ಪೋಸ್ಟ್‌ಗಳು

ಡಿಸೆಂಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಮಾಯಣ ೧೭೨

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೨🏝📖   *ಅವಜ್ಞಯಾ ನ ದಾತವ್ಯಂ ಕಸ್ಯಚಿಲ್ಲೀಲಯಾಪಿ ವಾ | ಅವಜ್ಞಯಾ ಕೃತಂ ಹನ್ಯಾದ್ದಾತಾರಂ ನಾತ್ರ ಸಂಶಯಃ ||* _ವಸಿಷ್ಠರ ಆದೇಶ. ಯಜ್ಞ ಎಂದ ಮೇಲೆ ಸಾವಿರಾರು ದಾನಗಳನ್ನು ನೀಡಲಿರುತ್ತದೆ. ದಾನ ಪರಂಪರೆ ನಡೆಯುತ್ತಲೇ ಇರುತ್ತದೆ. ಜ್ಞಾನ-ಅನ್ನ-ಭೂಷಣ-ಭೂಮಿ-ವಸ್ತು-ಸುವರ್ಣ-ರಜತ  ಇವುಗಳ ದಾನ ಮಾಡಿದಷ್ಟೂ ಶ್ರೇಯಸ್ಸು. ದಾನಕಾಲದಲ್ಲಿ ಎಂತಹ ನಿಯಮ ಇರಬೇಕೆಂದು ನಿರೂಪಿಸುತ್ತಿದ್ದಾರೆ. ದಾನ ತೆಗೆದುಕೊಳ್ಳುವ ವ್ಯಕ್ತಿಯ ಬಗ್ಗೆ ಸ್ವಲ್ಪವೂ ಅಸಡ್ಡೆ ತೋರಬಾರದು. ಹಾಗಾಗಿಯೇ ಸಂಬಂಧಿಕರಿಗೆ-ಕುಟುಂಬಿಕರಿಗೆ ದಾನ ನೀಡಬಾರದು ಎನ್ನುವುದು. ಇವನು ಆ ಧರ್ಮ, ಇವನು ಈ ಮತ, ಇವನು ಮಿತ್ರ, ಇವನು ನನ್ನ ವಿರೋಧಿ ಇತ್ಯಾದಿ ಯಾವ ಭಾವನೆ ಇದ್ದರೂ ದಾನ ಕಾಲದಲ್ಲಿ ಅದೆಲ್ಲವನ್ನೂ ಬದಿಗಿಟ್ಟು ಶ್ರೇಯಸ್ಕಾಮನಾಗಿ ಮನಃಪೂರ್ವಕವಾಗಿ ದಾನ ಮಾಡಬೇಕು. ಅನೇಕ ಶ್ರೀಮಂತರು ದಾನ ಕೊಡುವಾಗ ಅಸಡ್ಡೆ ತೋರುವುದನ್ನು, ಅಪಮಾನ ಮಾಡುವುದನ್ನೂ, ಇವನು ತೆಗೆದುಕೊಳ್ಳಲೆಂದೇ ಹುಟ್ಟಿದವನು ಎಂಬರ್ಥದಲ್ಲಿ ನೋಡುವುದನ್ನು ಮಾತನಾಡುವುದನ್ನೂ ಗಮನಿಸಬಹುದು. ಅಂತಹ ದಾನವೆಲ್ಲ ಕಲ್ಲಮೇಲೆ ಸುರಿದ ಮಳೆಯಂತೆ ವ್ಯರ್ಥ. ಎರಡನೆಯದಾಗಿ ತಮಾಷೆ ಮಾಡುತ್ತಾ ಹೋ ಬನ್ನಿ ದಾನಕ್ಕೆ ಎಂದು ವಿನೋದ ಮಾಡುತ್ತಾ ಅಥವಾ ಚೇಷ್ಟೆ ಮಾಡುತ್ತಾ ದಾನ ಮಾಡಬಾರದು. ಒಮ್ಮೆ ಪ್ರತಿಗೃಹೀತನ ಮನಕ್ಕೆ ಬೇಸರ ಉಂಟಾದರೆ ಅದು ದಾತೃವಿಗೆ ನರಕ ತೋರಬಹುದು. ಹಾಗಾಗಿ ಗ...

ಚಾರುದತ್ತ ೨೧

👳‍♀ಚಾರುದತ್ತ ಬೆಳಕು- ೨೧👳‍♀ *ವಿಷಾದಸ್ರಸ್ತಸರ್ವಾಂಗೀ ಸಂಭ್ರಮೋತ್ಫುಲ್ಲಲೋಚನಾ | ಮೃಗೀವ ಶರವಿದ್ಧಾಂಗೀ ಕಂಪಸೇ ಚಾನುಕಂಪಸೇ ||* _ಭಾಸನ ಒಂದು ಚಿತ್ರಕಾವ್ಯದ ಉದಾಹರಣೆ. ನಾಯಿಕೆಯು ಮೈಯಲ್ಲಿ ನೆಟ್ಟ ಬಾಣದಿಂದ ನಡುಗುತ್ತಿರುವ ಅತ್ತಿತ್ತ ಕಣ್ಣನ್ನು ಬಿಡುತ್ತಾ ತಪ್ಪಿಸಿಕೊಳ್ಳಲು ಸಿದ್ಧವಾಗಿ ನಿಂತಿರುವ ಹರಿಣಿಯಂತೆ ತೋರುತ್ತಿದ್ದಾಳೆ. ಶ್ಲೋಕಕ್ಕನುಗುಣವಾಗಿ ಚಿತ್ರ ಬರೆಯಬಹುದಾದ ಕಾವ್ಯ. ವಸಂತಸೇನೆಯು ತನ್ನ ಬಳಿ ಬಂದ ಗ್ರಾಹಕನಿಂದ ಕೊಡಲ್ಪಟ್ಟ ಆಭರಣವೊಂದನ್ನು ಸ್ವೀಕರಿಸಿದ್ದಾಳೆ. ಆ ಆಭರಣ ತನ್ನದೆಂದು ಶಂಕಿಸಿ ಎಲ್ಲಿ ಸಿಕ್ಕಿತೆಂದು ಅವನ ಬಳಿ ವಿಚಾರಿಸಲಾಗಿ ಅವನು ತನ್ನ ಸಾಹಸದ ಕಾರ್ಯವನ್ನು ವರ್ಣಿಸತೊಡಗಿದನು. ತಾನು ದೊಡ್ಡ ವ್ಯಾಪಾರಿಯಾದ ಚಾರುದತ್ತನ ಮನೆಗೆ ಬೆಳಗಿನ ಜಾವ ಹೋದೆನು ಇತ್ಯಾದಿ. ಆಗ ತನ್ನ ಮನದರಸನಾದ ಚಾರುದತ್ತನಿಗೆ ಈ ಭೂಷಣದ ಸಲುವಾಗಿ ಇವನೇನಾದರೂ ಮಾಡಿದನೋ ಎಂಬ ಆತಂಕದಲ್ಲಿ ಪಿಳಿಪಿಳಿ ಕಣ್ಣುಬಿಡುತ್ತಾ ನಡುಗಿದಳು. ತನ್ನ ಪ್ರಿಯಕರನಿಗೇನಾಯ್ತೋ ಎಂದು ಅನುಕಂಪವನ್ನೂ ತೋರುತ್ತಿದ್ದಾಳೆ. ಆತಂಕದಿಂದ ದೇಹ ನಡುಗುವಾಗ ಇನ್ನೊಬ್ಬರ ಬಗ್ಗೆ ಅನುಕಂಪ ತೋರುವುದು ಕಷ್ಟದ ಕೆಲಸ. ಭಾಸನು ಅವೆರಡನ್ನೂ ಒಬ್ಬಳಲ್ಲೇ ಕಲ್ಪಿಸಿ ಚಿತ್ರಿಸಿದ್ದಾನೆ. ಮೊಗದಲ್ಲಿ ಗಾಬರಿ-ಕುತೂಹಲ-ದುಃಖ-ಅನುಕಂಪ ಇವೆಲ್ಲವನ್ನೂ ಧ್ವನಿಸುವ ಚಂಚಲ ಕಣ್ಣುಗಳು. ನಡುಗುವ ತನು.ಜಿಂಕೆ ಬಾಣದ ಪೆಟ್ಟು ಬಿದ್ದು ಓಡಲು ಸಿದ್ಧವಾಗಿರುವ ದೇಹ, ಕ್ಷಣಕ್ಕೊಮ್ಮೆ ಅತ್ತಿತ್ತ ಧಾವಿಸುವ...

ಪದಶಕ್ತಿ ೪೨

🏹*ಪದಶಕ್ತಿ* ---೪೨🌄 *ಪುಣ್ಯಜನ* _ಈ ಪದ ಕೇಳಿದ ಕ್ಷಣವೇ ನಮ್ಮ ಮನದಲ್ಲಿ ಮೂಡುವ ಭಾವ ಸತ್ಕಾರ್ಯ ಮಾಡಿ ಪುಣ್ಯ ಸಂಪಾದಿಸಿದವರು ಅಂತ. ಆದರೆ ಸಂಸ್ಕೃತದಲ್ಲಿ ಮುಖ್ಯ ಅರ್ಥವಿರುವುದು ಪಾಪಿ ಎಂದು. ರಾಕ್ಷಸರ ಪಾಪಕೃತ್ಯಗಳಿಂದಾಗಿ ಹಿಂಸೆಯಿಂದಾಗಿ ಅವರಿಗೆ ಈ ಹೆಸರು ಬಂದಿದೆ. ಇದು ಒಂದು ರೀತಿಯಲ್ಲಿ ವ್ಯತಿರೇಕ ಹೆಸರು. ನಮ್ಮ ದೈನಂದಿನ ವ್ಯವಹಾರದಲ್ಲಿ ಯಾರಿಗಾದರೂ ಹಾಸ್ಯ ಮಾಡುವಾಗ ಸೋಮಾರಿಯಾದರೆ ಅವನು ಭಾರೀ ಕೆಲಸಗಾರ ಎಂದೋ ಅಥವಾ ಹೆಚ್ಚು ತಿನ್ನುವನಾದರೆ ಅವನಿಗೆ ದಿನವೂ ದ್ವಾದಶಿ ಎನ್ನುವಂತೆ ರಾಕ್ಷಸರಿಗೆ ಈ ಪರ್ಯಾಯಪದಬಳಕೆಯಲ್ಲಿದೆ._ _ಯಕ್ಷ ಜನ್ಮವು ಸಿಗುವುದು ಬಹಳ ಪುಣ್ಯಸಂಪಾದನೆಯಿಂದ. ಅವರು ಸದಾ ಸುಖಲೋಲುಪರು. ಮನುಷ್ಯರಿಗಿಂತ ಶ್ರೇಷ್ಠ ಜನ್ಮವದು. ಹಾಗಾಗಿ ಅವರಿಗೂ ಪುಣ್ಯಜನ ಎಂಬ ಪರ್ಯಾಯ ಇದೆ. *ಪಯೋಧರೈಃ ಪುಣ್ಯಜನಾಂಗನಾನಾಂ* ಎಂದು ಕಾಳಿದಾಸ ತನ್ನ ರಘುವಂಶದಲ್ಲಿ ಯಕ್ಷಾಂಗನೆಯರ ಪಯೋಧರಗಳತ್ತ ಕಣ್ಣು ನೆಟ್ಟಿದ್ದಾನೆ. ಯಕ್ಷರೂ ಕೆಲವೊಮ್ಮೆ ಉದ್ಧಟತನದ ಕೆಲಸ ಮಾಡುವುದುಂಟು.‌ಅಂತಹ ಸಂದರ್ಭದಲ್ಲಿ ರಾಕ್ಷಸರಂತೆ ಅವರಿಗೂ ವಿರುದ್ಧಾರ್ಥಕವಾಗಿ ಬಳಸಬಹುದು._ _ಇನ್ನು ಸಹಜವಾದ ಅರ್ಥ ಒಳ್ಳೆಯ ವ್ಯಕ್ತಿ ಎಂದು. ಅವರು ಪುಣ್ಯವಂತರಪ್ಪಾ ಎಂದು ನಾವು ಆಡುನುಡಿಯಲ್ಲಿ ಹೇಳುವೆವು. ಅಂತಹ ಪ್ರಯೋಗವೂ ಇದೆ._ _ಸಂಸ್ಕೃತದ ಸೊಗಸೇ ಅದು. ಪದಗಳು ಯಾವ ಸಂದರ್ಭದಲ್ಲಿ ಬಳಕೆಯಾಗಿವೆ ಎಂಬುದನ್ನು ಗಮನಿಸಿ ಅರ್ಥವನ್ನು ನಿರ್ಣಯಿಸಬೇಕು. ಹಾಗಿಲ್ಲದೆ ಸುಮ್ಮನೆ ಬಳಕೆಯ ...

ರಾಮಾಯಣ ೧೭೧

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೧🏝📖      *ಮಿಥಿಲಾಧಿಪತಿಂ ಶೂರಂ ಜನಕಂ ಸತ್ಯವಿಕ್ರಮಮ್ | ಪೂರ್ವ ಸಂಬಂಧಿನಂ ಜ್ಞಾತ್ವಾ ತತಃ ಪೂರ್ವಂ ಬ್ರವೀಮಿ ತೇ || ತಥಾ ಕಾಶೀಪತಿಂ ಸ್ನಿಗ್ಧಂ ಸತತಂ ಪ್ರಿಯವಾದಿನಮ್ | ತಥಾ ಕೇಕಯರಾಜಾನಂ  ವೃದ್ಧಂ ಪರಮಧಾರ್ಮಿಕಮ್ | ಅಂಗೇಶ್ವರಂ ಮಹಾಭಾಗಂ ರೋಮಪಾದಂ ಸುಸಸ್ಕೃತಮ್ | ತಥಾ ಕೋಸಲರಾಜಾನಂ ಭಾನುಮಂತಂ ಸುಸತ್ಕೃತಮ್ | ಮಗಧಾಧಿಪತಿಂ ಶೂರಂ ಸರ್ವಶಾಸ್ತ್ರವಿಶಾರದಮ್ || ಪ್ರಾಚೀನಾನ್ಸಿಂಧುಸೌವೀರಾನ್ಸೌರಾಷ್ಟ್ರೇಯಾಂಶ್ಚ ಪಾರ್ಥಿವಾನ್ | ದಾಕ್ಷಿಣಾತ್ಯಾನ್ನರೇಂದ್ರಾಶ್ಚ ಸಮಸ್ತಾನಾನಯಸ್ವ ಹ ||* _ವಸಿಷ್ಠರು ಸುಮಂತ್ರನಿಗೆ ಆಮಮತ್ರಣದ ಜವಾಬ್ದಾರಿ ನೀಡುತ್ತಿದ್ದಾರೆ. ಮೊದಲಿಗೆ ವೇದ-ವೇದಾಂಗ ನಿಷ್ಣಾತನೂ- ಸಕಲಶಾಸ್ತ್ರ ಪಾರಂಗತನೂ-ಮಹಾಪರಾಕ್ರಮಿಯೂ-ಶೂರನೂ ಆದ ದೂರದ ಹಿಂದಿನ ಸಂಬಂಧಿಯೂ ಆದ ಜನಕನನ್ನು ಆಹ್ವಾನಿಸು. ಇಲ್ಲಿ ಜನಕನಿಗೆ ಸಂಬಂಧ ಇದ್ದದ್ದು ಹಿಂದೆ ಯಾವುದೋ ಕಾಲದಲ್ಲಿ. ಈ ಕಾಲದಲ್ಲಿ ಮೊದಲು ಅವನನ್ನೇ ಕರೆಯಲು ಕಾರಣ ಅವನ ಯೋಗ್ಯತೆ. ಜೀವನ್ಮುಕ್ತನೆಂಬ ಹೆಗ್ಗಳಿಕೆ, ಶಾಸ್ತ್ರ-ಶಸ್ತ್ರ ಎರಡರಲ್ಲೂ ಪ್ರಾವೀಣ್ಯ, ವೇದಾದಿಗಳಲ್ಲೂ ಅಪಾರ ಜ್ಞಾನ ಇವೇ ಮುಖ್ಯ ಕಾರಣ. ಯಾವುದಾದರೂ ಕರ್ಮಕ್ಕೆ ಆಮಂತ್ರಣ ಕೊಡುವಾಗ ಮೊದಲು ಅತ್ಯಂತ ಯೋಗ್ಯರು ಯಾರು ಅವರಿಗೆ ಕರೆಹೇಳಬೇಕು. ಅನಂತರ ಉಳಿದವರಿಗೆ.ಜನಕನಷ್ಟು ಯೋಗ್ಯ ವ್ಯಕ್ತಿ ಹುಡುಕಿದರೂ ಸಿಗುವುದು ಕಷ್ಟ. ಅನಂತರ ಆ ಕಾಲದ ಪ್ರಸಿದ್ಧ...

ಧರ್ಮಾಚರಣೆ ೧೨೩

ಧರ್ಮಾಚರಣೆ-೧೨೩ ವಸೇತ್ಸ ನರಕೇ ಘೋರೇ ದಿನಾನಿ ಪಶುರೋಮಭಿಃ| ಸಂಮಿತಾನಿ ದುರಾಚಾರೋ ಯೋ ಹಂತ್ಯವಿಧನಾಪಶೂನ್ || ಯಾಜ್ಞವಲ್ಕ್ಯ ಸ್ಮೃತಿ|| ಮಾಂಸವೇ ಆಹಾರಪದ್ಧತಿಯಾಗಿದ್ದರೂ ದೇವರಿಗೆ ನಿವೇದಿಸಿಯೇ ತಿನ್ನಬೇಕು. ಸಸ್ಯಾಹಾರಿಗಳಿಗೆ ತಿನ್ನುವುದೇ ನಿಷಿದ್ಧ. ದೇವ-ಅತಿಥಿ ಉದ್ದೇಶವಿಲ್ಲದೆ ಸುಮ್ಮನೆ ತಿನ್ನಬೇಕೆಂದು ಯಾರು ಪಶುಗಳನ್ನು ನಿರ್ದಯವಾಗಿ ಕೊಲ್ಲುವನೋ ಅಂತಹವರು ಪಶುಗಳ ರೋಮದಷ್ಟು ದಿನಗಳ ಕಾಲ ಘೋರ ನರಕದಲ್ಲಿ ಇರುತ್ತಾರೆ. ಹಾಗಾಗಿ ಕೊಲ್ಲುವ ಮುನ್ನ ನರಕದ ಎಚ್ಚರ ಸದಾ ಇರಬೇಕು‌. ನಮ್ಮ ಆಹಾರಪದ್ಧತಿ, ನಾವು ಹೇಗೆ ಬೇಕಾದರೂ ಯಾವಾಗ ಬೇಕಾದರೂ ತಿನ್ನುತ್ತೇವೆ ಎಂಬುದು ಯಾವ ಆಹಾರಕ್ಕೂ ಸಲ್ಲದ ವಿಷಯ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೨

ಧರ್ಮಾಚರಣೆ-೧೨೨ ಪಂಚಪಿಂಡಾನನುದ್ಧೃತ್ಯ ನ ಸ್ನಾಯಾತ್ಪರವಾರಿಷು | ಸ್ನಾಯಾನ್ನದೀ ದೇವಖಾತ ಹ್ರದಪ್ರಸಶ್ರವಣೇಷು ಚ || ಯಾಜ್ಞವಲ್ಕ್ಯ ಸ್ಮೃತಿ|| ಹೊರಗೆ ಎಲ್ಲಾದರೂ ಸ್ನಾನ ಮಾಡುವಾಗ ಐದು ಮುಷ್ಟಿಯಷ್ಟು ಮಣ್ಣು ಅಥವಾ ಕೆಸರು ತೆಗೆದು ನೀರನ್ನು ಸ್ವಚ್ಛ ಮಾಡಿ ಸ್ನಾನ ಮಾಡಬೇಕು. ಇಲ್ಲದಿದ್ದರೆ ಅಲರ್ಜಿ, ಕೀಟಬಾಧೆ ಮೊದಲಾದವು ತಲೆದೋರೀತು. ನದಿಗಳಲ್ಲಿ, ಸಮುದ್ರಕ್ಕೆ ನದಿ ಸೇರುವಾಗಿನ ಹಿನ್ನೀರು, ಜಲಾಶಯ, ಸರೋವರಗಳಲ್ಲಿ ಈ ನಿಯಮ ಇಲ್ಲ. ಆದರೆ ಉಳಿದೆಡೆ ಈ ವಿಷಯವು ಸಾಕಷ್ಟು ಉಪಕಾರಿ ಎನಿಸುವುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೧

ಧರ್ಮಾಚರಣೆ-೧೨೧ ಮಾತೃಪಿತ್ರತಿಥಿ ಭ್ರಾತೃಜಾಮಿಸಂಬಂಧಿ ಮಾತುಲೈಃ | ವೃದ್ಧಬಾಲಾತುರಾಚಾರ್ಯ ವೈದ್ಯಸಂಶ್ರಿತಬಾಂಧವೈ || ಋತ್ವಿಕ್ಪುರೋಹಿತಾಪತ್ಯ ಭಾರ್ಯಾದಾಸ ಸನಾಭಿಭಿಃ | ವಿವಾದಂ ವರ್ಜಯಿತ್ವಾ ತು ಸರ್ವಾಂಲ್ಲೋಕಾಜ್ಜಯೇದ್ಗೃಹೀ || ಯಾಜ್ಞವಲ್ಕ್ಯ ಸ್ಮೃತಿ|| ತಂದೆ-ತಾಯಂದಿರು, ಮನೆಗೆ ಬಂದ ಅತಿಥಿ, ಸಹೋದರ-ಸಹೋದರಿಯರು, ಸಂಬಂಧಿಕರು, ಮಾವ, ಹಿರಿಯರು, ಸಣ್ಣ ಮಕ್ಕಳು, ಅಶಕ್ತರು, ಗುರುಗಳು, ವೈದ್ಯರು, ನಮ್ಮನ್ನು ಆಶ್ರಯಿಸಿದ ಬಂಧುಗಳು, ಪುರೋಹಿತರು, ಸ್ವಂತ ಮಕ್ಕಳು, ಪತ್ನಿ, ಸೇವಕರು ಹಾಗೂ ಕುಟುಂಬದವರ ಜೊತೆಗೆ ಜಗಳ ಅಥವಾ ಕಲಹ ಮಾಡದಿದ್ದರೆ ಅಂತಹ ವ್ಯಕ್ತಿಗಳು ಹದಿನಾಲ್ಕು ಲೋಕಗಳನ್ನು ಗೆದ್ದು ಮೋಕ್ಷ ಪಡೆಯುವರು. ನಮ್ಮ ಬದುಕು ಕ್ಷಣಿಕ. ಹಾಗಾಗಿ ಇದ್ದಷ್ಟು ಕಾಲ ಯಾರೊಡನೆಯೂ ಕಲಹ ಮಾಡದೇ ಸಂತೋಷದಿಂದ ಸಮಾಧಾನದಿಂದ ಕಳೆಯವಲ್ಲಿ ತಾತ್ಪರ್ಯವಿದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೨೦

ಧರ್ಮಾಚರಣೆ-೧೨೦ ಕರ್ಮಣಾ ಮನಸಾ ವಾಚಾ ಯತ್ನಾದ್ಧರ್ಮಂ ಸಮಾಚರೇತ್ | ಅಸ್ವರ್ಗ್ಯಂ ಲೋಕವಿದ್ವಿಷ್ಟಂ ಧರ್ಮ್ಯಮಪ್ಯಾಚರೇನ್ನ ತು || ಯಾಜ್ಞವಲ್ಕ್ಯ ಸ್ಮೃತಿ|| ನಮ್ಮ ಕಾರ್ಯಗಳಲ್ಲಿ, ನಮ್ಮ ಯೋಜನೆಗಳಲ್ಲಿ, ನಮ್ಮ ಮಾತುಗಳಲ್ಲಿ ಪ್ರಯತ್ನಪೂರ್ವಕವಾಗಿ ಧರ್ಮವನ್ನು ಅಳವಡಿಸಿಕೊಳ್ಳಬೇಕು. ಉ: ಇನ್ನೊಬ್ಬರಿಗೆ ಹಿಂಸೆ ಆಗುವ ಕರ್ಮ ಬಿಡುವುದು, ಯಾರನ್ನೂ ನಿಂದಿಸದಿರುವುದು, ಯಾರ ಬಗ್ಗೆಯೂ ಕೆಟ್ಟ ವಿಚಾರ ಮಾಡದಿರುವುದು ಮೊದಲಾದವು. ಸ್ವರ್ಗಾದಿ ಕಾರಣವಲ್ಲದ ಹಾಗೂ ಲೋಕನಿಂದ್ಯ ಕರ್ಮಗಳನ್ನು ಧರ್ಮದ ಹೆಸರಿನಲ್ಲಿ ಎಂದಿಗೂ ಮಾಡಬಾರದು. ಉ: ಗುರು ಹಿರಿಯರ ಅಪಮಾನ, ಬಹಿರಂಗವಾಗಿ ಮಲಮೂತ್ರ ವಿಸರ್ಜನೆ ಮೊದಲಾದವು. ಧರ್ಮದ ತಿರುಳನ್ನು ತಿಳಿದೇ ನಮ್ಮ ಕರ್ಮಗಳನ್ನು ರೂಢಿಸಿಕೊಳ್ಳಬೇಕೇ ಹೊರತು ಯಾರೋ ಮಾಡುತ್ತಿದ್ದಾರೆಂದು ಅವರ ಅಂಧಾನುಕರಣೆ ಮಾಡಿದರೆ ಅದು ಎಂದಿಗೂ ಶ್ರೇಯಸ್ಕರವಾಗದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೧೯

ಧರ್ಮಾಚರಣೆ-೧೧೯ ನ ಸಂಶಯಂ ಪ್ರಪದ್ಯೇತ ನಾಕಸ್ಮಾದಪ್ರಿಯಂ ವದೇತ್ | ನಾಹಿತಂ ನಾನೃತಂ ಚೈವ ನ ಸ್ತೇನಃ ಸ್ಯಾನ್ನ ವಾರ್ಧುಷೀ || ಯಾಜ್ಞವಲ್ಕ್ಯ ಸ್ಮೃತಿ||  ಒಂದು ವಿಷಯ ತುಂಬಾ ಪ್ರಾಮಾಣಿಕವಾಗಿ ಇದೆ ಎಂದಾದಾಗ ಮತ್ತೆ ಮತ್ತೆ ಸಂಶಯ ವ್ಯಕ್ತಪಡಿಸಬಾರದು.‌ ಉ: ಮಗುವಿನ ನಿಷ್ಕಲ್ಮಶ ನಗು. ಕಾರಣವಿಲ್ಲದೆ ಕಠೋರವಾದ ಮತ್ತು ಸಿಟ್ಟುಬರಿಸುವಂತಹ ಮಾತುಗಳನ್ನು ಎಂದಿಗೂ ಆಡಬಾರದು. ಒಬ್ಬರಿಗೆ ಪ್ರಿಯವಾಗದ ಹಾಗೂ ಅಸತ್ಯವಾದ ಮಾತು ಎಂದಿಗೂ ಸಲ್ಲದು. ಪರರ ಧನ-ವಸ್ತು-ಪುಸ್ತಕ ಏನೇ ಸಣ್ಣದಿರಲಿ ದೊಡ್ಡದಿರಲಿ ಕಳ್ಳತನ ಮಾಡಬಾರದು. ಒಂದು ರೂಪಾಯಿ ಕದ್ದರೂ ಚಿನ್ನ ಕದ್ದರೂ ಪಾಪ ಕಳ್ಳತನಕ್ಕೇ ಹೊರತು ವಸ್ತುವನ್ನು ಆಧರಿಸಿ ಅಲ್ಲ. ಇನ್ನೊಬ್ಬರಿಗೆ ಧನ ನೀಡಿ ಅದರ ಬಡ್ಡಿಯಿಂದ ಜೀವನ ಮಾಡಬಾರದು. ಬದುಕಲು ಯಾವ ಮಾರ್ಗವೂ ಇಲ್ಲದಿದ್ದಾಗ ಮಾತ್ರ ಬಡ್ಡಿಯ ಜೀವನ ಅಂದರೆ ವಾರ್ಧುಷಿ ಆಗಬಹುದು. ಉಳಿದ ಸಮಯದಲ್ಲಿ ಅಂತಹ ಬದುಕು ರಕ್ತ ಹೀರಿ ನಡೆಸುವ ಬದುಕಾಗುವುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೧೮

ಧರ್ಮಾಚರಣೆ-೧೧೮ ರಾಜಾಂತೇವಾಸಿಯಾಜ್ಯೇಭ್ಯಃ ಸೀದನ್ನಿಚ್ಛೇದ್ಧನಂ ಕ್ಷುಧಾ | ದಂಭಿಹೈತುಕಪಾಖಂಡಿ ಬಕವೃಂತ್ತೀಂಶ್ಚ ವರ್ಜಯೇತ್ || ಯಾಜ್ಞವಲ್ಕ್ಯ ಸ್ಮೃತಿ|| ನಮ್ಮ ಉದ್ಯೋಗಕ್ಕೆ ತಕ್ಕುದಾದ ವೇತನವನ್ನು ಆಳುವ ಸರ್ಕಾರ ಅಥವಾ ಸಂಸ್ಥೆಯಿಂದ, ನಮ್ಮ ಶಿಷ್ಯರಿಂದ, ಪ್ರಾಮಾಣಿಕವಾಗಿ ಧನಿಕನಾದವನಿಂದ ಬಯಸಬಹುದು. ಜನರ ಮನರಂಜನೆಗಾಗಿ ಏನನ್ನು ಬೇಕಾದರೂ ಮಾಡುವ ದಂಭಿಯ ಬಳಿ, ಸಂಸ್ಕೃತಿಯ ಬಗ್ಗೆ ಸಂಶಯ ಹುಟ್ಟಿಸುವ ಹೇತುಕನ ಬಳಿ, ಸಮಾಜ ಒಪ್ಪದ ವರ್ತನೆ ತೋರುವ ಪಾಖಂಡಿಯ ಬಳಿ, ಕಪಟ ವೇಷ ಧರಿಸಿ ಮೋಸ ಎಸಗುವ ವ್ಯಕ್ತಿಯ ಬಳಿ ಎಂದಿಗೂ ಬಯಸಬಾರದು. ಉಪವಾಸ ಇದ್ದರೂ ತೊಂದರೆ ಇಲ್ಲ, ಇಂತಹವರ ಬಳಿ ಸ್ವೀಕರಿಸಿದರೆ ನಮ್ಮ ಪುಣ್ಯವೆಲ್ಲ ಹ್ರಾಸವಾದೀತು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ಧರ್ಮಾಚರಣೆ ೧೧೭

ಧರ್ಮಾಚರಣೆ-೧೧೭ ಕುಶೂಲಕುಂಭೀಧಾನ್ಯೋ ವಾ ತ್ರ್ಯಾಹಿಕೋsಶ್ವಸ್ತನೋಪಿ ವಾ | ಜೀವೇದ್ವಾಪಿಶಿಲೋಂಛೇನ              ಶ್ರೇಯಾನೇಷಃ ಪರಃ ಪರಃ || ಯಾಜ್ಞವಲ್ಕ್ಯ ಸ್ಮೃತಿ|| ಕುಟುಂಬಕ್ಕೆ ಹನ್ನೆರಡು ದಿನ ಸಾಲುವಷ್ಟು ಧನಸಂಗ್ರಹ ಕುಶೂಲ, ಆರು ದಿನಕ್ಕೆ ಸಾಕಾಗುವಷ್ಟು ಕುಂಭ, ಮೂರು ದಿನಕ್ಕೆ ಸಾಕಾಗುವಷ್ಟು ತ್ರ್ಯಾಹಿಕ, ಒಂದು ದಿನಕ್ಕೂ ಸಾಕಾಗದಿದ್ದರೆ ಅಶ್ವಸ್ತನ, ರೈತರು ಬೀಳಿಸಿದ ತೆನೆ ಆರಿಸಿಕೊಂಡು ಬದುಕುವುದು ಶೀಲ, ಬಿದ್ದ ಕಾಳು ಆರಿಸಿಕೊಂಡು ಬದುಕುವುದು ಉಂಛ. ಇವುಗಳಲ್ಲಿ ಮುಂದುಮುಂದಿನದು ಅತ್ಯಂತ ಶ್ರೇಷ್ಠ. ಇವುಗಳ ಒಟ್ಟು ತಾತ್ಪರ್ಯ ಬದುಕಲು ಬೇಕಾಗುವಷ್ಟು ಸಂಪತ್ತಿನ ಸಂಗ್ರಹ ಶ್ರೇಷ್ಠ. ಮಕ್ಕಳು ಮೊಮ್ಮಕ್ಕಳು ಊರಿನವರೆಲ್ಲಾ ತಿನ್ನುವಷ್ಟು ಸಂಗ್ರಹ ಮಾಡುವ ಧನದ ದುರಾಸೆ ಎಂದಿಗೂ ವರ್ಜ್ಯ. ಒಂದು ವರ್ಷಕ್ಕೆ ಮೀರುವಷ್ಟು ಸಂಪತ್ತು ಶೇಖರಿಸಿದರೆ ಸೋಮಯಾಗ ಮಾಡಬೇಕೆನ್ನುತ್ತದೆ ಸ್ಮೃತಿ. ಹಾಗಾಗಿ ಧನಸಂಗ್ರಹದ ಬುದ್ಧಿಗಿಂತ ದಾನಬುದ್ಧಿ ಸದಾ ಶ್ರೇಯಸ್ಕರ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com

ರಾಮಾಯಣ ೧೭೦

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೦🏝📖  *ಯಥೋಕ್ತಂ ತತ್ಸುವಿಹಿತಂ ನ ಕಿಂಚಿತ್ಪರಿಹೀಯತೇ | ಯಥೋಕ್ತಂ ತತ್ಕರಿಷ್ಯಾಮೋ ನ ಕಿಂಚಿತ್ಪರಿಹಾಸ್ಯತೇ ||* _ವಸಿಷ್ಠರು ಎಲ್ಲಾ ಮಂತ್ರಿವರ್ಗದವರಿಗೆ ಹಾಗೂ ಪ್ರಮುಖರಿಗೆ ಆದೇಶ ನೀಡಿದಾಗ ಅವರ ಮಾತನ್ನು ಅಂಗೀಕರಿಸಿದ ಪರಿ. ಯಜ್ಞಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ನಿಯುಕ್ತರಾದವರನ್ನು ಕಾಲಕಾಲಕ್ಕೆ ಸರಿಯಾಗಿ ಉಪಚರಿಸಬೇಕು. ಅನಾಹೂತರಾಗಿ ಅಂದರೆ ಕರೆಯದೇ ಬಂದವರನ್ನೂ ದಕ್ಷಿಣೆ ಹಾಗೂ ಮೃಷ್ಟಾನ್ನಭೋಜನಗಳಿಂದ ತೃಪ್ತಿಪಡಿಸಬೇಕು. ಎಲ್ಲಾ ಕಾರ್ಯಗಳನ್ನೂ ಸುವಿಹಿತವಾಗಿ ಅಂದರೆ ಕ್ರಮಪ್ರಕಾರವಾಗಿ ಯಾವುದೂ ಲೋಪವಾಗದಂತೆ ಮುಖ್ಯವಾಗಿ ಯಾರೊಬ್ಬರಿಗೂ ಅಸಮಾಧಾನ ಆಗದ ರೀತಿಯಲ್ಲಿ ನಿರ್ವಹಿಸಬೇಕೆಂದು ವಸಿಷ್ಠರು ನುಡಿದಾಗ ಉಳಿದವರಾಡುವ ಮಾತು- ಯಾವ ಲೋಪ ಉಂಟಾಗದಂತೆ ನೋಡಿಕೊಳ್ಳುವೆವು. ಯಾರೊಡನೆಯೂ ಪರಿಹಾಸವನ್ನಾಗಲೀ, ವಿನೋದವನ್ನಾಗಲೀ, ಯಾವ ವಿಷಯದಲ್ಲಿ ಆದರೂ ಉದಾಸೀನಮನೋಭಾವವನ್ನಾಗಲೀ ತಾಳದೆ ಶ್ರದ್ಧೆಯಿಂದ ಮಾಡುತ್ತೇವೆ. ಒಂದು ದೊಡ್ಡ ಸಮ್ಮೇಳನ, ಕಾರ್ಯಕ್ರಮ ನಡೆಯುವಾಗ ಯಾರೋ ಒಂದಷ್ಟು ತಿಂದರು, ಇನ್ನಾರೋ ಉಪವಾಸ ಬಿದ್ದರು ಎಂದಾಗುವುದು ಸಹಜ. ನಮ್ಮ ಸಾಂಸ್ಕೃತಿಕ ಅಥವಾ ಸಾಹಿತ್ಯಿಕ ಅಥವಾ ರಾಜಕೀಯ ಕಾರ್ಯಕ್ರಮಗಳಿಗೆ ಒಂದು ನಿಶ್ಚಿತ ಉದ್ದೇಶ, ಶ್ರದ್ಧೆ, ಲೋಕಕಲ್ಯಾಣ ಯಾವುದೂ ಇರುವುದಿಲ್ಲ. ಕೀರ್ತಿ, ಪ್ರತಿಷ್ಠೆ ಆಯೋಜಕರಿಗೆ ಮುಖ್ಯವಾದರೆ ಹಿಂಬಾಲಕರಿಗೆ ಅಥವಾ ಸಹಕಾರಿಗಳಿಗೆ ಸಿಕ್ಕಿದಷ್ಟು ದೋಚುವ ಹಂಬ...

ಅನುವಾದಿತ ಕಥೆ ೩೨

अनूदित कथावलिः -३२ श्रेष्ठिनः विवेकः  एकस्मिन् नगरे एकः प्रसिद्धः श्रेष्ठी आसीत् । सः बहुवत्सरेभ्यः आपणे व्यापारं करोति स्म। तस्य आपणे सर्वदा जनसम्मर्दः । तन्नगरस्थः एकः युवा वाणिज्यविद्यां अधीत्य स्नातको भूत्वा आपणम्  आरब्धुं निश्चितवान् । श्रेष्ठिनः आपणे जनसम्मर्दं दृष्ट्वा तेनैवं चिन्तितम् - यदि अहमत्रैव समीपे आपणं स्थापयामि तदा ममापि यशः लभेदिति।  एवं विचार्य अचिरादेव तदापणम् अभितः एव स्वस्य  आपणं स्थापयित्वा व्यापारः आरब्धः तेन  । सप्ताहानन्तरं तेन चिन्तितम्- तस्मिन् आपणे जनाः यथापूर्वं गच्छन्ति, अत्र तु न्यूनाः इति। तथा च मया   को$पि उपायः अनुसरणीयः इति। अध्ययन काले गुरुणा सः उपदिष्टः एवम्   'वस्तूनां मौल्यस्य न्यूनताकरणेन प्रथमं व्यापारस्य अभिवृद्धिः तथा इतरैः  स्पर्धा योजयितुं शक्यते इति। तदनुसृत्य श्रेष्ठिनः आपणे दशरूप्यकपरिमितस्य नारिकेलस्य अष्टरूप्यकाणि निर्धारितवान् । श्रेष्ठी अपि अष्टरूप्यकाणि स्थापितवान् नारिकेलस्य। ततः चिन्तितः युवा न आयः न व्ययः इति नीतिः प्रदर्शितुकामः तस्य मूलरूप्यकाणि नाम षड्रूप्यकाणि निश्चितवान्।...

ರಾಮಾಯಣ ೧೬೯

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೯🏝📖 *ತತೋಬ್ರವೀದ್ವಿಜಾನ್ನ್ವೃದ್ಧಾನ್ಯಜ್ಞಕರ್ಮಸು ನಿಷ್ಠಿತಾನ್ | ಸ್ಥಾಪತ್ಯೇ ನಿಷ್ಠಿತಾಂಶ್ಚೈವ ವೃದ್ಧಾನ್ಪರಮಧಾರ್ಮಿಕಾನ್ || ಕರ್ಮಾಂತಿಕಾನ್ ಶಿಲ್ಪಕರಾನ್ವರ್ಧಕೀನ್ಖನಕಾನಪಿ | ಗಣಕಾನ್ ಶಿಲ್ಪಿನಶ್ಚೈವ ತಥೈವ ನಟನರ್ತಕಾನ್ ||* _ವಸಿಷ್ಠರಲ್ಲಿ ನಿವೇದಿಸಿಕೊಂಡ ನಂತರ ರಾಜನು ಅನೇಕ ಜನರನ್ನು ಆಮಂತ್ರಿಸಿದನು‌. ಬ್ರಹ್ಮನನ್ನು ತಿಳಿದ ಜ್ಞಾನಿಗಳನ್ನೂ, ಅನೇಕ ಯಜ್ಞಗಳಲ್ಲಿ ಪಾಲ್ಗೊಂಡ ಅನುಭವಿಗಳನ್ನೂ, ಅಶ್ವಮೇಧ ಶ್ರೌತ ಪ್ರಕ್ರಿಯೆಗನುಸಾರ ನಡೆಯುವ ಯಾಗವಾದ್ದರಿಂದ ಶ್ರೌತಕರ್ಮಪರಿಣತರನ್ನೂ, ಯಜ್ಞಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬೇರೆ ಬೇರೆ ದ್ರವ್ಯಗಳನ್ನು ತಂದುಹಾಕುವ ವ್ಯಾಪಾರೀ ವರ್ಗದವರನ್ನೂ, ಪರಮ ಧಾರ್ಮಿಕರನ್ನೂ, ಯಜ್ಞದ ಕೊನೆಯವರೆಗೂ ಅನೇಕ ಕೆಲಸಗಳನ್ನು ಮಾಡುವ ಕಾರ್ಮಿಕರನ್ನೂ, ಲಕ್ಷಾಂತರ ಸಂಖ್ಯೆಯ ಇಟ್ಟಿಗೆಗಳನ್ನು ನಿರ್ಮಿಸಲು ಶಿಲ್ಪಿಗಳನ್ನೂ, ಯಜ್ಞದಲ್ಲಿ ಬಳಸುವ ಬೇರೆ ಬೇರೆ ಬಗೆಯ ಮರದ-ಮಣ್ಣಿನ-ಲೋಹದ ಪಾತ್ರೆಗಳನ್ನು ನಿರ್ಮಿಸಲು ಬಡಗಿಗಳನ್ನೂ, ಒಂದೊಂದು ಕರ್ಮಕ್ಕೆ ಸರಿಯಾಗಿ ಮುಹೂರ್ತ ನೋಡಲು ಬಹುಶ್ರುತರಾದ ಜ್ಯೋತಿಷಿಗಳನ್ನೂ, ಚಿತ್ರಗಳನ್ನು ಬರೆದು ಜನರನ್ನು ರಂಜಿಸಲು ಚಿತ್ರಕಾರರನ್ನೂ, ಅಭಿನಯ ನರ್ತನ ಗಾನದಲ್ಲಿ ಪರಿಣತರಾದ ಸಾವಿರಾರು ನಟರನ್ನೂ ಕರೆದು ಯಜ್ಞದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗುವಂತೆ ನಿವೇದಿಸಿಕೊಂಡನು‌._ _ಒಂದು ಯಜ್ಞ ಎಂದರೆ ಸಾಮಾನ್ಯ ಕಾರ್ಯವಲ್ಲ. ಸಮಾಜ...

ಚಾರುದತ್ತ ೨೦

👳‍♀ಚಾರುದತ್ತ ಬೆಳಕು- ೨೦👳‍♀ *ಕೃತ್ವಾ ನಿಶಾಯಾಂ ವಚನೀಯದೋಷಂ ನಿದ್ರಾಂ ಚ ಹಿತ್ವಾ ತಿಮಿರಂ ಭಯಂ ಚ | ಸ ಏವ ಸೂರ್ಯೋದಯಮಂದವೀರ್ಯಃ ಶನೈರ್ದಿವಾಚಂದ್ರ ಇವಾಸ್ಮಿ ಭೀತಃ ||* _ಚಾರುದತ್ತನ ಮನೆಯಲ್ಲಿ ಕಳ್ಳತನ ಮಾಡಲು ಹೋದ ಇವನು ವಿದೂಷಕನ ಮೂರ್ಖತನದಿಂದ ಚಿನ್ನದ ನಾಣ್ಯದ ಚೀಲವನ್ನೇ ಪಡೆದು ಹೊರಬಂದಿದ್ದಾನೆ. ಕಳ್ಳರಿಗೆ ರಾತ್ರಿ ಅಪಾರ ಧೈರ್ಯ. ಅವರ ಸಾಹಸವೆಲ್ಲವೂ ಕತ್ತಲೆಯಲ್ಲಿ ಮಾತ್ರ. ಬೆಳಕು ಹರಿದಾಗ ಪುಕ್ಕಲರು ಅವರು. ಅದನ್ನೇ ಕವಿ ವರ್ಣಿಸಿದ್ದಾನೆ. ರಾತ್ರಿ ಹೊತ್ತು ನಿದ್ರೆ ಬಿಟ್ಟು ಕತ್ತಲೆಯ ಭಯವನ್ನು ತ್ಯಜಿಸಿ ಕಳ್ಳತನವನ್ನೇನೋ ಸುಲಭವಾಗಿ ಮಾಡಿದೆನು. ಆದರೆ ಬೆಳಕು  ಹರಿಯುತ್ತಿದ್ದಂತೆ ಹೆದರಿಕೆ ಉಂಟಾಗುತ್ತಿದೆ. ಸೂರ್ಯನ ಕಿರಣಗಳು ವಾತಾವರಣವನ್ನು ಪ್ರವೇಶಿಸಿದಂತೆ ಶಕ್ತಿಯೆಲ್ಲ ಉಡುಗಿಹೋಗಿ ನಿಧಾನಕ್ಕೆ ಹೆಜ್ಜೆ ಇಡುತ್ತಾ ಹಗಲಿನ ಚಂದ್ರನಂತೆ ಸುಮ್ಮನೆ ಹೆಸರಿಗೆ ಮಾತ್ರ ಇದ್ದೇನೆ. ನನ್ನದಾದ ಧೈರ್ಯ ಸಾಹಸ ಎಲ್ಲವೂ ಕ್ಷೀಣವಾಗಿದೆ. ಯಾರಾದರೂ ಗುರುತಿಸಿದರೆ ಎಂಬ ಭಯವೂ ಕಾಡುತ್ತಿದೆ. ಹಗಲಿನಲ್ಲಿ ಚಂದ್ರನು ಎಷ್ಟು ದೊಡ್ಡದಾಗಿ ಇದ್ದರೂ ಸೂರ್ಯನ ಕಾಂತಿಯ ಎದುರು ಅವನು ನಿಸ್ತೇಜ. ಅಂತೆಯೇ ಮೋಸದಿಂದ ಕಾರ್ಯ ಕತ್ತಲಿನಲ್ಲಿ ಅಥವಾ ಉಳಿದವರಿಗೆ ತಿಳಿಯದಂತೆ ಎಷ್ಟು ಧೈರ್ಯದಿಂದ ಮಾಡಿದರೂ ಎಲ್ಲರೆದುರಿಗೆ ಬೆಳಕಿನಲ್ಲಿ ಏನಾದರೂ ಮಾಡಬೇಕೆಂದರೆ ಅದಕ್ಕೆ ಪ್ರಾಮಾಣಿಕವಾಗಿ ಧೈರ್ಯ ಬೇಕಾಗುತ್ತದೆ. ಮೋಸ-ವಂಚನೆಗೆ ಬೆಳಕು ಅಥವಾ ಜನಸಮೂಹ ಎಂದಿಗೂ ವಿರುದ್...

ಪದಶಕ್ತಿ ೪೧

🏹*ಪದಶಕ್ತಿ* ---೪೧🌄 *ರಾಕ್ಷಸ* _ರಕ್ಷ ಪಾಲನೇ ಎಂಬ ಧಾತುವಿನಿಂದ ಹುಟ್ಟಿದ ಪದ. ರಕ್ಷತಿ ಅಸ್ಮಾತ್ ಇವನಿಂದ ಅಥವಾ ಇವರಿಂದ ರಕ್ಷಿಸಲ್ಪಟ್ಟಿದೆ ಎಂಬ ಅರ್ಥದಲ್ಲಿ ರಾಕ್ಷಸ ಶಬ್ದ ಹುಟ್ಟಿರುವಂತಹದು._ _ಬ್ರಹ್ಮನು ಸೃಷ್ಟಿ ಕಾಲದಲ್ಲಿ ಅತ್ಯಂತ ಕೋಪ ಮತ್ತು ಹಸಿವಿನಿಂದ ತತ್ತರಿಸಲು ಹುಟ್ಟಿಕೊಂಡವರು ಹೇತಿ ಮತ್ತು ಪ್ರಹೇತಿ ಎಂಬ ಈರ್ವರು ರಾಕ್ಷಸರು. ರಕ್ಷಣೆಯ ಭಾರವನ್ನು ಹೊತ್ತವರು ರಾಕ್ಷಸರಾದರು. ಪ್ರಹೇತಿ ತಪಸ್ಸಿಗೆ ಹೊರಟನು. ಹೇತಿಯು ಕಾಲನ ಮಗಳಾದ ಭಯೆಯನ್ನು ಕೈಹಿಡಿದು ಅದೇ ಕಾಯಕ ಕೈಗೊಂಡನು._ _ಅತಿಮಾನುಷ ಪ್ರವೃತ್ತಿಯುಳ್ಳವರನ್ನು ರಾಕ್ಷಸರೆಂದು ಕರೆಯುವ ರೂಢಿ ಇದೆ. ಯಾರಾದರೂ ಅತಿಯಾಗಿ ತಿನ್ನುತ್ತಿದ್ದರೆ, ನಿದ್ರಿಸುತ್ತಿದ್ದರೆ ಹಾಗೂ ಇಡೀ ದಿನ ಕೆಲಸ ಮಾಡುತ್ತಿದ್ದರೆ ಅವರನ್ನು ರಾಕ್ಷಸರೆಂದು ಕರೆಯುವುದು ರಾಕ್ಷಸರ ಅತಿಶಯ ಸಾಮರ್ಥ್ಯ ಸೂಚಿಸಲು. ಸಾಮಾನ್ಯರಿಗಿಂತ ಹೆಚ್ಚಿನ ಸಾಮರ್ಥ್ಯ ರಾಕ್ಷಸರ ವೈಶಿಷ್ಟ್ಯ._ _ಇದೇ ಶಬ್ದಕ್ಕೆ ಙೀಷ್ ಪ್ರತ್ಯಯ ಬಂದರೆ ಹೆಣ್ಣು ರಾಕ್ಷಸಿ ಎಂದು ಅಗುತ್ತದೆ._ _ವಿವಾಹದಲ್ಲಿ ಒಂದು ಬಗೆ ರಾಕ್ಷಸ ವಿವಾಹ. ಕನ್ಯೆಯ ಬಂಧುಗಳನ್ನು ಹೊಡೆದು ಬಡಿದು ಅಳುತ್ತಿರುವ ಕನ್ಯೆಯನ್ನು ಹೊತ್ತೊಯ್ದು ವಿವಾಹವಾದರೆ ಅದು ರಾಕ್ಷಸ ವಿವಾಹ._ _ನವನಂದರ ಮಂತ್ರಿಯು ತನ್ನ ಕೆಲಸದಿಂದಾಗಿ ರಾಕ್ಷಸ ಎಂದು ಹೆಸರು ಸಂಪಾದಿಸಿದ್ದನು. ಅಮಾತ್ಯ ಎಂದರೆ ಮಂತ್ರಿ. ಅಮಾತ್ಯರಾಕ್ಷಸ ಎಂದು ಅವನಿಗೆ ಜನರಿತ್ತ ಬಿರುದು._ _ರಾಕ್ಷಸರಿಗೆ ಸಂಬಂಧಿಸಿದ ಎ...

ರಾಮಾಯಣ ೧೬೮

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೮🏝📖      *ಪುನಃ ಪ್ರಾಪ್ತೇ ವಸಂತೇ ತು ಪೂರ್ಣಃ ಸಂವತ್ಸರೋಭವತ್ | ಪ್ರಸವಾರ್ಥಂ ಗತೋ ಯಷ್ಟುಂ ಹಯಮೇಧೇನ ವೀರ್ಯವಾನ್ ||* _ಮೊದಲು ನಿಶ್ಚಯಿಸಿದಂತೆ ದಶರಥನು ವಸಂತಪೂರ್ಣಿಮೆಯ ದಿನ ಸಾಂಗ್ರಹಣೇಷ್ಟಿಯನ್ನು ಮಾಡಿ ಅಶ್ವಮೇಧಯಾಗಕ್ಕೆ ದೀಕ್ಷೆ ತೊಟ್ಟನು. ನಾಲ್ಕು ವರ್ಣದವರೊಡನೆ ನಾಲ್ಕೂ ದಿಕ್ಕಿಗೂ ಅಶ್ವವು ಪರ್ಯಟನೆ ಹೊರಟಿತು. ಇತ್ತ ರಾಜನು ದೀಕ್ಷೆ ಸ್ವೀಕರಿಸಿದ ನಂತರ ಅನೇಕ ವಿಧಿನಿಯಮಗಳನ್ನು ಅನುಸರಿಸಲಾರಂಭಿಸಿದನು. ಒಮ್ಮೆ ಪ್ರಾರ್ಥನೆ ನಡೆಸಿ ಕಂಕಣ ತೊಟ್ಟರೆ ಯಜ್ಞ ಮುಗಿಯುವ ತನಕ ಬ್ರಹ್ಮಚರ್ಯ ಪಾಲಿಸಬೇಕು. ಕಾಯಾ-ವಾಚಾ-ಮನಸಾ ಸ್ತ್ರೀ ಸಂಪರ್ಕ ನಿಷಿದ್ಧ. ದ್ಯೂತ-ಬೇಟೆ-ಪಾನ-ನಿಷಿದ್ಧ ಆಹಾರ ಸೇವನೆ-ಹಗಲು ನಿದ್ರೆ- ಧಾರಾಳ ನಿದ್ರೆ- ಆಲಸ್ಯ- ಹರಟೆ ಮೊದಲಾದ ವ್ಯರ್ಥಾಲಾಪ- ಪರನಿಂದೆ-ಹಿಂಸೆ-ಅನಿಯಮಿತ ಆಹಾರ ಇವೆಲ್ಲವೂ ನಿಷಿದ್ಧ. ಹಾಗಾಗಿ ಯಜ್ಞದ ಸಂಕಲ್ಪ ಮಾಡಿದರೆ ಸಾಲದು. ಅದಕ್ಕೆ ತಕ್ಕುದಾದ ವ್ರತಾನುಷ್ಠಾನವೂ ಬೇಕು. ಹಾಗಿದ್ದರೆ ಮಾತ್ರ ಯಜ್ಞದ ಫಲ ಸಿಗಬಹುದು. ಶ್ರೌತ ಪ್ರಕ್ರಿಯೆಯಂತೆ ಮೊದಲು ಸಾಂಗ್ರಹಣೇಷ್ಟಿ ನಡೆಸಿ ಅನಂತರ ಸಾವಿತ್ರ್ಯಾದಿ ಕರ್ಮಗಳನ್ನು ನಿಯತವಾಗಿ ಮಾಡುತ್ತಿದ್ದನು. ಹದಿಮೂರು ಅಮಾವಾಸ್ಯೆ ಕಳೆದು ಅಂದರೆ ವಸಂತದ ಅಮಾವಾಸ್ಯೆಯೂ ಸೇರಿ ಫಾಲ್ಗುಣದ ಅಮಾವಾಸ್ಯೆ ಕಳೆದು ಪುನಃ ವಸಂತ ಉದಯಿಸಿದಾಗ ಅಶ್ವಮೇಧದ ಪ್ರಕ್ರಿಯೆ ಆರಂಭಿಸಿದನು. ಅಶ್ವಮೇಧವೆಂದರೆ ಕೆಲವರು...

ರಾಮಾಯಣ ೧೬೨

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೭🏝📖     *ಶಕ್ಯಃ ಪ್ರಾಪ್ತುಮಯಂ ಯಜ್ಞಃ ಸರ್ವೇಣಾಪಿ ಮಹೀಕ್ಷಿತಾ | ನಾಪರಾಧೋ ಭವೆತ್ಕಷ್ಟೋ ಯದ್ಯಸ್ಮಿನ್ಕ್ರತುಸತ್ತಮೇ || ಛಿದ್ರಂ ಹಿ ಮೃಗಯಂತೇತ್ರ ವಿದ್ವಾಂಸೋ ಬ್ರಹ್ಮರಾಕ್ಷಸಾಃ | ನಿಹತಸ್ಯ ಹಿ ಯಜ್ಞಸ್ಯ ಸದ್ಯಃ ಕರ್ತಾ ವಿನಶ್ಯತಿ ||* _ಮಹತ್ತಾದ ಕರ್ಮವನ್ನು ಮಾಡಲು ಹೊರಟವರಿಗೆ ಇರಬೇಕಾದ ಎಚ್ಚರವನ್ನು ವಿವರಿಸುತ್ತಿದ್ದಾನೆ ಕವಿ. ಪ್ರಪಂಚದ ಯಾವ ರಾಜರು ಬೇಕಾದರೂ ಅಶ್ವಮೇಧ ನಡೆಸಿ ಫಲವನ್ನುಣ್ಣಬಹುದು. ಆದರೆ ಯಜ್ಞದಲ್ಲಿ ಸ್ವಲ್ಪ ದೋಷ ಉಂಟಾದರೂ ಮಹತ್ತಾದ ಅನರ್ಥಕ್ಕೆ ಕಾರಣವಾಗುತ್ತದೆ. ಸರಿಯಾದ ಯಜ್ಞದ ಆಚರಣೆಯು ಹೇಗೆ ಸತ್ಫಲವನ್ನು ಕರುಣಿಸುವುದೋ ಅಂತೆಯೇ ತಪ್ಪು ಆಚರಣೆಯು ದುಷ್ಫಲವನ್ನು ನಿಶ್ಚಿತವಾಗಿ ಕರುಣಿಸುವುದು. ವಿದ್ವಾಂಸರು ಇನ್ನೊಬ್ಬರಿಗೆ ತಮ್ಮ ವಿದ್ಯೆಯನ್ನು ಬೋಧಿಸದಿದ್ದರೆ ಮುಂದೆ ಬ್ರಹ್ಮರಾಕ್ಷಸರಾಗಿ ಹುಟ್ಟುವರು. ಅಂತಹ ಬ್ರಹ್ಮರಾಕ್ಷಸರು ಯಜ್ಞದಲ್ಲಿ ಉಂಟಾಗುವ ನ್ಯೂನ-ಅತಿರೇಕಗಳನ್ನು ಹುಡುಕಿ ಯಜ್ಞವನ್ನು ನಾಶ ಮಾಡಲು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.  ಇದರ ಫಲವಾಗಿ ಯಜಮಾನನೂ ನಾಶ ಹೊಂದುವನು. ಹಾಗಾಗಿ ಸ್ವಲ್ಪವೂ ದೋಷವುಂಟಾಗದಂತೆ ಅಚ್ಚುಕಟ್ಟಾಗಿ ಶಾಸ್ತ್ರಸಮ್ಮತವಾಗಿ ಯಜ್ಞ ನಡೆಸಲು ಪ್ರಯತ್ನಿಸಿ. ನಿಮಗೆ ಇಂತಹ ಯಜ್ಞ ಆಯೋಜಿಸಿ ಸಾಕಷ್ಟು ಅನುಭವ ಇರುವ ಕಾರಣ ಹೆಚ್ಚು ಹೇಳಲಾರೆ ಎಂಬುದು ದಶರಥನ ಮಾತು_ _ಕೈಯಲ್ಲಿ ಧನವಿದೆ ಅಥವಾ ಅಧಿಕಾರವಿದೆ ಅಥವಾ ...

ಪದಶಕ್ತಿ ೪೦

🏹*ಪದಶಕ್ತಿ* ---೪೦🌄 *ಔರ್ವ* _ಸಮುದ್ರದಲ್ಲಿ ಅಡಗಿರುವ ಬೆಂಕಿಯ ಹೆಸರು. ಉರ್ವನಿಂದ ಹುಟ್ಟಿದ್ದು ಅಥವಾ ಉರ್ವನ ಮಗ. ಚ್ಯವನ ಮುನಿಗೆ ಮನುವಿನ ಮಗಳಾದ ಆರುಷಿಯಲ್ಲಿ ಜನಿಸಿದವನು ಉರ್ವ ಅಥವಾ ಊರ್ವ. ಭೃಗು ಗೋತ್ರದವರು ಅತ್ಯಂತ ಕೋಪಿಷ್ಠರೆಂಬುದು ಪ್ರಸಿದ್ಧ ವಿಷಯ. ತನ್ನ ಕೋಪವನ್ನೇ ಸಮುದ್ರದಲ್ಲಿ ಅಡಗಿಸಿದ ಇವನು ನಿಜಕ್ಕೂ ಅದ್ಭುತ ವ್ಯಕ್ತಿ._ _ಗಂಡಸರನ್ನು ಕ್ಷತ್ರಿಯರು ಹುಡುಕಿ ಹುಡುಕಿ ಕೊಲ್ಲಲು ತಾಯಿಯ ತೊಡೆಯಿಂದ ಹುಟ್ಟಿದ ಕಾರಣ ಇವನಿಗೆ ಊರುಜ ಅಥವಾ ಉರ್ವ ಎಂಬ ಹೆಸರು ಬಂತು. ಇವನು ಲೋಕವನ್ನು ನಾಶಮಾಡುವ ಇಚ್ಛೆಯಿಂದ ಭಯಂಕರ ತಪಸ್ಸಿನಲ್ಲಿ ತೊಡಗುತ್ತಾನೆ. ಆಗ ಅವನ ಪಿತೃಗಳು ಪ್ರತ್ಯಕ್ಷರಾಗಿ ಈ ಕೋಪವನ್ನು ಬಿಡುವಂತೆ ಆದೇಶಿಸುತ್ತಾರೆ. ಅವನು ಬಿಡಲು ಇಚ್ಛಿಸಿದರೂ ನನ್ನ ಸ್ವರೂಪವೇ ಆಗಿರುವ ಈ ಕೋಪವನ್ನು ಬಿಡುವುದಾದರೂ ಹೇಗೆಂದು ಅವರನ್ನೇ ಪ್ರಶ್ನಿಸಿದಾಗ ಸಮುದ್ರವು ಇಂತಹ ಬೆಂಕಿಯಂತಹ ಕೋಪವನ್ನು ತನ್ನೊಳಗೆ ಸೇರಿಸಿಕೊಂಡು ತಣಿಸಬಲ್ಲದು ಹಾಗಾಗಿ ಅದರಲ್ಲಿ ಇಡು ಎಂದಾಗ ಅವರ ಮಾತಿನಂತೆ ತಾನು ಲೋಕನಾಶಕ್ಕೆಂದು ತಪದ ಮೂಲಕ ಸಂಪಾದಿಸಿದ ಕೋಪವನ್ನು ಸಾಗರದಲ್ಲಿ ಇಟ್ಟನು. ಹೀಗೆ ನೀರಲ್ಲೂ ಬೆಂಕಿ ಉಂಟಾಯಿತು._ _ಜಮದಗ್ನಿ ಮತ್ತು ವತ್ಸ ಗೋತ್ರದವರ ಪ್ರವರದಲ್ಲೂ ಈ ಔರ್ವನು ಸೇರಿದ್ದಾನೆ._ ಸಂಸ್ಕೃತ ಸಾಹಿತ್ಯದ ಮೇರುಕೃತಿಯಾದ  ಭಾಗವತದಲ್ಲಿ ಇವನ ಉಲ್ಲೇಖ ಇದೆ.  *तापत्यमथ- वासिष्ठमौर्वं चाख्यानमुत्तमम्”* ಇವನ ಆಖ್ಯಾನವು ಪುಣ್ಯದಾಯ...

ರಾಮಾಯಣ ೧೬೭

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೭🏝📖      *ಸರ್ವಥಾ ಪ್ರಾಪ್ಸ್ಯಸೇ ಪುತ್ರಾಂಶ್ಚತುರೋಮಿತವಿಕ್ರಮಾನ್ | ಯಸ್ಯ ತೇ ಧಾರ್ಮಿಕೀ ಬುದ್ಧಿರಿಯಂ ಪುತ್ರಾರ್ಥಮಾಗತಾ ||* _ವಸಂತಕಾಲದಲ್ಲಿ ಯಜ್ಞ ಸಿದ್ಧತೆ ಆರಂಭಿಸಿದ ರಾಜನು ವಸಿಷ್ಠಪ್ರಮುಖರನ್ನು ಕರೆಯಿಸಿ ಅವರ ಅನುಮತಿ ಬೇಡಿದನು. ಅವರೆಲ್ಲರೂ ಋಷ್ಯಶೃಂಗನ ನೇತೃತ್ವದಲ್ಲಿ ಯಜ್ಞ ಮಾಡಲು ಉತ್ಸುಕರಾಗಿ ರಾಜನಿಗೆ ಹೀಗೆಂದರು. ರಾಜನೇ, ನಿಸ್ಸಂಶಯವಾಗಿ ಮಕ್ಕಳಿಗಾಗಿ ಧರ್ಮಕಾರ್ಯದಲ್ಲಿ ತೊಡಗಿರುವ ನೀನು ನಾಲ್ಕು ಪರಾಕ್ರಮಿಗಳನ್ನು  ಪುತ್ರರನ್ನಾಗಿ  ಪಡೆಯುವೆ. ಇನ್ನೂ ಯಜ್ಞ ಆರಂಭವಾಗಿಲ್ಲ. ಆಗಲೇ ಋಷಿಗಳು ನುಡಿದದ್ದು ಹೇಗೆಂದರೆ ಭೂತ-ಭವಿತವ್ಯಗಳ ಸ್ಪಷ್ಟ ಮಾಹಿತಿ ತಪಶ್ಶಕ್ತಿಯ ಪ್ರಭಾವದಿಂದಾಗಿ ಅವರಿಗೆ ಬಂದಿರುತ್ತದೆ. ಅದಕ್ಕಾಗಿಯೇ ಭವಭೂತಿಯ ಈ ಮಾತು_ *ಋಷೀಣಾಂ ಪುನರಾದ್ಯಾನಾಂ ವಾಚಮರ್ಥೋನುಧಾವತಿ*  _ಸಾಮಾನ್ಯರಾದ ನಮ್ಮ ಮಾತು ಅರ್ಥವನ್ನು ಅಂದರೆ ವಿಷಯವನ್ನು ಅನುಸರಿಸಿದರೆ ಋಷಿಗಳು ಹಾಗೂ ದೇವತೆಗಳ ಮಾತು ಅರ್ಥವನ್ನು ಅನುಸರಿಸುತ್ತದೆ. ಅವರಾಡುವ ಮಾತಿನಂತೆ ಲೋಕದಲ್ಲಿ ಘಟನೆಗಳು ಜರುಗುತ್ತವೆ. ಇಲ್ಲೂ ಎರಡು ವರ್ಷದ ನಂತರ ಕ್ರಮವಾಗಿ ಹುಟ್ಟುವ ರಾಮಾದಿಗಳ ಜನ್ಮವನ್ನು ಈಗಲೇ ಅರಿತಿದ್ದರು ಈ ಮಹಿಮರು._ *ಸಮರ್ಥಾಧಿಷ್ಠಿತಶ್ಚಾಶ್ವಃ ಸೋಪಾಧ್ಯಾಯೋ ವಿಮುಚ್ಯತಾಮ್*  _ರಾಜನು ಆ ಕೂಡಲೇ ಯಜ್ಞಾಶ್ವವನ್ನು ಜೊತೆಗೆ ಯೋಧರನ್ನೂ  ಉಪಾಧ್ಯಾಯರನ್ನೂ ಕಳಿ...

ರಾಮಾಯಣ ೧೬೬

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೬🏝📖         *ತತಃ ಕಾಲೇ ಬಹುತಿಥೇ ಕಸ್ಮಿಂಶ್ಚಿತ್ಸುಮನೋಹರೇ | ವಸಂತೇ ಸಮನುಪ್ರಾಪ್ತೇ ರಾಜ್ಞೋ ಯಷ್ಟುಂ ಮನೋಭವತ್* _ದಶರಥನ ಕೋರಿಕೆ ಮನ್ನಿಸಿ ಋಷ್ಯಶೃಂಗನು ಶಾಂತೆಯೊಡನೆ ಅಯೋಧ್ಯೆಗೆ ಬಂದು ಬಹಳ ಕಾಲವಾಗಿದೆ. ಅನಂತರ ಒಂದು ದಿನ ವಸಂತ ಋತು ಪ್ರಾರಂಭವಾಗುತ್ತಿರುವುದನ್ನು ಕಂಡು ರಾಜನು ಯಜ್ಞ ಮಾಡಲು ನಿಶ್ಚಯಿಸಿದನು. ಪುರೋಹಿತರು ಸಿಕ್ಕಿದರು ಅಥವಾ ನಮಗೆ ಅನುಕೂಲ ಇದೆಯೆಂದು ಕೂಡಲೇ ಯಜ್ಞ ಕರ್ಮಗಳನ್ನು ಮಾಡುವುದಲ್ಲ. ತಾರಾಬಲ ಅನುಕೂಲವಾಗಿದೆಯಾ, ಭೂಮಿಯಲ್ಲಿ ಅಗ್ನಿಯ ವಾಸ ಹಾಗೂ ಆಹುತಿ ಇದೆಯಾ, ಕೆಟ್ಟ ಯೋಗ-ಕರಣಗಳು ಇಲ್ಲದ ದಿನ ಇವುಗಳನ್ನೆಲ್ಲ ವಿಮರ್ಶಿಸಿ ಕರ್ಮದಲ್ಲಿ ತೊಡಗಬೇಕು. ಹಾಗಿಲ್ಲದೆ ವಿರಾಮದ ದಿನ, ಪುರೋಹಿತರು ಸಿಕ್ಕಿದ ದಿನ ಅಥವಾ ಮಳೆ ಇಲ್ಲದ ದಿನ ಎಂದೆಲ್ಲಾ ಯಜ್ಞದಲ್ಲಿ ತೊಡಗಿದರೆ ಅದು ಕೊಡುವ ಫಲವೂ ಅಷ್ಟೇ ಆಗಿರುತ್ತದೆ._*ಚೈತ್ರಾಂ ಪೌರ್ಣಮಾಸ್ಯಾಂ ಪ್ರಾತಃ ಅಶ್ವಮೇಧೇನ ಯಕ್ಷ್ಯೇ* _ಎಂದು ಶ್ರೌತ ಪ್ರಯೋಗವಿದೆ. ಹಾಗಾಗಿ ಅಶ್ವಮೇಧ ಮಾಡ ಹೊರಟ ದಶರಥನು ಅನುಕೂಲವಾದ ವಸಂತಕಾಲ ಬರಲು ಕಾದನು. ತನಗೆ ಸಂತಾನ ಬೇಗ ದೊರಕಬೇಕೆಂಬ ಬಯಕೆ ಇದ್ದರೂ ಕಾಲ ಅನುಕೂಲ ಆಗದೇ ಮುಂದಡಿ ಇಡುವ ಅವಿಮರ್ಶ ಬುದ್ಧಿ ಅವನದಾಗಿರಲಿಲ್ಲ._ *ತತಃ ಪ್ರಸಾದ್ಯ ಶಿರಸಾ ತಂ ವಿಪ್ರಂ ದೇವವರ್ಣಿನಮ್* _ಅನಂತರ ತನಗಿಂತ ವರ್ಷದಲ್ಲಿ ಅಥವಾ ಅಧಿಕಾರದಲ್ಲಿ ಬಹಳ ಕಿರಿಯನಾದರೂ ಜ್ಞಾನ-ಕರ್ಮಗಳಲ್...

ರಾಮಾಯಣ ೧೬೫

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೫🏝📖         *ತಾವನ್ಯೋನ್ಯಾಂಜಲಿಂ ಕೃತ್ವಾ ಸ್ನೇಹಾತ್ಸಂಶ್ಲಿಷ್ಯ ಚೋರಸಾ | ನನಂದತುರ್ದಶರಥೋ ರೋಮಪಾದಶ್ಚ ವೀರ್ಯವಾನ್ ||* _ಸಂತಾನಾರ್ಥಿಯಾಗಿ ಯಜ್ಞ, ತನ್ಮೂಲಕ ಸ್ವರ್ಗಕಾಮಿಯಾದ ದಶರಥನು ಮಂತ್ರಿಗಳ ಸಲಹೆಯಂತೆ ಅಂಗರಾಜ್ಯಕ್ಕೆ ಬಂದನು. ರೋಮಪಾದನ ಅಪ್ಪನು ಇವನಿಗೆ ಮಿತ್ರನಾಗಿದ್ದನು. ಬಹುಶಃ ದಶರಥನ ಬದುಕು ಬಹು ದೀರ್ಘಕಾಲ ಇದ್ದುದು ಇದಕ್ಕೆ ಕಾರಣ. ಮೂರು-ನಾಲ್ಕು ತಲೆಮಾರಿನ ರಾಜರುಗಳು ಅವನೊಡನೆ ಒಡನಾಟ ಹೊಂದಿದ್ದರು. ಅಪ್ಪನ ಕಾಲದ ನಂತರ ಮಗನೂ ದಶರಥನ ಜೊತೆ ಉತ್ತಮ ಸಂಬಂಧ ಹೊಂದಿದ್ದನು. ದಶರಥನ ಕೋರಿಕೆಯಂತೆ ರೋಮಪಾದನು ತನ್ನ ಅಳಿಯ ಋಷ್ಯಶೃಂಗನನ್ನು ಕಳುಹಿಸಿಕೊಡುವನು‌. ಅನಂತರ ದಶರಥನು ಹೊರಟುನಿಂತಾಗ ಅವರೀರ್ವರು ಪರಸ್ಪರ ಇನ್ನು ಯಾವಾಗ ಈ ಭೇಟಿಯೋ ಎಂಬಂತೆ ಗಾಢವಾಗಿ ಆಲಿಂಗಿಸಿಕೊಂಡರು. ಗಾಢವಾದ ಆಲಿಂಗನವು ಯಾವಾಗಲೂ ತುಂಬಾ ಪ್ರೀತಿಯ ಸಂಕೇತ. ಅದು ಗೆಳೆತನವಿರಲಿ, ವಾತ್ಸಲ್ಯವಿರಲಿ, ಪ್ರೇಮವಿರಲಿ, ಉದ್ವೇಗವಿರಲಿ ಆಲಿಂಗನವು ಆ ಕ್ಷಣದಲ್ಲಿ ಮನಸ್ಸಿಗೆ ಒಂದು ತೃಪ್ತಿಯನ್ನು ತಂದುಕೊಡುತ್ತದೆ.‌ ಪರಸ್ಪರ ಕೈ ಮುಗಿದರು. ವಸ್ತುತಃ ಇಲ್ಲಿ ದಶರಥನು ಬಹಳ ಹಿರಿಯ. ಆದರೂ ಸ್ನೇಹ ಸಂಬಂಧವು ವಯಸ್ಸಿನ ಅಂತರವನ್ನು ಅಭಿಮಾನವನ್ನು ತೊರೆದು ಪ್ರೀತಿ ಅನುರಣಿಸುವಂತೆ ಮಾಡುತ್ತದೆ. ಅವರು ಎಲ್ಲೋ ದೂರದಲ್ಲಿದ್ದರೂ ಅವರ ನಡುವಿದ್ದ ಆತ್ಮೀಯತೆಯು ಹತ್ತಿರದ ಸಂಬಂಧಿಗಳಂತಿತ್ತು. ಇದಕ್...

ರಾಮಾಯಣ ೧೬೪

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೪🏝📖        *ವವ್ರೇ ಪ್ರಸಾದಂ ವಿಪ್ರೇಂದ್ರಾತ್ಮಾ ವಿಪ್ರಂ ಮನ್ಯುರಾವಿಶೇತ್*  _ಋಷ್ಯಶೃಂಗನ ಆಗಮನವೇನೋ ಆಯಿತು. ಆದರೆ ತಂದೆ ಈ ಕೃತ್ಯದಿಂದ ಕೋಪಗೊಂಡರೆ ಮತ್ತೆ ರಾಜ್ಯದ ಗತಿಯೇನಾದೀತು! ಹೀಗೆ ಆಲೋಚಿಸಿದ ರೋಮಪಾದನು ಮೊದಲು ವಿಭಾಂಡಕನು ತನ್ನ ಮೇಲೆ ಕೋಪಿಸದಿರಲೆಂದು ಋಷ್ಯಶೃಂಗನ ಬಳಿ ಪ್ರಾರ್ಥಿಸಿದನು‌. ರಾಜನಾದವನು ತನ್ನ ಕಾರ್ಯ ಒಳಿತಿಗೇ ಮೀಸಲಾಗಿದ್ದರೂ ಮುಂದಿನ ಪರಿಣಾಮವನ್ನು ಚಿಂತಿಸಬೇಕು. ದೇಶಕ್ಕೆ ಒಳಿತಾಗುವುದೆಂದು ಒಮ್ಮೆಲೇ ಯಾವ ಕಾರ್ಯವನ್ನೂ ಮಾಡಬಾರದು. ಪರಿಸರ ಹಾನಿಕರ ಎಂದು ಏಕಾಏಕಿ ಪ್ಲಾಸ್ಟಿಕ್-ಪೆಟ್ರೋಲ್ ಮೊದಲಾದವನ್ನು ನಿಷೇಧಿಸಿದರೆ ಜನಜೀವನ ಅಸ್ತವ್ಯಸ್ತವಾದೀತು. ವಿಭಾಂಡಕನಿಗೆ ತಿಳಿಸದೇ ಮಗನನ್ನು ಕರೆದೊಯ್ದು ಮತ್ತೆ ಶಾಪಕ್ಕೊಳಗಾಗಿ ರಾಜ್ಯ ಬರದತ್ತ ಸಾಗಬೇಕೇ! ಹಾಗಾಗಿ ಮೊದಲು ತನ್ನ ಕಾರ್ಯಕ್ಕೆ ಕ್ಷಮೆಯಾಚಿಸಿ ತಂದೆ ಕೋಪಗೊಳ್ಳದಿರಲೆಂದು ಮಗನನ್ನು ಯಾಚಿಸಿದನು. ರಾಜನಾದರೂ ತಪಶ್ಶಕ್ತಿಯ ಎದುರು ನಿಸ್ಸಹಾಯಕ ಹಾಗೂ ವಿನೀತಭಾವ._ *ಅಂತಃಪುರಂ ಪ್ರವಿಶ್ಯಾಸ್ಮೈ ಕನ್ಯಾಂ ದತ್ವಾ ಯಥಾವಿಧಿ| ಶಾಂತಾಂ ಶಾಂತೇನ ಮನಸಾ ರಾಜಾ ಹರ್ಷಮವಾಪ ಸಃ||* _ರಾಜ್ಯದ ಕ್ಷಾಮ ನೀಗಿ ಲಕ್ಷಾಂತರ ಜನರ ಪಾಲಿಗೆ ಬೆಳಕಾದವನನ್ನು ಸತ್ಕರಿಸುವ ಪರಿ ಇದು. ಸಮಾಧಾನ ಚಿತ್ತದಿಂದ ಋಷ್ಯಶೃಂಗನನ್ನು ಅಂತಃಪುರಕ್ಕೆ ಕರೆದೊಯ್ದು ವಿಧಿವತ್ತಾಗಿ ತನ್ನ ಮಗಳನ್ನು ಧಾರೆಯೆರೆದು ಕೊಟ್ಟು ಆನಂ...

ರಾಮಾಯಣ ೧೬೩

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೩🏝📖       *ಗತಾಸು ತಾಸು ಸರ್ವಾಸು ಕಾಶ್ಯಪಸ್ಯಾತ್ಮಜೋ ದ್ವಿಜಃ | ಅಸ್ವಸ್ಥಹೃದಯಶ್ಚಾಸೀದ್ದುಃಖಾತ್ಸಂಪರಿವರ್ತತೇ ||* _ಋಷ್ಯಶೃಂಗನ ಆಶ್ರಮಕ್ಕೆ ಅವನನ್ನು ಕರೆದೊಯ್ಯಲು ನಗರದ ಗಣಿಕೆಯರು ಸಾಲಂಕೃತರಾಗಿ ಬಂದು ವಿಧವಿಧದ ಭಕ್ಷ್ಯ ಭೋಜ್ಯ ತಿನ್ನಿಸಿ ಮಧುರ ಮಾತುಗಳಿಂದ ಮನಸೆಳೆದು ವಿಭಾಂಡಕನ ಆಗಮನದ ಹೆದರಿಕೆಯಿಂದ ವ್ರತದ ನೆಪವೊಡ್ಡಿ ದೂರ ಹೋಗಿದ್ದಾರೆ. ಇತ್ತ ಋಷ್ಯಶೃಂಗನ ಮನವು ಅವರ ಸಾಮೀಪ್ಯವನ್ನು ಬಯಸುತ್ತಿದೆ. ಅವನ ಹೃದಯದ ಸ್ವಾಸ್ಥ್ಯ ಕದಡಿತು. ಇಷ್ಟು ದಿನ ಸ್ಥಿರವಾಗಿದ್ದ ಮನಸ್ಸು ಇಂದು ಅಲ್ಲೋಲಕಲ್ಲೋಲವಾಗಿದೆ. ಮನವು ವಾರಾಂಗನೆಯರ ರೂಪ-ಲಾವಣ್ಯ ಸ್ಮರಿಸಿ ಪರಿಭ್ರಮಿಸುತ್ತಿದೆ. ಅಲ್ಲಿರಲು ಸಾಧ್ಯವಾಗದೇ ಅವರನ್ನು ಹುಡುಕಿಕೊಂಡು ಹೊರಟನು ಜಿತೇಂದ್ರಿಯನು. ವಿಷಯಗಳ ಆಸಕ್ತಿಯು ನಮ್ಮನ್ನು ಮರುಳು ಮಾಡುವುದು ಹೀಗೆಯೇ. ಒಮ್ಮೆ ರುಚಿ ತೋರಿಸಿ ಅನಂತರ ಹತ್ತಿರದಲ್ಲಿ ಇಲ್ಲದಿದ್ದರೂ ಬೇಕೆಂಬ ಬಯಕೆ ಮೂಡಿ ಪಡೆಯಲು ಪ್ರಯತ್ನದಲ್ಲಿ ತೊಡಗುತ್ತದೆ. ಮನದ ಬಯಕೆಗೆ ಇಂದ್ರಿಯ ದೇಹ ಸಹಕರಿಸುತ್ತದೆ. ಅಷ್ಟು ದೀರ್ಘಕಾಲ ತಪಸ್ಸು ಮಾಡಿ ಕಲ್ಲಾಗಿದ್ದ ಋಷ್ಯಶೃಂಗನೇ ಕರಗಿದ ಮೇಲೆ ಸಾಮಾನ್ಯರ ಪಾಡೇನು!_ *ತತ್ರ ಚಾನೀಯಮಾನೇ ತು ವಿಪ್ರೇ ತಸ್ಮಿನ್ಮಹಾತ್ಮನಿ | ವವರ್ಷ ಸಹಸಾ ದೇವೋ ಜಗತ್ಪ್ರಹ್ಲಾದಯಂಸ್ತದಾ ||*  _ಅವರನ್ನು ಭೇಟಿಯಾದಾಗ ನಮ್ಮ ಆಶ್ರಮಕ್ಕೆ ತಾವು ಒಮ್ಮೆ ಬರಬೇಕು, ನಮ್ಮ ಸತ್...