ಪೋಸ್ಟ್‌ಗಳು

ಸೆಪ್ಟೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪದಶಕ್ತಿ ೩೧

🏹*ಪದಶಕ್ತಿ* ---೩೧🌄 *ವಾಸವಃ* _ಇಂದ್ರನ ಹೆಸರು. ವಸುಗಳು ಅಂದರೆ ದೇವತೆಗಳು.  ದೇವತೆಗಳ ಒಡೆಯ ಅಥವಾ ದೇವಪಕ್ಷದವನು ಇಂದ್ರ. ವಸು ಶಬ್ದಕ್ಕೆ ಮತ್ತೊಂದು ಅರ್ಥ ಸಂಪತ್ತು. ಹೆಚ್ಚಿನ ಸಂಪತ್ತು ಹೊಂದಿರುವವನು ಇಂದ್ರ, ಹಾಗಾಗಿ ವಾಸವ. ವಸುಗಳ ಪುತ್ರ ಎಂಬರ್ಥದಲ್ಲೂ ವಾಸವ. ದೈತ್ಯರ ವಾಸವನ್ನು ಅಥವಾ ಅವರ ಆವಾಸವನ್ನು ನಾಶಮಾಡುವನು ಎಂಬರ್ಥದಲ್ಲೂ ಇಂದ್ರನು ವಾಸವ. ಹೀಗೆ ವಾಸವ ಶಬ್ದಕ್ಕೆ ತುಂಬಾ ಅರ್ಥಗಳಿವೆ. ಬೆಂಗಳೂರು ಕಡೆ ವಾಸವಿ ಕನ್ನಿಕಾ ಎಂಬ ಶಬ್ದದ ಪ್ರಯೋಗ ಇದೆ. ಅಲ್ಲಿ ಇಂದ್ರನ ಮಗಳು ವಾಸವಿ ಎನ್ನಬಹುದು ಅಥವಾ ವಸುಪುತ್ರಿ ವಾಸವಿ ಎನ್ನಬಹುದು. ದೇವಪುತ್ರಿ ಎಂಬ ಅರ್ಥದಲ್ಲಿ, ಅಂತೆಯೇ ವ್ಯಾಸರ ತಾಯಿ ಮತ್ಸ್ಯಗಂಧಿಗೂ ವಾಸವಿ ಎಂಬ ಹೆಸರಿದೆ._ ಸಂಸ್ಕೃತ ಸಾಹಿತ್ಯದಲ್ಲಿ ಅನೇಕ ಕಡೆ ಈ ಹೆಸರನ್ನು ಕಾಣಬಹುದು. ಮಹಾಭಾರತದ ವನಪರ್ವದ ಈ ಶ್ಲೋಕದಲ್ಲಿ ಅರ್ಜುನನು ಇಂದ್ರನ ಆಸನವನ್ನು ಅರ್ಧ ಅಲಂಕರಿಸಿದಾಗ ಎರಡನೆಯ ಇಂದ್ರನಂತೆ ಶೋಭಿಸಿದನು ಎಂದಿದೆ. *सहस्राक्षनियोगात् स पार्थः शक्रासनं गतः । अध्यक्रामदमेयात्मा द्वितीय इव वासवः ॥* ಕನ್ನಡ ಸಾಹಿತ್ಯದಲ್ಲಿ ಕೆಲವೆಡೆ ಕಾಣಬಹುದು. *ಕಮಲಸಂಭವವಿನುತ ವಾಸವ ನಮಿತ ಮಂಗಳಚರಣ* ಕನಕದಾಸರ ಈ ಕೀರ್ತನೆಯಲ್ಲಿ ಇಂದ್ರನಿಂದ ನಮಿಸಲ್ಪಟ್ಟ ಎಂಬ ಅರ್ಥದಲ್ಲಿ ವಿಷ್ಣುವನ್ನು ಸ್ತುತಿಸಿದ್ದಾರೆ. ಇಂತಹ ವಾಸವ ನಮ್ಮನ್ನು ವಸುಗಳನ್ನಿತ್ತು ಪೊರೆಯಲೆಂದು ಪ್ರಾರ್ಥಿಸೋಣ.🙏 ಸಂಗ್ರಹ: ಶ್ರೀನಿಧಿ ಅಭ್ಯಂಕ...

ಧರ್ಮಾಚರಣೆ ೩೦

     ಧರ್ಮಾಚರಣೆ-೩೦ ಅಹಿಂಸಾ ಸತ್ಯಮಸ್ತೇಯಂ ಶೌಚಮಿಂದ್ರಿಯನಿಗ್ರಹಃ | ದಾನಂ ದಮೋ ದಯಾ ಕ್ಷಾಂತಿಃ ಸರ್ವೇಷಾಂ ಧರ್ಮಸಂಗ್ರಹಃ || ಯಾಜ್ಞವಲ್ಕ್ಯ ಸ್ಮೃತಿ|| ಸಕಲ ಜೀವಿಗಳಲ್ಲಿ ಕಾಯಾ- ವಾಚಾ- ಮನಸಾ ಅಹಿಂಸೆ, ಮನಸಾ ಹಾಗೂ ವಾಚಾ ಸತ್ಯತೆ, ಪರದ್ರವ್ಯದ ಬಗ್ಗೆ ಆಸೆ ಪಡದಿರುವುದು, ದೈಹಿಕ ಹಾಗೂ ಮಾನಸಿಕ ಶೌಚ, ಇಂದ್ರಿಯನಿಗ್ರಹ, ಸಾಧ್ಯವಾದಷ್ಟು ದಾನ, ಸಂಯಮ, ಜೀವಿಗಳಲ್ಲಿ ದಯೆ, ಕ್ಷಮಾಗುಣ ಇವಿಷ್ಟು ಮುಖ್ಯವಾದ ಎಲ್ಲರೂ ಅನುಸರಿಸಬೇಕಾದ ಧರ್ಮದ ಲಕ್ಷಣಗಳು. ಸ್ವಚ್ಛತೆ ಅಂತರಂಗ ಹಾಗೂ ಬಹಿರಂಗಗಳಲ್ಲಿ ಇರಬೇಕು, ಅದೇ ಶೌಚ. ಯಾವ ಸಂದರ್ಭದಲ್ಲೂ ಸಂಯಮ ಕಾಪಾಡಿಕೊಳ್ಳುವುದು ದಮ.  ಪರರ ತಪ್ಪುಗಳನ್ನು ಕ್ಷಮಿಸುವ ಉದಾರತೆಯೂ ಒಂದು ಗುಣ.ಈ ಲಕ್ಷಣಗಳನ್ನು ಅಳವಡಿಸಿಕೊಳ್ಳದೆ ಎಷ್ಟು ಪೂಜೆ, ಉಪವಾಸ, ಉಪನ್ಯಾಸ, ಲೇಖನ ಏನು ಮಾಡಿದರೂ ವ್ಯಕ್ತಿ ಧಾರ್ಮಿಕನಾಗಲಾರ. ಧರ್ಮದ ಪಂಚಾಂಗ ಅಥವಾ ಅಡಿಪಾಯವೇ ಇದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಚಾರುದತ್ತ ೧೯

👳‍♀ಚಾರುದತ್ತ ಬೆಳಕು- ೧೯👳‍♀ *मयि द्रव्यक्षयक्षीणे स्त्रीद्रव्येणानुकम्पित: । अर्थत: पुरुषो नारी या नारी सार्थत: पुमान् ।* _ಚಾರುದತ್ತನ ಮಾತು. ಇವತ್ತಿಗೆ ನಾನು ಬದುಕಿದ್ದೂ ಸತ್ತಂತಾದೆ. ವಸಂತಸೇನೆಯು ನನ್ನ ಬಳಿ ಅಡವಿಟ್ಟ ಆಭರಣವು  ಕಳ್ಳನ ಪಾಲಾಯಿತು.  ಇದನ್ನರಿತ ನನ್ನ ಬ್ರಾಹ್ಮಣ ಪತ್ನಿಯು ತನ್ನ ಪರಂಪರೆಯಲ್ಲಿ ಬಂದ ತುಂಬಾ ಮೌಲ್ಯದ ಮುತ್ತಿನಹಾರವನ್ನು ಈ ವಿದೂಷಕನ ಮುಖಾಂತರ ನನಗೆ ನೀಡುತ್ತಿದ್ದಾಳೆ. ನನ್ನ ಸಂಪತ್ತು ಸಂಪೂರ್ಣ ನಷ್ಟವಾದ ಕಾರಣ ಸ್ತ್ರೀ ಸಂಪತ್ತಿನಿಂದ ಅನುಕಂಪಕ್ಕೆ ಒಳಗಾಗಿರುವೆ. ಅಯ್ಯೋ ಪಾಪ ಪತಿ ಪರಾಧೀನನಾಗುವುದು ಬೇಡ ಅಥವಾ ಋಣದಿಮದ ಕೂಡಿರುವುದು ಬೇಡ ಎಂದು ಸ್ತ್ರೀಯು ನನ್ನ ಬಗೆಗೆ ಅನುಕಂಪ ತಾಳುತ್ತಿದ್ದಾಳೆ‌. ಲೋಕದ ಮಟ್ಟಿಗೆ ಇದು ಪ್ರಶಂಸಾರ್ಹ ಅಥವಾ ಅವಶ್ಯ ಮಾಡಬೇಕಾದ ಕರ್ತವ್ಯವಾಗಿದ್ದರೂ ನನ್ನ ಮಟ್ಟಿಗೆ ಇದು ನನ್ನನ್ನೇ ಕಳೆದುಕೊಂಡಂತೆ ಸರಿ. ಏಕೆಂದರೆ ಪೌರುಷವನ್ನು ಆಶ್ರಯಿಸಿ ಧನ ಸಂಪಾದಿಸದ ನಾನು ಸ್ತ್ರೀಯಂತೆ ಆಗಿದ್ದೇನೆ ಅಥವಾ ಸ್ತ್ರೀಯೇ ಆಗಿದ್ದೇನೆ. ನನ್ನ ಪತ್ನಿಯಾದರೋ ಸಂಪತ್ತನ್ನು ಕೊಡುವುದರ ಮೂಲಕ ಅಥವಾ ಸಂಪಾದಿಸುವ ಮೂಲಕ ಪುರುಷಳಾಗಿದ್ದಾಳೆ. ಧನಕ್ಕಾಗಿ ಮಹಿಳೆಯರನ್ನು ಆಶ್ರಯಿಸಿದ ನನ್ನ ಪುರುಷತ್ವಕ್ಕೆ ಧಿಕ್ಕಾರವಿರಲಿ ಎಂಬ ಭಾವ. ಇಲ್ಲಿ ಲೋಕಕ್ಕೂ ಒಂದು ಪಾಠವಿದೆ. ಸಂಪತ್ತಿಗಾಗಿ ತಾನು ದುಡಿಯದೆ ಪತ್ನಿಯ ಸಂಪತ್ತಲ್ಲಿ ಕಾಲ ಕಳೆಯುವ ಪತಿ ಪುರುಷನಾಗಿದ್ದೂ ಸ್ತ್ರೀಯಂತೆಯ...

ರಾಮಾಯಣ ೧೪೪

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೪ 🏝📖   *ಉಪಸ್ಪೃಶ್ಯೋದಕಂ ಸಮ್ಯಙ್ಮುನಿಃ ಸ್ಥಿತ್ವಾ ಕೃತಾಂಜಲಿಃ | ಪ್ರಾಚೀನಾಗ್ರೇಷು ದರ್ಭೇಷು ಧರ್ಮೇಣಾನ್ವೀಕ್ಷತೇ ಗತಿಮ್||* _ಬ್ರಹ್ಮನು ತೆರಳಿದ ನಂತರ ಮತ್ತೆ ಮತ್ತೆ ರಾಮನನ್ನೇ ಚಿಂತಿಸಿದರು ವಾಲ್ಮೀಕಿ ಮುನಿಗಳು. ಅನಂತರ ಶುದ್ಧಾಚಮನ ಮಾಡಿ ಪೂರ್ವಾಗ್ರದರ್ಭೆಗಳ ಮೇಲೆ ಕುಳಿತು ಪದ್ಮಾಸನದಲ್ಲಿ ಬದ್ಧಾಂಜಲಿಗಳಾಗಿ ಕುಳಿತು ಯೋಗವನ್ನು ಆಶ್ರಯಿಸಿ ರಾಮನನ್ನು ಅವನ ಕಥೆಯನ್ನು ಚಿಂತಿಸಿದರು. ಧರ್ಮಮಾರ್ಗದಿಂದ ರಾಮನ ಕಥೆ ಹೇಗೆ ನಡೆದಿದೆ ಎನ್ನುವುದನ್ನು ತಿಳಿಯಲು ಪ್ರಯತ್ನಿಸಿದರು. ಲೋಕದಲ್ಲಿ ಎರಡು ಬಗೆಯ ಮಾರ್ಗಗಳಿವೆ - ವ್ಯಕ್ತಿಗಳ ಪೂರ್ವಾಪರಗಳನ್ನು ತಿಳಿಯಲು. ಭಗವಂತನ ಅನುಗ್ರಹ ಪಡೆದು ಯೋಗಮಾರ್ಗವನ್ನು ಆಶ್ರಯಿಸಿ ಅಂದರೆ ಸಮಾಧಿಸ್ಥನಾಗಿ ಒಬ್ಬ ವ್ಯಕ್ತಿಯ ಬಗ್ಗೆ ಚಿಂತಿಸುತ್ತಾ ಹೋದರೆ ಆ ವ್ಯಕ್ತಿಯ ಎಲ್ಲಾ ಚರ್ಯೆಯನ್ನೂ ಅರಿಯಬಹುದು. ಇನ್ನೊಂದು ಅಧರ್ಮ ಮಾರ್ಗ- ಭೂತ, ಯಕ್ಷ,ಪಿಶಾಚಿಗಳನ್ನು ಆರಾಧಿಸಿ ಅವುಗಳ ಕರ್ಣಭಾಷಿತದಿಂದ ಅರಿಯುವುದು. ಇಲ್ಲಿ ಮುನಿಗಳು ಧರ್ಮಮಾರ್ಗದಿಂದ ರಾಮನನ್ನು ಶರಣುಹೊಕ್ಕರು. ಅವನ ಕಥೆ ಅವರ ಮನದ ರಂಗಮಂದಿರದಲ್ಲಿ ನಿಧಾನಕ್ಕೆ ಮೂಡಿಬಂದಿತು._ *ಹಸಿತಂ ಭಾಷಿತಂ ಚೈವ ಗತಿರ್ಯಾ ಯಚ್ಚ ಚೇಷ್ಟಿತಮ್ | ತತ್ಸರ್ವಂ ಧರ್ಮವೀರ್ಯೇಣ ಯಥಾವತ್ಸಂಪ್ರಪಶ್ಯತಿ ||* _ರಾಮಾದಿಗಳು ನಕ್ಕಿದ್ದು, ನುಡಿದದ್ದು, ವನಸಂಚಾರ ಮಾಡಿದ್ದು, ಜನರೊಡನೆ ವ್ಯವಹಾರ ಮಾಡಿದ್ದು ಹೀಗೆ ಪ್ರ...

ಧರ್ಮಾಚರಣೆ ೨೯

ಧರ್ಮಾಚರಣೆ---೨೯ ಶ್ರುತಿಸ್ಮೃತಿವಿರೋಧೇತು ಶ್ರುತಿರೇವ ಗರೀಯಸೀ | ಅವಿರೋಧೇ ಸದಾ ಕಾರ್ಯಂ ಸ್ಮಾರ್ತಂ ವೈದಿಕ ವತ್ಸದಾ || ಜಾಬಾಲಸ್ಮೃತಿ || ವೇದ ಮತ್ತು ಸ್ಮೃತಿ ಗಳ ನಡುವೆ ಕೆಲವೊಂದು ವಿಚಾರಗಳಲ್ಲಿ ಸಾಮ್ಯತೆ ಕಾಣದಿದ್ದಾಗ ಅಥವಾ ವಿರೋಧ ಬಂದಾಗ ವೇದವಾಕ್ಯಗಳನ್ನೇ ಪ್ರಮಾಣವೆಂದು ಸ್ವೀಕರಿಸಬೇಕು. ಏಕೆಂದರೆ ಶ್ರುತಿ ಅಪೌರುಷೇಯ. ಸ್ಮೃತಿಗಳು ಪೌರುಷೇಯವಾದ್ದರಿಂದ ಕೆಲವು ದೋಷಗಳು ಕಂಡುಬರಬಹುದು. ಒಂದು ವೇಳೆ ವಿರೋಧ ಕಂಡುಬರದಿದ್ದಾಗ ಸ್ಮಾರ್ತ ಕರ್ಮಗಳನ್ನು ಅಂದರೆ ಸ್ಮೃತಿ ಆಧಾರಿತ ಕರ್ಮಗಳನ್ನು ವೈದಿಕ ಕರ್ಮಗಳಂತೆ ಆಚರಿಸಬಹುದು. ಪರಮ ಪ್ರಮಾಣ ವೇದವೇ ಹೊರತು ನಂತರ ಹುಟ್ಟಿಕೊಂಡ ಗ್ರಂಥಗಳಲ್ಲ. ಅದರಲ್ಲೂ ಈ ಯುಗದ ವಿದ್ವಾಂಸರ ಗ್ರಂಥಗಳು ವೇದ ವಿರೋಧ ಪ್ರತಿಪಾದಿಸುತ್ತಿದ್ದರೆ ಯಾವ ವಿಷಯದಲ್ಲಾದರೂ ಅವು ತ್ಯಾಜ್ಯವೇ ಸರಿ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೨೮

  ಧರ್ಮಾಚರಣೆ - ೨೮ ಧರ್ಮಂ ಜಿಜ್ಞಾಸಮಾನಾನಾಂ ಪ್ರಮಾಣಂ ಪರಮಂ ಶ್ರುತಿಃ | ದ್ವಿತೀಯಂ ಧರ್ಮಶಾಸ್ತ್ರಾಣಿ ತೃತೀಯಂ ಲೋಕಸಂಗ್ರಹಃ || ಮಹಾಭಾರತ- ಅಶ್ವಮೇಧಿಕ ಪರ್ವ || ಧರ್ಮದ ವಿಷಯದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ಸಂಶಯ ಬಂದಾಗ ಮೊದಲಾಗಿ ವೇದವು ಪರಮಪ್ರಮಾಣ. ವೇದಾನುಸಾರಿ ಕಲ್ಪ ಗೃಹ್ಯಸೂತ್ರಗಳೂ ಪ್ರಮಾಣ. ಒಂದು ವೇಳೆ ವೇದೋಕ್ತವಲ್ಲದ ಪಕ್ಷದಲ್ಲಿ ಧರ್ಮಶಾಸ್ತ್ರವು ಪ್ರಮಾಣ. ವಸಿಷ್ಠ, ಪರಾಶರ, ಮನು, ಹಾರೀತ, ಶಂಖ ಮೊದಲಾದ ಸ್ಮೃತಿ ಆಧರಿಸಿದ ಧರ್ಮಶಾಸ್ತ್ರವು ಪ್ರಮಾಣ. ಅದರಲ್ಲೂ ಇಲ್ಲದ ಪಕ್ಷದಲ್ಲಿ ಆಗ ಹಿರಿಯರ ಅದರಲ್ಲೂ ಸಜ್ಜನರ ಆಚರಣೆಗಳು ನಮಗೆ ಮಾರ್ಗದರ್ಶಕ. ಯಾವುದೂ ಇಲ್ಲವೆಂದು ಧರ್ಮದ ಆಚರಣೆಗಳನ್ನು ಬಿಡುವಂತಿಲ್ಲ. ಹಾಗೆಂದು ಶ್ರುತಿ ಸ್ಮೃತಿ ವಿರೋಧ ಇದ್ದಾಗಲೂ ನಮ್ಮ ಮನೆಯಲ್ಲಿ ಹೀಗೆ, ನಮ್ಮ ಆಚಾರ್ಯರು ಅಥವಾ ಗುರುಗಳು ಹೀಗೆ ಹೇಳಿದ್ದಾರೆ, ನಮ್ಮ ಪರಂಪರೆ ಅಥವಾ ಪ್ರದೇಶದಲ್ಲಿ ಹೀಗೆ ಎಂದು ಮೌಢ್ಯವನ್ನು ಅನುಸರಿಸಬಾರದು. ಹಿಂದೆ ಧರ್ಮಶಾಸ್ತ್ರದ, ವೇದದ ವ್ಯಾಖ್ಯಾನಗಳು ಪುಸ್ತಕಗಳು ಅನೇಕ ಕಡೆ ಅಲಭ್ಯವಿದ್ದವು. ಆಗ ಆಚರಣೆಗೆ ಒಂದು ನಿಯಮ ತಂದಿರಬಹುದು ಅಷ್ಟೇ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ರಾಮಾಯಣ ೧೪೩

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೩ 🏝📖  *ನ ತೇ ವಾಗನೃತಾ ಕಾವ್ಯೇ ಕಾಚಿದತ್ರ ಭವಿಷ್ಯತಿ | ಕುರು ರಾಮಕಥಾಂ ಪುಣ್ಯಾಂ ಶ್ಲೋಕಬದ್ಧಾಂ ಮನೋರಮಾಮ್ ||* _ಬ್ರಹ್ಮನ ಮಾತು. ಈ ನಿನ್ನ ಕಾವ್ಯದಲ್ಲಿ ಯಾವ ಅಂಶವೂ ಸುಳ್ಳಾಗದು. ಅಂತಹ ರಾಮಕಥೆಯನ್ನು ಶ್ಲೋಕಬದ್ಧವಾಗಿ ಮನೋಹಾರಿಯಾಗಿ ರಚಿಸು. ಈ ಮಾತನ್ನು ನೋಡಿದಾಗ ನಮಗರಿವಾಗುವ ಅಂಶ ವಾಲ್ಮೀಕಿ ಯಾವುದನ್ನೂ ಮುಚ್ಚಿಡುವ ಅಥವಾ ಸುಳ್ಳುಹೇಳುವ ಪ್ರಯತ್ನ ಮಾಡಿಲ್ಲ ಎಂಬುದು. ಅರ್ವಾಚೀನ ಕವಿಗಳನೇಕರು ವಾಲ್ಮೀಕಿಯ ಮನದ ಭಾವ ಹೀಗಿತ್ತು, ಅವನು ಹೇಳದೇ ಹೋದ ಎಂದೆಲ್ಲಾ ತಮ್ಮ ಮೂಗಿನ ನೇರಕ್ಕೆ ವಿಮರ್ಶೆ ಮಾಡುವುದನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ವಾಲ್ಮೀಕಿಗಳಿಗೆ ರಾಮನನ್ನು ಅಥವಾ ಯಾರನ್ನಾಗಲಿ ಚಿತ್ರಿಸಿ ಯಾವ ಲಾಭ ನಷ್ಟ ಪ್ರಶಸ್ತಿಯ ಅಪೇಕ್ಷೆ ಇರಲಿಲ್ಲ. ಬ್ರಹ್ಮನ ಆಣತಿಯಂತೆ ಸತ್ಯವನ್ನು ಮಾತ್ರ ಚಿತ್ರಿಸಿದ ಮಹಾಮುನಿ ಅವರು. ಸೀತೆಗೆ ಯಾರ ಬಗೆಗೋ ಒಲವಿತ್ತು, ಲಕ್ಷ್ಮಣನ ಮನದಲ್ಲಿ ಏನೋ ಇತ್ತು ಇತ್ಯಾದಿ ರಾಮಾಯಣದ ಪಾತ್ರಗಳನ್ನು ಕುಲಗೆಡಿಸಹೊರಟ ಖ್ಯಾತನಾಮರು ಹಾಗೂ ಅವರ ಅನುಯಾಯಿಗಳು ಈ ಅಂಶವನ್ನು ಓದಿ ಮುಂದುವರಿಯುವುದು ಅವರ ವಿಮರ್ಶೆಗೆ ಒಳಿತು._ *ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ | ತಾವದ್ರಾಮಾಯಣಕಥಾ ಲೋಕೇಷು ಪ್ರಚರಿಷ್ಯತಿ ||ಯಾವದ್ರಾಮಾಯಣಕಥಾ ತ್ವತ್ಕೃತಾ ಪ್ರಚರಿಷ್ಯತಿ | ತಾವದೂರ್ಧ್ವಮಧಶ್ಚ ತ್ವಂ ಮಲ್ಲೋಕೇಷು ನಿವತ್ಸ್ಯತಿ ||* _ಹಿಂದೆಯೇ ಬ್ರಹ್ಮ ಎಚ್ಚರಿಕೆ ರೂಪದ ...

ರಾಮಾಯಣ ೧೪೨

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೨ 🏝📖  *ಪೂಜಯಾಮಾಸ ತಂ ದೇವಂ ಪಾದ್ಯಾರ್ಘ್ಯಾಸನವಂದನೈಃ | ಪ್ರಣಮ್ಯ ವಿಧಿವಚ್ಚೈನಂ ಪೃಷ್ಟ್ವಾನಾಮಯಮವ್ಯಯಮ್ ||* _ಕಾವ್ಯ ಹುಟ್ಟಿ ಕೆಲವು ಕ್ಷಣಗಳಾಗಿದೆ ವಾಲ್ಮೀಕಿ ಮುಖಾರವಿಂದದಲ್ಲಿ, ಅರವಿಂದಾಸನನಾದ ಬೊಮ್ಮನು ತಾನೂ ಆಲಿಸಲೆಂಬಂತೆ ಅಲ್ಲಿ ಬಂದುನಿಂತ. ಮಹರ್ಷಿ ಒಮ್ಮೆ ಅವಾಕ್ಕಾಗಿ ನಿಂತು ನಂತರ ವಾಗ್ವ್ಯಾಪಾರ ಆರಂಭಿಸಿದ. ಬಂದವನು ದೇವ, ನಿತ್ಯಶುದ್ಧ. ಹಾಗಿದ್ದರೂ ಸತ್ಕಾರದ ಒಂದು ಪರಂಪರೆ ನಮ್ಮಲ್ಲಿ ಹಾಸುಹೊಕ್ಕಾಗಿದೆ. ಕಾಲು ತೊಳೆಯಲು ನೀರು, ಕೈ ತೊಳೆಯಲು ಅರ್ಘ್ಯ ಕೊಟ್ಟು ಕಾಲು ಮುಟ್ಟಿ ನಮಸ್ಕರಿಸಿದ. ಆಶ್ರಮ ಯೋಗ್ಯವಾದ ಆಸನವನ್ನಿತ್ತ. ಅತಿಥಿಸತ್ಕಾರವನ್ನು ಯಥಾವತ್ತಾಗಿ ಮಾಡಿ ಅನಂತರ ಕುಶಲ ಪ್ರಶ್ನೆಯನ್ನು ಕೇಳಿದ. ಏನು ವಿಶೇಷ ಇಲ್ಲಿ ಎಂದರೆ ಬ್ರಹ್ಮನು ಲೋಕದ ಕುಶಲವನ್ನು ಈಕ್ಷಿಸುವ ಮಹಿಮಾನ್ವಿತ. ಅವನಲ್ಲಿ ಏಕೆ ಈ ಪ್ರಶ್ನೆ ಎಂದರೆ ಅದನ್ನೇ ಸಾಮಾಜಿಕ ಮರ್ಯಾದೆ ಅನ್ನುವುದು. ಮನೆಗೆ ಯಾರೇ ಅತಿಥಿಗಳು ಬರಲಿ ಅವರ ಸತ್ಕಾರ, ನಮ್ಮ ಮಾತುಕತೆ ಹೇಗಿರಬೇಕೆಂಬುದನ್ನು ತಮ್ಮ ಕಾರ್ಯಗಳಿಂದ ಮುನಿಗಳು ತೋರಿಕೊಡುತ್ತಿದ್ದಾರೆ. ಆಮಯ ಎಂದರೆ ರೋಗ- ತೊಂದರೆ ಮೊದಲಾದವು. ಅನಾಮಯ ಅಂದರೆ ಸುಖವಾಗಿ ಯಾವ ಪೀಡೆಯೂ ಬಾಧಿಸದಿರುವುದು. ಅತಿಥಿಗೆ ಅಥವಾ ಅಭ್ಯಾಗತರಿಗೆ ಪರಿಚಿತರಿರಲಿ ಅಪರಿಚಿತರಿರಲಿ ಯಥಾಯೋಗ್ಯ ಉಪಚರಿಸಿ ಕುಶಲ ಪ್ರಶ್ನೆ ಕೇಳುವುದು ನಮ್ಮ ಪರಂಪರೆ. ಸೋಂಕಿನ ಈ ಕಾಲದಲ್ಲಿ ಮತ್ತೆ ಪಾದ್ಯ-ಅರ್ಘ್...

ಧರ್ಮಾಚರಣೆ ೨೭

      ಧರ್ಮಾಚರಣೆ---- ೨೭ ಇಷ್ಟಿಶ್ರಾದ್ಧೇ ಕ್ರತೂದಕ್ಷೌ ಸತ್ಯೌ ನಾಂದೀಮುಖೇ ವಸೂ | ನೈಮಿತ್ತಿಕೇ ಕಾಮಕಾಲೌ ಕಾಮ್ಯೇ ಚ ಧುರಿಲೋಚನೌ | ಪುರೂರವಾರ್ದ್ರವೌ ಚೈವ ಪಾರ್ವಣೇ ಸಮುದಾಹೃತೌ || ಹೇಮಾದ್ರಿ - ಶಂಖ, ಬೃಹಸ್ಪತಿ ವಚನ || ಇಷ್ಟಿಶ್ರಾದ್ಧ ಅಂದರೆ ಸಂಸ್ಕಾರ ಪೂರ್ವಕ ಅಗ್ನಿಯನ್ನು ಸ್ಥಾಪಿಸಿ ಮಾಡುವ ಕರ್ಮಗಳ ಆದಿಯಲ್ಲಿ ಅಂದರೆ ದೊಡ್ಡ ದೊಡ್ಡ ಯಾಗಗಳ ಆದಿಯಲ್ಲಿ ಮಾಡುವ ನಾಂದೀಶ್ರಾದ್ಧದಲ್ಲಿ ಕ್ರತುದಕ್ಷ ಹೆಸರಿನ ವಿಶ್ವೇದೇವತೆಗಳನ್ನು, ಸಾಮಾನ್ಯ ಕರ್ಮಗಳ ನಾಂದಿಯಲ್ಲಿ ಸತ್ಯವಸು ಹೆಸರಿನ ವಿಶ್ವೇದೇವತೆಗಳನ್ನು, ನವಶ್ರಾದ್ಧ ಹಾಗೂ ದ್ವಾದಶಮಾಸಿಕಗಳಲ್ಲಿ ಕಾಮಕಾಲರೆಂಬ  ವಿಶ್ವೇದೇವತೆಗಳನ್ನು,  ಮಹಾಲಯ ಹಾಗೂ ಕಾಮ್ಯವೆಂದು ತ್ರಿಪಿಂಡಿ ಮೊದಲಾದ ಶ್ರಾದ್ಧವನ್ನು ಮಾಡುವಾಗ ಧುರಿ- ಲೋಚನರೆಂಬ ವಿಶ್ವೇದೇವತೆಗಳನ್ನು, ಪ್ರತಿವಾರ್ಷಿಕ ಶ್ರಾದ್ಧ ಹಾಗೂ ಪಾರ್ವಣ ಶ್ರಾದ್ಧಗಳಲ್ಲಿ ಅಂದರೆ ಪರ್ವಗಳಲ್ಲಿ ಮಾಡುವುದಾದರೆ ಆಗ ಪುರೂರವ- ಆರ್ದ್ರವ ಹೆಸರಿನ ವಿಶ್ವೇದೇವತೆಗಳನ್ನು ಆರಾಧಿಸಬೇಕು. ಶ್ರಾದ್ಧ ಎಂದ ಕ್ಷಣ ದೇವತೆಗಳೆಲ್ಲ ಒಂದೇ ಅಲ್ಲ, ಭೇದಗಳಿಗನುಗುಣವಾಗಿ ದೇವತೆಗಳು ಭಿನ್ನರಿದ್ದಾರೆ. ಕ್ರಿಯಾ ವೈವಿಧ್ಯ, ದೇವತಾ ವೈವಿಧ್ಯ, ಪಾಕ ವೈವಿಧ್ಯ ಹೀಗೆ ವಿವಿಧತೆಯಲ್ಲಿ ಏಕತೆಯೇ ನಮ್ಮ ಸಂಸ್ಕೃತಿ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಚಾರುದತ್ತ ೧೮

👳‍♀ಚಾರುದತ್ತ ಬೆಳಕು- ೧೮👳‍♀ *क: श्रद्धास्यति भूतार्थं सर्वो मां तूलयिष्यति । शङ्कनीया हि दोषेषु निष्प्रभावा दरिद्रता ।।* _ಚಾರುದತ್ತನ ಮನೆಗೆ ಕಳ್ಳ ನುಗ್ಗಿ ಸಂಪತ್ತನ್ನು ಕದ್ದಿದ್ದಾನೆ. ವಿದೂಷಕನು ಅವನಲ್ಲಿದ್ದ ಸುವರ್ಣದ ಥೈಲಿಯನ್ನು ಚಾರುದತ್ತನೆಂದು ತಿಳಿದು ಕಳ್ಳನಿಗೆ ಕೊಟ್ಟಿದ್ದಾನೆ. ಕಳ್ಳತನವಾದ ಸುದ್ದಿ ತಿಳಿದ ತಕ್ಷಣ ಅಬ್ಬಾ ಬದುಕಿದೆ ರಾತ್ರಿಯೇ ನಿನಗೆ ಬಂಗಾರ ಕೊಟ್ಟೆ ಎಂದಾಗ ಚಾರುದತ್ತ ಗಾಬರಿಗೊಳ್ಳುತ್ತಾನೆ. ಆದರೇನು ಮಾಡುವುದು, ತನ್ನ ಬಳಿ ಕೊಟ್ಟಿಲ್ಲ ಎಂದರೆ ತನ್ನ ಮೇಲೆ ಇವರು ಸಂಶಯಪಡುತ್ತಾರೆ. ಏಕೆಂದರೆ ತನ್ನ ಈಗಿನ ದಾರಿದ್ರ್ಯದ ಸ್ಥಿತಿ ಹಾಗಿದೆ. ನನ್ನ ಹಿಂದಿನ ಪ್ರಾಮಾಣಿಕತೆ ಅಥವಾ ಉದಾರತೆಯನ್ನು ಯಾರು ತಾನೇ ನಂಬುವರು? ವಸಂತಸೇನೆಯ ಆಭರಣ ಕಳ್ಳನು ಅಪಹರಿಸಿದನೆಂದು ನುಡಿದರೆ ಎಲ್ಲರೂ ನನ್ನನ್ನೇ ಕಳ್ಳನೆಂದು ಶಂಕಿಸುತ್ತಾರೆ ಹೊರತು ಕಳ್ಳತನದ ವಿಷಯ ನಂಬಲಾರರು. ಈಗಿನ ನನ್ನ ದಟ್ಟ ದಾರಿದ್ರ್ಯವು ನನ್ನಲ್ಲಿ ಯಾವ ಬಗೆಯ ತಪ್ಪು ಇಲ್ಲದಿದ್ದರೂ ತಪ್ಪನ್ನು ಹೊರಿಸುತ್ತದೆ. ಮಾನವನ ದರಿದ್ರತೆ ಎಲ್ಲೋ ಯಾರಿಂದಲೋ ಆಗುವ ಮೋಸ- ಕಳ್ಳತನ ಮುಂತಾದ ಕುಕೃತ್ಯಗಳ ವಿಷಯದಲ್ಲಿ ಪ್ರಾಮಾಣಿಕನನ್ನೂ ಶಂಕಿಸುತ್ತದೆ. ದುಡ್ಡಿಗಾಗಿ ಹೀಗೆ ಮಾಡಿರಬಹುದು ಎಂಬ ಅತ್ಯಂತ ಸಹಜ ಎಂಬಂತಿರುವ ಮಾತು. ಕವಿ ಅದನ್ನೇ ನುಡಿಸಿದ್ದಾನೆ. ವಸ್ತುತಃ ಕಳ್ಳತನ ಅಥವಾ ಅಪಹಾರಕ್ಕೆ ಬಡತನ-ಶ್ರಿಮಮತಿಕೆಯ ಭೇದವಿಲ್ಲ. ಅತೃಪ್ತಿ ಒಂದೇ ಮುಖ್ಯ ಕಾರಣ._...

ರಾಮಾಯಣ ೧೪೧

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೧ 🏝📖 *ತಸ್ಯೈವಂ ಬ್ರುವತಶ್ಚಿಂತಾ ಬಭೂವ ಹೃದಿ ವೀಕ್ಷತಃ | ಶೋಕಾರ್ತೇನಾಸ್ಯ ಶಕುನೇಃ ಕಿಮಿದಂ ವ್ಯಾಹೃತಂ ಮಯಾ||* _ಮಾ ನಿಷಾದ ಎಂದು ಬೇಡನ ಕುಕೃತ್ಯವನ್ನು ಕಂಡು ಕ್ಷಣಕಾಲ ಕೋಪಗೊಂಡು ಶಾಪಕೊಟ್ಟರು ವಾಲ್ಮೀಕಿ ಮಹರ್ಷಿಗಳು. ರತಿಯಲ್ಲಿದ್ದಾಗ ಬಾಣಪ್ರಯೋಗ ನಿಷಿದ್ಧ ಶಾಸ್ತ್ರದ ಪ್ರಕಾರ. ಪಾಂಡುವು ಆ ಕಾರಣಕ್ಕೆ ಶಾಪಗ್ರಸ್ತನಾದ. ಬಹಳ ಕಾಲ ನೆಲೆಯಿಲ್ಲದಂತಾಗಲಿ ಎಂದು ಶಾಪವನ್ನು ಕೊಟ್ಟ ಮರುಕ್ಷಣವೇ ವಾಲ್ಮೀಕಿಗಳು ಪರಿತಪಿಸುತ್ತಾರೆ. ಅಯ್ಯೋ ಏನಿದು ತಪದ ಫಲವನ್ನು ಕ್ಷಣಿಕ ಕೋಪಕ್ಕೆ ಬಲಿ ಕೊಟ್ಟೆನಲ್ಲ ಎಂದು. ಈ ಕಾರಣವೇ ಅವರನ್ನು ಮಹರ್ಷಿಯನ್ನಾಗಿಸುವುದು. ಕೋಪ ಬರುವುದು ಮನುಜನ ಸಹಜ ಗುಣ.ಉಪ್ಪು ಹುಳಿ ಖಾರ ತಿನ್ನದವನಿಗೂ ಕೋಪ ಬಂದೇ ಬರುತ್ತದೆ. ಆದರೆ ಕೋಪ ಬಂದ ಮುಂದಿನ ಕ್ಷಣ ಅದಕ್ಕಾಗಿ ‌ಪಶ್ಚಾತ್ತಾಪ ಪಟ್ಟರೆ ಅದು ನಮ್ಮನ್ನು ನಾವು ತಿದ್ದಿಕೊಂಡಂತೆ. ನಾವು ಕೋಪಗೊಂಡು ಬಹಳ ಕಾಲ ಕೆಲವೊಮ್ಮೆ ಅಂತಹ ವ್ಯಕ್ತಿಯ ಬಗೆಗೆ ವರ್ಷಗಳ ಕಾಲ ಅದೇ ಭಾವನೆ ಇಟ್ಟುಕೊಂಡಿರುತ್ತೇವೆ. ಯಾವಾಗ ಆ ಭಾವ ಕ್ಷಣಮಾತ್ರದಲ್ಲಿ ಮರೆಯಾಗುವುದೋ ಹಾಗೂ ಸಂಪೂರ್ಣ ಶಾಸ್ತ್ರ ಸಮ್ಮತವಾದ ಕಾರಣ ಇರುವುದೋ ಅಂತಹ ಸಮಯದ ನಮ್ಮ ಕೋಪ ಪಾಪ ತರದು, ಪುಣ್ಯ ಕಳೆಯಬಹುದಷ್ಟೇ. ಕೋಪದ ಅಂತಹ ನಿಯಂತ್ರಣ ವಾಲ್ಮೀಕಿ ಮುನಿಗಳಿಂದ ನಾವು ಕಲಿಯಬೇಕಾದ ಮುಖ್ಯ ಅಂಶ._ *ಪಾದಬದ್ಧೋಕ್ಷರಸಮಸ್ತನ್ತ್ರೀಲಯಸಮನ್ವಿತಃ | ಶೋಕಾರ್ತಸ್ಯ ಪ್ರವೃತ್ತೋಯಂ ಶ್ಲೋಕೋ ಭವ...

ಧರ್ಮಾಚರಣೆ ೨೬

ಧರ್ಮಾಚರಣೆ-- ೨೬ ವಸವಃ ಪಿತರೋ ಜ್ಞೇಯಾ ರುದ್ರಾ ಜ್ಞೇಯಾಃ ಪಿತಾಮಹಾಃ | ಪ್ರಪಿತಾಮಹಾಸ್ತಥಾದಿತ್ಯಾಃ ಶ್ರುತಿರೇಷಾ ಸನಾತನೀ || ಮನುಸ್ಮೃತಿ, ದೇವಲ ವಚನ || ವಸುರುದ್ರಾದಿತಿಸುತಾಃ ಪಿತರಃ ಶ್ರಾದ್ಧ ದೇವತಾಃ | ಯಾಜ್ಞವಲ್ಕ್ಯ ಸ್ಮೃತಿ|| ಶ್ರಾದ್ಧದಲ್ಲಿ ವಸು-ರುದ್ರ-ಆದಿತ್ಯ ರೆಂದು ತಂದೆ-ಅಜ್ಜ-ಮುತ್ತಜ್ಜ ಅಥವಾ ತಾಯಿ-ಅಜ್ಜಿ- ಮುತ್ತಜ್ಜಿ ಇತ್ಯಾದಿ ಉಚ್ಚಾರಣೆ ಮಾಡಲು ಈ ಶ್ಲೋಕವು ಆಧಾರರೂಪವಾದುದು.ವಸುಗಳು ಪಿತೃಗಳೆಂದು ಗುರುತಿಸಲ್ಪಟ್ಟರೆ, ರುದ್ರರು ಪಿತಾಮಹರು, ಆದಿತ್ಯರು ಪ್ರಪಿತಾಮಹರು. ಇದನ್ನೇ ಯಾಜ್ಞವಲ್ಕ್ಯರು ಹೇಳಿದ್ದು ಅಷ್ಟವಸುಗಳು, ಏಕಾದಶ ರುದ್ರರು, ದ್ವಾದಶ ಆದಿತ್ಯರೆಂಬ ಅದಿತಿ ಸುತರು ಪಿತೃದೇವತೆಗಳೆಂದು ಪ್ರಸಿದ್ಧರಾದವರು. ಹಾಗಾಗಿ ಯಾವ ಶ್ರಾದ್ಧ ಮಾಡುವುದಿದ್ದರೂ ನಮ್ಮ ಹಿರಿಯರನ್ನು ಈ ರೂಪದಲ್ಲಿ ಕಲ್ಪಿಸಿ ಪೂಜಿಸಬೇಕು. ಪಿತೃಗಳು ಯಾವ ರೂಪದಲ್ಲಿದ್ದರೂ ಈ ದೇವತೆಗಳು ಅವರಿಗೆ ಪೂಜೆಯನ್ನು ತಲುಪಿಸುತ್ತಾರೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಅನುವಾದಿತ ಕಥೆ ೧೮

अनूदित कथावलि-१८ परोपकार: पुण्याय चन्द्र: निशाया: आगमनं प्रतीक्षते स्म। गृहस्य निर्यूहे एक: रव: आकर्णित: मया, इदानीं क: आगत: इति विचार्य यदा बहि: गतवान् तदा  एक: वृद्ध: गृहसंख्यां कष्टेन अन्विषति स्म। स: जीर्णानि वस्त्राणि धृतवान् आसीत्, तस्य हस्ते एकं स्यूतं  च । यदा तं गूढं दृष्टवान् तदा ज्ञातम् बहुदूरं यानं कृत्वा अत्रागत: ,मार्गायासेन खिद्यमानो$पि अस्ति इति । हस्ते विद्यमानं पत्रं पठित्वा तेन पृष्टो$हम् - एतत् आनन्दस्य गृहं किल, एष: योगानन्द मार्ग: ननु ? इति ।  आम् , अहमेव आनन्द: , त्वया अन्विष्यमाणं गृहं एतदेव इत्युक्तवान् । तस्य हस्तौ  कम्पमानौ, अधरौ तृष्णया पीडितौ च दृश्यन्ते स्म। तव ग्रामादागतो$स्मि, तव पित्रा एवमुक्तम् - गच्छ मम पुत्राय एतत् पत्रं ददातु, स: तुभ्यं साहाय्यं करिष्यति इति   ।  अहं चकितमना: किं मम पित्रा इति पृष्ट्वा तत् पत्रं पठितुमारेभे - नन्दनाय आनन्दाय तव पितु: आशिष: , एष: मम मित्रम् , सज्जन: सरलश्च। सप्ताहात् प्राक् तस्य पुत्र: मार्गमध्ये दुर्घटनायां पञ्चत्वम् आप्तवान् ।  दुर्घटनायां मृतस्य बन्धुभ्य: परिहार रूपेण  द...

ರಾಮಾಯಣ ೧೪೦

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೦ 🏝📖 *ಪಠನ್ದ್ವಿಜೋ ವಾಗೃಷಭತ್ವಮೀಯಾತ್ ಸ್ಯಾತ್ಕ್ಷತ್ರಿಯೋ ಭೂಮಿಪತಿತ್ವಮೀಯಾತ್ ||ವಣಿಗ್ಜನಃ ಪಣ್ಯಫಲತ್ವಮೀಯಾತ್ ಜನಶ್ಚ ಶೂದ್ರೋಪಿ ಮಹತ್ವಮೀಯಾತ್ ||* _ರಾಮಾಯಣದ ಅಧ್ಯಯನವು ಎಲ್ಲಾ ವರ್ಣಗಳಿಗೂ ಉತ್ತಮ ಫಲವನ್ನೇ ನೀಡುತ್ತದೆ. ಬಹಳಷ್ಟು ಜನರಿಗೆ ಭ್ರಮೆಯಿದೆ ಸಂಸ್ಕೃತ ಗ್ರಂಥಗಳು ಬ್ರಾಹ್ಮಣರಿಗೆ ಮೀಸಲು, ನಮಗೆ ಸಂಬಂಧಿಸಿದ್ದಲ್ಲ. ನಮಗೆ ಅರ್ಥವಾಗುವಂತಹವೂ ಅಲ್ಲ ಇತ್ಯಾದಿ. ಆದರೆ ವಾಲ್ಮೀಕಿಗಳ ಗ್ರಂಥವು ಅದು ಲೋಕೋತ್ತರ. ಎಲ್ಲರ ಒಳಿತಿಗಾಗಿ ಮಾರ್ಗದರ್ಶನಕ್ಕಾಗಿ ರಚಿತವಾದುದು. ಯಾವುದಾದರೂ ಜಾತಿಗೆ ಮತಕ್ಕೆ ಸಂಬಂಧಿಸಿ ಬರೆದದ್ದಲ್ಲ. ರಾಮಾಯಣದ ಪಠನವು ಬ್ರಾಹ್ಮಣರಿಗೆ ಉತ್ತಮ ವಾಕ್ಶಕ್ತಿಯನ್ನು, ಕ್ಷತ್ರಿಯರಿಗೆ ಅಧಿಕಾರವನ್ನೂ, ವೈಶ್ಯರಿಗೆ ವ್ಯಾಪಾರದಲ್ಲಿ ಏಳ್ಗೆಯನ್ನೂ, ಶೂದ್ರರಿಗೆ ಸಾಮಾಜಿಕವಾಗಿ ಉನ್ನತ ಸ್ಥಾನಮಾನವನ್ನೂ ಕರುಣಿಸುತ್ತದೆ. ಇಲ್ಲಿ ಒಂದು ವಿಧವಾದ ಪುಣ್ಯದ ಕಲ್ಪನೆ ಇದ್ದರೆ ಮತ್ತೊಂದು ಬಗೆಯಲ್ಲಿ ನಮ್ಮ ಜ್ಞಾನದ ಮಿತಿಯನ್ನು ಹೆಚ್ಚಿಸುವುದರ ಮೂಲಕ, ನಾನಾ ಪಾತ್ರಗಳ ಮೂಲಕ ಜೀವನಾನುಭವಗಳನ್ನು ತಿಳಿಸುತ್ತಾ ನಮ್ಮ ನಮ್ಮ ಜೀವನದಲ್ಲಿ ಅಥವಾ ನಮ್ಮ ಉದ್ಯೋಗದಲ್ಲಿ ಮೇಲುಗೈ ಸಾಧಿಸಲು ರಾಮಾಯಣವು ಅನುವು ಮಾಡಿಕೊಡುತ್ತದೆ. ಅವರವರ ಆಸಕ್ತಿಗೆ ಅನುಗುಣವಾಗಿ ರಾಮಾಯಣವು ಫಲವನ್ನು ಕೊಡುತ್ತದೆ. ಹಾಗಾಗಿ ಸನಾತನ ಧರ್ಮ ವಿರೋಧಿಗಳೂ, ಬುದ್ಧಿಜೀವಿಗಳೂ, ವಿಶ್ವವಿದ್ಯಾಲಗಳ ಪ್ರಾಧ್ಯಾಪಕರುಗಳೂ ಇಂತಹ...

ಧರ್ಮಾಚರಣೆ ೨೫

    ಧರ್ಮಾಚರಣೆ--೨೫ ವಿಭಕ್ತಾಸ್ತು ಪೃಥಕ್ಕುರ್ಯುಃ ಪ್ರತಿಸಂವತ್ಸರಾದಿಕಮ್ | ಏಕೇನೈವಾವಿಭಕ್ತೇಷು ಕೃತೇ ಸರ್ವೈಸ್ತು ತತ್ಕೃತಮ್ || ಮದನರತ್ನ ||  ಊರ್ಧ್ವಂ ಸಪಿಂಡೀಕರಣಾತ್ಸರ್ವೇ ಕುರ್ಯುಃ ಪೃಥಕ್ ಪೃಥಕ್ ||ಲಘುಹಾರೀತ ||  ಅಣ್ಣ ತಮ್ಮಂದಿರು ಬೇರೆ ಬೇರೆ ಮನೆ ಮಾಡಿ ವಾಸಿಸುತ್ತಿದ್ದ ಪಕ್ಷದಲ್ಲಿ ಪ್ರತಿವರ್ಷದ ಶ್ರಾದ್ಧವಾಗಲಿ, ಮಹಾಲಯವಾಗಲಿ ಪ್ರತ್ಯೇಕವಾಗಿ ಮಾಡಬೇಕು. ಅವಿಭಕ್ತ ಕುಟುಂಬವಾಗಿದ್ದರೆ ಅಂದರೆ ಅಣ್ಣತಮ್ಮಂದಿರು ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರೆ ಆಗ ಹಿರಿಯನು ಮಾತ್ರ ಮಾಡಿದರೆ ಸಾಕಾಗುತ್ತದೆ. ಅಣ್ಣ ಊರಲ್ಲಿ ಮಾಡುತ್ತಾನೆ ನಾನು ಪ್ರತ್ಯೇಕ ಮಾಡಬೇಕೆಂದಿಲ್ಲ ಅಥವಾ ನಾನೂ ಅವನೊಡನೆ ಸೇರಿ ಮಾಡುತ್ತೇನೆ ಖರ್ಚು ಉಳಿಯುತ್ತದೆ ಊರಿಗೂ ಹೋದಂತಾಗುತ್ತದೆ  ಇತ್ಯಾದಿಗೆ ಶಾಸ್ತ್ರದ ಸಮ್ಮತಿ ಇಲ್ಲ. ಅಡುಗೆ ಬೇರೆಯಾದರೆ ಶ್ರಾದ್ಧವೂ ಬೇರೆಯಾದಂತೆ. ಮೃತರ ಸಪಿಂಡೀಕರಣದವರೆಗಿನ ಕಾರ್ಯಗಳು ಮಾತ್ರ ಹಿರಿಯನಿಂದ ಮಾಡಲ್ಪಡುವವು. ಉಳಿದ ವಾರ್ಷಿಕ ಕರ್ಮಗಳು ನಿಯಮಿತವಾಗಿ ಪ್ರತ್ಯೇಕ ಮಾಡಬೇಕು. ಆಭರಣ-ಮನೆ- ಸಂಪತ್ತು-ವಾಹನಾದಿಗಳನ್ನು ಯಥೇಚ್ಛವಾಗಿ ಪ್ರತ್ಯೇಕವಾಗಿ ಸಂಪಾದಿಸಿ ಪಿತೃಕರ್ಮಕ್ಕೆ ಮಾತ್ರ ಇನ್ನೊಬ್ಬರನ್ನು ಆಶ್ರಯಿಸುವುದು ಅಧಮ ಪಕ್ಷ. ಅಣ್ಣ ತಮ್ಮಂದಿರ ವಾಸ-ಪಾಕ ಬೇರೆಯಾದರೆ ದೈವ ಕರ್ಮಗಳಂತೆ ಪಿತೃಕರ್ಮವೂ ಪ್ರತ್ಯೇಕ ಆಚರಣೀಯವಾದುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.b...

ರಾಮಾಯಣ ೨೪

   ಧರ್ಮಾಚರಣೆ --- ೨೪ ನ ಬ್ರಾಹ್ಮಣೇನ ಕರ್ತವ್ಯಂ ಶೂದ್ರಸ್ಯಾಪ್ಯೌರ್ಧ್ವದೇಹಿಕಮ್ | ಶೂದ್ರೇಣ ವಾ ಬ್ರಾಹ್ಮಣಸ್ಯ ವಿನಾ ಪಾರಶವಾತ್ಕ್ವಚಿತ್ || ಪಾರಸ್ಕರ ವಚನ || ಶಾಸ್ತ್ರದಲ್ಲಿ ಆಯಾ ಪರಂಪರೆಗೆ ತನ್ನದೇ ಆದ ಮಹತ್ವವಿದೆ. ಹಾಗಾಗಿ ಅವರವರ ಪಂಗಡದ ಅಂತ್ಯಕ್ರಿಯೆಗಳನ್ನು ಅವರವರೇ ಮಾಡಬೇಕು. ಬ್ರಾಹ್ಮಣನು ಇತರೆ ವರ್ಣದವರ ಶ್ರಾದ್ಧಾದಿಗಳನ್ನಾಗಲಿ, ಇತರರು ಬ್ರಾಹ್ಮಣರ ಶ್ರಾದ್ಧಾದಿಗಳನ್ನು ಮಾಡಲು ಅವಕಾಶವಿಲ್ಲ. ಪ್ರತಿಯೊಂದು ಮನೆತನದ ಆಚಾರಗಳಲ್ಲಿ ವೈವಿಧ್ಯತೆ ನಮ್ಮಲ್ಲಿ ಹಾಸುಹೊಕ್ಕಾಗಿದೆ. ಯಾವುದನ್ನೂ ಯಾರಮೇಲೂ ಹೇರಲು ಬಯಸದು ಶಾಸ್ತ್ರ. ಆಹಾರ- ಆಚರಣೆ- ನಡೆ-ನುಡಿ ಹೀಗೆ ಅವರವರ ಸಂಪ್ರದಾಯದಂತೆ ಪ್ರತಿಯೊಂದು ಸ್ವೀಕಾರಾರ್ಹ. ಅನಾಥ ಶವದ ವಿಷಯದಲ್ಲಿ ಈ ನಿಯಮ ಇಲ್ಲ. ಅಲ್ಲಿ ಮಾನವೀಯತೆ ಹೊಂದಿರುವ ಯಾರೂ ಸಂಸ್ಕಾರ ಮಾಡಬಹುದು. ಅಂತರ್ಜಾತೀಯ ವಿವಾಹವಾದಲ್ಲೂ ಮಕ್ಕಳು ಮಾಡಲು ಅವಕಾಶವಿದೆ. ಶಾಸ್ತ್ರ ಎಂದೂ ವೈದಿಕತೆಯನ್ನು ಹೇರುವುದಿಲ್ಲ. ಹಾಗೆ ಹೇಳುವವರಿಗೆ ಶಾಸ್ತ್ರದ ಅರಿವಿರುವುದಿಲ್ಲ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ರಾಮಾಯಣ ೧೩೯

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೩೯ 🏝📖 *ಪ್ರಹೃಷ್ಟಮುದಿತೋ ಲೋಕಃ ತುಷ್ಟಃಪುಷ್ಟಃ ಸುಧಾರ್ಮಿಕಃ ನಿರಾಮಯೋ ಹ್ಯರೋಗಶ್ಚ ದುರ್ಭಿಕ್ಷಭಯವರ್ಜಿತಃ* *ನ ಪುತ್ರಮರಣಂ ಕಿಂಚಿದ್ದ್ರಕ್ಷ್ಯಂತಿ ಪುರುಷಾಃ ಕ್ವಚಿತ್ ನಾರ್ಯಶ್ಚಾವಿಧವಾ ನಿತ್ಯಂ ಭವಿಷ್ಯಂತಿ ಪತಿವ್ರತಾಃ* _ರಾಮರಾಜ್ಯದ ಲಕ್ಷಣಗಳನ್ನು ಇಲ್ಲಿ ನಾರದರು ವರ್ಣಿಸುತ್ತಿದ್ದಾರೆ. ಬಾಲಕಾಂಡದ ಮೊದಲ ಸರ್ಗದ  ಎಂಭಂತ್ತೆಂಟನೇ ಶ್ಲೋಕವಿದು. ರಾಮ ರಾಜ್ಯದಲ್ಲಿ ಪ್ರಜೆಗಳು ಸದಾ ಆನಂದಭರಿತರಾಗಿದ್ದರು‌. ದುಃಖ ಪಡಲು ಯಾವುದಾದರೂ ಕೊರತೆ ಕಾಣದಾಗಿತ್ತು. ಮನಸ್ಸಿನಲ್ಲಿ ಸಂತೋಷ, ದೈಹಿಕವಾಗಿ ಪುಷ್ಟರಾಗಿದ್ದರು. ಇದಕ್ಕೆ ಮೂಲಕಾರಣ ಜನರು ಧರ್ಮವನ್ನು ಅನುಸರಿಸುತ್ತಿದ್ದರು. ಧರ್ಮವೇ ಜೀವನಕ್ರಮವಾಗಿತ್ತು. ಈಗ ನಾವೆಲ್ಲರೂ ಅರ್ಥಮೂಲರು ಅಥವಾ ಕಾಮಮೂಲರಾಗಿದ್ದೇವೆ. ಧರ್ಮವನ್ನು ಇವೆರಡಕ್ಕಾಗಿ ಕೆಲವೊಮ್ಮೆ ತ್ಯಜಿಸುತ್ತೇವೆ. ಪ್ರಜೆಗಳು ಯಾವ ರೋಗಗಳಿಲ್ಲದೆ ದೃಢಕಾಯರಾಗಿ ಬದುಕುತ್ತಿದ್ದರು. ಯಾವ ವಿಧದ ಮಾನಸಿಕ ಚಿಂತೆಯೂ ಜನರಿಗೆ ಇರಲಿಲ್ಲ. ಬರಗಾಲದ ಭಯವು ಜನರನ್ನು ಬಾಧಿಸುತ್ತಿರಲಿಲ್ಲ. ಸದಾ ಸಸ್ಯಸಮೃದ್ಧವಾಗಿ ಜಲಸಮೃದ್ಧಿಯು ಇದ್ದ ಕಾರಣ ಬರದ ಛಾಯೆಯೂ ಸುಳಿಯುತ್ತಿರಲಿಲ್ಲ. ತಂದೆ ತಾಯಿ ಬದುಕಿದ್ದಾಗಲೇ ಮಕ್ಕಳು ಸಾಯುತ್ತಿರಲಿಲ್ಲ. ಸಾವು ಜೀವಿಗೆ ನಿಶ್ಚಿತವಾದುದು. ಆದರೆ ತಮ್ಮ ಕಣ್ಣೆದುರೇ ಮಕ್ಕಳು ಸಾಯುವುದನ್ನು ಪಾಲಕರೆಂದಿಗೂ ಬಯಸಲಾರರು. ಅಂತಹ ಸ್ಥಿತಿಯೂ ಬಂದಿರಲಿಲ್ಲ ರಾಮರಾಜ್ಯದಲ್ಲಿ. ನ...

ಧರ್ಮಾಚರಣೆ ೨೩

  ಧರ್ಮಾಚರಣೆ---೨೩ ಪಿತುಃ ಪುತ್ರೇಣ ಕರ್ತವ್ಯಾ ಪಿಂಡದಾನೋದಕಕ್ರಿಯಾ| ಪುತ್ರಾಭಾವೇ ತು ಪತ್ನೀ ಸ್ಯಾತ್ತದಭಾವೇ ತು ಸೋದರಃ || ಹೇಮಾದ್ರಿ - ಶಂಖವಚನ || ತಂದೆ-ತಾಯಂದಿರ ಅಂತ್ಯಕ್ರಿಯೆಯನ್ನು ಮಗನು ಮಾಡಬೇಕು. ಪುತ್ರನಿಲ್ಲದಿದ್ದರೆ ಪತ್ನಿ, ಒಂದು ವೇಳೆ ಅವಳೂ ಇಲ್ಲದಿದ್ದರೆ ಸಹೋದರನು ಮಾಡಬೇಕು. ಉತ್ತರಕ್ರಿಯೆಯನ್ನು ಯಾವ ಕಾರಣಕ್ಕೂ ಮಾಡದೇ ಬಿಡಬಾರದು. ಸಪಿಂಡಕರು ಯಾರಾದರೂ ಕ್ರಿಯೆಗಳನ್ನು ನಡೆಸಲು ಅರ್ಹರು. ಹಿಂದೂ ಪರಂಪರೆಯಲ್ಲಿ ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ನಡೆಸಲು ಸಾಕಷ್ಟು ಅವಕಾಶ ಕೊಡಲಾಗಿದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೨೨

    ಧರ್ಮಾಚರಣೆ ---೨೨ ಶ್ರಾದ್ಧಾರ್ಹದ್ರವ್ಯಸಂಪತ್ತೌ ತಥಾ ದುಸ್ವಪ್ನದರ್ಶನೇ | ಜನ್ಮರ್ಕ್ಷೇ ಗ್ರಹಪೀಡಾಸು ಶ್ರಾದ್ಧಂ ಕುರ್ವೀತ ಚೇಚ್ಛಯಾ || ಮಾರ್ಕಂಡೇಯ ಪುರಾಣ||    ಶ್ರಾದ್ಧ ಮಾಡಲು ಬೇಕಾದ ದರ್ಭೆ-ಎಳ್ಳು-ಬ್ರಾಹ್ಮಣ-ದ್ರವ್ಯ ಲಭ್ಯವಿದ್ದಾಗ, ರಾತ್ರಿ ಕನಸಿನಲ್ಲಿ ಕೆಟ್ಟ ಕನಸನ್ನು ಕಂಡಾಗ, ಜನ್ಮನಕ್ಷತ್ರದ ದಿನ ( ಅಧಿಕಾರಿಗಳು) ಗ್ರಹಚಾರ ಪೀಡಿತನಾದಾಗ ಶ್ರದ್ಧೆಯಿಂದ ಪಿತೃಗಳನ್ನು ಉದ್ದೇಶಿಸಿ ಶ್ರಾದ್ಧ ಮಾಡಬಹುದು. ಪಿತೃಪಕ್ಷ, ವ್ಯತೀಪಾತಾದಿ ಯೋಗ, ಸಂಕ್ರಾಂತಿ, ಅಮಾ- ಪೌರ್ಣಮೀ ಅಲ್ಲದೇ ಇಂತಹ ಸಂದರ್ಭದಲ್ಲೂ ಶ್ರಾದ್ಧ ಮಾಡಬಹುದೆನ್ನುವ ಮೂಲಕ ಪಿತೃಸೇವೆಯ ಮಹತ್ವ ಹಾಗೂ ಪ್ರಯೋಜನವನ್ನು ಪುರಾಣ ಎತ್ತಿಹಿಡಿಯುತ್ತದೆ. ಸಂಗ್ರಹ : ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೨೧

    ಧರ್ಮಾಚರಣೆ---೨೧ ಪರಕೀಯಪ್ರದೇಶೇಷು ಪಿತೃಣಾಂ ನಿರ್ವಪೇತ್ತು ಯಃ | ತದ್ಭೂಮಿಸ್ವಾಮಿಪಿತೃಭಿಃ ಶ್ರಾದ್ಧಕರ್ಮ ವಿಹನ್ಯತೇ|| ಯಮವಚನ || ಪರಕೀಯಗೃಹೇ ಯಸ್ತು ಸ್ವಾನ್ಪಿತೃನ್ತರ್ಪಯೇದ್ಯದಿ | ತದ್ಭೂಮಿಸ್ವಾಮಿನಸ್ತಸ್ಯ ಹರಂತಿ ಪಿತರೋ ಬಲಾತ್ || ಬ್ರಾಹ್ಮ ಪುರಾಣ|| ಶ್ರಾದ್ಧವನ್ನು ಎಂದಿಗೂ ನಮ್ಮ ನಮ್ಮ ಮನೆಗಳಲ್ಲಿ ಮಾಡುವುದು ತುಂಬಾ ಶ್ರೇಷ್ಠ. ನೂರು ಜನರನ್ನು ಕರೆದು ತುಂಬಾ ಅದ್ದೂರಿಯಾಗಿ ಯಾರದೋ ಒಡೆತನದ ಸಭಾಗೃಹಗಳಲ್ಲಿ ಮಾಡಿದರೆ ಅದರ ಪುಣ್ಯದ ಪಾಲು ಅದರೊಡೆಯನಿಗೆ ಸೇರುತ್ತದೆ. ಅದರ ಬದಲು ಮೂರು ಜನರನ್ನು ಕರೆದು ಶ್ರದ್ಧೆಯಿಂದ ಮನೆಯಲ್ಲೇ ಮಾಡಿದರೆ ಗತಿಸಿದ ಜೀವಕ್ಕೂ ತೃಪ್ತಿ, ನಮಗೂ ಅನುಗ್ರಹ ದೊರಕುವುದು. ' ನ ಕುರ್ಯಾತ್ ಶ್ರಾದ್ಧವಿಸ್ತರಂ ' ಎಂಬಂತೆ ತುಂಬಾ ಖರ್ಚು ಮಾಡಿ ಮಾಡುವುದಕ್ಕಿಂತ ತುಂಬಾ ಶ್ರದ್ಧೆ ಇಟ್ಟು ಮಾಡುವುದು ಶ್ರೇಯಸ್ಕರ. ಮನೆಯ ಒಂದು ಸಣ್ಣ ಜಾಗವನ್ನಾದರೂ ಶುದ್ಧಿ ಮಾಡಿಕೊಂಡು ತುಲಸೀಜಲ ವಾ ಮೃತ್ತಿಕೆ ಪ್ರೋಕ್ಷಿಸಿ ಅಲ್ಲಿ ಮಾಡುವುದು ತುಂಬಾ ಉತ್ತಮ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೨೦

       ಧರ್ಮಾಚರಣೆ---೨೦ ಉದ್ಧರೇತ್ಸಪ್ತಗೋತ್ರಾಣಿ ಕುಲಮೇಕೋತ್ತರಂ ಶತಮ್ ಎಂಬಲ್ಲಿ ಹೇಳಿರುವ ಏಳು ಗೋತ್ರಗಳು ಯಾವುವೆಂದರೆ- ಪಿತಾ ಮಾತಾ ಚ ಭಾರ್ಯಾ ಚ ಭಗಿನೀ ದುಹಿತಾ ತಥಾ | ಪಿತೃಮಾತೃಷ್ವಸಾ ಚೈವ ಸಪ್ತ ಗೋತ್ರಾಣಿ ವೈ ವಿದುಃ || ವಾಯವೀಯ|| ತಂದೆಯ ಗೋತ್ರ, ತಾಯಿಯ ಕುಲದ ಗೋತ್ರ, ಹೆಂಡತಿಯ ಕುಲದ ಗೋತ್ರ, ತಂಗಿ ಅಥವಾ ಅಕ್ಕನ ಗಂಡನ ಮನೆಯ ಗೋತ್ರ, ಮಗಳು ಮದುವೆಯಾಗುವ ಮನೆಯ ಗೋತ್ರ, ತಂದೆಯ ಅಕ್ಕ ಅಥವಾ ತಂಗಿ ಹೋದ ಮನೆಯ ಗೋತ್ರ, ತಾಯಿಯ ಅಕ್ಕತಂಗಿಯರು ಮದುವೆಯಾದ ಗೋತ್ರ. ಇವಿಷ್ಟು ಗೋತ್ರಗಳ ಉದ್ಧಾರ ಗಯಾದಲ್ಲಿ ಶಮೀಪತ್ರದಷ್ಟು ಸಣ್ಣ ಪಿಂಡ ದಾನ ಮಾಡಿದರೂ ಆಗುತ್ತದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ರಾಮಾಯಣ ೧೩೮

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೩೮ 🏝📖 *ಪ್ರಕೃತೀನಾಂ ಹಿತೇ ಯುಕ್ತಂ ಪ್ರಕೃತಿಪ್ರಿಯಕಾಮ್ಯಯಾ ಯೌವರಾಜ್ಯೇನ ಸಂಯೋಕ್ತುಂ ಐಚ್ಛತ್ಪ್ರೀತ್ಯಾ ಮಹೀಪತಿಃ* _ಸುಂದರ ಕಾಂಡದಿಂದ ಆರಂಭವಾದ ರಾಮಾಯಣ ಲೇಖನ ಯಜ್ಞ ಮತ್ತೆ ಬಾಲಕಾಂಡದೆಡೆಗೆ ಹೊರಳಿದೆ. ಇಷ್ಟು ದಿನ ಬರೆಯದಿದ್ದುದಕ್ಕೆ ಕ್ಷಮೆ ಕೋರುತ್ತಾ ಮುಂದುವರೆಸುತ್ತಿದ್ದೇನೆ._ _ಬಾಲಕಾಂಡದ ಇಪ್ಪತ್ತನೇ ಶ್ಲೋಕವಿದು. ನಾರದರು ವಾಲ್ಮೀಕಿಮಹರ್ಷಿಗಳಿಗೆ ಹೇಳುವ ಮಾತು. ದಶರಥನು ಕೇವಲ ಹಿರಿಯನೆಂಬ ಆಧಾರದಲ್ಲಿ ರಾಮನನ್ನು ಪಟ್ಟಗಟ್ಟಲು ಯೋಚಿಸಿದ್ದಲ್ಲ. ಅನೇಕರು ಹಿರಿಯರೆಂದು ಹಿಂದುಮುಂದು ನೋಡದೇ ಅಧಿಕಾರದಲ್ಲಿ ಇರಿಸುತ್ತಿದ್ದರು ಎಂದು ತಪ್ಪು ಅಭಿಪ್ರಾಯಪಡುತ್ತಾರೆ. ಆದರೆ ಹೆಚ್ಚಿನ ಬಾರಿ ಭಾರತೀಯ ಇತಿಹಾಸದಲ್ಲಿ ಹಿರಿಯರು ಕಿರಿಯರು ಎನ್ನುವುದಕ್ಕಿಂತ ಯೋಗ್ಯರಿಗೆ ಪಟ್ಟ ಸಿಕ್ಕಿದೆ ಎನ್ನುವುದು ಸತ್ಯ. ರಾಮನು ಪ್ರಜೆಗಳ ಪ್ರೀತಿಗೆ ಪಾತ್ರನಾದವನು ಹಾಗೂ ಪ್ರಜೆಗಳ ಹಿತಚಿಂತನೆಯಲ್ಲಿ ರತನಾದವನು. ಇದು ರಾಜನಾಗುವವನಿಗೆ ಅತ್ಯಂತ ಅವಶ್ಯವಾಗಿ ಇರಬೇಕಾದ ಗುಣ. ವಿದ್ವತ್ತು, ಪರಾಕ್ರಮ, ರೂಪ, ಜ್ಯೇಷ್ಠತೆ ಮೊದಲಾದ ಬೇರೆ ಗುಣಗಳಿಗಿಂತ ಪ್ರಜಾರಂಜನೆ ಮೊದಲ ಅರ್ಹತೆ. ಅದು ರಾಮನಲ್ಲಿ ಉಳಿದ ಮೂವರಿಗಿಂತ ಹೆಚ್ಚಿದ್ದ ಕಾರಣ ದಶರಥ ರಾಜಾರಾಮನನ್ನು ಕಾಣಲು ಬಯಸಿದನೇ ಹೊರತು ಕೇವಲ ಮೊದಲು ಜನಿಸಿದನೆಂಬ ಕಾರಣಕ್ಕಲ್ಲ. ಯಯಾತಿ ತನ್ನ ಕಿರಿಮಗನಾದ ಪುರುವನ್ನು ಅಧಿಕಾರದಲ್ಲಿ ಕೂಡಿಸಲೂ ಇಂತಹದೇ ಕಾರಣ ಮುಖ್ಯವಾಗಿತ್ತ...

ಧರ್ಮಾಚರಣೆ ೧೯

               ಧರ್ಮಾಚರಣೆ--೧೯ ಪ್ರೇತಂ ಪಿತೃಂಶ್ಚ ನಿರ್ದಿಶ್ಯ ಭೋಜ್ಯಂ ಯತ್ಪ್ರಿಯಮಾತ್ಮನಃ | ಶ್ರದ್ಧಯಾ ದೀಯತೇ ಯತ್ರ ತಚ್ಛ್ರಾದ್ಧಂ ಪರಿಕೀರ್ತಿತಮ್ || ಮರೀಚಿವಚನ | ಪೃಥ್ವೀಚಂದ್ರೋದಯ.  ಸತ್ತು ಬೇರೆ ಜನ್ಮ ಅಥವಾ ಸ್ಥಾನ ಹೊಂದದ ಆತ್ಮಗಳು  ಹಾಗೂ ಸತ್ತು ತಮ್ಮ ಕರ್ಮಕ್ಕನುಸಾರ ನಾನಾ ಜನ್ಮ ಪಡೆದ ಅಥವಾ ಮೋಕ್ಷಹೊಂದಿದ ನಮ್ಮ ಹಿರಿಯರ ಉದ್ದೇಶವಾಗಿ  ನಾವು ಇಷ್ಟಪಡುವ ಆಹಾರಾದಿಗಳನ್ನು ಶ್ರದ್ಧೆಯಿಂದ ನೀಡುವುದೇ ಶ್ರಾದ್ಧ. ಇಲ್ಲಿ ಶ್ರದ್ಧೆ ಅತ್ಯಂತ ಮುಖ್ಯ. ವಸ್ತುಗಳು, ಅಡುಗೆ, ಜನರು ಮೊದಲಾದವು ಗೌಣ. ನಮಗೆ ಜನ್ಮ ನೀಡಿ ಮಾತಾಪಿತೃಗಳು, ಯಾವುದಾದರೊಂದು ರೀತಿಯಲ್ಲಿ ಉಪಕಾರ ಮಾಡಿದ ಬಂಧುಗಳು, ನಮ್ಮ ಸಂಪರ್ಕಕ್ಕೆ ಬಂದ ಲೋಕದ ಲಕ್ಷಾಂತರ ಜನರಿಗೆ ಶ್ರದ್ಧೆಯಿಂದ ಏನನ್ನಾದರೂ ಕೊಡಮಾಡುವುದೇ ಶ್ರಾದ್ಧ. ವ್ಯಕ್ತಿ ಬದುಕಿದ್ದಾಗಲೂ ಸತ್ತಮೇಲೂ ಆದರ ಹೆಚ್ಚು ಕಡಿಮೆ ಆಗಬಾರದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಅನುವಾದಿತ ಕಥೆ ೧೭

   अनूदित कथावलि: - १७        आनन्देन जातानि जीवन्ति  एकस्मिन् नगरे कश्चन योगी आसीत्। स: सर्वदा आनन्देन कालं यापयति स्म। कोरोना वा भवतु मरणं वा भवतु स: कथंचिदपि दु:खं न आप्नोति स्म। एकदा तस्य अनुचरा: कन्दुकक्रीडा विषयं तस्य समीपे अवदन् ।  तदा तेनोक्तम् - मया  कदापि सा स्पर्धा न दृष्टा'   इति।   काले गते तन्नगरे श्रीमद्भि: प्रसिद्धगणेषु स्पर्धा आयोजिता । तद्वीक्षितुं सहस्राधिका: जना: आगता: । योगिन: अनुचरा: अपि योगिनं आग्रहं कृतवन्त: -भवतापि आगन्तव्यम् इति । तत: सोपि स्पर्धां   ईक्षितुम् गतवान् । क्रीडाsङ्गणे स्पर्धा आरब्धा आसीत् । एतेsपि आसनं स्वीकृत्य  क्रीडायां मग्ना: अभूवन् । द्वौ गणौ अपि नितरां बलिष्ठौ, अत्युत्साहेन क्रीडन्तौ आस्ताम् । गणस्यैकस्य क्रीडालु: कन्दुकस्य पश्चात् वेगेन धावन् तं  पेटिकायां पातितवान् । तदा तद्गणस्य अभिमानिजना: उच्चै: अहो अहो इति उद्घोषणं कृतवन्त: । तदा योगी अपि आसनादुत्थाय  स्वशिरस्त्राणं वायौ पर्यटन् उच्चै: साधु , अद्भुतम् इत्युक्त्वा उपविष्टवान् ।  एवं क्रीडा प्र...

ಧರ್ಮಾಚರಣೆ ೧೮

   ಧರ್ಮಾಚರಣೆ ----೧೮ ಅಹಿಂಸಾ ಸತ್ಯಮಸ್ತೇಯಂ ಶೌಚಮಿಂದ್ರಿಯನಿಗ್ರಹಃ | ದಾನಂ ದಮೋ ದಯಾಕ್ಷಾಂತಿಃ ಸರ್ವೇಷಾಂ ಧರ್ಮಸಾಧನಮ್ ||ಯಾಜ್ಞವಲ್ಕ್ಯ ಸ್ಮೃತಿ|| ಮನಸ್ಸಿನಿಂದಾಗಲೀ, ಮಾತಿನಿಂದಾಗಲೀ, ಕ್ರಿಯೆಯಿಂದಾಗಲೀ ಇನ್ನೊಬ್ಬರಿಗೆ ಹಿಂಸೆ ಮಾಡದೇ, ಆಂತರ್ಯದಲ್ಲೂ- ಬಹಿರಂಗದಲ್ಲೂ ಸತ್ಯಕ್ಕೆ ನಿಷ್ಠೆಯಿಂದಿದ್ದು, ಪರರ ವಸ್ತುಗಳಿಗೆ ಆಸೆ ಪಡದೇ, ಅಂತರ್ಬಹಿ ಶುಚಿಯನ್ನು ಕಾಪಾಡಿಕೊಂಡು, ಇಂದ್ರಿಯಗಳನ್ನು ಸಲ್ಲದ ವಿಷಯಗಳಿಗೆ ಹರಿಯಬಿಡದೇ, ಶಕ್ತ್ಯಾನುಸಾರ ದಾನ ಮಾಡುವುದು, ಲಾಲಸೆ ಹೊಂದದಿರುವುದು, ಜೀವದಯೆ, ಕ್ಷಮಾಗುಣವನ್ನು ಹೊಂದಿರುವುದೇ ನಿಜವಾದ ಧರ್ಮ. ಯಾವ ವರ್ಣ-ಜಾತಿ-ಲಿಂಗ ಭೇದವಿಲ್ಲದಂತೆ ನಿಜವಾದ ಧಾರ್ಮಿಕ ಯಾರೆಂದರೆ ಈ ಗುಣಗಳಿಂದ ಕೂಡಿರುವ ವ್ಯಕ್ತಿ. ಸಂಗ್ರಹ : ಶ್ರೀನಿಧಿ ಅಭ್ಯಂಕರ್