ಪೋಸ್ಟ್‌ಗಳು

ಡಿಸೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಧರ್ಮಾಚರಣೆ ೧೫೭

ಧರ್ಮಾಚರಣೆ-೧೫೭ ವೇದಾಭ್ಯಾಸರತಂ ಕ್ಷಾಂತಂ ಪಂಚಯಜ್ಞಕ್ರಿಯಾಪರಮ್ | ನ ಸ್ಪೃಶಂತೀಹ ಪಾಪಾನಿ ಮಹಾಪಾತಕಜಾನ್ಯಪಿ|| ಯಾಜ್ಞವಲ್ಕ್ಯ ಸ್ಮೃತಿ|| ನಿತ್ಯವೂ ವೇದಪಾರಾಯಣ-ವೇದಾಧ್ಯಾಪನ, ವೇದೊಕ್ತ ವಿಷಯಗಳ ಚಿಂತನೆ ನಡೆಸುವವರಿಗೆ,ದೇವಪೂಜೆ-ಸ್ವಾಧ್ಯಾಯ-ತರ್ಪಣ-ಅತಿಥಿ ಸತ್ಕಾರ ಮಾಡುತ್ತಾ ಪ್ರಾಣಿಪಕ್ಷಿಗಳಲ್ಲಿ ಪ್ರೀತಿ ತೋರುತ್ತಾ-ಅಪಾರ ಸಹನೆ ಮೈಗೂಡಿಸಿಕೊಂಡವರನ್ನು ಯಾವ ಪಾಪಗಳೂ ಬಾಧಿಸಲಾರವು. ವೇದ ಮರೆತು,ಪಂಚಯಜ್ಞ ತೊರೆದು, ಷಡ್ವೈರಿಗಳಿಗೆ ಶರಾಣಾದಾಗ ನಮ್ಮ ಪ್ರತಿಯೊಂದು ಕರ್ಮವೂ ಪಾಪವನ್ನೇ ಉಂಟುಮಾಡುತ್ತದೆ.ಹಾಗಾಗಿ ವೇದದ ಹಾದಿ ತುಳಿದು ಅದರಲ್ಲಿ ಹೇಳಿದ ಕರ್ಮ ಮಾಡಿ ಕ್ರೋಧಾದಿಗಳನ್ನು ದೂರವಿಟ್ಟಾಗ ಪಾಪವು ನಮ್ಮನ್ನು ತೊರೆಯುವುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೧೫೬

ಧರ್ಮಾಚರಣೆ-೧೫೬ ನಿಶಾಯಾಂ‌ ವಾ ದಿವಾ ವಾಪಿ ಯದಜ್ಞಾನಕೃತಂ‌ ಭವೇತ್| ತ್ರೈಕಾಲ್ಯಸಂಧ್ಯಾಕರಣಾತ್ತತ್ಸರ್ವಂ ವಿಪ್ರಣಶ್ಯತಿ|| ಯಾಜ್ಞವಲ್ಕ್ಯ ಸ್ಮೃತಿ|| ರಾತ್ರಿಯಾಗಲಿ ಹಗಲಾಗಲಿ ನಮಗೆ ತಿಳಿಯದೇ ನೂರಾರು ಪಾಪಗಳು ನಮ್ಮಿಂದ ಘಟಿಸುತ್ತವೆ.ಪ್ರಕೀರ್ಣಕ-ಮಾನಸಿಕ-ವಾಚಿಕವಿಧದ ಉಪಪಾತಕಗಳೆಲ್ಲವೂ ಮೂರು ಹೊತ್ತು ಸಂಧ್ಯಾವಂದನೆ ಮಾಡುವುದರಿಂದ ನಾಶ ಹೊಂದುತ್ತವೆ. ಹಾಗಾಗಿ ಸಂಧ್ಯಾವಂದನೆ ತ್ರೈವರ್ಣ್ಯರಿಗೆ ಅವಶ್ಯವಾಗಿ ಮಾಡಬೇಕಾದ ಕರ್ಮವಾಗಿದೆ. ಉಳಿದವರು ಸೂರ್ಯನನ್ನು ಮೂರು ಹೊತ್ತು ಧ್ಯಾನಿಸಿ ಈ ಫಲ ಪಡೆಯಬಹುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೧೫೫

ಧರ್ಮಾಚರಣೆ-೧೫೫ ಕಾಲೋಗ್ನಿಃ ಕರ್ಮಮೃದ್ವಾಯುರ್ಮನೋ ಜ್ಞಾನಂ ತಪೋ ಜಲಮ್ | ಪಶ್ಚಾತ್ತಾಪೋ ನಿರಾಹಾರಃ ಸರ್ವೇಮೀ ಶುದ್ಧಿಹೇತವಃ || ಯಾಜ್ಞವಲ್ಕ್ಯ ಸ್ಮೃತಿ|| ಉತ್ತಮ ಮುಹೂರ್ತ, ಅಗ್ನಿ, ನಿತ್ಯಕರ್ಮ, ಗಾಳಿ, ಮಣ್ಣು, ಸದ್ವಿಚಾರಯುಕ್ತ ಮನಸ್ಸು, ಒಳ್ಳೆಯ ವಿಷಯದ ಜ್ಞಾನ, ತಪಸ್ಸು, ನೀರು, ಇನ್ನು ತಪ್ಪು ಮಾಡಲಾರೆ ಎಂಬ ಅನನ್ಯ ಭಾವ, ಉಪವಾಸ ಇವೆಲ್ಲವೂ ಅಶೌಚವಿರಲಿ ಯಾವ ಬಗೆಯ ಅಶುದ್ಧಿ ಇರಲಿ ಎಲ್ಲವನ್ನೂ ಶುದ್ಧಗೊಳಿಸುವ ಸಾಧನವಾಗಿವೆ. ಗ್ರಹಸ್ಥಿತಿ ಸರಿಯಾಗಿರುವ ಮುಹೂರ್ತ, ತುಳಸಿ-ಕೊಟ್ಟಿಗೆ ಮೊದಲಾದ ಪ್ರದೇಶದ ಮಣ್ಣು, ತೀರ್ಥಗಳ ನೀರು, ಪರಿಶುದ್ಧ ಚಿಂತನೆ, ತನ್ನ ಕರ್ಮದಲ್ಲಿ ಪೂರ್ಣನಿಷ್ಠೆ, ಯಜ್ಞದ ಬೆಂಕಿ, ನಿರಾಹಾರನಾಗಿರುವುದು ನಮ್ಮ ಎಲ್ಲಾ ಪಾಪಗಳನ್ನು ತೊಳೆಯುತ್ತವೆ. ಹಾಗಾಗಿ ಬದುಕಿನಲ್ಲಿ ಇವುಗಳನ್ನು ರೂಢಿಸಿಕೊಳ್ಳುವುದು ನಮ್ಮನ್ನು ನಾವು ಸ್ವಚ್ಛ ಮಾಡಿಕೊಂಡಂತೆ ಸರಿ. ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೧೫೪

ಧರ್ಮಾಚರಣೆ-೧೫೪ ನಿರಾಶಾಃ ಪಿತರೋ ಯಾಂತಿ ವಸ್ತ್ರನಿಷ್ಪಿಡನೇ ಕೃತೇ | ತಸ್ಮಾನ್ನ ಪಿಡಯೇದ್ವಸ್ತ್ರಮಕೃತ್ವಾ ಪಿತೃತರ್ಪಣಮ್ || ಪರಾಶರ|| ನದಿ-ಸರೋವರ-ಕೆರೆ-ಸಮುದ್ರ-ಕಾಲುವೆ-ತೀರ್ಥಗಳಲ್ಲಿ ಸ್ನಾನ ಮಾಡಿದ ನಂತರ ಉಟ್ಟ ಬಟ್ಟೆಯ ನೀರು ಹಿಂಡುವ ಮುನ್ನ ಗತಿಸಿದ ಪಿತೃಗಳಿಗೆ ತರ್ಪಣ ನೀಡಬೇಕು. ಹಾಗೆ ಕೊಡದೇ ಹೋದರೆ ನಮ್ಮ ಪಿತೃಗಳು ನಿರಾಶರಾಗಿ ಹೊರಟುಹೋಗುತ್ತಾರೆ. ಹಾಗಾಗಿ ಸ್ನಾನ ಮಾಡುವ ಪ್ರದೇಶ ನೋಡಿಕೊಂಡು ತರ್ಪಣಗಳನ್ನು ಅವಶ್ಯವಾಗಿ ಕೊಡಬೇಕು. ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೧೫೩

ಧರ್ಮಾಚರಣೆ-೧೫೩ ಪಾಖಂಡ್ಯನಾಶ್ರಿತಾಃ ಸ್ತೇನಾ ಭರ್ತೃಘ್ನ್ಯಃ ಕಾಮಗಾದಿಕಾಃ | ಸುರಾಪ್ಯ ಆತ್ಮತ್ಯಾಗಿನ್ಯೋ ನಾಶೌಚೋದಕಭಾಜನಾಃ || ಯಾಜ್ಞವಲ್ಕ್ಯ ಸ್ಮೃತಿ|| ಬ್ರಹ್ಮಚಾರಿಯನ್ನು ಬಿಟ್ಟು ಉಳಿದವರೆಲ್ಲರೂ ಒಬ್ಬರು ಮೃತರಾದರೆ ಸಪಿಂಡ-ಸಗೋತ್ರರಂತೆ ತಾಯಿಯ ತಂದೆ, ಗುರು, ಮಿತ್ರ,ಮದುವೆಯಾದ ಮಗಳು, ಸಹೋದರಿ ಹಾಗೂ ಅವಳ ಮಗ, ಮಾವ, ಕುಲಪುರೋಹಿತ ಇವರನ್ನು ಉದ್ದೇಶಿಸಿ ಜಲಾಂಜಲಿಯನ್ನು ನೀಡಬೇಕು. ಹಚ್ಚೆ ಮೊದಲಾದ ವೇದನಿಷಿದ್ಧ ಚಿಹ್ನಾಧಾರಿ-ಉಚಿತ ಸೌಲಭ್ಯ ಇದ್ದರೂ  ಉಪಯೋಗಿಸದೇ ತಿರುಗುವವನು, ಬಂಗಾರ ಮೊದಲಾದವನ್ನು ಕದ್ದವನು, ಪತಿಗೆ ಅಥವಾ ಪತ್ನಿಗೆ ದ್ರೋಹ ಬಗೆದವರು, ಗರ್ಭಪಾತ ಹಾಗೂ ಬ್ರಹ್ಮಹತ್ಯೆ ಮಾಡುವವರು, ಮದ್ಯಪಾನ ಮೊದಲಾದ ದುರಾಚಾರಿ, ಆತ್ಮಹತ್ಯೆ ಮಾಡಿಕೊಂಡವರು ಸತ್ತರೆ ಅಶೌಚವೂ ಬೇಡ. ಜಲಾಂಜಲಿಯೂ ಬೇಡ. ಅಂತಹವರ ವಿಷಯದಲ್ಲಿ ಸುಮ್ಮನಿದ್ದರೇ ಹೆಚ್ಚು ಪುಣ್ಯ. ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೧೫೨

ಧರ್ಮಾಚರಣೆ-೧೫೨ ಊನದ್ವಿವರ್ಷಂ ನಿಖನೇನ್ನಕುರ್ಯಾದುದಕಂ ತತಃ ಅಸ್ಮಶಾನಾದನುವ್ರಜ್ಯ ಇತರೋ ಜ್ಞಾತಿಭಿರ್ವ್ರತಃ  ಯಮಸೂಕ್ತಂ ತಥಾ ಗಾಥಾ ಜಪದ್ಭಿರ್ಲೌಕಿಕಾಗ್ನಿನಾ ಸ ದಗ್ಧವ್ಯಉಪೇತಶ್ಚೇದಾಹಿತಾಗ್ನ್ಯಾ ವೃತಾರ್ಥವತ್ ಯಾಜ್ಞವಲ್ಕ್ಯ ಸ್ಮೃತಿ ಎರಡು ವರ್ಷ ತುಂಬುವ ಮೊದಲು ಮಕ್ಕಳು ಮರಣ ಹೊಂದಿದರೆ ಅವರನ್ನು ಸುಡದೆ ಹೂಳಬೇಕು. ಅಂತ್ಯಕರ್ಮಗಳನ್ನು ಮಾಡಬಾರದು. ಸ್ಮಶಾನವಲ್ಲದ ಉತ್ತಮ ಸ್ಥಳದಲ್ಲಿ ತಗ್ಗು ತೆಗೆದು ಹೂಳಬೇಕು. ಎರಡು ದಾಟಿದ ಮಗುವಾದರೆ ಸ್ಮಶಾನಕ್ಕೆ ಯಮಸೂಕ್ತ ಪಠಿಸುತ್ತಾ ತೆಗೆದುಕೊಂಡು ಹೋಗಿ ಸಾಮಾನ್ಯ ಬೆಂಕಿಯಿಂದ ಸುಡಬೇಕು. ಉಪನಯನದ ಮೊದಲು ಅಥವಾ ಶಾಲೆಗೆ ಸೇರುವ ಮೊದಲ ಮರಣವಾದಲ್ಲಿ ಅಮಂತ್ರಕವಾಗಿ ಅಂತ್ಯಕ್ರಿಯೆ ನಡೆಸಬೇಕು. ಬುದ್ಧಿ ಹಾಗೂ ದೇಹದ ಬೆಳವಣಿಗೆ ಹೊಂದದ ಮಕ್ಕಳ ಸಾವಿನಲ್ಲಿ ಪೋಷಕರು ಮೊದಲೇ ದುಃಖಿಸುತ್ತಿರುತ್ತಾರೆ.‌ಇನ್ನೂ ಸರಿಯಾಗಿ ಆಟ ಪಾಠವಾಡದ ಆ ಮಕ್ಕಳ ಮರಣವೇ ಸಹಿಸಲು ಅಶಕ್ಯ. ಸಂಸ್ಕಾರ ಆದವರು ಮರಣ ಹೊಂದಿದರೆ ಮರಣಕ್ಕೂ ಸಂಸ್ಕಾರ ಎಂಬ ನಮ್ಮ ಋಷಿಗಳ ಚಿಂತನೆ ಅದ್ಭುತ. ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೧೫೧

ಧರ್ಮಾಚರಣೆ-೧೫೧ ಶ್ಲೇಷ್ಮಾಶ್ರುಬಾಂಧವೈರ್ಮುಕ್ತಂ ಪ್ರೇತೋ ಭುಂಕ್ತೇ ಯತೋವಶಃ| ಅತೋ ನ ರೋದಿತವ್ಯಂ ಹಿ ಕ್ರಿಯಾಃ ಕಾರ್ಯಾ ಸ್ವಶಕ್ತಿತಃ || ಯಾಜ್ಞವಲ್ಕ್ಯ ಸ್ಮೃತಿ|| ಯಾರಾದರೂ ಸತ್ತರೆಂದು ನಾವು ಬಹಳ ಕಾಲ ಅಳುತ್ತಾ ಕೂತರೆ ಹಾಗೆ ಅಳುವವರ ಕಣ್ಣೀರು ಹಾಗೂ ದುಃಖವನ್ನು ಆ ಸತ್ತ ಆತ್ಮವು ತಿನ್ನುತ್ತದೆ. ಆ ಆತ್ಮಕ್ಕೆ ಆ ಕಾಲದಲ್ಲಿ ಶಾಸ್ತ್ರೀಯವಾದ ಅಂತ್ಯಕ್ರಿಯೆಯನ್ನು ಮಾಡುವುದೇ ಸತ್ತವರ ಸುಖಕ್ಕೆ ಕಾರಣವಾಗುವುದು. ಇದಕ್ಕೆ ಹೊರತಾಗಿ ಅಳುವುದೇ ಮೊದಲಾದ ಕ್ರಿಯೆಗಳು ಆ ಆತ್ಮಕ್ಕೆ ಇನ್ನಷ್ಟು ತೊಂದರೆಯನ್ನು ತಂದುಕೊಡುತ್ತದೆ. ಬದುಕಿದ್ದಾಗ ಆದರಿಸಿ ಸತ್ತ ನಂತರ ಕರ್ಮಗಳ ಮೂಲಕ ಆದರಿಸುವುದು ಸರಿಯಾದ ರೀತಿಯಾಗಿದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೧೫೦

ಧರ್ಮಾಚರಣೆ-೧೫೦ ದುರ್ಭಿಕ್ಷೇ ಧರ್ಮಕಾರ್ಯೇ ಚ ವ್ಯಾಧೌ ಸಂಪ್ರತಿಶೋಧನೇ| ಗೃಹೀತಂ ಸ್ತ್ರೀಧನಂ ಭರ್ತಾ ನ ಸ್ತ್ರಿಯೈ ದಾತುಮರ್ಹತಿ|| ಯಾಜ್ಞವಲ್ಕ್ಯ ಸ್ಮೃತಿ|| ದುರ್ಭಿಕ್ಷೆ ಕಂಡುಬಂದಾಗ,ಧರ್ಮಕಾರ್ಯಗಳಿಗಾಗಿ, ರೋಗದ ಔಷಧೋಪಚಾರಕ್ಕಾಗಿ, ಶಿಕ್ಷೆ-ನಿಗ್ರಹಗಳಿಗಾಗಿ ಪತಿಯು ಪತ್ನಿಯ ಧನವನ್ನು ಉಪಯೋಗಿಸಿದರೆ ಹಿಂತಿರುಗಿ ಕೊಡಬೇಕಾಗಿಲ್ಲ. ಸೂಕ್ತ ಕಾರಣವಿದ್ದಾಗ ಸ್ತ್ರೀಧನವು ವಿನಿಯೋಗ ಆಗಬಹುದು. ಪತ್ನಿ ಬದುಕಿರುವ ತನಕ ಪತಿಯನ್ನು ಬಿಟ್ಟು ಉಳಿದವರಿಗೆ ಅವಳ ಧನದ ಉಪಯೋಗದ ಹಕ್ಕು ಇರುವುದಿಲ್ಲ. ದಾಯಾದಿಗಳೂ ಕೂಡ ಸ್ತ್ರೀಧನವನ್ನು ಪಾಲುಮಾಡಿ ತೆಗೆದುಕೊಳ್ಳುವಂತಿಲ್ಲ. ಸ್ತ್ರೀಯರ ವಿಷಯದಲ್ಲಿ ನಮ್ಮ ಸ್ಮೃತಿಗಳು ತುಂಬಾ ಸೂಕ್ಷ್ಮವಾಗಿ ಉದಾರವಾಗಿ ವ್ಯವಹರಿಸಿವೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1

ಧರ್ಮಾಚರಣೆ ೧೪೯

ಧರ್ಮಾಚರಣೆ-೧೪೯ ಮೃತಾಂಗಲಗ್ನವಿಕ್ರೇತುರ್ಗುರೋಸ್ತಾಡಯಿತುಸ್ತಥಾ | ರಾಜಯಾನಾಸನಾರೋಢುರ್ದಂಡ ಉತ್ತಮಸಾಹಸಃ || ದ್ವಿನೇತ್ರಭೇದಿನೋ ರಾಜದ್ವಿಷ್ಟಾದೇಶಕೃತಸ್ತಥಾ | ವಿಪ್ರತ್ವೇನ ಚ ಶೂದ್ರಸ್ಯ ಜೀವತೋಷ್ಟಶತೋ ದಮಃ || ಯಾಜ್ಞವಲ್ಕ್ಯ ಸ್ಮೃತಿ|| ಮೃತ ಶರೀರದ ಮೇಲಿನ ವಸ್ತ್ರ-ಹೂವು-ಆಭರಣ ಮೊದಲಾದವನ್ನು ಮಾರುವವರಿಗೆ ( ಪಟ್ಟಣಗಳಲ್ಲಿ ಸಹಜ ಪ್ರಕ್ರಿಯೆ) , ತಂದೆ ತಾಯಿ ಗುರುಗಳಿಗೆ ನಿಂದಿಸುವುದು- ಹೊಡೆಯುವುದು ಮಾಡುವವರಿಗೆ, ರಾಜನ ಅನುಮತಿ ಇಲ್ಲದೆ ಅವನ ವಾಹನಾದಿ ಏರುವವರಿಗೆ, ಕೋಪದಿಂದ ಇನ್ನೊಬ್ಬರ ದೃಷ್ಟಿಗೆ ಹಾನಿ ಮಾಡುವವಗೆ, ರಾಜನ ಅನಿಷ್ಟ ಸಾರುವವನಿಗೆ, ಊಟಕ್ಕಾಗಿ ಉಪವೀತ- ಮಣಿ-ಗೋಪೀ,ಭಸ್ಮ ಮೊದಲಾದವನ್ನು ಪ್ರದರ್ಶಿಸುವವನಿಗೆ ಹೆಚ್ಚಿನ ಶಿಕ್ಷೆ ವಿಧಿಸಬೇಕು.   ಸಂಗ್ರಹ: ಶ್ರೀನಿಧಿ ಅಭ್ಯಂಕರ್ http://shreenidhiabhyankar.blogspot.com/?m=1