ರಾಮಾಯಣ ೧೭೨
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೨🏝📖 *ಅವಜ್ಞಯಾ ನ ದಾತವ್ಯಂ ಕಸ್ಯಚಿಲ್ಲೀಲಯಾಪಿ ವಾ | ಅವಜ್ಞಯಾ ಕೃತಂ ಹನ್ಯಾದ್ದಾತಾರಂ ನಾತ್ರ ಸಂಶಯಃ ||* _ವಸಿಷ್ಠರ ಆದೇಶ. ಯಜ್ಞ ಎಂದ ಮೇಲೆ ಸಾವಿರಾರು ದಾನಗಳನ್ನು ನೀಡಲಿರುತ್ತದೆ. ದಾನ ಪರಂಪರೆ ನಡೆಯುತ್ತಲೇ ಇರುತ್ತದೆ. ಜ್ಞಾನ-ಅನ್ನ-ಭೂಷಣ-ಭೂಮಿ-ವಸ್ತು-ಸುವರ್ಣ-ರಜತ ಇವುಗಳ ದಾನ ಮಾಡಿದಷ್ಟೂ ಶ್ರೇಯಸ್ಸು. ದಾನಕಾಲದಲ್ಲಿ ಎಂತಹ ನಿಯಮ ಇರಬೇಕೆಂದು ನಿರೂಪಿಸುತ್ತಿದ್ದಾರೆ. ದಾನ ತೆಗೆದುಕೊಳ್ಳುವ ವ್ಯಕ್ತಿಯ ಬಗ್ಗೆ ಸ್ವಲ್ಪವೂ ಅಸಡ್ಡೆ ತೋರಬಾರದು. ಹಾಗಾಗಿಯೇ ಸಂಬಂಧಿಕರಿಗೆ-ಕುಟುಂಬಿಕರಿಗೆ ದಾನ ನೀಡಬಾರದು ಎನ್ನುವುದು. ಇವನು ಆ ಧರ್ಮ, ಇವನು ಈ ಮತ, ಇವನು ಮಿತ್ರ, ಇವನು ನನ್ನ ವಿರೋಧಿ ಇತ್ಯಾದಿ ಯಾವ ಭಾವನೆ ಇದ್ದರೂ ದಾನ ಕಾಲದಲ್ಲಿ ಅದೆಲ್ಲವನ್ನೂ ಬದಿಗಿಟ್ಟು ಶ್ರೇಯಸ್ಕಾಮನಾಗಿ ಮನಃಪೂರ್ವಕವಾಗಿ ದಾನ ಮಾಡಬೇಕು. ಅನೇಕ ಶ್ರೀಮಂತರು ದಾನ ಕೊಡುವಾಗ ಅಸಡ್ಡೆ ತೋರುವುದನ್ನು, ಅಪಮಾನ ಮಾಡುವುದನ್ನೂ, ಇವನು ತೆಗೆದುಕೊಳ್ಳಲೆಂದೇ ಹುಟ್ಟಿದವನು ಎಂಬರ್ಥದಲ್ಲಿ ನೋಡುವುದನ್ನು ಮಾತನಾಡುವುದನ್ನೂ ಗಮನಿಸಬಹುದು. ಅಂತಹ ದಾನವೆಲ್ಲ ಕಲ್ಲಮೇಲೆ ಸುರಿದ ಮಳೆಯಂತೆ ವ್ಯರ್ಥ. ಎರಡನೆಯದಾಗಿ ತಮಾಷೆ ಮಾಡುತ್ತಾ ಹೋ ಬನ್ನಿ ದಾನಕ್ಕೆ ಎಂದು ವಿನೋದ ಮಾಡುತ್ತಾ ಅಥವಾ ಚೇಷ್ಟೆ ಮಾಡುತ್ತಾ ದಾನ ಮಾಡಬಾರದು. ಒಮ್ಮೆ ಪ್ರತಿಗೃಹೀತನ ಮನಕ್ಕೆ ಬೇಸರ ಉಂಟಾದರೆ ಅದು ದಾತೃವಿಗೆ ನರಕ ತೋರಬಹುದು. ಹಾಗಾಗಿ ಗ...