತೆ._ _ಗಂಧರ್ವ ಅಸ್ತ್ರ ಸಮ್ಮ...

ಧರ್ಮಾಚರಣೆ-೯೨

ಧರ್ಮಾಚರಣೆ-೯೨ ಯಜ್ಞಾನಾಂ ತಪಸಾಂ ಚೈವ ಶುಭಾನಾಂ ಚೈವ ಕರ್ಮಣಾಮ್ | ವೇದ ಏವ ದ್ವಿಜಾತೀನಾಂ ನಿಶ್ರೇಯಸಕರಃ ಪರಃ || ಯಾಜ್ಞವಲ್ಕ್ಯ ಸ್ಮೃತಿ|| ದ್ವಿಜರಿಗೆ ಮೋಕ್ಷಕ್ಕೆ , ಇಹ-ಪರಗಳಲ್ಲಿ ಸುಖ ಸಿಗಲು ಪ್ರಯೋಜನಕಾರಿಯಾದುದು ವೇದಗಳೇ ಹೊರತು ಬೇರೊಂದಲ್ಲ. ಎಷ್ಟೇ ಯಜ್ಞ- ಯಾಗಗಳನ್ನು ಆಚರಿಸಿ, ಶರೀರ ಶೋಷಿಸುವ ಕೃಚ್ಛ್ರ-ಚಾಂದ್ರಾಯಣ- ಪಂಚಕ ಮೊದಲಾದ ಎಷ್ಟೇ ವ್ರತಗಳನ್ನು ಆಚರಿಸಿ, ಸಂಸ್ಕಾರಗಳನ್ನು ಬಹಳ ಶಾಸ್ತ್ರೋಕ್ತವಾಗಿ ಅದ್ದೂರಿ ಆಚರಿಸಿ ಸ್ವಶಾಖೆಯನ್ನು ಓದದೇ- ದಿನಕ್ಕೊಂದಷ್ಟು ಹೊತ್ತು ವೇದವನ್ನು ಓದಿ ಅರ್ಥ ಮಾಡಿಕೊಳ್ಳಲು ಪ್ರಯತ್ನಪಡದಿದ್ದರೆ ಏನೂ ಪ್ರಯೋಜನವಿಲ್ಲ. ದ್ವಿಜತ್ವ ಸಿದ್ಧಿಗೆ ವೇದವು ಆತ್ಯಂತಿಕವಾಗಿ ಸಹಕಾರಿ. ಅದಿಲ್ಲದ ದ್ವಿಜತ್ವ ದಾರ ಹಾಕಿದ ಕಂಬದಂತೆಯೇ ಸರಿ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೯೧

ಧರ್ಮಾಚರಣೆ-೯೧ ಸಂಧ್ಯಾ ಪ್ರಾಕ್ಪ್ರಾತರೇವಂ ಹಿ ತಿಷ್ಠೇದಾಸೂರ್ಯದರ್ಶನಾತ್ | ಅಗ್ನಿಕಾರ್ಯಂ ತತಃ ಕುರ್ಯಾತ್ಸಂಧ್ಯಯೋರುಭಯೋರಪಿ || ಯಾಜ್ಞವಲ್ಕ್ಯ ಸ್ಮೃತಿ|| ಮುಂಜಾನೆಯ ಸಂಧ್ಯಾವಂದನೆಯು ಸೂರ್ಯೋದಯದ ತನಕ ಮುಂದುವರೆಯಬೇಕು. ಅನಂತರ ಅಗ್ನಿಕಾರ್ಯ/ ಔಪಾಸನೆ/ ವೈಶ್ವದೇವಗಳನ್ನು ಮಾಡಬೇಕು. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಅಜಪಾ ಜಪ ಮಾಡುತ್ತಾ ದೇಹಶುದ್ಧಿ ಮಾಡಿಕೊಂಡು ಗಾಯತ್ರೀ ಜಪಿಸುತ್ತಾ ಇರಬೇಕು. ಸೂರ್ಯೋದಯಕ್ಕೆ ಸರಿಯಾಗಿ ಅರ್ಘ್ಯ ಕೊಟ್ಟು ಅಗ್ನಿ ಆರಾಧನೆ ಮುಂದುವರೆಸಬೇಕು ಎನ್ನುತ್ತದೆ ಶಾಸ್ತ್ರ. ತಡವಾಗಿ ಕೊಟ್ಟರೆ ಹೇಗೆ ಪ್ರಯೋಜನ ಇಲ್ಲವೋ ಅಂತೆಯೇ ನಮ್ಮ ಅನುಕೂಲಕ್ಕೆಂದು ಬ್ರಹ್ಮಕಲಶ/ ಮಹಾಯಾಗ/ ನಿತ್ಯ ಹೋಮಹವನಗಳಿಗೆಂದು ಸೂರ್ಯನ ಉದಯದ ಮುಂಚೆಯೇ ಸಂಧ್ಯಾವಂದನೆ, ವೈಶ್ವದೇವ, ಯಜ್ಞ ಯಾಗಾದಿಗಳನ್ನು ಮಾಡಿದರೆ ಅದು ವ್ಯರ್ಥ. ಜನರು ಬರುವ ಮುಂಚೆಯೇ ಊಟ ಬಡಿಸಿ ಗುಡಿಸಿದಂತೆ ಆಗುತ್ತದೆ. ದೇವತೆಗಳ ಆಗಮನ ಸೂರ್ಯೋದಯದ ನಂತರ. ಅದಕ್ಕೆ ಪೂರ್ವದಲ್ಲಿ ವೇದೋಕ್ತ ಕರ್ಮಗಳನ್ನು ಪ್ರಾರಂಭ ಮಾಡಲು ಶಾಸ್ತ್ರೀಯ ಸಮ್ಮತಿ ಇಲ್ಲ. ನಮಗಾದರೂ ಅಷ್ಟೇ ಸಮಯಕ್ಕೆ ಸರಿಯಾಗಿ ದೊರೆತ ಆಹಾರವು, ಗೌರವವು ಸ್ವೀಕೃತವಾಗುತ್ತದೆ. ಇಲ್ಲದಿದ್ದರೆ ಅಸಮಾಧಾನ, ಶಾಪಕ್ಕೆ ಕಾರಣವಾಗುತ್ತದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೯೦

ಧರ್ಮಾಚರಣೆ-೯೦ ಸ ಗುರುರ್ಯಃ ಕ್ರಿಯಾಃ ಕೃತ್ವಾ ವೇದಮಸ್ಮೈ ಪ್ರಯಚ್ಛತಿ | ಉಪನೀಯ ದದದ್ವೇದಮಾಚಾರ್ಯಃ ಸ ಉದಾಹೃತಃ || ಯಾಜ್ಞವಲ್ಕ್ಯ ಸ್ಮೃತಿ|| ವೇದೋಕ್ತ ಕರ್ಮಗಳನ್ನು ಅಂದರೆ ಸಂಧ್ಯಾವಂದನೆ- ಬ್ರಹ್ಮಯಜ್ಞ- ಔಪಾಸನೆ- ವೈಶ್ವದೇವ- ಪೂಜೆ- ಅತಿಥಿಸತ್ಕಾರ- ಶ್ರಾದ್ಧಾದಿಗಳು- ಪ್ರಾಣಿಗಳಿಗೆ ಆಹಾರ ಕೊಡುವುದು- ಸ್ವಾಧ್ಯಾಯ ತಾನು ನಡೆಸಿ ಇನ್ನೊಬ್ಬರಿಗೆ ವೇದವನ್ನು ಪಾಠ ಮಾಡುವವನು ಗುರು ಎನಿಸಿಕೊಳ್ಳುತ್ತಾನೆ. ತಾನು ಸುಳ್ಳು ಹೇಳಿ ವಿದ್ಯಾರ್ಥಿಗೆ ನೀತಿಯ ಪಾಠ ಮಾಡುವವನು ಗುರುವಲ್ಲ. ವಿದ್ಯೆಯನ್ನು ಅರಸಿ ಉಪನಯನಕ್ಕೆ ಪೂರ್ವದಲ್ಲಿ ಸತ್ಯಕಾಮನಂತೆ ಬಂದರೆ ಉಪನಯನ ಮಾಡಿ ವೇದ ಹೇಳಿಕೊಟ್ಟರೆ ಅವನು ಆಚಾರ್ಯ ಎಂದು ಕರೆಸಿಕೊಳ್ಳುತ್ತಾನೆ. ಹಾಗಾಗಿ ಗುರು- ಆಚಾರ್ಯ ಎಂದು ಕರೆಸಿಕೊಳ್ಳಲು ಸಾಕಷ್ಟು ಯೋಗ್ಯತೆ ಸಂಪಾದಿಸಬೇಕಾಗುತ್ತದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೮೯

ಧರ್ಮಾಚರಣೆ-೮೯ ಮಧುಮಾಂಸಾಂಜನೋಚ್ಛಿಷ್ಟ ಶುಕ್ತ ಸ್ತ್ರೀ ಪ್ರಾಣಿಹಿಂಸನಮ್ | ಭಾಸ್ಕರಾಲ್ಲೋಕನ ಅಶ್ಲೀಲಪರಿವಾದಾದಿ ವರ್ಜಯೇತ್ || ಯಾಜ್ಞವಲ್ಕ್ಯ ಸ್ಮೃತಿ||  ಮದ್ಯ ಸೇವನೆ, ಮಾಂಸಭಕ್ಷಣ, ಕಾಡಿಗೆ ಹಚ್ಚುವುದು, ಎಂಜಲು ತಿನ್ನುವುದು, ನಿಷ್ಠುರ ಮಾತು, ಸ್ತ್ರೀ ಭೋಗ, ಪ್ರಾಣಿಹಿಂಸೆ, ಉದಯ ಅಥವಾ ಅಸ್ತಕಾಲದಲ್ಲಿ ಬಹಳ ಹೊತ್ತು ಸೂರ್ಯನನ್ನು ನೋಡುವುದು, ಅಶ್ಲೀಲವಾದ ಮಾತುಗಳು, ಇನ್ನೊಬ್ಬರ ದೋಷಗಳನ್ನು ಎತ್ತಿ ಆಡುವುದು ಇವಿಷ್ಟನ್ನು ವಿದ್ಯಾರ್ಥಿಯು ಮಾಡಲೇಬಾರದು.ಇವುಗಳೆಲ್ಲವೂ ಅವನ/ಳ ಬ್ರಹ್ಮಚರ್ಯಕ್ಕೆ ಧಕ್ಕೆ ತಂದು ಅಥವಾ ಏಕಾಗ್ರತೆಗೆ ಭಂಗ ತಂದು ವಿದ್ಯಾರ್ಜನೆಗೆ ದೊಡ್ಡ ತೊಡಕಾಗಬಹುದು. ಮುಂದಿನ ಭವಿಷ್ಯದ ದೃಷ್ಟಿಯಿಂದ ಇಂದೇ ಜಾಗರೂಕತೆ ವಹಿಸುವುದು  ಬುದ್ಧಿವಂತಿಕೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೮೮

ಧರ್ಮಾಚರಣೆ-೮೮ ದಂಡಾಜಿನೋಪವೀತಾನಿ ಮೇಖಲಾಂ ಚೈವ ಧಾರಯೇತ್ | ಬ್ರಾಹ್ಮಣೇಷು ಚರೇದ್ಭೈಕ್ಷಮನಿಂದ್ಯೇಷ್ವಾತ್ಮವೃತ್ತಯೇ ||ಯಾಜ್ಞವಲ್ಕ್ಯ ಸ್ಮೃತಿ|| ಆತ್ಮರಕ್ಷಣೆಗೆ ದಂಡ, ಶುದ್ಧತೆಗೆ ಕೃಷ್ಣಾಜಿನ, ದೇವತೆಗಳ ಅನುಗ್ರಹಕ್ಕೆ ಯಜ್ಞೋಪವೀತ, ಕೆಟ್ಟ ಚಿಂತನೆ ಸುಳಿಯದಂತೆ ಕಟಿಗೆ ಮೇಖಲೆಯನ್ನು ಬ್ರಹ್ಮಚಾರಿಯು ಧರಿಸಬೇಕು. ದೋಷರಹಿತನೂ, ಗುರುಗಳು- ಹಿರಿಯರು ಹೇಳಿದ ಕರ್ಮಗಳಲ್ಲಿ ಹಾಗೂ ತನ್ನ ವಿದ್ಯಾರ್ಜನೆಯಲ್ಲಿ ರತನಾಗಿ ಯಾರು ಪ್ರಾಮಾಣಿಕವಾಗಿ- ಸಮಾಜಕ್ಕೆ ಹೊರೆಯಾಗದಂತೆ ಬದುಕುತ್ತಿರುವರೋ ಅಂತಹವರ ಬಳಿಯಲ್ಲಿ ಅನ್ನ ಪಡೆದು ಜೀವನ ನಡೆಸಬೇಕು. ಕೆಟ್ಟವರ ಅನ್ನವು ಕೆಟ್ಟ ಮನಸ್ಸನ್ನು ಸೃಷ್ಟಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಇವುಗಳ ತಿಳುವಳಿಕೆಯು ಮುಂದೆ ಸಮಾಜಕ್ಕೆ ಉಪಕಾರಿಯಾಗಿ ನಾಲ್ಕು ಜನಕ್ಕೆ ಸಹಕಾರಿಯಾಗಿ ಬದುಕಲು ಪ್ರೇರಣೆ ನೀಡುತ್ತದೆ. ಬ್ರಹ್ಮಚರ್ಯ ಆಶ್ರಮದ ಜೀವನ ಹೀಗೆ ಸಾಗಿದಾಗ ಮಾತ್ರ ಸಾರ್ಥಕವೆನಿಸುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೮೭

ಧರ್ಮಾಚರಣೆ-೮೭ ಕೃತಜ್ಞಾದ್ರೋಹಿಮೇಧಾವಿ ಶುಚಿಕಲ್ಯಾನಸೂಯಕಾಃ | ಅಧ್ಯಾಪ್ಯಾ ಧರ್ಮತಃ ಸಾಧುಶಕ್ತಾಪ್ತಜ್ಞಾನವಿತ್ತದಾಃ || ಯಾಜ್ಞವಲ್ಕ್ಯ ಸ್ಮೃತಿ|| ಮಾಡಿದ್ದನ್ನು ನೆನಪಿಟ್ಟುಕೊಳ್ಳುವ ಕೃತಜ್ಞರಿಗೆ, ದ್ರೋಹ ಮಾಡದವರಿಗೆ, ಪಾಠ ಮಾಡಿದ್ದನ್ನು ಗ್ರಹಿಸುವ ಸಾಮರ್ಥ್ಯ ಇದ್ದವರಿಗೆ, ದೈಹಿಕ- ಮಾನಸಿಕ ಶುದ್ಧತೆ ಕಾಪಾಡಿಕೊಂಡವರಿಗೆ, ಸಮರ್ಥರಿಗೆ, ಅಸೂಯೆ ಪಡದೇ ಇದ್ದವರಿಗೆ, ಆಚಾರಸಂಪನ್ನರಿಗೆ, ಗುರುಗಳು ಬಯಸಿದಾಗ ಏನಾದರೂ ಕಾರ್ಯ ಮಾಡಲು ಆಸಕ್ತಿ ಇದ್ದವರಿಗೆ, ತನ್ನಲ್ಲಿರುವ ವಿದ್ಯೆ ಅಥವಾ ಧನವನ್ನು ಇನ್ನೊಬ್ಬರಿಗೆ ದಾನ ಮಾಡುವ ಉದಾರ ಬುದ್ಧಿಯ ವ್ಯಕ್ತಿಗಳಿಗೆ ಅಂತಹ ಶಿಷ್ಯ/ಶಿಷ್ಯೆಯರಿಗೆ ಮಾತ್ರ ವಿದ್ಯಾದಾನ ಮಾಡಬೇಕು. ಗುರುಗಳ ನೆನಪೇ ಇಲ್ಲದವರಿಗೆ, ಗುರುಗಳಿಗೇ ವಂಚನೆ ಎಸಗುವವರಿಗೆ, ಏನು ಪಾಠ ಮಾಡಿದರೂ ತಲೆಗೆ ಹತ್ತದವರಿಗೆ, ಕಾಯಾ-ವಾಚಾ- ಮನಸಾ ಭೇದ ಇರುವವರಿಗೆ, ಮಾನಸಿಕ ಅಸಮರ್ಥರಿಗೆ, ಮತ್ಸರಿಗಳಿಗೆ, ಯಾರಿಗೂ ಸಹಾಯ ಮಾಡುವ ಮನಸ್ಸಿಲ್ಲದ ಸ್ವಾರ್ಥಿಗಳಿಗೆ ಎಂದಿಗೂ ಪವಿತ್ರವಾದ ಜ್ಞಾನ ನೀಡಬಾರದು. ಅಂತಹವರಿಗೆ ನೀಡಿದ ವಿದ್ಯೆಯು ಸಮಾಜದಲ್ಲಿ ಭಯೋತ್ಪಾದಕ-ವಂಚಕ-ದ್ರೋಹಿ-ಕಟುಕರನ್ನು ಸೃಷ್ಟಿಸೀತು.ಅದು ನಮ್ಮ ಮಕ್ಕಳಿರಲಿ ಬೇರೆಯವರ ಮಕ್ಕಳಿರಲಿ ವಿದ್ಯೆಯನ್ನು ಯೋಗ್ಯ ವ್ಯಕ್ತಿಗೆ ಮಾತ್ರ ಧಾರೆ ಎರೆಯಬೇಕು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೮೬

ಧರ್ಮಾಚರಣೆ-೮೬ ಸ್ನಾನಮಬ್ಧೈವ ತೈರ್ಮಂತ್ರೈರ್ಮಾರ್ಜನಂ ಪ್ರಾಣಸಂಯಮಃ | ಸೂರ್ಯಶ್ಚ ಚಾಪ್ಯುಪಸ್ಥಾನಂ ಗಾಯತ್ರ್ಯಾಃ ಪ್ರತ್ಯಹಂ ಜಪಃ || ಯಾಜ್ಞವಲ್ಕ್ಯ ಸ್ಮೃತಿ|| ಮುಂಜಾನೆ ವರುಣನಿಗೆ ಸಂಬಂಧಿಸಿದ ಮಂತ್ರಗಳನ್ನು ಉಚ್ಚರಿಸುತ್ತಾ ಸ್ನಾನ ಮಾಡಿ, ಅನಂತರ ಅಬ್ಲಿಂಗಕ ಮಂತ್ರಗಳಿಂದ ಮಾರ್ಜನ ಮಾಡಿಕೊಂಡು, ಪ್ರಾಣವನ್ನು ಸಂಯಮನ ಮಾಡಿಕೊಂಡು, ( ಪ್ರಾಣಾಯಾಮ)  ಸೂರ್ಯನಿಗೆ ಅರ್ಘ್ಯ, ಉಪಸ್ಥಾನ ಹಾಗೂ ಮುಖ್ಯವಾಗಿ ಗಾಯತ್ರೀ ಜಪ ಇವಿಷ್ಟು  ಶ್ರೋತ್ರಿಯನು ಮಾಡಲೇಬೇಕಾದ ಅವಶ್ಯ ಕರ್ತವ್ಯಗಳು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೮೫

ಧರ್ಮಾಚರಣೆ-೮೫ ಏವಮೇನಂ ಶಮಂ ಯಾತಿ ಬೀಜಗರ್ಭಸಮುದ್ಭವಮ್ | ತೂಷ್ಣೀಮೇತಾಃ ಕ್ರಿಯಾಃ ಸ್ತ್ರೀಣಾಂ ವಿವಾಹಸ್ತು ಸಮಂತ್ರಕಃ || ಯಾಜ್ಞವಲ್ಕ್ಯ ಸ್ಮೃತಿ|| ಗರ್ಭಾದಾನ-ಪುಂಸವನ- ಸೀಮಂತ- ಜಾತಕರ್ಮ- ನಾಮಕರಣ- ಅನ್ನಪ್ರಾಶನ- ಉಪನಿಷ್ಕ್ರಮಣ- ಚೌಲ ಹೀಗೆ ಹುಟ್ಟಿದ ಮಗುವಿಗೆ ಸಂಸ್ಕಾರ ಮಾಡಿದಾಗ ಅಂಡಾಣು ಮತ್ತು ವೀರ್ಯಾಣುವಿನಲ್ಲಿ ಅಡಕವಾದ ಹಾಗೂ ಗರ್ಭಕ್ಕೆ ಸಂಬಂಧಿಸಿದ ದೋಷಗಳು ನಿವಾರಣೆಯಾಗುತ್ತವೆ. ಸ್ತ್ರೀ-ಪುರುಷ ಭೇದವಿಲ್ಲದೆ ಈ ಸಂಸ್ಕಾರಗಳನ್ನು ಪ್ರತಿ ಮಗುವಿಗೂ ಮಾಡಬೇಕು. ಸ್ತ್ರೀಯರು  ಮಂತ್ರಗಳನ್ನು ಉಚ್ಚರಿಸಿದಾಗ ಅವರ ಗರ್ಭಕೋಶ ಹಾಗೂ ಹಾರ್ಮೋನುಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಅಮಂತ್ರಕವಾಗಿ ಇವುಗಳನ್ನು ಮಾಡಬೇಕು. ಪುರುಷರಿಗೆ ಮಂತ್ರಗಳ ಪ್ರಭಾವ ಸಹಕಾರಿ ಆದ ಕಾರಣ ಮಂತ್ರಸಹಿತವಾಗಿ ಮಾಡಬೇಕು. ಸ್ತ್ರೀ ಎಂದು ಸಂಸ್ಕಾರ ಮಾಡದೇ ಉಳಿಯುವುದನ್ನು ಯಾವ ಶಾಸ್ತ್ರಗಳೂ ಒಪ್ಪುವುದಿಲ್ಲ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೮೪

ಧರ್ಮಾಚರಣೆ-84 ಗರ್ಭಾದಾನಮೃತೌ ಪುಂಸಃ ಸವನಂ‌ ಸ್ಯಂದನಾತ್ಪುರಾ | ಷಷ್ಠೇಷ್ಟಮೇ ವಾ ಸೀಮಂತೋ ಮಾಸ್ಯೇತೇ ಜಾತಕರ್ಮ ಚ || ಅಹನ್ಯೇಕಾದಶೋನಾಮ ಚತುರ್ಥೇ ಮಾಸಿ ನಿಷ್ಕೃಮಃ | ಷಷ್ಠೇನ್ನಪ್ರಾಶನಂ ಮಾಸಿ ಚೂಡಾಕಾರ್ಯಾ ಯಥಾಕುಲಮ್ || ಯಾಜ್ಞವಲ್ಕ್ಯ ಸ್ಮೃತಿ|| ಮುಟ್ಟಾದ ಆರರಿಂದ - ಹದಿನಾರು ದಿನದವರೆಗೆ ಗರ್ಭಾದಾನ, ಗರ್ಭವು ಚಲಿಸುವ ಮುನ್ನ ಪುಂಸವನ, ಆರು ಅಥವಾ ಎಂಟನೇ ತಿಂಗಳಲ್ಲಿ ಸೀಮಂತ, ಹುಟ್ಟಿದ  ದಿನವೇ ಜಾತಕರ್ಮ, ಹನ್ನೊಂದನೇ ದಿನ ನಾಮಕರಣ, ನಾಲ್ಕನೇ ತಿಂಗಳು ಉಪನಿಷ್ಕೃಮಣ ಅಂದರೆ ಹೊರಗೆ ತಂದು ಬೆಳಕನ್ನು ತೋರುವುದು, ಆರನೆಯ ತಿಂಗಳಲ್ಲಿ ಅನ್ನಪ್ರಾಶನ, ಕುಲದ ಸಂಪ್ರದಾಯದಂತೆ ಚೂಡಾಕರ್ಮ ಅಂದರೆ ಕೂದಲು ತೆಗೆಯುವ ಸಂಸ್ಕಾರಗಳನ್ನು ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹಾಕಲೆಂದೇ ಚಿತ್ರ- ದೃಶ್ಯ ತೆಗೆಯುವುದು ಅಥವಾ ಕೇಕ್ ಮುಂತಾದವನ್ನು ಕತ್ತರಿಸಿ ಆಚರಿಸುವುದಕ್ಕಿಂತ ಇವುಗಳ ಆಚರಣೆ ಮಾನವನ ಮುಂದಿನ ಜೀವನ ಸುಸಂಸ್ಕೃತ ಆಗಲು ಮುಖ್ಯ ಕಾರಣ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com  

ಧರ್ಮಾಚರಣೆ-೮೩

ಧರ್ಮಾಚರಣೆ-೮೩ ಚತ್ವಾರೋ ವೇದಧರ್ಮಜ್ಞಾಃ ಪರ್ಷತ್ರೈವಿದ್ಯಮೇವ ವಾ| ಸಾಬ್ರೂತೇ ಯಂ ಸ ಧರ್ಮಃ ಸ್ಯಾದೇಕೋ ವಾಧ್ಯಾತ್ಮವಿತ್ತಮಃ || ಯಾಜ್ಞವಲ್ಕ್ಯ ಸ್ಮೃತಿ|| ನಾಲ್ಕು ಜನ ವೇದಜ್ಞರು ಅಂದರೆ ವೇದದ ಸಾರವನ್ನು ಬಲ್ಲ ವಿದ್ವಾಂಸರು ಒಂದು ಪರಿಷತ್ ಎಂದು ಕರೆಸಿಕೊಳ್ಳುತ್ತಾರೆ. ಮೂರು ಜನ ಅಂತಹ ಜ್ಞಾನಿಗಳು ಸೇರಿದರೂ ಅದೂ ಕೂಡ ಪರಿಷತ್ ಎಂದೇ ಕರೆಸಲ್ಪಡುವುದು. ಆತ್ಮ- ಪರಮಾತ್ಮನ ಬಗ್ಗೆ ಅರಿವಿರುವ ಅಧ್ಯಾತ್ಮಜ್ಞಾನಿ ಒಬ್ಬನಿದ್ದರೂ ಅವನೇ ಪರಿಷತ್ ಎನಿಸುವನು. ಇವರು ನಿರ್ಣಯಿಸಿದ ವಿಷಯ ಧರ್ಮವೆಂದು ಕರೆಸಿಕೊಳ್ಳುವುದು. ವೇದದ ಅನವರತ ಅಧ್ಯಯನ ಹಾಗೂ ಅಧ್ಯಾತ್ಮಜ್ಞಾನ ಇವೆರಡೂ ಎಲ್ಲೋ ಲಕ್ಷಕ್ಕೊಬ್ಬರಿಗೆ ಮಾತ್ರ ಸಿದ್ಧಿಸುವಂತಹದು. ಹಾಗಾಗಿ ಯಾರೋ ಶಾಸ್ತ್ರವಿದರು- ಹಿರಿಯರು- ಗುರುಗಳು ಹೇಳಿದರೆಂದು ಧರ್ಮದ ನಿರ್ಣಯ ಸಲ್ಲದು. ಧರ್ಮದ ನಡೆ ಅತ್ಯಂತ ಸೂಕ್ಷ್ಮವಾದುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com  

ಧರ್ಮಾಚರಣೆ-೮೨

ಧರ್ಮಾಚರಣೆ-೮೨ ಇಜ್ಯಾಚಾರ ದಮೋಹಿಂಸಾ ದಾನಂ ಸ್ವಾಧ್ಯಾಯ ಕರ್ಮಣಾಮ್ | ಅಯಂತು ಪರಮೋ ಧರ್ಮೋ ಯದ್ಯೋಗೇನಾತ್ಮದರ್ಶನಮ್ || ಯಾಜ್ಞವಲ್ಕ್ಯ ಸ್ಮೃತಿ|| ನಿತ್ಯದ ಔಪಾಸನೆ, ವೈಶ್ವದೇವ,ಅಗ್ನಿಹೋತ್ರ ಮೊದಲಾದ ಯಜ್ಞ, ಶಾಸ್ತ್ರ ಬೋಧಿಸಿರುವ ಸದಾಚಾರ, ಇಂದ್ರಿಯಗಳ ನಿಯಮನ, ಅಹಿಂಸೆ, ದಾನ, ಕಲಿತ ವಿದ್ಯೆಯ ಅಭ್ಯಾಸ, ಶಾಸ್ತ್ರೋಕ್ತ ಕರ್ಮಗಳ ಅನುಷ್ಠಾನ, ಏಕಾಗ್ರತೆಯಿಂದ ಭಗವಂತನ ಧ್ಯಾನ ಇವಿಷ್ಟು ಅತ್ಯಂತ ಶ್ರೇಷ್ಠವಾದ ಧರ್ಮದ ಆಚರಣೆಗಳು. ಇವುಗಳಲ್ಲಿ ಕೆಲವನ್ನು ಪಾಲಿಸಿದರೂ ನಾವು ಧರ್ಮಾತ್ಮರಾಗುತ್ತೇವೆ. ಹಾಗಲ್ಲದೆ ನಾನು ಹಿಂದೂ ಎಂದು ಬಾಯಿ ಮಾತಿನಲ್ಲಿ ಅಥವಾ ವೇಷಧರಿಸಿದ ಮಾತ್ರ ಎಂದಿಗೂ ಅಲ್ಲ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೮೧

ಧರ್ಮಾಚರಣೆ-೮೧ ಶ್ರುತಿಃ ಸ್ಮೃತಿಃ ಸದಾಚಾರಃ ಸ್ವಸ್ಯ ಚ ಪ್ರಿಯಮಾತ್ಮನಃ | ಸಮ್ಯಕ್ ಸಂಕಲ್ಪಜಃ ಕಾಮೋ ಧರ್ಮಮೂಲಮಿದಂ ಸ್ಮೃತಮ್ || ಯಾಜ್ಞವಲ್ಕ್ಯ ಸ್ಮೃತಿ|| ಐದು ವಿಷಯಗಳು ಧರ್ಮಮೂಲವಾದವುಗಳು. ನಾಲ್ಕು ವೇದಗಳಲ್ಲಿ  ಹಾಗೂ ವೇದಾಂಗಗಳಲ್ಲಿ  ಹೇಳಿರುವ ವಿಷಯಗಳ ಆಚರಣೆ. ಹದಿನೆಂಟು ಸ್ಮೃತಿಗಳು ಹದಿನೆಂಟು ಉಪಸ್ಮೃತಿಗಳ ವಿಷಯಗಳ ಅನುಸರಣೆ, ಯಾವುದೇ ಜಾತಿ-ಮತ- ಧರ್ಮದ ಸಜ್ಜನರ ಆಚರಣೆಗಳ ಅನುಸರಣೆ ( ಇಲ್ಲಿ ಹಿಂದೂ, ಸ್ಮಾರ್ತ- ಮಾಧ್ವ, ಬ್ರಾಹ್ಮಣ-ಶೂದ್ರ ಇತ್ಯಾದಿ ನೋಡಬಾರದು. ) ತನಗೆ ಪ್ರಿಯವಾದದ್ದನ್ನು ಇತರರಿಗೂ ಬಯಸುವುದು ಉದಾಹರಣೆಗೆ ಸುಳ್ಳಾಡದಿರುವುದು- ವಂಚಿಸದಿರುವುದು ಇತ್ಯಾದಿ, ಸತ್ಸಂಕಲ್ಪದಿಂದ ಕೂಡಿದ ಕಾಮನೆ ಉದಾಹರಣೆಗೆ ದಾನ ಮಾಡಲು ಧನ- ಕಲಿಸಲು ವಿದ್ಯಾರ್ಜನೆ- ಉತ್ತಮ ಸಮಾಜಕ್ಕಾಗಿ ಸತ್ಸಂತಾನ ಇತ್ಯಾದಿಗಳು ಧರ್ಮಮೂಲವಾದ ವಿಷಯಗಳು. ಇವುಗಳ ಅನುಸರಿಸುವಿಕೆಯು ನಮ್ಮನ್ನು ಪಾಪ- ನರಕಗಳ ಸಂಕೋಲೆಯಿಂದ ದೂರ ಮಾಡುತ್ತದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೮೦

ಧರ್ಮಾಚರಣೆ-೮೦ ದೇಶಕಾಲ ಉಪಾಯೇನ ದ್ರವ್ಯಂ ಶ್ರದ್ಧಾ ಸಮನ್ವಿತಮ್ | ಪಾತ್ರೇ ಪ್ರದೀಯತೇ ಯತ್ತತ್ಸಕಲಂ ಧರ್ಮಲಕ್ಷಣಮ್ || ಯಾಜ್ಞವಲ್ಕ್ಯ ಸ್ಮೃತಿ|| ತೀರ್ಥಕ್ಷೇತ್ರ- ತುಳಸಿ ಸಮೀಪ- ಮಹಾನದಿಗಳ ಸಂಗಮ ಮೊದಲಾದ ಶ್ರೇಷ್ಠ ಪ್ರದೇಶಗಳು, ಗ್ರಹಣ-ಸಂಕ್ರಾಂತಿ- ವ್ಯತೀಪಾತ ವೈಧೃತಿ ಮೊದಲಾದ ಯೋಗಗಳಿರುವ ಕಾಲದಲ್ಲಿ ನಮ್ಮಲ್ಲಿರುವ ಅಲ್ಪವಿರಲಿ ಮಹತ್ತಾಗಿರಲಿ ದ್ರವ್ಯವನ್ನು ( ಧನ, ವಸ್ತ್ರ, ವಾಹನ, ಸುವರ್ಣ) ಶ್ರದ್ಧೆಯಿಂದ ಅತ್ಯಂತ ಪಾತ್ರನಾದ ವ್ಯಕ್ತಿಗೆ ಕೊಡುವುದು ಧರ್ಮದ ದೊಡ್ಡ ಲಕ್ಷಣವಾಗಿದೆ. ಬೇರೆಲ್ಲಾ ಬಗೆಯ ಜನರು ಸಿಕ್ಕಿದರೂ ದಾತಾ ಭವತಿ ವಾ ನ ವಾ ಎಂದಿದೆ ಶಾಸ್ತ್ರ. ಯೋಗ್ಯ ವ್ಯಕ್ತಿಗಳನ್ನು ಹುಡುಕಿ ಕಾಲ- ದೇಶಗಳನ್ನು ನಿರ್ಣಯಿಸಿ ದಾನ ಮಾಡುವುದು ಅತ್ಯಂತ ಶ್ರೇಯಸ್ಕರ. ನೀರು ಬೇಕಾದವನಿಗೆ ಧನ ಸಹಾಯವಲ್ಲ, ಗುಟುಕು ನೀರನ್ನೇ ಕೊಡಬೇಕು. ಪಾತ್ರರಲ್ಲದವರಿಗೆ ಮಾಡಿದ ದಾನ ವಂಚಕ ಕಂಪನಿಗಳಿಗೆ ಅಡವಿಟ್ಟಂತೆಯೇ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೭೯

ಧರ್ಮಾಚರಣೆ-೭೯ ಆಸನಾಚ್ಛಾದನಾದ್ದಾನಾತ್ ಸಂಭಾಷಾತ್ ಸಹಭೋಜನಾತ್ | ಸಂಕ್ರಮಂತೀಹ ಪಾಪಾನಿ ತೈಲಬಿಂದುರಿವಾಂಭಸಿ || ಪರಾಶರ ಸ್ಮೃತಿ|| ಪಾಪಿಗಳ ಜೊತೆಗೆ ನಡೆಯುವುದು- ಕುಳಿತುಕೊಳ್ಳುವುದು- ಮಾತನಾಡುವುದು- ಊಟ ಮಾಡುವುದು ಇತ್ಯಾದಿ ಮಾಡಿದಾಗ ನೀರಿನಲ್ಲಿ ಎಣ್ಣೆಯ ಒಂದು ಬಿಂದುವೂ ಹೇಗೆ ವ್ಯಾಪಿಸುತ್ತದೋ ಅದರಂತೆ ಅವರ ಪಾಪವೂ ನಮ್ಮನ್ನು ವ್ಯಾಪಿಸುವುದು. ಹಾಗಾಗಿ ಪಾಪ ಮಾಡಿದವರ ಜೊತೆಗಿನ ವ್ಯವಹಾರ ಉದ್ದೇಶಪೂರ್ವಕವಾಗಿ ತ್ಯಜಿಸಬೇಕು. ಹೆಂಡದಂಗಡಿಗೆ ಹೋದರೂ ಜನರು ಕುಡಿದರೆಂದೇ ಹೇಗೆ ಭಾವಿಸುವರೋ ಇಲ್ಲಿ ಪಾಪಿಯ ಜೊತೆಗಿನ ಪ್ರತಿಯೊಂದು ಕ್ರಿಯೆಯೂ ಪಾಪಭಾಜನರಾಗಲು ಕಾರಣವಾಗುವುದು. ನಾವೂ ಪಾಪ ಮಾಡದೇ ಪುಣ್ಯಸಂಗ್ರಹದತ್ತ ಗಮನ ಹರಿಸಬೇಕು.  ಇಲ್ಲಿಗೆ ಪರಾಶರ ಸ್ಮೃತಿಯ ಸಂಗ್ರಹ ಶ್ಲೋಕಗಳು ಮುಗಿದವು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೭೮

ಧರ್ಮಾಚರಣೆ-೭೮ ಗೃಹಸ್ಥಃ ಕಾಮತಃ ಕುರ್ಯಾತ್ ರೇತಸಃ ಸ್ಖಲನಂ ಯದಿ | ಸಹಸ್ರಂ ತು ಜಪೇದ್ದೇವ್ಯಾಃ ಪ್ರಾಣಾಯಾಮೈಸ್ತ್ರಿಭಿಃ ಸಹ || ಪರಾಶರ ಸ್ಮೃತಿ|| ಗೃಹಸ್ಥನಾದವನು ಯಾವುದೋ ಸಂದರ್ಭದಲ್ಲಿ ಕಾಮವಾಸನೆಗೆ ಒಳಗಾಗಿ ರೇತಸ್ಖಲನ ಮಾಡಿಕೊಂಡರೆ ಪ್ರಾಯಶ್ಚಿತ್ತವೆಂದು ಸಾವಿರ ಗಾಯತ್ರೀ ಜಪ ಅಥವಾ ಸಾವಿರ ಬಾರಿ ಇಷ್ಟ ದೇವತೆಯ ನಾಮಜಪ ಮಾಡಬೇಕು ಹಾಗೂ ಮೂರು ಬಾರಿ ಪ್ರಾಣಾಯಾಮ ಮಾಡಬೇಕು. ವಿವಾಹಾನಂತರ ಅತಿಯಾದ ಕಾಮವಾಸನೆ ಎಂದೂ ತರವಲ್ಲ. ಹಾಗಾಗಿ ಜಪ- ಪ್ರಾಣಾಯಾಮಗಳು ಆರೋಗ್ಯದ ದೃಷ್ಟಿಯಿಂದಲೂ, ಧರ್ಮದ ಅಚರಣೆಯಿಂದಲೂ ಹೆಚ್ಚು ಹೆಚ್ಚು ಮಾಡುವುದು ಒಳಿತು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೭೭

ಧರ್ಮಾಚರಣೆ-೭೭ ವಾಪೀಕೂಪತಟಾಕಾದ್ಯೈಃ ವಾಜಪೇಯಶತೈರ್ಮಖೈಃ | ಗವಾಂ ಕೋಟಿಪ್ರದಾನೇನ ಭೂಮಿಹರ್ತಾ ನ ಶುದ್ಧ್ಯತಿ || ಪರಾಶರ ಸ್ಮೃತಿ|| ದುಡ್ಡು ಕೊಟ್ಟು ತೆಗೆದುಕೊಂಡಿದ್ದು ಅಥವಾ ಪಿತ್ರಾರ್ಜಿತವಾಗಿ ಸಿಕ್ಕಿದ್ದು ಅಥವಾ ಯಾರೋ ದಾನ ಮಾಡಿದ ಭೂಮಿ ಅನುಭವಿಸುವುದು ಪಾಪವಲ್ಲ. ಅದೇ ಅಕ್ರಮ- ಸಕ್ರಮ ಎಂದು ನಾವೇ ಅಕ್ರಮ ಮಾಡಿ ಅಥವಾ ಸರ್ಕಾರದ/ ಖಾಸಗಿ ಜಾಗಗಳ ಒಂದು ಇಂಚಿನ ಪ್ರಮಾಣದಷ್ಟು ಭೂಮಿ ಅಪಹರಿಸಿದರೂ ಆ ಪಾಪಕ್ಕೆ ಯಾವ ಪರಿಹಾರವೂ ಪ್ರಾಯಶ್ಚಿತ್ತವೂ ಇಲ್ಲ. ಬಾವಿ- ಕೆರೆ- ಕಾಲುವೆ ನಿರ್ಮಿಸುವುದು, ನೂರು ವಾಜಪೇಯ ಯಾಗ ಮಾಡುವುದು, ಕೋಟಿ ಗೋವುಗಳನ್ನು ದಾನ ಮಾಡಿದರೂ ಆ ಪಾಪ ಪರಿಹಾರವಾಗದು. ಅದನ್ನು ಅನುಭವಿಸಲು ಮತ್ತೆ ಜನ್ಮ ತಾಳಬೇಕಾಗುವುದು. ಹಾಗಾಗಿ ಭೂಮಿಯ ಮೇಲಿನ ಆಸೆ ಎಂದೂ ಒಳ್ಳೆಯದಲ್ಲ. ಅದು ಒಂದು ಚದರಡಿ ಆಗಲಿ ನೂರಾರು ಎಕ್ರೆ ಆಗಲಿ ಅಕ್ರಮವು ಯಾವ ಪ್ರಾಯಶ್ಚಿತ್ತಕ್ಕೂ ನಿಲುಕದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೭೬

ಧರ್ಮಾಚರಣೆ-೭೬ ಕುಟುಂಬಿನೇ ದರಿದ್ರಾಯ ಶ್ರೋತ್ರಿಯಾಯ ವಿಶೇಷತಃ | ಯದ್ದಾನಂ ದೀಯತೇ ತ್ವಸ್ಮೈ ತದ್ದಾನಂ ಶುಭಕಾರಕಮ್ || ಪರಾಶರ ಸ್ಮೃತಿ|| ಹೆಂಡತಿ ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ವೇದ- ವೇದಾಂಗಗಳನ್ನು ಅಧ್ಯಯನ ನಡೆಸಿ ಅದರಂತೆ ಜೀವನ ನಡೆಸುವ ಬಡವನಾದ ಶ್ರೋತ್ರಿಯನಿಗೆ ದಾನ ಕೊಡುವುದು ತುಂಬಾ ಶ್ರೇಯಸ್ಕರ. ದಾನ ಕೊಡುವುದಾದರೆ ಇಂತಹ ವ್ಯಕ್ತಿಗಳನ್ನು ಹುಡುಕಿ ದಾನ ಮಾಡಬೇಕೇ ಹೊರತು ಸಾಕಷ್ಟು ಸಂಪತ್ತಿದ್ದವರಿಗೆ ಅಥವಾ ಯಾವ ಆಚಾರವೂ ಇಲ್ಲದವರಿಗೆ ಎಂದಿಗೂ ಕೊಡಬಾರದು. ಧರ್ಮಶ್ರದ್ಧೆ- ಸದಾಚಾರ- ಅಧ್ಯಯನ ಇವುಗಳು ದಾನಕ್ಕೆ ತುಂಬಾ ಅವಶ್ಯಕ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೭೫

ಧರ್ಮಾಚರಣೆ-೭೫ ಅರಣಿಂ ಕೃಷ್ಣಮಾರ್ಜಾರಂ ಚಂದನಂ ಸುಮಣಿಂ ಘೃತಮ್| ತಿಲಾನ್ ಕೃಷ್ಣಾಜಿನಂ ಛಾಗಂ ಗೃಹೇ ಚೈತಾನಿ ರಕ್ಷಯೇತ್ || ಪರಾಶರ ಸ್ಮೃತಿ|| ಮಥನ ಮಾಡಿ ಅಗ್ನಿ ಉತ್ಪಾದಿಸುವ ಅರಣಿ, ಕಪ್ಪುಬೆಕ್ಕು, ಗಂಧ, ಉತ್ತಮ ರತ್ನ, ಹಸುವಿನ ತುಪ್ಪ, ಎಳ್ಳು, ಕೃಷ್ಣಾಜಿನ, ಕುರಿ ಇವುಗಳು ಪುಣ್ಯಕಾರಕ ಹಾಗೂ ಉತ್ತಮ ಲಕ್ಷಣಗಳುಳ್ಳ ಕಾರಣ ಮನೆಯಲ್ಲಿ ಸದಾ ರಕ್ಷಿಸಬೇಕು. ಕಡೇಪಕ್ಷ ಇವುಗಳಲ್ಲಿ ಒಂದಾದರೂ ಮನೆಯಲ್ಲಿ ಇರಬೇಕು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೭೪

ಧರ್ಮಾಚರಣೆ-೭೪ ಅಗ್ನಿಚಿತ್ಕಪಿಲಾ ಸತ್ರೀ ರಾಜಾ ಭಿಕ್ಷುರ್ಮಹೋದಧಿಃ | ದೃಷ್ಟಮಾತ್ರಾಃ ಪುನಂತ್ಯೇತೆ ತಸ್ಮಾತ್ಪಶ್ಯೇತ್ತು ನಿತ್ಯಶಃ || ಪರಾಶರ ಸ್ಮೃತಿ|| ನಿತ್ಯವೂ ಅಗ್ನಿಯನ್ನು ಆರಾಧಿಸುವ ಅಗ್ನಿಹೋತ್ರಿ ( ನೀರಿನಲ್ಲಿ ಅಲ್ಲ,ಅಥವಾ ವೈಶ್ವದೇವ ಮಾಡುವವರಲ್ಲ) ಕಪಿಲ ಅಥವಾ ಕಂದು ಬಣ್ಣದ ಗೋವು, ಬಹುದಿನಗಳ ಕಾಲ ಆಚರಿಸುವ ಯಜ್ಞ ಕೈಗೊಂಡವನು, ನ್ಯಾಯಯುತವಾಗಿ ಆಳುವ ಉತ್ತಮ ರಾಜ, ಒಮ್ಮೆ ಮಾತ್ರ ಭಿಕ್ಷೆ ಬೇಡಿ ಅದರಲ್ಲೂ ದಾನ ಮಾಡಿ ತನಗೆ ಪ್ರಾಣಧಾರಣೆಗೆ ಅವಶ್ಯಕತೆ ಇದ್ದಷ್ಟು ಉಣ್ಣುವ ಭಿಕ್ಷುಕ, ಸಮುದ್ರ ಇವಿಷ್ಟನ್ನು ನೋಡಿದ ಮಾತ್ರದಿಂದ ನಮ್ಮ ಪಾಪ ಪರಿಹಾರವಾಗುವುದು. ಹಾಗಾಗಿ ದಿನವೂ ಇವರ ದರ್ಶನ ಪುಣ್ಯಕರ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೭೩

ಧರ್ಮಾಚರಣೆ-೭೩ ನ್ಯಾಯೋಪಾರ್ಜಿತವಿತ್ತೇನ ಕರ್ತವ್ಯಂ ಹಿ ಆತ್ಮರಕ್ಷಣಮ್ | ಅನ್ಯಾಯೇನ ತು ಯೋ ಜೀವೇತ್ ಸರ್ವಕರ್ಮಬಹಿಷ್ಕೃತಃ || ಪರಾಶರ ಸ್ಮೃತಿ || ಮನುಷ್ಯರಾದವರು ತಾನು ಅವಲಂಬಿಸಿರುವ ವೃತ್ತಿಯಲ್ಲಿ ನ್ಯಾಯಕ್ಕನುಸಾರವಾಗಿ ಸಂಪಾದಿಸಿ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು. ಇನ್ನೊಬ್ಬರ ರಕ್ಷಣೆಗಾದರೂ ನ್ಯಾಯದ ಧನವನ್ನೇ ಬಳಸಬೇಕು. ಅನ್ಯಾಯದ -ಮನಸ್ಸಾಕ್ಷಿ ಒಪ್ಪದ - ಲೋಕಸಿದ್ಧವೆಂದು ಹಾರಿಕೆ ಉತ್ತರ ಕೊಡುವ ಕರ್ಮಗಳನ್ನು ನಡೆಸಿ ಎಷ್ಟು ಸಂಪಾದಿಸಿದರೂ ಅದು ಇಹಕ್ಕೂ ಪರಕ್ಕೂ ಹಾನಿಕರ. ಇಂದಲ್ಲಾ ನಾಳೆ ಅಧಃಪತನಕ್ಕೆ ಕಾರಣವಾಗುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಅನುವಾದಿತ ಕಥೆ-೩೧

अनूदित कथावलिः - ३१ न हि ज्ञानेन सदृशम्  अन्ये गुरवः के!!! साधुः  सुप्तः एव द्वितीयगुरुविषयं वक्तुमारेभे।  एकः शुनकः अपि मम गुरुरासीत् । एकदा अहं सरस्समीपे पर्यटन् आसम् । तदा सः श्वा तत्र जलपानार्थमागतः ।  यदा जलसमीपं गतवान्  तदा तत्र स्वस्य प्रतिबिम्बं दृष्ट्वा भीतः अभूत् । तस्मिन् भषिते प्रतिबिम्बस्थः शुनकोsपि  भषति स्म । तथापि तृष्णापीडितः सः श्वा किमपि भवतु इति धैर्यात् जले पतितवान् । तदा प्रतिबिम्बस्थः श्वा$पि अदृश्योsभवत्  , तथैव भीतिरपि गता । भगवद्विषये वा अध्यात्मविषये अहमपि भीतः तथा संशयितः आसम् । तदाप्रभृति मम भीतिः दूरंगता। तथा च सो$पि शुनकः मम गुरुः ।  तृतीयः गुरुः एकः बालकः । एकदा सन्ध्याकाले हस्ते दीपमेकं धृत्वा गच्छन् आसीत्। देवालये अन्यं दीपं प्रज्वालयितुं तस्य गमनं निश्चितमासीत् । तस्मिन् काले मम मनसि अतीव अहङ्कारः आसीत्। एतेन बालकेन मम प्रश्नाय उत्तरं  किं दीयते इति दर्पेण अहं तम् एवं पृष्टवान् ।   रे माणवक,  एतदालोकः कस्मादागतः इति तं पृष्टवान् । तदा सः हसन् दीपं प्रशम्य उक्तवान् - इदानीं प्रज्वलन् दीपः निवारितः ।...

ಧರ್ಮಾಚರಣೆ-೭೨

ಧರ್ಮಾಚರಣೆ--೭೨ ಅಸ್ನಾತ್ವಾ ವೈ ನ ಭುಂಜೀತ ತಥೈವಾಗ್ನಿಮಪೂಜ್ಯ ಚ | ನ ಪರ್ಣಪೃಷ್ಠೇ ಭುಂಜೀತ ರಾತ್ರೌ ದೀಪಂ ವಿನಾ ತಥಾ || ಪರಾಶರ ಸ್ಮೃತಿ|| ಸ್ನಾನ ಮಾಡದೇ ಎಂದಿಗೂ ಊಟ ಮಾಡಬಾರದು ಅಥವಾ ಆಹಾರ ಸ್ವೀಕರಿಸಬಾರದು. ಏಕೆಂದರೆ ರಾತ್ರಿಯ ಅವಸ್ಥೆ ಕಳೆದು ಭೋಜನವೆಂಬ ಯಜ್ಞಕ್ಕೆ ಸ್ನಾನ ಮಾಡಿಯೇ ಅಣಿಯಾಗಬೇಕು. ನಿದ್ರೆಯ ಅಮಲು, ದೇಹದ ಅಶುದ್ಧತೆ, ಮನದ ಉದಾಸೀನತೆ ಸ್ನಾನದಿಂದ ದೂರವಾಗುತ್ತದೆ. ಅಗ್ನಿಯನ್ನು ಆರಾಧಿಸದೇ ಅನ್ನ ಉಣ್ಣಬಾರದು. ಅಗ್ನಿಕಾರ್ಯ- ಅಗ್ನಿಹೋತ್ರ- ಔಪಾಸನ- ವೈಶ್ವದೇವ ಇವುಗಳಲ್ಲಿ ಯಾವುದಾದರೂ ರೀತಿಯಿಂದ ಅಗ್ನಿ ಮನೆಯಲ್ಲಿ ಬೆಳಗಿದಾಗ ಆಹಾರ ಶುದ್ಧಿ ಉಂಟಾಗುತ್ತದೆ. ಭಗವದರ್ಪಿತವಾಗಿ ಅದು ಪ್ರಸಾದವಾಗುವುದು. ಬಾಳೆ ಅಥವಾ ಮುತ್ತುಗದ ಎಲೆಯ ಹಿಂಭಾಗದಲ್ಲಿ ಉಣ್ಣಬಾರದು. ಕೀಟಾದಿಗಳ ವಾಸ, ದೊರಗು, ಶಾಸ್ತ್ರ ನಿಷೇಧ ಎಂಬ ಮೂರು ಕಾರಣಗಳಿಂದ ಎಲೆಯ ಮೃದು ಭಾಗವೇ ಶ್ರೇಯಸ್ಕರ. ರಾತ್ರಿ ಎಂದಿಗೂ ದೀಪದ ಬೆಳಕಿನಲ್ಲಿ ಮಾತ್ರ ಉಣ್ಣಬೇಕು. ಕ್ರಿಮಿ ಕೀಟ ಭೂತ ಪ್ರೇತಗಳು ಆಹಾರವನ್ನು ಮಲಿನ ಮಾಡಿ ನಮ್ಮ ದೇಹ ರೋಗಪೀಡಿತವಾಗದಂತೆ ತಡೆಯಲು ಈ ಕ್ರಮ ಅತ್ಯಗತ್ಯ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೭೧

ಧರ್ಮಾಚರಣೆ--೭೧ ಭುಂಜಾನೇಷು ತು ವಿಪ್ರೇಷು ಯೋಗ್ರೇ ಪಾತ್ರಂ ವಿಮುಂಚತಿ |  ಸ ಮೂಢಃ ಸ ಚ ಪಾಪಿಷ್ಠೋ ಬ್ರಹ್ಮಘ್ನಃ ಸ ಖಲೂಚ್ಯತೇ || ಪರಾಶರ ಸ್ಮೃತಿ|| ಒಂದು ಪಂಕ್ತಿಯಲ್ಲಿ ಹಸ್ತೋದಕ ಹಾಕಿದ ನಂತರ ಊಟ ಮುಗಿಯುವ ಮುನ್ನ ಮಧ್ಯದಲ್ಲಿ ಎದ್ದು ಹೋಗಬಾರದು. ಹಾಗೆ ಅನಿವಾರ್ಯ ಕಾರಣಗಳಿಲ್ಲದೆ ಎದ್ದು ಹೋದರೆ ಅದು ಮೂರ್ಖತನದ ಕೆಲಸ, ಅಂತಹವರು ಪಾಪಭಾಜನರಾಗುತ್ತಾರೆ. ಅಂತಹ ಮನುಷ್ಯರು ಬ್ರಹ್ಮಘ್ನರೆಂದು ಕರೆಸಿಕೊಳ್ಳುತ್ತಾರೆ. ಹಾಗಾಗಿ ಎಲ್ಲರ ಊಟ ಆಗುವ ಮುನ್ನ ಮಧ್ಯದಲ್ಲೇ ಎದ್ದು ನಡೆಯುವುದು ಒಳ್ಳೆಯದಲ್ಲ. ಭೋಜನ ಯಜ್ಞ ಮುಗಿದ ನಂತರವೇ ಏಳಬೇಕು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಅನುವಾದಿತ ಕಥೆ-೩೦

अनूदित कथावलिः - ३० न हि ज्ञानेन सदृशम्  एकः महान् योगी मरणं निरीक्षमाणः सुप्तः आसीत् । तस्य शिष्याः पुरतः स्थित्वा दुःखिताः रुदन्तः आसन् । तेष्वेकेन पृष्टम् - हे गुरुवर्य , भवतः गुरुः कः इति । तदा तेनोक्तम्- तत्सर्वं ज्ञातुम् इदानीं समयः नास्ति। मृत्युः मम समीपे एव वर्तते। तदा शिष्येन उक्तम् - इदानीमपि समयो नातीतः , कानिचन नामानि वदतु इति ।  तदा तेन उत्तरितम् - तदपि अशक्यम् , तथापि त्रयः  गुरवः मम स्मृतिपटले आविर्भूताः , तेषां विषये वदामि इति वक्तुमारेभे।  प्रथमः गुरुः एकः चोरः । तदा अहं कुत्रचित् यात्रां कुर्वन् आसम् । तदा रात्रिकालः । आपणानां  तथा गृहाणां द्वाराणि निमीलितानि आसन्। सर्वत्र तमः व्याप्तः । शीतवायुरपि मन्दं मन्दं नुदति स्म। तन्नगरे यः कोपि नरः न दृश्यते स्म। वीथ्यां सञ्चरन् एकः चोरः भित्तिं विदारयन् दृष्टो मया। तमहं अपृष्टम् - अद्य रात्रौ मम तव गृहे आश्रयः दीयते वा इति। तेनोक्तम्- भवान् साधुरिव दृश्यते, अहमेकः चोरः , चोरेण साकं वासः भवतः रोचते किम् इति। अहं किञ्चित् विषण्णः अभूवम् । तथापि एवं चिन्तितम् - चोरस्य तु  मया सह उषितुं न भीतिः , तथ...

ಧರ್ಮಾಚರಣೆ-೭೦

ಧರ್ಮಾಚರಣೆ--೭೦ ಮೌನವ್ರತಂ ಸಮಾಶ್ರಿತ್ಯ ಆಸೀನೋ ನ ವದೇದ್ವಿಜಃ | ಭುಂಜಾನೋ ಹಿ ವದೇದ್ಯಸ್ತು ತದನ್ನಂ ಪರಿವರ್ಜಯೇತ್ || ಪರಾಶರ ಸ್ಮೃತಿ|| ಭುಂಜತೋ ಮೃತ್ಯುರಾಯುಷ್ಯಂ ಎಂಬಂತೆ ಊಟ ಮಾಡುವಾಗ ಮಾತನಾಡುವುದು ಆಯುಷ್ಯ ಕ್ಷೀಣಕರ. ಒಂದೊಮ್ಮೆ ಮೌನನಿಯಮ ಪಾಲಿಸುತ್ತಿದ್ದ ವ್ಯಕ್ತಿ ಮಾತನಾಡಿದರೆ ತಾನು ಉಣ್ಣುತ್ತಿದ್ದ ಅನ್ನವನ್ನು ಅಲ್ಲಿಗೇ ಬಿಟ್ಟು ಅಂದಿನ ಊಟವನ್ನು ಅಷ್ಟರಿಂದಲೇ ಮುಗಿಸಬೇಕು. ಹಾಗಾಗಿ ಉಣ್ಣುವಾಗ ಮಾತನಾಡುವುದು ಎಂದೂ ಒಳ್ಳೆಯದಲ್ಲ. ಉಳಿದವರೂ ಮಾತನಾಡಿಸಲು ಪ್ರಯತ್ನ ಪಡುವುದೂ ತಪ್ಪು. ಭಗವಂತನ ಧ್ಯಾನ ಮಾಡುತ್ತಾ ಅವನ ಪ್ರಸಾದವೆಂದು ನಿಧಾನಕ್ಕೆ ಸಮಾಧಾನದಿಂದ ಉಣ್ಣಬೇಕು. ಇದು ಆರೋಗ್ಯದ ದೃಷ್ಟಿಯಿಂದ ಹಾಗೂ ಶಾಸ್ತ್ರದ ದೃಷ್ಟಿಯಿಂದಲೂ ಉತ್ತಮ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಅನುವಾದಿತ ಕಥೆ-೨೭

विश्वासो बलवर्धकः  एकस्मिन् ग्रामे एकः धनिकः  आसीत्। तस्य गृहे सर्वाणि सुखसाधनान्यपि आसन् । तस्यैका आकाङ्क्षा  देशपर्यटनरूपा । पर्यटनकाले ममैव एका नौकाsस्ति चेत् अतीव सुकरम् इति मन्यमानेन तेन गच्छति काले अतीव श्रद्धया व्यापारे बहु धनं सम्पादितम् । तेन सः नावं क्रीतवान् । तया नौकया अटन् सः देशविदेशेभ्यः बहूनि वस्तूनि आनीय विक्रयणं कृतवान्  । तेन तस्य सम्पदपि दिने दिने वर्धिता बभूव ।  एकदा झंझावातेन उत्क्षिप्ता तस्य नौका ध्वस्ता। तस्मिन् काले  तस्य अपारधनमपि नौकया सह  नष्टम् अभूत् । तेन सः दरिद्रो बभूव । प्रत्यहं यथेच्छं भोजनं कर्तुमपि कष्टमभूत् तस्य कृते। तथापि सः आत्मविश्वासं न त्यक्तवान्।  समये आगते धनिकानां क्षेत्रेषु सेवकत्वेनापि कर्म कृतम् तेन ।  ये पूर्वं परिचिताः आसन्  ते इमं  दृष्ट्वा नितरां  हास्यं कृतवन्तः । बन्धुभिरपि अचिरादेव दूरीकृतः। तथापि सः न खिन्नोsभूत् । श्रद्धया स्वकर्म कुर्वन्नेव भूयः नावं   क्रेतुं शक्तो$भूत् । पुनः यथापूर्वं पर्यटनम् आरब्धम् तेन । तदा परिचितैः पृष्टः सः - कथं भवान् एतादृशं  म...

ಧರ್ಮಾಚರಣೆ-೬೯

ಧರ್ಮಾಚರಣೆ-೬೯ ಕುಶೈಃ ಪೂತಂ ಭವೇತ್ಸಾನಂ ಕುಶೇನೋಪಸ್ಪೃಶೇದ್ವಿಜಃ | ಕುಶೇನ ಚೋದ್ಧೃತಂ ತೋಯಂ ಸೋಮಪಾನಸಮಂ ಭವೇತ್ || ಪರಾಶರ ಸ್ಮೃತಿ|| ದರ್ಭೆ ಅತ್ಯಂತ ಪವಿತ್ರವಾದುದು. ದರ್ಭೆಗಳ ಸಂಪರ್ಕದ ನೀರಿನ ಸ್ನಾನವು ಸಮಸ್ತ ಪಾಪ ವಿನಾಶಕ. ಹಾಗಾಗಿ ಸ್ನಾನ ಮಾಡುವ ಮುನ್ನ ನೀರು ಅಶುದ್ಧ ಎನಿಸಿದರೆ ಎರಡು ದರ್ಭೆ ಹಾಕಿ ಸ್ನಾನ ಮಾಡಬೇಕು. ಅಂತೆಯೇ ದರ್ಭೆ ಹಾಕಿರುವ ಕುಶೋದಕವು ಅಂದರೆ ನೀರು ಅತ್ಯಂತ ಪವಿತ್ರವಾದುದು. ಅದರ ಪಾನವು  ಸೋಮಪಾನದ ಫಲವನ್ನು ಕೊಡುತ್ತದೆ. ಹಾಗಾಗಿ ದ್ವಿಜರು ಸದಾ ದರ್ಭೆಗಳನ್ನು ಸಮೀಪದಲ್ಲಿ ಇಟ್ಟುಕೊಂಡಿರಬೇಕು. ತಮ್ಮ ಶುದ್ಧಿಗೆ ಹಾಗೂ ಪರರ ಶುದ್ಧಿಗೂ ಅದು ಸಹಕಾರಿ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೬೮

ಧರ್ಮಾಚರಣೆ-೬೮ ಅಗ್ನಿಕಾರ್ಯಾತ್ಪರಿಭ್ರಷ್ಟಾಃ ಸಂಧ್ಯೋಪಾಸನ ವರ್ಜಿತಾಃ | ವೇದಂ ಚೈವಾನಧೀಯಾನಾಂ ಸರ್ವೇತ್ರೇ ವೃಷಲಾಃ ಸ್ಮೃತಾಃ || ಪರಾಶರ ಸ್ಮೃತಿ|| ಅಗ್ನಿಯನ್ನು ಎಂದಿಗೂ ಆರಾಧಿಸದೇ, ಎರಡು ಸಂಧ್ಯಾಕಾಲಗಳಲ್ಲಿ ಗಾಯತ್ರಿ ಜಪಿಸದೇ, ಒಂದಷ್ಟು ಸ್ವಶಾಖೆಯ ಮಂತ್ರಗಳನ್ನು ಪಠಿಸದೇ ಇರುವ ವಿಪ್ರರು ವೃಷಲರೆಂದು ಕರೆಸಿಕೊಳ್ಳುತ್ತಾರೆ. ಅವರು ಎಲ್ಲಾ ರೀತಿಯಿಂದಲೂ ಪತಿತರೆಂದು ಕರೆಸಿಕೊಳ್ಳುತ್ತಾರೆ. ಹಾಗಾಗಿ ಅಧಾರ್ಮಿಕ ಮನೋಭಾವ ಅನುಸರಿಸುವವರು ಆ ಧರ್ಮ ಬಿಟ್ಟು ಹೊರನಡೆಯಬಹುದು. ಇದ್ದರೆ ಧರ್ಮವನ್ನು  ಆಚರಿಸಲೇಬೇಕು. ಹೆಸರಿಗೆ ಮಾತ್ರ ನಾವು ವಿಪ್ರರು ಆಚರಣೆಗಲ್ಲ ಎಂಬುದು ಇಹ-ಪರ ಎರಡೂ ಕಡೆ ಅಪರಾಧ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಅನುವಾದಿತ ಕಥೆ-೨೬

अनूदित कथावलिः --२७ दानेन पाणिर्नतु कङ्कणेन   तत्र एकः दरिद्रकुटुम्बः। दम्पती तथा तयोः षडपत्यानि । तथा सति एकस्मिन् दिने महानगरपालिकायाः अधिकारिणः तत्र आगत्य नगरे अभिवृद्धिं कर्तुं तथा प्रशासनस्थलं यत्र कुत्रचित् आक्रमितं वा इति पर्यालोच्य  तद्दूरीकर्तुं तेषां वासस्थाने बृहत् यन्त्रं उपयुज्य तैः सर्वाणि तत्रस्थानि उटजानि पातितानि ।  तेन तत्र उष्यमाणाः सर्वे जनाः निराश्रिताः बभूवुः । सप्ताहद्वयं यावत् तेषाम् उद्योगो$पि न लब्धः । चतुर्दिनानि तैः अशनं विना बहुकष्टेन यापितानि। इतः परं बुभुक्षा सोढुम् अशक्या इत्यालोच्य गृहिणी भिक्षार्थं  बृहत्सदनस्य अभितः स्थित्वा 'अम्ब भिक्षां देहीति ' इत्युच्चैः चुक्रोश। यदा तद्गृहस्था आगता तदा तया  निवेदितम् - हे मातः चतुर्दिनेभ्यः वयं उपवासं कुर्वन्तः स्मः , वत्साः अपि अतीव बुभुक्षिताः ,कृपया अन्नं ददातु  इति ।  तत्र उष्यमाणा सा करुणामयी माता तदाकर्ण्य सर्वान् दृष्ट्वा अश्रूणि मुञ्चन्ती  तेभ्यः  सर्वेभ्यः  अन्नं दत्तवती । बालाः तद्दृष्ट्वा अतीव आनन्दिताः  ।  तेषां लोचनेषु सौदामिनीव कान्तिः ...

ಅನುವಾದಿತ ಕಥೆ-೨೫

अनूदित कथावलिः --२५            लघुकथाः ( nano stories)             लालनपालनम् दिवाकरः अस्ताचलं गतः । गृहस्य अलिन्दे सम्मार्जन्या स्वच्छतां कृत्वा उपविष्टां मातरं दृष्ट्वा शिशुः अवदत् - अम्ब, अम्ब किमिति चेत् अद्य त्वं बहुसुन्दरी दृश्यसे इति। वत्सवचनमाकर्ण्य चकिता सा माता कौतुकात् एवं पृष्टवती- अये, साधुवचनम् , कुतः एवं ब्रवीषि? कथं अद्य सुन्दरी दृष्टा$स्मि  त्वत्कृते? वद शीघ्रम् इति । तदा मुग्धचित्तेन शिशुना एवं भणितम् -हे मातः, प्रातःप्रभृति इतः पर्यन्तम् अद्य न त्वया$हं ताडितः, नभर्त्सितः,न वा निन्दितः, अत एवेति। प्रत्यहं नियमपालनार्थं शिशुं ताडयन्ती सा माता तद्वचः श्रुत्वा पृष्ठतः अवलोक्य अश्रूणि पातितवती।          वाक्बाणजनित परिणामः ग्रामे एकः कुटुम्बः आसीत्। सहजतया कुटुम्बमध्ये सरस- विरस- कलह- सन्ध्यादयः आसन् । पतिः सूक्क्ष्ममनस्कः तथा आज्ञाकारी च आसीत्। सर्वदा तस्यैव मतम् अन्तिममिति अङ्गीकरणीयम् आसीत्। कदाचित् दम्पत्योः मध्ये कलहः समजनि। मुहूर्तं यावत् वादः सञ्जातः । यथापूर्वं पतिः विजयम् प्...

ಧರ್ಮಾಚರಣೆ-೬೮

ಸರ್ವಂ ಗಂಗಾಸಮಂತೋಯಂ ರಾಹುಗ್ರಸ್ತೇ ದಿವಾಕರೇ | ಸೋಮಗ್ರಹೇ ತಥೈವೋಕ್ತಂ ಸ್ನಾನದಾನಾದಿ ಕರ್ಮಸು || ಪರಾಶರ ಸ್ಮೃತಿ|| ಸೂರ್ಯ- ಚಂದ್ರ ಗ್ರಹಣ ಕಾಲದಲ್ಲಿ ಯಾವ ನೀರಲ್ಲಿ ಮಿಂದರೂ ಆ ನೀರು ಗಂಗೆಗೆ ಸದೃಶ ಫಲವನ್ನು ಕೊಡುತ್ತದೆ. ಸ್ನಾನ ಮಾಡುವುದಾಗಲಿ ದಾನ ಕೊಡುವುದಕ್ಕಾಗಲಿ ಆ ಸಮಯದಲ್ಲಿ ಯಾವ ನೀರೂ ಬಳಸಿದರೂ ಅದರಲ್ಲಿ ಗಂಗೆಯಷ್ಟೇ ಪಾವಿತ್ರ್ಯ ಇರುತ್ತದೆ. ಆ ಸಮಯದ ಸ್ನಾನಾದಿಗಳಿಗೆ ಅಷ್ಟು ಮಹತ್ವವಿದೆ. ಹಾಗಾಗಿ ಗ್ರಹಣ ಕಾಲದಲ್ಲಿ ಪುಣ್ಯಕರ್ಮಗಳನ್ನು ಎಂದಿಗೂ ಮರೆಯಬಾರದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ-೬೭

ಧರ್ಮಾಚರಣೆ-೬೭ ಮಹಾನಿಶಾ ತು ವಿಜ್ಞೇಯಾ ಮದ್ಯಸ್ಥಂ ಪ್ರಹರದ್ವಯಮ್ | ಪ್ರದೋಷಪಶ್ಚಿಮೌ ಯಾಮೌ ದಿನವತ್ ಸ್ನಾನಮಾಚರೇತ್ || ಪರಾಶರ ಸ್ಮೃತಿ|| ರಾತ್ರಿಯ ನಾಲ್ಕು ಯಾಮಗಳಲ್ಲಿ ಮಧ್ಯದ ಎರಡು ಯಾಮಗಳಲ್ಲಿ ಗ್ರಹಣ,ಮರಣ ಮೊದಲಾದ ಅನಿವಾರ್ಯ ಸಂದರ್ಭದಲ್ಲಿ ಬಿಟ್ಟು ಎಂದಿಗೂ ಸ್ನಾನ ಮಾಡಬಾರದು. ಅಂದರೆ ರಾತ್ರಿ ಒಂಭತ್ತರ ನಂತರ ಬೆಳಿಗ್ಗೆ ಮೂರರ ನಡುವಿನ ಕಾಲ ಸ್ನಾನಕ್ಕೆ ನಿಷಿದ್ಧ ಕಾಲ. ಪ್ರದೋಷ ಕಾಲ ಎಂದರೆ ಸೂರ್ಯ ಮುಳುಗುವ ಕಾಲ ಹಾಗೂ ಅದರ ಸಮೀಪದ ಒಂದೆರಡು ಗಂಟೆ, ಪಶ್ಚಿಮ ಯಾಮ ಅಂದರೆ ಬ್ರಾಹ್ಮೀಮುಹೂರ್ತದ ಕಾಲ ಆರರ ಒಳಗೆ ಸ್ನಾನ ಮಾಡಬಹುದು. ಹೀಗೆ ಸಮಯ ನೋಡಿ ಮಿಂದರೆ ದೇಹಕ್ಕೂ ಹಿತ, ಧರ್ಮಕ್ಕೂ ಮತ. ಇಲ್ಲದಿದ್ದರೆ ಆರೋಗ್ಯದ ದೃಷ್ಟಿಯಿಂದ ಶೀತಾದಿ ತೊಂದರೆ, ರಾಕ್ಷಸಾದಿಗಳ ಕ್ರೂರದೃಷ್ಟಿ ಹೀಗೆ ಸಮಸ್ಯೆ ಉಂಟಾಗುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com