ಪೋಸ್ಟ್‌ಗಳು

ನವೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅನುವಾದಿತ ಕಥೆ ೩೬

अनूदितकथावलिः-३६ उपकारधीः गिरिवननामकं विपिनमेकं प्रसिद्धमासीत् । तत्र बहुसंख्याकाः चन्दनपादपाः आसन्। वृक्षस्येकस्योपरि शुकसंसारः वसति  स्म।  एकदा ग्रीष्मकाले अंशुभिः जनिततापेन मन्दवातेन च वृक्षेषु लघुघट्टनं, तेन च वह्निः जातः । अचिरादेव तृणं व्याप्य अरण्यं भक्षयन्निव भासमानः सः शुकवसतेः वृक्षस्य समीपम् आगच्छत्। तत्समये शुकपितरौ आहारार्थं सुदूरं गतवन्तौ आस्ताम् । एकः शावकः एव वृक्षमाश्रित्य स्थितः ।  सः वृक्षराजः करुणया तं शुकशावकं प्रति अवोचत्- हे शिशो, वह्निः सर्वं भक्षयन् ज्वालाभिः प्रसृतः समीपमागतः । अहं तु स्थविरः । अद्य वा श्वः वा मृतः भवामि। भवान् न तादृशः, वह्निना एकैका मम शाखा व्याप्ता खादिता च भवति। मम काण्डस्यापि अचिरादेव अग्निः प्रसरति। मम कृते चिंतां मा कुरु। भवतः जीवनं बहु दीर्घम् अस्ति। तथा च भवान् मां त्यक्त्वा क्षणाद्दूरं गच्छतु इति।  सः शावकः आश्रयदातुः वृक्षस्य नाशम् असहमानः दुःखितः बभूव। उपकृतस्य कष्टे प्राप्ते प्रत्युपकारः कर्तव्य एव, आपदि एनं त्यक्त्वा कुत्र  वा कथं गच्छामि इति विचिन्त्य समीपस्थे ह्रदे निमज्य पक्षाभ्यां जलमानीय वह्नेरुपरि सि...

ವಿಕ್ರಮೋರ್ವಶೀಯ ೪

📔👳‍♀️💛👩‍🦱📒 *ವಿಕ್ರಮೋರ್ವಶೀಯ*  ಪದ್ಯ-೪ *अस्याः सर्गविधौ प्रजापतिरभूच्चन्द्रो नु कान्तप्रभः । शृङ्गारैकरसः स्वयं नु मदनो मासो नु पुष्पाकरः । वेदाभ्यासजडः कथं नु विषयव्यावृत्तकौतुहलो निर्मातुं प्रभवेन्मनोहरमिदं रूपं पुराणो मुनिः ।।* _ಊರ್ವಶಿಯನ್ನು ಕಂಡ ಪುರೂರವನ ಮನದ ಭಾವನೆ ಹೊರಹೊಮ್ಮಿದ ಬಗೆ. ನಾರಾಯಣ ಮುನಿಯ ಮಗಳೇ ಇವಳು! ಇರಲಾರಳು. ಬಹುಶಃ ಚಂದ್ರನೇ ಸೃಷ್ಟಿಕರ್ತನಾಗಿ ತನ್ನ ಕಾಂತಿಯಿಂದ ಇವಳನ್ನು ಸೃಷ್ಟಿ ಮಾಡಿದನೋ! ಅಥವಾ ಶೃಂಗಾರವೇ ಮುಖ್ಯವಾದ ರಸವಾಗಿರುವ ಮನ್ಮಥನು ಇವಳನ್ನು ನಿರ್ಮಿಸಿದನೋ! ಅಥವಾ ಮಾಸಗಳಲ್ಲೆಲ್ಲ ಸೊಗಸಾದ ಪ್ರಕೃತಿಯ ಯೌವ್ವನವನ್ನು ಹೆಚ್ಚಿಸುವ ವಸಂತನು ತನ್ನ ಸೃಷ್ಟಿಯ ಸೊಬಗನ್ನು ಹೀಗೆ ಉಣಬಡಿಸಿದನೋ! ಏಕೆಂದರೆ ನಿರಂತರ ವೇದ-ಶಾಸ್ತ್ರ-ಪುರಾಣಗಳು ಅಭ್ಯಾಸದಿಂದ ಶಬ್ದ ಸ್ಪರ್ಶ ಮೊದಲಾದ ಇಂದ್ರಿಯಗಳ ಸೆಳೆತದ ವಿಷಯಗಳಿಂದ ದೂರವಾದ ಪರಮಸ್ವರೂಪವೇ ಪ್ರಧಾನ ರೂಪವಾದ ಆ ಮುನಿಯು ಇಂತಹ ಸೌಕುಮಾರ್ಯದ-ತ್ರಿಲೋಕಗಳ ಸೌಂದರ್ಯವನ್ನು ನಾಚಿಸುವ-ಜಗದ ಸೊಬಗೆಲ್ಲವೂ ಒಂದೆಡೆ ಮಡುಗಟ್ಟಿದಂತಿರುವ ಈ ಮನೋಹರ ರೂಪವನ್ನು ಹೇಗೆ ಸೃಷ್ಟಿಸಿಯಾನು! ಚಂದ್ರನ ಬೆಳದಿಂಗಳು, ಮನ್ಮಥನ ಮೋಹಕ-ಆಕರ್ಷಕ ರೂಪ, ವಸಂತದ ನವೋಲ್ಲಾಸ ಎಲ್ಲವೂ ಒಂದಡೆ ಮೇಳೈಸಿದಂತೆ. ಅಬ್ಬಾ ನಿಜಕ್ಕೂ ಮುನಿಯ ಮಗಳೆಂದು ತಿಳಿದು ಆಶ್ಚರ್ಯವು ಮತ್ತೆ ಮತ್ತೆ ಮೂಡುತ್ತಿದೆ. ಊರ್ವಶಿಯ ಸೌಂದರ್ಯವನ್ನು ಕಂಡು ಕಣ್ಣು ತುಂಬಿಕೊಂ...

ರಾಮಾಯಣ ೧೮೫

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೫🏝📖  *ಅಪ್ಸರಸ್ಸು ಚ ಮುಖ್ಯಾಸು ಗಂಧರ್ವೀಣಾಂ ತನೂಷು ಚ| ಯಕ್ಷಪನ್ನಗಕನ್ಯಾಸು ಋಕ್ಷೀವಿದ್ಯಾಧರೀಷು ಚ|| ಕಿನ್ನರೀಣಾಂ ಚ ಗಾತ್ರೇಷು ವಾನರೀಣಾಂ ತನೂಷು ಚ| ಸೃಜಧ್ವಂ ಹರಿರೂಪೇಣ ಪುತ್ರಾಂಸ್ತುಲ್ಯಪರಾಕ್ರಮಾನ್||* _ರಾಕ್ಷಸರ ಸಂಹಾರ ಕಾರ್ಯದಲ್ಲಿ ಭಗವಂತನಿಗೆ ಸಹಾಯಕರಾಗಿ ಅಪ್ಸರೆಯರಲ್ಲಿ, ಗಂಧರ್ವಸ್ತ್ರೀಯರಲ್ಲಿ, ಯಕ್ಷ-ಪನ್ನಗ ಕನ್ಯೆಯರಲ್ಲಿ, ಋಕ್ಷಿ ಮತ್ತು ವಿದ್ಯಾಧರ ಕನ್ಯೆಯರಲ್ಲಿ( ಋಕ್ಷಿ=ಹೆಣ್ಣು ಕರಡಿ), ಕಿನ್ನರ ಸ್ತ್ರೀಯರಲ್ಲಿ, ವಾನರಸ್ತ್ರೀಯರಲ್ಲಿ ಉಪಾಯಜ್ಞರಾದ (ಸಾಮ-ದಾನ-ಭೇದ-ದಂಡ) ಸಿಂಹ ಸದೃಶ ಬಲಿಷ್ಠರಾದ ದೀರ್ಘಾಯುಗಳಾದ ಸರ್ವಾಸ್ತ್ರಗಳ ಶಕ್ತಿತುಂಬಿರುವ ಮಕ್ಕಳನ್ನು ಹುಟ್ಟಿಸಿ ಎಂದು ನುಡಿದನು ಬ್ರಹ್ಮ. ಹಾಗೆ ಹುಟ್ಟಿದ ವೀರರ ಹೆಸರು- ಇಂದ್ರನು ವಾಲಿಯನ್ನು, ಸೂರ್ಯನು ಸುಗ್ರೀವನನ್ನೂ, ಬೃಹಸ್ಪತಿಯು ತಾರನನ್ನೂ, ಕುಬೇರನು ಗಂಧಮಾದನನನ್ನೂ, ವಿಶ್ವಕರ್ಮನು ನಲನನ್ನೂ,( ಸೇತುವೆಯ ಮುಖ್ಯ ರಚನಕಾರ ವಿಶ್ವಕರ್ಮನ ಮಗ) ಅಗ್ನಿಯು ನೀಲನನ್ನೂ, ಅಶ್ವಿನಿಗಳು ಮೈಂದ-ದ್ವಿವಿದರನ್ನೂ, ವರುಣನು ಸುಷೇಣನನ್ನೂ, ಪರ್ಜನ್ಯನು ಶರಭನನ್ನೂ, ವಾಯುವು ಹನುಮನನ್ನೂ ಹುಟ್ಟಿಸಿದರು. ಕಾಮರೂಪಿಗಳೂ, ಮಹಾಬಲಶಾಲಿಗಳೂ, ಇಚ್ಛಿಸಿದಲ್ಲಿಗೆ ಕೂಡಲೇ ತೆರಳುವ ಸಾಮರ್ಥ್ಯ ಉಳ್ಳವರೂ,ಉಳಿದ ಪ್ರಾಣಿಗಳನ್ನು ಸೋಲಿಸುವ ಸಾಮರ್ಥ್ಯವುಳ್ಳ ಲಕ್ಷ ಲಕ್ಷ ವಾನರರು ಜನಿಸಿದರು. ನಂದೀಶ್ವರನ ಶಾಪವನ್ನು ಸತ್ಯ ಮಾಡಲು ಹೀಗೆ ಬ...

ವಿಕ್ರಮೋರ್ವಶೀಯ ೩

📔👳‍♀️💛👩‍🦱📒 *ವಿಕ್ರಮೋರ್ವಶೀಯ*  ಪದ್ಯ-3 *आविर्भूते शशिनि तमसा मुच्यमानेव रात्रिः नैशस्यार्चिर्हुतभुज इव च्छिन्नभूयिष्ठधूमा। मोहेनान्तर्वरतनुरियं लक्ष्यते मुक्तकल्पा गङ्गा रोधः पतनकलुषो गृह्णतीव प्रसादम् ।।* _ಊರ್ವಶಿಯು ಅಸುರರಿಂದ ಆಕ್ರಮಣಕ್ಕೊಳಗಾದಾಗ ಪುರೂರವನು ಪೊರೆದಿದ್ದಾನೆ. ಅವಳನ್ನು ಅಡರಿದ ಭಯ ಇನ್ನೂ ಅಸುರರೊಡನೆ ಹೊರನಡೆದಿಲ್ಲ. ನಿಧಾನವಾಗಿ ಚೇತರಿಸಿಕೊಂಡು ಉಸಿರುಬಿಡುತ್ತಿದ್ದಾಳೆ. ಕವಿ ಅದನ್ನು ಸುಂದರವಾಗಿ ನಾಯಕನ ಮಾತನ್ನಾಗಿಸಿದ್ದಾನೆ. ಸುತ್ತಲೂ ಕತ್ತಲಿಂದ ಮುಚ್ಚಿಹೋಗಿದ್ದ ರಾತ್ರಿಯು ತಂಗದಿರನ ಕಿರಣದ ಸ್ಪರ್ಶದಿಂದ ಈಗ ತಾನೇ ಕಣ್ಣುಬಿಡುವಂತೆ, ರಾತ್ರಿಕಾಲದಲ್ಲಿ ಆವರಿಸಿದ ಹೊಗೆಯೆಲ್ಲ ಸರಿದು ಬಂಗಾರದ ಕಾಂತಿಯ ಅಗ್ನಿಶಿಖೆಯು ಹೊಳೆವಂತೆ, ಮಳೆಯ ಸಾಂಗತ್ಯದಲ್ಲಿ ತೀರದ ಮಣ್ಣಿನಿಂದ ಕಲುಷಿತಳಾಗಿದ್ದ ಗಂಗೆ ಈಗ ತಾನೇ ನಿರ್ಮಲವಾಗಿ ಹರಿವಂತೆ, ಅಸುರ-ಕ್ಷಿತಳಾಗಿ ಭಯವೆಂಬ ಭಾವದಲ್ಲಿ ಮುಳುಗಿದ್ದ ಈ ಸುಂದರಿಯು ಈ ಕ್ಷಣದಲ್ಲಿ ಸಾವರಿಸಿಕೊಂಡು ಅತ್ತಿತ್ತ ಕಣ್ಣುಹಾಯಿಸುತ್ತಾ ಬೆಳಕಾಗುತ್ತಿದ್ದಾಳೆ. ಸಖಿಯು ಅರೇ, ಗೆಳತಿ ಸಾವರಿಸಿಕೊ ಎಂದು ಅವಸರ ಮಾಡಿದಾಗ ನಾಯಕನಾಡುವ ಮಾತು. ಕವಿ ಇಲ್ಲಿ ಸುಂದರ ಚಿತ್ರವನ್ನೇ ಪದಗಳ ಮೂಲಕ ರಚಿಸಿದ್ದಾನೆ. ಒಂದೆಡೆ ಬೆಳದಿಂಗಳು, ಮತ್ತೊಂದೆಡೆ ಕತ್ತಲಲ್ಲೂ ಹೊಳೆಯುತ್ತಿರುವ ಬೆಂಕಿಯ ಜ್ವಾಲೆ, ಮತ್ತೊಂದೆಡೆ ನಿರ್ಮಲವಾದ ಗಂಗೆ ಈ ಮೂರರ ಸಾಕಾರವೆನಿಸಿದ ಹೆಣ್...

ರಾಮಾಯಣ ೧೮೪

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೪🏝📖  *ಪುತ್ರತ್ವಂ ತು ಗತೇ ವಿಷ್ಣೌ ರಾಜ್ಞಸ್ತಸ್ಯ ಮಹಾತ್ಮನಃ | ಉವಾಚ ದೇವತಾಃ ಸರ್ವಾಃ ಸ್ವಯಂಭೂರ್ಭಗವಾನಿದಮ್ ||   ವಿಷ್ಣೋಃ ಸಹಾಯಾನ್ಬಲಿನಃ ಸೃಜಧ್ವಂ ಕಾಮರೂಪಿಣಃ || ಮಾಯಾವಿದಶ್ಚ ಶೂರಾಂಶ್ಚ ವಾಯುವೇಗಸಮಾಂಜವೇ|* _ಭಗವಂತನ ಅವತಾರ ದಶರಥನ ಪುತ್ರನಾಗಿ ಆಗುತ್ತಿರಲು ಬ್ರಹ್ಮನು ದೇವತೆಗಳನ್ನು ಕುರಿತು ನುಡಿದನು- ದೇವತೆಗಳೇ ನೀವೆಲ್ಲರೂ ವಿಷ್ಣುವಿನ ಸಹಾಯಕ್ಕೆ ಇಚ್ಛೆ ಬರುವ ರೂಪಧಾರಿಗಳಾದ ಪ್ರಾಣಿಗಳನ್ನು ನಿಮ್ಮ ಪ್ರಭಾವದಿಂದಾಗಿ ಹುಟ್ಟಿಸಿರಿ.  ಶೂರರೂ, ವಾಯುವೇಗದವರೂ, ನೀತಿಜ್ಞರೂ, ಬುದ್ಧಿವಂತರೂ ಆಗಿ ವಿಷ್ಣುವಿಗೆ ಸಮಾನ ಪರಾಕ್ರಮ ಉಳ್ಳವರಾಗಿ ಸಾಮಾದಿ ಚತುರೋಪಾಯಗಳನ್ನು ಅರಿತವರೂ,ಸಿಂಹಸದೃಶ ಬಲಿಷ್ಠರೂ,ದೀರ್ಘಾಯುಷಿಗಳಾಗಿಯೂ ಇರುವರಾಗಿರಬೇಕು. ಶ್ರೇಷ್ಠ ಅಪ್ಸರೆಯರಿಂದಲೂ,ಗಂಧರ್ವಸ್ತ್ರೀಯರಿಂದಲೂ, ಯಕ್ಷ-ಪನ್ನಗ ಸ್ತ್ರೀಯರಿಂದಲೂ, ವಿದ್ಯಾಧರ ಕನ್ಯೆಯರಿಂದಲೂ, ಕಿನ್ನರ-ವಾನರ ಸ್ತ್ರೀಯರಿಂದಲೂ, ನಿಮ್ಮಷ್ಟೇ ಬಲಿಷ್ಠರಾದ ವಾನರರೂಪಿಗಳನ್ನು ಸೃಷ್ಟಿಸಿರಿ ಎಂದು ಆಜ್ಞಾಪಿಸಿದನು._ _ಇಲ್ಲಿ ತಮ್ಮ ತಮ್ಮ ಮಡದಿಯರಲ್ಲಿ ಮಕ್ಕಳನ್ನು ಪಡೆಯದಿರಲು  ಪಾರ್ವತಿಯ ಶಾಪ ಕಾರಣವಾಗಿತ್ತು. ಹಾಗಾಗಿ ತಮ್ಮ ಕ್ಷೇತ್ರದಲ್ಲಿ ದೇವತೆಗಳು ಮಕ್ಕಳನ್ನು ಪಡೆಯುವುದು ಸಾಧ್ಯವಾಗದ ಸಂಗತಿ. ಹಾಗಾಗಿ ಅಪ್ಸರೆ-ಗಂಧರ್ವ ಹೀಗೆ ನಾನಾ ಸ್ತ್ರೀಯರನ್ನು ಆಶ್ರಯಿಸಿ ವಾನರರನ್ನು ಸೃಷ್ಟಿಸಿದರು. ನಂದ...

ವಿಕ್ರಮೋರ್ವಶೀಯ ೨

📔👳‍♀️💛👩‍🦱📒 *ವಿಕ್ರಮೋರ್ವಶೀಯ*  ಪದ್ಯ-೨ *अग्रे यान्ति रथस्य रेणुपदवीं चूर्णीभवन्तो घनाः चक्रभ्रान्तिररान्तरेषु जनयत्यन्यामिवारावलीम् । चित्रन्यस्तमिवाचलं हयशिरस्यायामवच्चामरं यष्ट्यग्रे च समं स्थितो ध्वजपटः प्रान्ते च वेगानिलात् ।।* _ಕಾಳಿದಾಸನ ಒಂದು ಸುಂದರ ಕಲ್ಪನೆ. ಹಿಂದೆ ಈಗಿನಂತೆ ನೂರು ನೂರೈವತ್ತು ಕಿಲೋಮೀಟರ್ ವೇಗದಲ್ಲಿ ಹೋಗುವ ದ್ವಿಚಕ್ರ ಅಥವಾ ಚತುಶ್ಚಕ್ರ ವಾಹನಗಳಿರಲಿಲ್ಲ‌. ಆಗ ಇದ್ದ ವೇಗದ ವಾಹನಗಳು ರಥಗಳು. ರಥ ಓಡಿಸುವ ಕೆಲವು ಪರಿಣತ ಸಾರಥಿಗಳು ಬಹಳ ವೇಗದಿಂದ ಆಕಾಶದಲ್ಲಿ ಹೋಗುತ್ತಿರುವಂತೆ ಓಡಿಸುತ್ತಿದ್ದರು. ಇದಕ್ಕೆ ಸಾರಥಿಯ ಚಾಕಚಕ್ಯತೆ ಹಾಗೂ ಅಶ್ವಗಳ ಗುಣಮಟ್ಟ ಎರಡೂ ಸಹಕಾರಿಯಾಗಿತ್ತು. ಪ್ರಕೃತ ವಿಕ್ರಮೋರ್ವಶೀಯ ನಾಟಕದಲ್ಲಿ ಕೇಶಿಯೆಂಬ ದೈತ್ಯನು ಅಪ್ಸರೆಯಾದ ಊರ್ವಶಿಯನ್ನು ಅಪಹರಿಸಿದ್ದಾನೆ. ರಂಭೆಯ ಕೋರಿಕೆಯ ಮೇರೆಗೆ ನಾಟಕದ ನಾಯಕ ಪಾತ್ರಧಾರಿ ಪುರೂರವ ಧಾವಿಸಿದ್ದಾನೆ. ಸಹಜವಾಗಿ ಅವನು ವೇಗದಿಂದ ರಾಕ್ಷಸನ ಮನೆಗೆ ಹೋಗುತ್ತಿದ್ದಾನೆ. ತನ್ನ ಸಾರಥಿಯು ಅತ್ಯಂತ ವೇಗದಿಂದ ರಥವನ್ನು ಚಲಾಯಿಸುವುದನ್ನು ಕಂಡು ಆನಂದದಿಂದ ವರ್ಣಿಸುತ್ತಿದ್ದಾನೆ._ _ರಥವು ಎಷ್ಟು ವೇಗದಿಂದ ಸಾಗುತ್ತಿದೆಯೆಂದರೆ ಆಕಾಶಮಾರ್ಗದಲ್ಲಿರುವ ಮೋಡಗಳು ರಥದ ಗಾಲಿಗೆ ಸಿಕ್ಕಿ ಪುಡಿಯಾಗಿ ಧೂಳು ಎಲ್ಲೆಡೆ ಹರಡಿದಂತಿದೆ. ರಥದ ಗಾಲಿಯ ಮಧ್ಯಭಾಗವು ಎರಡಾಗಿ ತೋರುತ್ತಿದೆ. ಚಕ್ರವು ವೇಗವಾಗಿ ಉರುಳುವಾಗ ಅ...

ಧಾರ್ಮಿಕ ವಿಷಯ

ದೌಹಿತ್ರಪ್ರತಿಪಚ್ಛ್ರಾದ್ಧ ಜಾತಮಾತ್ರೋಪಿ ದೌಹಿತ್ರೋ ವಿದ್ಯಮಾನೇಪಿ ಮಾತುಲೇ ಕುರ್ಯಾನ್ಮಾತಾಮಹಶ್ರಾದ್ಧಂ ಪ್ರತಿಪದ್ಯಾಶ್ವಿನೇ ಸತಿ. ಎಂಬ ನಿರ್ಣಯಸಿಂಧುವಿನ ಮಾತಿನಂತೆ ಮಾವ ಇದ್ದರೂ ಅಜ್ಜನ ಶ್ರಾದ್ಧ ಮಾಡಲೇಬೇಕು. ಉಪನಯನ ಆಗದವರು ಕೂಡ ಇದನ್ನು ಮಾಡಬಹುದು. ಚಂದ್ರಿಕಾಕಾರರು ಪಿಂಡ ಸಹಿತ ಎಂದರೆ ಕಮಲಾಕಾರನು ಪಿಂಡರಹಿತ ಎನ್ನುತ್ತಾನೆ. ಪ್ರತಿಪದೆಯ ಶ್ರಾದ್ಧದಲ್ಲಿ ಪಿಂಡದ ನಿಷೇಧ ಹೇಳಿರುವ ಕಾರಣ ಕಮಲಾಕರನ ಮಾತು ಸಮ್ಮತವೆನಿಸುತ್ತದೆ. ಅಲ್ಲದೆ ತಂದೆ ತಾಯಿ ಬದುಕಿದ್ದವರು ಪಿಂಡ ಕೊಡಬಾರದೆಂಬ ನಿಷೇಧವೂ ಇದಕ್ಕೆ ಪೂರಕ. ಪಿತೃಗಳು ಇದ್ದವರೇ ಇದನ್ನು ಮಾಡಬೇಕು.      ಗರ್ಭಾಚ್ಯುತೋ ಹಿ ದೌಹಿತ್ರಃ ಕುರ್ಯಾತ್ಪಿತರಿ ಜೀವತಿ. ಶ್ರಾದ್ಧಂ ಮಾತಾಮಹಾನಾಂ ಚ ಪಕ್ಷಾಂತಾದಪರೇಹನಿ.  ಪಕ್ಷಪಾಸದ ಮರುದಿನ ಈ ಶ್ರಾದ್ಧ ಮಾಡಬೇಕೆಂದು ಬಹು ಉಕ್ತಿಗಳು ಇವೆ.  ಪ್ರತಿಪದ್ಯಾಶ್ವಿನೇ ಶುಕ್ಲೇ ದೌಹಿತ್ರಸ್ವ್ತೇಕಪಾರ್ವಣಮ್ ಶ್ರಾದ್ಧಂ ಮಾತಾಮಹಂ ಕುರ್ಯಾತ್ಸಪಿತಾ ಸಂಗವೇ ಸದಾ.  ಇದನ್ನು ಕುತಪ ಕಾಲದಲ್ಲಿ ಅಲ್ಲದೇ ಸಂಗವ ಕಾಲ ಅಂದರೆ ದಿನದ ದ್ವಿತೀಯ ಭಾಗದಲ್ಲಿ ಮಾಡಬೇಕು. ತಂದೆ ಇದ್ದವರು ಸಂಗವ ಕಾಲ ಹೀಗೆ ಎರಡು ಅನ್ವಯ.  ಒಂದು ವೇಳೆ ತಂದೆ ಹೋಗಿಯೂ ಮಾಡುವುದಾದರೆ ಅಪರಾಹ್ನ ಮಾಡಬೇಕು.  ಕೌಸ್ತುಭಕಾರರು ಪಾರ್ವಣ ವಿಧಿಯಲ್ಲಿ ಜೀವತ್ಪಿತೃಕನು ಅಪರಾಹ್ಣವೇ ಮಾಡಬೇಕೆನ್ನುತ್ತಾನೆ.  ಪ್ರಯೋಗ: ಅಸ್ಮನ್ಮಾತಾಮಹ ....... ಏತೇಷಾಂ...

ರಾಮಾಯಣ ೧೮೩

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೩🏝📖 *ಇದಂ ತು ನೃಪಶಾರ್ದೂಲ ಪಾಯಸಂ ದೇವನಿರ್ಮಿತಮ್ | ಪ್ರಜಾಕರ ಗೃಹಾಣ ತ್ವಂ ಧನ್ಯಮಾರೋಗ್ಯವರ್ಧನಮ್ || ಭಾರ್ಯಾಣಾಮನುರೂಪಾಣಾಮಶ್ನೀತೇತಿ ಪ್ರಯಚ್ಛ ವೈ | ತಾಸು ತ್ವಂ ಪ್ರಾಪ್ಸ್ಯಸೇ ಪುತ್ರಾನ್ಯದರ್ಥಂ ಯಜಸೇ ನೃಪ||* _ದೇವಪುರುಷನ ಆವಿರ್ಭಾವದಿಂದ ಮುದಗೊಂಡ ದಶರಥನು ಏನು ಮಾಡಬೇಕೆಂದು ಕೇಳಿದಾಗ ಅವನಾಡುವ ಮಾತು- ರಾಜನೇ, ಅಶ್ವಮೇಧ ಪುತ್ರಕಾಮೇಷ್ಟಿ ಮೊದಲಾದ ಯಜ್ಞಗಳಿಂದ ದೇವತಾರಾಧನೆ ಮಾಡಿದ ಫಲರೂಪವಾದ ಪಾಯಸವಿದು. ನಿನ್ನ ಪತ್ನಿಯರಿಗೆ ಪಾನಮಾಡಲು ನೀಡಿ ಪುತ್ರರನ್ನು ಪಡೆ ಎಂದು. ಹೋಮಗಳಲ್ಲಿ ಪಾಯಸವನ್ನು ಅಹುತಿ ನೀಡುವ ಫಲವೂ ಸಂತತಿ ಅಥವಾ ಪ್ರಜಾವೃದ್ಧಿ. ಇಲ್ಲಿ ಪಾಯಸದ ಪಾನವೂ ಅದನ್ನೇ ನಿರೂಪಿಸಿದೆ. ಪಾಯಸದ ಸ್ವರೂಪ ಹೇಗೆಂದರೆ- ತುಪ್ಪದೊಂದಿಗೆ ಇಡೀ ಅಕ್ಕಿಯನ್ನು ಮಿಶ್ರಮಾಡಿ ಹಾಲಿನಲ್ಲಿ ಬೇಯಿಸಿದರೆ ಪಾಯಸ ಸಿದ್ಧವಾಗುತ್ತದೆ. ನಾವು ಪ್ರಕೃತ ಮಾಡುವಂತೆ ಸಕ್ಕರೆ ಅಥವಾ ಬೆಲ್ಲವನ್ನು ಹಾಕಬೇಕೆಂದಿಲ್ಲ. ಈ ಪಾಯಸದ ಸೇವನೆಯು ಕಫವನ್ನು ಹೆಚ್ಚಿಸುತ್ತದೆ, ಶಕ್ತಿಯನ್ನು ವೃದ್ಧಿಸುತ್ತದೆ,ಶೀತವನ್ನು ಉಂಟುಮಾಡುತ್ತದೆ ಹಾಗೂ ತಿನ್ನಲು ಬಹಳ ಮಧುರವಾಗಿರುತ್ತದೆ. ಭಗವಂತನ ಪ್ರಸಾದವೆನಿಸಿದಾಗ ಅದರ ದೋಷಗಳು ದೂರವಾಗಿ ಗುಣಗಳು ಹೆಚ್ಚಾಗಿ ನಮ್ಮನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ. ರಾಜನೇ, ಇದರ ಸೇವನೆಯು ನಿಶ್ಚಿತವಾಗಿ ನಿನಗೆ ಫಲ ಕೊಡುವುದೆಂದು ನುಡಿದು ಆ ಪರಮಪುರುಷನು ಅಂತರ್ಧಾನನಾದನು._ *ಬಭೂವ ಪರಮಪ್...

ರಾಮಾಯಣ ೧೮೨

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೨🏝📖 *ತತೋ ವೈ ಯಜಮಾನಸ್ಯ ಪಾವಕಾದತುಲಪ್ರಭಮ್ | ಪ್ರಾದುರ್ಭೂತಂ ಮಹದ್ಭೂತಂ ಮಹಾವೀರ್ಯಂ ಮಹಾಬಲಮ್ || ಕೃಷ್ಣಂ ರಕ್ತಾಂಬರಧರಂ ರಕ್ತಾಸ್ಯಂ ದುಂದುಭಿಸ್ವನಮ್ | ಸ್ನಿಗ್ಧಹರ್ಯಕ್ಷತನುಜಶ್ಮಶ್ರುಪ್ರವರಮೂರ್ಧಜಮ್||* _ಭಗವಂತನು ಅವತಾರ ತಾಳಲೆಂದು ನಿಶ್ಚಯಿಸಿದ ಕಾಲದಲ್ಲಿ ದಶರಥನು ಪುತ್ರಕಾಮೇಷ್ಟಿ ಯಜ್ಞದಲ್ಲಿ ಪಾಲ್ಗೊಂಡಿದ್ದನು. ಯಜ್ಞದಲ್ಲಿ ದೇವತೆಗಳು ಆಹುತಿ ಸ್ವೀಕರಿಸಿ ಪೂರ್ಣಾಹುತಿಯೂ ನಡೆಯಿತು. ಆಗ ಆಹವನೀಯ ಯಜ್ಞ ಕುಂಡದ ಮಧ್ಯಭಾಗದಿಂದ ಅಪಾರ ತೇಜಸ್ಸಿನ-ಮಹಾಬಲಿಷ್ಠನಾದ-ಮಹಾಶಕ್ತಿಯಾಲಿಯೊಬ್ಬನು ಆವಿರ್ಭವಿಸಿದನು. ಇಲ್ಲಿ ಮಹದ್ಭೂತಂ ಎಂದಿದ್ದಾರೆ. ವಿಷ್ಣುವನ್ನೂ ಪುರಾಣಗಳು ಮಹದ್ಭೂತಂ ಎಂದೇ ಕರೆದಿದ್ದಾರೆ. ಭಗವಂತನ ತೇಜಸ್ಸನ್ನು ಅವನಲ್ಲದೆ ಬೇರಾರು ಧರಿಸಿಯಾರು! ಆ ತೇಜಸ್ವಿಯ ಬಣ್ಣ ಕಪ್ಪು, ಮುಖವು ಕೆಂಪು, ಧ್ವನಿಯು ನಗಾರಿಯಂತೆ ಘನಗಂಭೀರ, ಸಿಂಹದ ಕೇಸರದಂತೆ ಮುಖದಲ್ಲೂ-ಶಿರದಲ್ಲೂ ನೀಳಕೇಶರಾಶಿ, ನಾನಾ ಶುಭಲಕ್ಷಣಗಳು ಎದ್ದು ತೋರುವಂತಿದ್ದವು, ಅನೇಕ ದಿವ್ಯವಾದ ಆಭರಣಧಾರಿ,ಪರ್ವತದ ಶಿಖರದಂತೆ ಉನ್ನತ ಕಾಯ, ವ್ಯಾಘ್ರದಂತೆ ನಿಧಾನದ ನಡೆ, ಸೂರ್ಯನ ತೇಜಸ್ಸು, ಅಗ್ನಿಯ ಜ್ವಾಲೆಯೇ ಮೇಲೆದ್ದು ಬಂದಂತೆ ಹೊಳೆಯುವ ಆ ಪುರುಷನು ಚಿನ್ನದ ಪಾತ್ರೆಯಲ್ಲಿ ಬೆಳ್ಳಿಯ ಮುಚ್ಚಳ ಹೊಂದಿದ್ದ ದಿವ್ಯಪಾಯಸದಿಂದ ಕೂಡಿದ್ದ ಪಾತ್ರೆಯನ್ನು ತಂದು ಕೊಟ್ಟನು._ _ಭಗವಂತನ ಅವತಾರವೆಂದರೆ ಅದು ಪ್ರಕೃತಿಯಲ್ಲಿ ಪೂರ್ಣತೆ ಹೊ...

ಅನುವಾದಿತ ಕಥೆ ೩೫

अनूदितकथावलिः-३५            जीवनं सञ्जीवनम्  जीवने असन्तुष्टः एकः युवा आत्महत्यां कर्तुं चिन्तितवान् । मरणार्थं कः सुलभः उपायः इति ज्ञातुं किञ्चित् कालं अभवत् । सर्वेषु तादृशेषु  उपायेषु धूमशकटयानमार्गपतनं अत्यंतं सुलभं इति मत्वा लोहयानस्थानकम् गतवान् । तत्र बहुजनाः आसन् । तान् दृष्ट्वा चकितः सः एवं पृष्टवान् । भोः सर्वैः कुत्र प्रस्थानम् क्रियते ? इति। तैरुक्तम् - वयं तिरुवण्णामलै नगरं गमिष्यामः , तत्र रमणमहर्षेः दर्शनं भवति , तेन सर्वपापानि परिहृतानि  भवन्ति इति। एवं रीत्या सहस्राधिकाः तेषां दर्शनार्थं गच्छन्ति चेत् सः महान् पुरुषः  स्यादित्यालोच्य यूना चिन्तितम् - ज्ञानेन  वा अज्ञानेन मयापि पूर्वजन्मनि नानापापानि घटितानि स्युः , एतज्जन्मनि तेषां समेषां सकाशात् कष्टम् अनुभवन् अस्मि, आगामिजन्मनि सुखम् अनुभवितुं सर्वपापानां अपनोदनं कार्यम् , तथा च पापनाशार्थम्  अहमपि गमिष्यामि इति।  ततः तिरुवण्णामलै नगरं  गत्वा रमणमहर्षिं दृष्टवान् सः । अल्पश्मश्रुः , कृशकायः सः महर्षिः  तावता पलाशपत्रैः भोजनार्थं पत्रावलिं कुर्व...

ವಿಕ್ರಮೋರ್ವಶೀಯ ೧

📔👳‍♀️💛👩‍🦱📒 *ವಿಕ್ರಮೋರ್ವಶೀಯ*  ಪದ್ಯ-೧ *वेदान्तेषु यमाहुरेकपुरुषं व्याप्य स्थितं रोदसी यस्मिन्नीश्वर इत्यनन्यविषयः शब्दो यथार्थाक्षरः । अन्तर्यश्च मुमुक्षुभिर्नियमितप्राणादिभिर्मृग्यते स स्थाणुः स्थिरभक्तियोगसुलभो निःश्रेयसायास्तु वः।।* _ಸಂಸ್ಕೃತ ಕವಿಗಳಲ್ಲಿ ಕೀರ್ತಿಶಿಖರವನ್ನು ತಲುಪಿದ ಕವಿ ಎನಿಸಿದವನು ಕವಿಕುಲಗುರು ಕಾಳಿದಾಸ.ಅವನ ನಾನಾ ಕೃತಿಗಳಲ್ಲಿ ವಿಕ್ರಮೋರ್ವಶೀಯ ನಾಟಕವೂ ಒಂದು. ವೇದ ಹಾಗೂ ಪುರಾಣಗಳಲ್ಲಿ ಪ್ರಸಿದ್ಧವಾದ ಊರ್ವಶಿ ಹಾಗೂ ಪುರೂರವನ ಪ್ರಣಯ ಪ್ರಸಂಗವನ್ನು ಆಧರಿಸಿ ಬರೆದ ಸುಂದರ ನಾಟಕ. ನಾಟಕದ ಮಂಗಲಶ್ಲೊಕ ಹಾಗೂ ನಾಂದೀಪದ್ಯ ಇದು._ _ಇಲ್ಲಿ ಲಿಂಗರೂಪದಲ್ಲಿ ಸ್ಥಿರವಾಗಿ ನೆಲೆಸಿ ಸ್ಥಾಣು ಎಂದು ಪ್ರಸಿದ್ಧನಾದ ಶಿವನ ಸ್ತುತಿ ಇದೆ. ಸ್ವರ್ಗ-ಭೂಮಿಗಳಿಗೆ ಅಥವಾ ಭೂಮ್ಯಾಕಾಶಗಳಿಗೆ ವ್ಯಾಪಿಸಿ ನೆಲೆನಿಂತಿರುವ ಯಾರನ್ನು ವೇದಾಂತಗಳು ಮಹಾಪುರುಷ ಅಥವಾ ಅದ್ವಿತೀಯಪುರುಷನೆಂದು ಕರೆದವೋ,  ಈಶ್ವರ ಎಂಬ ಪದವು ಯಾವ ಒಬ್ಬನಲ್ಲಿ ಮಾತ್ರ ಅನ್ವಯಿಸುವುದೋ, ಅಕ್ಷರ ಎಂಬ ಪದಕ್ಕೆ ಅನ್ವರ್ಥದಂತಿರುವ, ಪ್ರಾಣಾಯಾಮದ ಮೂಲಕ ಇಂದ್ರಿಯಾದಿಗಳನ್ನು ನಿಯಂತ್ರಿಸಿ ಆಂತರ್ಯದಲ್ಲಿ ಮೋಕ್ಷಾರ್ಥಿಗಳು ಯಾರನ್ನು ಕಾಣಬಯಸುವರೋ, ದೃಢಭಕುತಿಗೆ-ಯೋಗಿಗಳಿಗೆ ಒಲಿವ ಅವನು ನಿಮ್ಮೆಲ್ಲರಿಗೂ ಮೋಕ್ಷವನ್ನು ಅಥವಾ ಮಂಗಳವನ್ನು ಕರುಣಿಸಲಿ._ _ಕಾಳಿದಾಸನ ಮನದ ಅಭಿಲಾಷೆಯೇ ಸರ್ವಜನಸುಖ. ಅದು ಕಾವ್ಯ ಓದ...

ಪದಶಕ್ತಿ ೪೫

ಪದಶಕ್ತಿ ೪೫🌄📔🖋️📕 *ಪವಮಾನ* _ಪೂಙ್ ಎಂಬ ಧಾತುವಿನಿಂದ ಹುಟ್ಟಿದ ಈ ಪದದ ಪ್ರಸಿದ್ಧ ಅರ್ಥ ವಾಯು. ಎಲ್ಲವನ್ನೂ ಶುದ್ಧೀಕರಿಸುವ ಗುಣ ಉಸಿರಿನಿಂದ ಹಸಿರಿನ ತನಕ ವಾಯುವಿಗಿರುವುದು ಪ್ರಕೃತಿ ಸಹಜ. ಹಾಗಾಗಿ ವಾಯುವೇ ಮುಖ್ಯ ಅರ್ಥ._ _ಮತ್ತೊಂದು ಅರ್ಥ ಗಾರ್ಹಪತ್ಯ ನಾಮಕ ಅಗ್ನಿ. ಗೃಹಸ್ಥನಿಗೆ  ಅಗ್ನಿಹೋತ್ರ ಮೊದಲಾದವನ್ನು ಆಚರಿಸಲು ಹಾಗೂ ಆರಾಧನೆ ಮಾಡಲು ಇರುವ  ಅಗ್ನಿಗಳು ಭಿನ್ನ ಭಿನ್ನ. ದಕ್ಷಿಣಾಗ್ನಿ-ಗಾರ್ಹಪತ್ಯಾಗ್ನಿ-ಆಹವನೀಯಾಗ್ನಿ ಎಂದು. ಇವುಗಳಲ್ಲಿ ವಿವಾಹದ ನಂತರ ಸಂಸ್ಕಾರಾದಿಗಳನ್ನು ಆಚರಿಸಲು ಇರುವ ಅಗ್ನಿ ಗಾರ್ಹಪತ್ಯಾಗ್ನಿ. ನಮ್ಮನ್ನು ಸದಾ ರಕ್ಷಿಸಿ ಪೊರೆಯುವುದು ಎಂಬ ಅರ್ಥದಲ್ಲಿ ಈ ಅಗ್ನಿಗೆ ಪವಮಾನ ಎಂದು ಹೆಸರಿದೆ. ಅಗ್ನಿಯ ಕಾರ್ಯವೂ ಶುದ್ಧೀಕರಣವೇ ಆಗಿದೆ._ _ಮೂರನೆಯ ಅರ್ಥ ಸೋಮ. ಋಗ್ವೇದದ ೬೧೦ ಮಂತ್ರಗಳು  ಪವಮಾನ ಮಂತ್ರಗಳು ಎಂದು ಪ್ರಸಿದ್ಧ. ಇಲ್ಲಿ ಪ್ರಧಾನ ದೇವತೆ ಪವಮಾನ ಅಥವಾ ಸೋಮ. ಸೋಮ ಶಬ್ದಕ್ಕೆ ಹತ್ತಾರು ಅರ್ಥಗಳಿದ್ದರೂ ನಮಗೆ ಪ್ರಕೃತ ವಿವಕ್ಷಿತವಾಗುವುದು ಓಷಧೀಶನಾದ ಚಂದ್ರ. ಸೋಮಲತೆಗೆ ಅಭಿಮಾನಿ ಅವನೇ ಆಗಿದ್ದಾನೆ.ಔಷಧದ ಕೆಲಸ ವಾತ-ಪಿತ್ತ-ಕಫಗಳಿಂದ ಉಂಟಾದ ದೋಷಗಳನ್ನು ನಿವಾರಿಸಿ ಅಂದರೆ ದೇಹದ ಕಲ್ಮಶಗಳನ್ನು ದೂರಮಾಡಿ ದೇಹವನ್ನು ಶುದ್ಧೀಕರಿಸುವುದು. ಹಾಗಾಗಿ ಈ ಅರ್ಥದಲ್ಲಿ ಸೋಮನೂ ಪವಮಾನ._ _ಈ ಪದ ಸಂಸ್ಕೃತ-ಕನ್ನಡ ಎರಡೂ ಭಾಷೆಯ ಮಂತ್ರ-ಪುರಾಣ-ಕೀರ್ತನೆ ಹೀಗೆ ಸಾವಿರಾರು ಕಡೆ ಪ್ರಸಿದ್ಧವಾಗಿದೆ‌....