ರಾಮಾಯಣ-೧೬೨
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೨🏝📖 *ಋಷ್ಯಶೃಂಗೋ ವನಚರಸ್ತಪಃಸ್ವಾಧ್ಯಾಯನೇ ರತಃ | ಅನಭಿಜ್ಞಃ ಸ ನಾರೀಣಾಂ ವಿಷಯಾಣಾಂ ಸುಖಸ್ಯ ಚ||* _ದಶರಥನು ಋಷ್ಯಶೃಂಗನನ್ನು ಕರೆತಂದ ಬಗೆಯನ್ನು ವಿವರಿಸಬೇಕೆಂದು ಸುಮಂತ್ರನಲ್ಲಿ ಕೇಳಿದಾಗ ಸುಮಂತ್ರ ವಿವರಿಸುತ್ತಿದ್ದಾನೆ. ಈ ಸುಮಂತ್ರ ಸೂತ ಹಾಗೂ ಮಂತ್ರಿಯೂ ಹೌದು. ಸನತ್ಕುಮಾರನ ಬಳಿ ಈ ಆಖ್ಯಾನ ಅವನು ಕೇಳಿದನೆಂದರೆ ಅವನ ಜ್ಞಾನ ಎಷ್ಟಿತ್ತೆಂದು ನಾವು ಊಹಿಸಬಹುದು. ದಶರಥನಿಗೂ ಮಿಗಿಲಾದ ಜ್ಞಾನ ಅವನಿಗಿತ್ತು. ಹಾಗಾಗಿ ಜ್ಞಾನ ಸಂಪಾದನೆಗೆ ಜಾತಿ- ಮತ- ಧನ ಎಂದಿಗೂ ಕಾರಣವಲ್ಲ. ಅದೊಂದು ಭ್ರಮೆ ಅಷ್ಟೇ. ಋಷ್ಯಶೃಂಗನ ದಿನಚರಿ ಹೇಗಿತ್ತೆಂದರೆ ಈಗಿನ ಕಾಲದ ನಮ್ಮ ಕಲ್ಪನೆಗೂ ಬರಲಾರದು. ಯಾವ ಸ್ತ್ರೀಯನ್ನೂ ಅವನು ಈವರೆಗೆ ನೋಡಿಲ್ಲ. ಕಾಡಿನಲ್ಲಿ ಸಂಚಾರ, ತಪಸ್ಸು, ಸ್ವಾಧ್ಯಾಯ, ಅಧ್ಯಯನ ಇವುಗಳಲ್ಲೇ ನಿರತನು ಅವನು. ವಿಷಯಗಳಾದ ರೂಪ-ರಸ-ಗಂಧ-ಶಬ್ದ-ಸ್ಪರ್ಶಗಳ ಸುಖವೇನೆಂದೇ ಅವನಿಗೆ ಗೊತ್ತಿಲ್ಲ. ಇದು ರುಚಿ, ಇದು ಚಂದ, ಇದು ಇಂಪು, ಇದು ತಂಪು, ಇದು ಪರಿಮಳ ಎನ್ನುವ ಭೇದ ಅವನಿಗೆ ತಿಳಿದಿಲ್ಲ. ತನಗೆ ಸಿಕ್ಕಿರುವಲ್ಲೇ ಆನಂದ ಅನುಭವಿಸುತ್ತಾ ಆನಂದರೂಪಿಯಾಗಿ ವಿಹರಿಸುತ್ತಿದ್ದಾನೆ. ಹಾಗಾಗಿಯೇ ಅವನ ಶಕ್ತಿ ಬರಗಾಲದಲ್ಲೂ ಅತಿವೃಷ್ಟಿ ಬರಿಸುವಷ್ಟಿದೆ. ನಾವೂ ಋಷ್ಯಶೃಂಗನ ದಾರಿ ಸ್ವಲ್ಪ ಕ್ರಮಿಸಿದರೂ ಬಹುಶಃ ನಮ್ಮ ಗಮನಾಗಮನಗಳು ಒಳಿತನ್ನು ಉಂಟು ಮಾಡಿಯಾವು._ *ಪಿತುಃ ಸ ನಿತ್...