ಪೋಸ್ಟ್‌ಗಳು

ಅಕ್ಟೋಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಮಾಯಣ ೧೫೨

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೨🏝📖  *ನಾಲ್ಪಸನ್ನಿಚಯಃ ಕಶ್ಚಿದಾಸೀತ್ತಸ್ಮಿನ್ಪುರೋತ್ತಮೇ | ಕುಟುಂಬೀ ಯೋ ಹ್ಯಸಿದ್ಧಾರ್ಥೋ ಗವಾಶ್ವಧನಧಾನ್ಯವಾನ್ || ಕಾಮೀ ವಾ ನ ಕದರ್ಯೋ ವಾ ನೃಶಂಸಃ ಪುರುಷಃ ಕ್ವಚಿತ್ | ದ್ರಷ್ಟುಂ ಶಕ್ಯಮಯೋಧ್ಯಾಯಾಂ ನಾವಿದ್ವಾನ್ನ ಚ ನಾಸ್ತಿಕಃ ||* _ಅಯೋಧ್ಯೆಯಲ್ಲಿ ಎಂತಹ ಜನರಿದ್ದರೆಂಬ ವರ್ಣನೆ ಇಲ್ಲಿದೆ. ಆ ನಗರದಲ್ಲಿ ಅಲ್ಪಧನದಿಂದ ಕಷ್ಟಪಟ್ಟು ಜೀವನ ಸಾಗಿಸುವ ಒಬ್ಬರೂ ಇರಲಿಲ್ಲ. ಸಾಕಷ್ಟು ಧನಸಂಪತ್ತು ಜನರ ಬಳಿಯಲ್ಲಿತ್ತು. ಧನವೇ ಮುಖ್ಯವಾಗಿ ತೃಪ್ತಿ ಹೇತು. ಅದೇ ಸಾಕಷ್ಟಿದ್ದರೆ ಜನರು ಸದಾ ಸುಖಿಗಳು. ಬಹುಶಃ ಬಡಬ್ರಾಹ್ಮಣರು ಅಥವಾ ದೀನರು ಎಂಬ ಪದ ಅಯೋಧ್ಯೆಯಲ್ಲಿ ಮಾಯವಾಗಿತ್ತು. ಧರ್ಮ-ಅರ್ಥ-ಕಾಮಗಳನ್ನು ಸಾಧಿಸದ, ಗೋ-ಅಶ್ವ-ಧನ-ಧಾನ್ಯ ಮೊದಲಾದ ಸಂಪತ್ತಿಲ್ಲದ ಕುಟುಂಬಿ ಒಬ್ಬರೂ ಇರಲಿಲ್ಲ. ಕುಟುಂಬಿ ಎಂದರೆ *ಮಾತಾ ಪಿತಾ ಸ್ನುಷೇ ಪುತ್ರೌ ಪುತ್ರೀ ಪತ್ನ್ಯತಿಥಿಃ ಸ್ವಯಮ್ |ದಶಸಂಖ್ಯಃ ಕುಟುಂಬೀ*  ಎಂಬಂತೆ ತಾಯಿ-ತಂದೆ-ಇಬ್ಬರು ಸೊಸೆಯರು-ಇಬ್ಬರು ಗಂಡುಮಕ್ಕಳು-ಮಗಳು-ಪತ್ನಿ- ಅತಿಥಿ ಮತ್ತು ಯಜಮಾನ. ಇವರು ಸಮೃದ್ಧವಾಗಿ ಬದುಕಲು ಬೇಕಾದ ಎಲ್ಲಾ ಸೌಕರ್ಯಗಳು ಅಯೋಧ್ಯೆಯಲ್ಲಿ ಬಹುಕಾಲದಿಂದ ನೆಲೆಸಿದ್ದವು. ಹಿಂದೆ ಗೋವನ್ನೂ ಮುಖ್ಯ ಸಂಪತ್ತಾಗಿ ಪರಿಗಣಿಸುತ್ತಿದ್ದರು. ಯುದ್ಧದ ದೃಷ್ಟಿಯಿಂದ ಅಶ್ವಗಳು ಒಂದು ಸಂಪತ್ತು. ಧನ ಧಾನ್ಯ ಸಾರ್ವಕಾಲಿಕ ಸಾರ್ವದೇಶಿಕ  ಸಂಪತ್ತು. ಇವಿಷ್ಟಿದ್ದರೂ ಧರ್...

ರಾಮಾಯಣ ೧೫೧

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೧🏝📖  *ತೇನ ಸತ್ಯಾಭಿಸಂಧೇನ ತ್ರಿವರ್ಗಮನುತಿಷ್ಠತಾ | ಪಾಲಿತಾ ಸಾ ಪುರೀ ಶ್ರೇಷ್ಠಾ ಇಂದ್ರೇಣೇವಾಮರಾವತೀ || ತಸ್ಮಿನ್ಪುರವರೇ ಹೃಷ್ಟಾ ಧರ್ಮಾತ್ಮಾನೋ ಬಹುಶ್ರುತಾಃ | ನರಾಸ್ತುಷ್ಟಾ ಧನೈಃಸ್ವೈಃ ಸ್ವೈರಲುಬ್ಧಾಃ ಸತ್ಯವಾದಿನಃ ||* _ಆರನೇ ಸರ್ಗದಲ್ಲಿ ದಶರಥನ ಹಾಗೂ ಅವನ ಪ್ರಜೆಗಳ ವರ್ಣನೆ ಇದೆ. ದಶರಥನು ಸತ್ಯವ್ರತನಾಗಿ ಧರ್ಮ-ಅರ್ಥ-ಕಾಮಗಳೆಂಬ ಪುರುಷಾರ್ಥಗಳನ್ನು ಸಾಧನೆಮಾಡುತ್ತಾ ಇಂದ್ರನು ಅಮರಾವತಿಯನ್ನು ಪಾಲಿಸುವಂತೆ ಇಲ್ಲಿ ಆಡಳಿತ ನಡೆಸುತ್ತಿದ್ದನು. ಇಲ್ಲಿ ಸತ್ಯವೇ ಒಂದು ವ್ರತ ಮಹಾರಾಜನಿಗೆ. ರಾಮಾಯಣ ಕಥೆ ನಡೆಯಲು ಇದೂ ಒಂದು ಕಾರಣ. ಶ್ರವಣ ಕುಮಾರನನ್ನು ಕೊಂದ ಕ್ಷಣದಲ್ಲಾಗಲಿ, ಕೈಕೇಯಿ ಬೇಡಿದ ಕ್ಷಣದಲ್ಲಾಗಲಿ ದಶರಥನಿಗೆ ಸತ್ಯವೇ ವ್ರತವಾಗಿತ್ತು. ನಮಗೆಲ್ಲ ಈ ಸತ್ಯವೆಂಬ ವ್ರತ ಮಾದರಿ. ಬೇರೆಲ್ಲಾ ವ್ರತಗಳನ್ನು ಆಚರಿಸಿ ಸತ್ಯವನ್ನು ಅಥವಾ ಪರಹಿತವನ್ನು ಬಯಸದ ಬದುಕು ಎಂದಿಗೂ ಬದುಕಲ್ಲ, ಅದೊಂದು ಸತ್ವರಹಿತ ಬದುಕು. ದಶರಥನು ತ್ರಿವರ್ಗಗಳನ್ನು ಸೇವಿಸುತ್ತಿದ್ದನು ಎಂದಿದೆ. ತ್ರಿವರ್ಗಗಳ ಸರಿಯಾದ ಸೇವನೆ ನಾಲ್ಕನೆಯ ಮೋಕ್ಷಕ್ಕೆ ಹೆದ್ದಾರಿ. ಮೂರೂ ಒಂದಕ್ಕೊಂದು ಪೂರಕವಾಗಿದ್ದು ನಾಲ್ಕನೆಯದನ್ನು ಸಾಧಿಸಲು ಅನುವು ಮಾಡಿಕೊಡುವಂತಿರಬೇಕು. ಅರ್ಥ- ಕಾಮಗಳ ಸಂಪಾದನೆ ಅಥವಾ ಅನುಭವ ಧರ್ಮವನ್ನು ಬಿಟ್ಟಿರದೆ ಧರ್ಮದ ಚೌಕಟ್ಟಿನಲ್ಲಿ ಸಾಗಿದಾಗ ಅದಕ್ಕೊಂದು ಸೌಂದರ್ಯ, ಗಾಂಭೀರ್ಯ. ಇಲ್ಲದಿದ್ದರೆ ದ...

ಪದಶಕ್ತಿ‌ ೩೩

🏹*ಪದಶಕ್ತಿ* ---೩೩🌄 *ವಿಮಾನ* _ಸ್ವರ್ಗದ ಯಾನದ ಹೆಸರೇ ವಿಮಾನ. *ವಿಶಿಷ್ಟಂ ಮಾನಯಂತಿ ಅನೇನ* ಎಂಬಂತೆ ಇದರಿಂದಾಗಿ ಒಳಗಿರುವವರ ಅಥವಾ ಪ್ರಯಾಣಿಕರ ಗೌರವ ಹೆಚ್ಚಾಗುವುದು ಅಥವಾ ಅವರಿಗೆ ಸುಖ ದೊರಕುವುದು ಅಥವಾ ಇದರೊಳಗೆ ಸೇರಿದರೆ ಗೌರವಿಸುವುದು ಇತ್ಯಾದಿ ಅರ್ಥದಲ್ಲಿ ಆಕಾಶವಾಹಕ ವಿಮಾನ. ಇನ್ನೊಂದು ಅರ್ಥದಲ್ಲಿ ನೋಡುವುದಾದರೆ *ವಿಶೇಷೇಣ ಮಾಂತಿ* ವಿಶಿಷ್ಟವಾಗಿ ಶೋಭಿಸುತ್ತದೆ ಅಥವಾ ವಿಶಿಷ್ಠವಾದ ಸತ್ಕಾರ ನೀಡುತ್ತದೆ ವಿಮಾನ. ಮತ್ತೊಂದು ಅರ್ಥದಲ್ಲಿ *ವಿಗತಂ ಮಾನಂ ಅಸ್ಯ* ಎಂದರೆ ಮಾನ ಹೋಯ್ತು ಎಂದಲ್ಲ. ಇದಕ್ಕೆ ಸಮನಾದ ಹೋಲಿಕೆ ಅಥವಾ ಉಪಮೆ ಇಲ್ಲ ಎಂಬ ಅರ್ಥದಲ್ಲಿ ಅಸದೃಶವಾದುದು ವಿಮಾನ. ಇದರಿಂದಾಗಿ ರಥಾದಿಗಳ ಮಾನ ಹೋಯ್ತು ಎಂದು ಕಲ್ಪನೆಯನ್ನು ಮಾಡಬಹುದು. ಇವೆಲ್ಲ ಅರ್ಥಕಲ್ಪನೆ ಕುಬೇರನ ಬಳಕೆಯಲ್ಲಿದ್ದ ಅನಂತರ ರಾವಣ ಕಿತ್ತುಕೊಂಡ ಸದ್ಯಕ್ಕೆ ದೇವಲೋಕದಲ್ಲಿರುವ ಪುಷ್ಪಕ ವಿಮಾನದ್ದು. ಏಕೆಂದರೆ ಅದು ಪ್ರಯಾಣಿಕನ ಮನಸ್ಸಿನ ವೇಗಕ್ಕೆ ಹೊಂದಿಕೊಂಡು ಯಾವ ಪ್ರದೇಶಕ್ಕೆ ಬೇಕಾದರೂ ಕೊಂಡೊಯ್ಯುವ ಮಹಿಮೆ ಹೊಂದಿದೆ. ರಾಕ್ಷಸ- ದೇವತೆ ಇತ್ಯಾದಿ ಯಾವ ಭೇದವೂ ಇಲ್ಲದೆ ಯಾವತ್ತಿಗೂ ಕೈಕೊಡದೇ ಒಡೆಯನ  ಸೇವೆ ಮಾಡುವ ಹಾಗೂ ಮನೆಯ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಅತ್ಯಾಧುನಿಕ ವಿಮಾನವದು. ಈ ವಿಮಾನ ಶಬ್ದವು ಇನ್ನೊಂದು ಅರ್ಥದಲ್ಲೂ ಬಳಕೆಯಲ್ಲಿ ಇದೆ. ಏಳು ಮಹಡಿ ಅಥವಾ ಅದಕ್ಕಿಂತ ಹೆಚ್ಚು ಎತ್ತರದ ಗಗನಚುಂಬಿ ಕಟ್ಟಡಗಳನ್ನು ವಿಮಾನ ಎನ್ನುತ್ತಾರೆ‌ ಸಂಸ್ಕೃತ...

ರಾಮಾಯಣ ೧೫೦

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೦🏝📖 *ಆಯತಾ ದಶ ಚ ದ್ವೇ ಚ ಯೋಜನಾನಿ ಮಹಾಪುರೀ | ಶ್ರೀಮತೀ ತ್ರೀಣಿ ವಿಸ್ತೀರ್ಣಾ ಸುವಿಭಕ್ತಮಹಾಪಥಾ || ರಾಜಮಾರ್ಗೇಣ ಮಹತಾ ಸುವಿಭಕ್ತೇನ ಶೋಭಿತಾ | ಮುಕ್ತಪುಷ್ಪಾವಕೀರ್ಣೇನ ಜಲಸಿಕ್ತೇನ ನಿತ್ಯಶಃ ||* _ಐದನೇ ಸರ್ಗದಲ್ಲಿ ಅಯೋಧ್ಯೆಯ ಪರಿಚಯ ಇದೆ. ಅಯೋಧ್ಯೆ ಎಷ್ಟು ವಿಸ್ತಾರವಾಗಿತ್ತು ಎಂದರೆ ಹನ್ನೆರಡು ಯೋಜನಗಳಷ್ಟು ಉದ್ದ = ಸುಮಾರು ೧೫೬ ಕಿಲೋಮೀಟರ್, ಹಾಗೂ ಮೂರು ಯೋಜನಗಳಷ್ಟು ಅಗಲ= ೩೯ ಕಿಲೋಮೀಟರ್ ವಿಶಾಲವಾಗಿತ್ತು. ಮನು ಚಕ್ರವರ್ತಿಯಿಂದ ನಿರ್ಮಿಸಲ್ಪಟ್ಟ ಆ ನಗರದಲ್ಲಿ ಬೀದಿಗಳು ಬಹಳ ಅಗಲವಾಗಿಯೂ ಸಾಲುಮರಗಳಿಂದ ಅಲಂಕೃತವಾಗಿಯೂ ಇತ್ತು. ನೇರವಾದ ಹಾಗೂ ಅಗಲವಾದ ಹಳ್ಳ ತಿಟ್ಟುಗಳಿಲ್ಲದ ರಾಜಮಾರ್ಗಗಳಿದ್ದವು ಆ ನಗರದಲ್ಲಿ. ಎಲ್ಲಾ ಸಮಯದಲ್ಲಿ ಹೂವು ಬಿಡುವ ಮರಗಳಿಂದಾಗಿ ಯಾವಾಗಲೂ ಉದುರಿದ ಹೂಗಳಿಂದ ಸದಾ ಸುಗಂಧಭರಿತವಾಗಿದ್ದವು ಆ ವೀಥಿಗಳು. ನಿತ್ಯವೂ ಮಣ್ಣು ಎದ್ದು ಧೂಳಾಗದಂತೆ ನೀರು ಸಿಂಪಡಿಸುವ ವ್ಯವಸ್ಥೆಯೂ ಅಲ್ಲಿತ್ತು. ರಾಮಾಯಣದ ಈ ವರ್ಣನೆ ನೋಡಿದರೆ ನಗರ ರಚನೆ ಎಷ್ಟು ವ್ಯವಸ್ಥಿತವಾಗಿತ್ತು ಹಿಂದೆ ಎಂಬುದು ಅರಿವಿಗೆ ಬರುತ್ತದೆ. ಜನಸಂಖ್ಯೆ ಈಗಿನಷ್ಟು ಇಲ್ಲದಿದ್ದರೂ ಜನರು ಸುಖವಾಗಿ ಇರಲೆಂದು ವಿಶಾಲ ನಗರಗಳನ್ನು ನಿರ್ಮಿಸುತ್ತಿದ್ದರು. ಬೀದಿಯಲ್ಲಿ ಸಂಚರಿಸುವವರಿಗೆ ನೆರಳಿಗೆ ಮರಗಳನ್ನು ಬೆಳೆಸುವ ಪರಂಪರೆ ಅಂದೇ ಚಾಲ್ತಿಯಲ್ಲಿತ್ತು. ರಾಜಬೀದಿಯಲ್ಲಿ ಸದಾ ಗಿಜಿಗಿಡುವ ಓಡಾಟದಿಂದಾಗಿ ಜನರ...

ಧರ್ಮಾಚರಣೆ ೪೮

    ಧರ್ಮಾಚರಣೆ--೪೮ ಗಾಯತ್ರೀ ರಹಿತೋ ವಿಪ್ರಃ ಶೂದ್ರಾದಪ್ಯಶುಚಿರ್ಭವೇತ್ | ಗಾಯತ್ರೀ ಬ್ರಹ್ಮ ತತ್ವಜ್ಞಾಃ ಸಂಪೂಜ್ಯಂತೇ ಜನೈರ್ದ್ವಿಜಾಃ || ಪರಾಶರ ಸ್ಮೃತಿ || ಬ್ರಾಹ್ಮಣ ಎಂದು ಕರೆಸಿಕೊಳ್ಳುವ ಮನುಷ್ಯನು ಅವಶ್ಯವಾಗಿ ಎರಡು ಹೊತ್ತು ಗಾಯತ್ರೀ ಮಂತ್ರವನ್ನು ಜಪಿಸಬೇಕು. ಹಾಗಿಲ್ಲದೆ ಇದ್ದಲ್ಲಿ ಅವನು ಉಳಿದವರಿಗಿಂತಲೂ ಅಶುಚಿ ಎಂದು ಕರೆಸಿಕೊಳ್ಳುತ್ತಾನೆ. ಗಾಯತ್ರಿ ಮಂತ್ರಪಠನ ಹಾಗೂ ದೇವರ ಅನುಸಂಧಾನವೇ ಶುದ್ಧತೆಗೆ ಮುಖ್ಯ ಕಾರಣ. ಸ್ನಾನ, ವಸ್ತ್ರ, ನೀರು ಮೊದಲಾದವು ನಂತರದ ವಿಷಯಗಳು. ಗಾಯತ್ರೀ ಮಂತ್ರ ದಿನವೂ ಜಪಿಸುತ್ತಾ ಬ್ರಹ್ಮತತ್ವವನ್ನು ಯಾರು ಚಿಂತಿಸುವರೋ ಅಂತಹವರು ಎರಡನೇ ಜನ್ಮ ಪಡೆದು ಅಂದರೆ ಶುದ್ಧರಾಗಿ ಎಲ್ಲರ ಗೌರವಕ್ಕೆ ಪಾತ್ರರಾಗುತ್ತಾರೆ. ಹಾಗಾಗಿ ಹುಟ್ಟು ಮಾತ್ರ ಬ್ರಾಹ್ಮಣ್ಯಕ್ಕೆ ಕಾರಣವಲ್ಲ. ಅವರ ಕರ್ತೃತ್ವವೇ ಮುಖ್ಯ ಕಾರಣ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಧರ್ಮಾಚರಣೆ ೪೭

    ಧರ್ಮಾಚರಣೆ--- ೪೭ ಅಜ್ಞಾತ್ವಾ ಧರ್ಮಶಾಸ್ತ್ರಾಣಿ ಪ್ರಾಯಶ್ಚಿತ್ತಂ ದದಾತಿ ಯಃ | ಪ್ರಾಯಶ್ಚಿತ್ತೀ ಭವೇತ್ಪೂತಃ ಕಿಲ್ಪಿಷಂ ಪರ್ಷದಿ ವ್ರಜೇತ್ || ಪರಾಶರ ಸ್ಮೃತಿ||    ಧರ್ಮಜ್ಞರಾಗಲಿ, ಜ್ಯೋತಿಷಿಗಳಾಗಲಿ, ಪಂಡಿತರಾಗಲಿ ಯಾವುದಾದರೂ ಪಾಪಗಳಿಗೆ, ದೋಷಗಳಿಗೆ, ಕುಕರ್ಮಗಳಿಗೆ ಪ್ರಾಯಶ್ಚಿತ್ತ ಹೇಳುವಾಗ ಶಾಸ್ತ್ರದ ನೆರವನ್ನು ಪಡೆದು ಹೇಳಬೇಕು. ಕರ್ತೃವಿನ ಅನುಕೂಲ,ಕಾಲ, ದೇಶ, ಧರ್ಮ ಇವುಗಳನ್ನು ಗಮನಿಸಿ ಶಾಸ್ತ್ರೋಕ್ತವಾದ ಪ್ರಾಯಶ್ಚಿತ್ತ ಹೇಳಿದರೆ ಪುಣ್ಯಭಾಗಿಯಾಗುವನು. ಹಾಗಲ್ಲದೆ ತನ್ನ ಮನಸ್ಸಿಗೆ ಬಂದಂತೆ ಉದ್ದುದ್ದ ಅಥವಾ ಮಾಡಲು ಅಸಾಧ್ಯವೆನಿಸುವಂತಹ ದೊಡ್ಡ ದೊಡ್ಡ ಪ್ರಾಯಶ್ಚಿತ್ತ ಹೇಳಿದರೆ ಕರ್ತೃವಿನ ಪಾಪ ಕಳೆಯುವ ತನಕ ಹೇಳಿದವನು ದೋಷವನ್ನು ಪಡೆಯುತ್ತಾನೆ. ಇನ್ನೊಬ್ಬರ ಪಾಪ ಕಳೆಯಲು ಹೋಗಿ ತಾನೇ ಪಾಪಿಯಾಗುವನು ಅಂತಹ ವ್ಯಕ್ತಿ. ಹಾಗಾಗಿ ಸ್ವಲ್ಪವೇ ಕಲಿತು ಅಥವಾ ಏನನ್ನೂ ಕಲಿಯದೇ ಉಪದೇಶ ಮಾಡುವ ವೃತ್ತಿ ಕೈಗೊಂಡರೆ ಶೀಘ್ರ ಅವಸಾನ ಹೊಂದುವರು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೪೬

   ಧರ್ಮಾಚರಣೆ ----೪೬ ಯಸ್ಯ ನ ದ್ವಿಗುಣಂ ದಾನಂ ಕೇಶಶ್ಚ ಪರಿರಕ್ಷಿತಃ | ತತ್ಪಾಪಂ ತಸ್ಯ ತಿಷ್ಠೇತ ತ್ಯಕ್ತ್ವಾ ಚ ನರಕಂ ವ್ರಜೇತ್ ||   ಯತ್ಕಿಂಚಿತ್ ಕ್ರಿಯತೇ ಪಾಪಂ ಸರ್ವಂ ಕೇಶೇಷು ತಿಷ್ಠತಿ | ಸರ್ವಾನ್ಕೇಶಾನ್ಸಮುದ್ಧೃತ್ಯ ಛೇದಯೇದಂಗುಲಿದ್ವಯಮ್ || ಪರಾಶರ ಸ್ಮೃತಿ|| ಅಕಾರಣವಾಗಿ ಬಹುದಿನಗಳ ಕಾಲ ಯಾರೂ ಕೂದಲನ್ನು ಉಳಿಸಿಕೊಳ್ಳಬಾರದು. ( ವ್ರತ, ದೀಕ್ಷೆ ಬಿಟ್ಟು) ಒಂದು ವೇಳೆ ಹಾಗೆ ಉಳಿಸಿಕೊಂಡರೆ ದ್ವಿಗುಣ ದಾನವನ್ನು ನೀಡಬೇಕಾಗುವುದು. ಹಾಗೆ ಕೊಡದಿದ್ದರೆ ನರಕಗಾಮಿಯಾಗುವರು. ಹಾಗಾಗಿ ಸಿನೆಮಾ ಅಥವಾ ಕ್ರೀಡಾಳುಗಳನ್ನು ಅನುಸರಿಸಿ ಬಹುಕಾಲ ಪುರುಷರು ಕೇಶವನ್ನು ಬಿಡುವುದು ಸರಿಯಲ್ಲ. ನಾವು ಸಣ್ಣ ಪಾಪ ಮಾಡಿದರೂ ಅದು ಕೂದಲಿನಲ್ಲಿ ನೆಲೆಸುವುದು. ಹಾಗಾಗಿ ಅಂತಹ ಪ್ರಸಂಗದಲ್ಲಿ ಎರಡು ಅಂಗುಲದಷ್ಟಾದರೂ ಕೂದಲನ್ನು ಕತ್ತರಿಸಬೇಕು. ಈ ಕಾರಣಗಳಿಂದಲೇ ಹಿಂದಿನವರು ಹೇಳುತ್ತಿದ್ದುದು - ಕೂದಲು, ಉಗುರು ಬಹುಕಾಲ ಬಿಡದೇ ಬೆಳೆದಂತೆ ಕತ್ತರಿಸಬೇಕು. ಮನೆಯ ಹತ್ತಿರ ಬಿಸಾಡದೇ ದೂರದಲ್ಲಿ ಗಿಡದ ಕೆಳಗೆ ಅಥವಾ ಯಾರೂ ತುಳಿಯದ ಜಾಗದಲ್ಲಿ ವಿಸರ್ಜಿಸಬೇಕು ಎಂಬುದಾಗಿ. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಅನುವಾದಿತ ಕಥೆ ೨೧

   अनूदित कथावलि: --२१          महामारी कं न पीडयति ? तत्र एक: सुखी कुटुम्ब: | ग्रामादागत्य अपारश्रमेण नगरे धनादि अर्जयित्वा वृद्धिमाप्तवान्  कुटुम्बमुख्य: |  बाल्ये एव तस्य पिता यमसदनं गत: | अग्रज: उत्तमम्  अध्ययनं कृत्वा नगरे उद्योगं तत्समये एव प्राप्तवान् आसीत्। सहजतया कुटुम्बभरणं तेनैव कृतम् । कनिष्ठेन एवं चिन्तितम् - अग्रजस्य एकस्य धनार्जनं कुटुम्बभरणार्थं न पर्याप्तं भवति , अत: अहमपि कञ्चन उद्योगं करोमीति । किंतु स: द्वादशकक्ष्यापर्यन्तमेव पठितवानासीत् , तेन स: एकस्मिन् आपणे सहायकत्वेन नियुक्त: । दिवा  कार्यं समाप्य सन्ध्याकाले पदवी शिक्षणार्थं विद्यालयं गत्वा पदवीं प्राप्तवान्।  तस्य आपणस्य स्वामी एक: सज्जन: । तस्य एक  एव पुत्र: उन्नतशिक्षणं समाप्य वैदेशिक्यां संस्थायां कार्यमग्न: आसीत्। तेन स्वामिना एवं चिन्तितम् - मया अल्पवेतनं दीयमानमपि एष: ऋजुमार्गेण कार्यं कुर्वन्नस्ति , कालेगते एष एव आपणस्वामी भवितुं अर्हः  इति व्यापारस्य सर्वसूक्ष्म विषयान् तस्मै क्रमशः उपदिदेश । कार्यकुशलेन एतेन तत्सर्वं मनसि सुष्टु स्थ...

ಧರ್ಮಾಚರಣೆ ೪೫

   ಧರ್ಮಾಚರಣೆ--- ೪೫ ಕ್ಷುತೇ ನಿಷ್ಠೀವನೇ ಚೈವ ದಂತೋಚ್ಛಿಷ್ಟೇ ತಥಾನೃತೇ | ಪತಿತಾನಾಂ ಚ ಸಂಭಾಷೇ ದಕ್ಷಿಣಂ ಶ್ರವಣಂ ಸ್ಪೃಶೇತ್ || ಪರಾಶರ ಸ್ಮೃತಿ|| ಸಭೆಯಲ್ಲಿ ಅಥವಾ ಪ್ರಯಾಣದಲ್ಲಿ ಅಥವಾ ಪೂಜಾದಿಗಳಲ್ಲಿ ತೊಡಗಿದ್ದಾಗ ಸೀನು ಬಂದರೆ, ಆಕಳಿಕೆ ಬಂದರೆ, ಉಗುಳು ಹೊರ ಚೆಲ್ಲಿದರೆ, ಹಲ್ಲಿನಲ್ಲಿ ಏನೋ ಆಹಾರಶೇಷ ಸಿಕ್ಕಿಕೊಂಡು ಕಿರಿಕಿರಿಯೆಂದು ತೆಗೆದಾಗ, ಆಕಸ್ಮಿಕವಾಗಿ ಸುಳ್ಳು ನುಡಿದಾಗ , ಕೆಟ್ಟ ಮನಸ್ಥಿತಿಯ ವ್ಯಕ್ತಿಗಳೊಡನೆ ಸಂಭಾಷಣೆ ಮಾಡಿದಾಗ ದೋಷ ನಿವೃತ್ತಿಗೆ ಬಲಗಿವಿಯನ್ನು ಸ್ಪರ್ಶಿಸಬೇಕು. ಸಮೀಪದಲ್ಲಿ ನೀರಿನ ಲಭ್ಯತೆ ಕಂಡುಬಂದರೆ ಅಚಮನ ಮಾಡಬೇಕು, ಹಾಗಲ್ಲದಿದ್ದರೆ ಬಲಗಿವಿಯ ಸ್ಪರ್ಶದಿಂದ ಶೌಚವು ಸಂಪನ್ನವಾಗುವುದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಧರ್ಮಾಚರಣೆ ೪೪

   ಧರ್ಮಾಚರಣೆ---೪೪ ಯದ್ವದಂತಿ ತಮೋ ಮೂಢಾ ಮೂರ್ಖಾ ಧರ್ಮಮತದ್ವಿದಃ | ತತ್ಪಾಪಂ ಶತಧಾ ಭುಕ್ತ್ವಾ ತದ್ವಕ್ತೃಮಧಿಗಚ್ಛತಿ || ಪರಾಶರ ಸ್ಮೃತಿ|| ಯಾವ ವಿಷಯದ ಬಗ್ಗೆಯೂ ಹೆಚ್ಚು ವಿಚಾರ ಮಾಡದೇ ಧರ್ಮೋಪದೇಶ ಮಾಡಿದರೆ ಉಪದೇಶ ಕೇಳಿ ಆಚರಿಸುವವನ ನೂರ್ಮಡಿ ಪಾಪ ಉಪದೇಶಕನನ್ನು ಸೇರುವುದು. ಜಪ ಹತ್ತು ಮಾಡಿದರೂ ಸಾಕು, ಅಶೌಚ ಆಚರಿಸದಿದ್ದರೂ ತೊಂದರೆ ಇಲ್ಲ, ಪೂಜೆ- ವ್ರತ- ಶೌಚದ ಆಚರಣೆ ಅಲ್ಪವಾದರೂ ಸಾಕು ಇತ್ಯಾದಿ ಮನಸ್ಸಿಗೆ ಬಂದಂತೆ ಅಥವಾ ಆಪತ್ಕಾಲದ ಧರ್ಮವನ್ನು ಸಾಮಾನ್ಯ ಧರ್ಮದಂತೆ ಉಪದೇಶಿಸಿದರೆ ಅದರಿಂದ ಸಮಾಜದ ಸದಾಚಾರಕ್ಕೆ ಕುಂದುಂಟಾಗಿ ಇಂತಹ ಉಪದೇಶ ಮಾಡಿದವನು ಪಾಪಿಯಾಗುವನು. ಹಾಗಾಗಿ ಸಂಪ್ರದಾಯವೆಂತಲೋ, ರೂಢಿಯೆಂತಲೋ ತಪ್ಪು ಆಚರಣೆಗಳ ಉಪದೇಶ ಎಂದಿಗೂ ಸಲ್ಲದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಪದಶಕ್ತಿ ೩೨

🏹*ಪದಶಕ್ತಿ* ---೩೨🌄   *ಸ್ವಾರಾಜ್* _ಇಂದ್ರನ ಹೆಸರು. ಸ್ವ ಎಂದರೆ ಸ್ವರ್ಗ. ಸ್ವರ್ಗದಲ್ಲಿ ಶೋಭಿಸುತ್ತಾನೆ ರಾಜನಾಗಿ. ಇನ್ನೊಂದು ಸ್ವ ಎಂದರೆ ದೇವತೆಗಳು. ಅವರಿಗೆ ಒಡೆಯನಾಗಿ ದೇವರಾಜನಾಗಿ ಮಿಂಚುತ್ತಿದ್ದಾನೆ. ಇನ್ನೊಂದು ಅರ್ಥ ಸ್ವ ಅಂದರೆ ಧನ. ಸ್ವರ್ಗದಲ್ಲಿ ಅಪಾರ ಸಂಪತ್ತಿನಿಂದ ಮೆರೆಯುತ್ತಿರುವನು. ಮತ್ತೊಂದು ಅರ್ಥದಲ್ಲಿ ಸು ಎಂದರೆ ಒಳ್ಳೆಯ ಸಂಪತ್ತಿನಿಂದ ಎಲ್ಲೆಡೆ ರಾಜಿಸುತ್ತಿರುವನು ಎಂಬುದಾಗಿ. ಇಂದ್ರ ಶಬ್ದದ ಅರ್ಥವೇ ಐಶ್ವರ್ಯಾಧಿಪತಿ ಎಂದು. ಇಲ್ಲಿ ಅದನ್ನೂ ಹೇಳಲಾಗಿದೆ._ ಭಾಗವತದ ಈ ಶ್ಲೋಕದಲ್ಲಿ ಸ್ವಾರಾಜ್ಯ ಪದದ ಬಳಕೆಯಿದೆ. *भवान् भक्तिमता लभ्यो दुर्लभः सर्वदोहिनाम् । स्वाराज्यस्याप्यभिमत एकान्तेना- त्मविद्गतिः* _ಭಗವಂತನು ಭಕ್ತಿಗೆ ಮಾತ್ರ ಒಲಿಯುವವನು.  ದೇವತೆಗಳು ಮುಕ್ತಿ ಪಡೆಯಲು ಇವನಲ್ಲೇ ಭಕ್ತಿ ನಡೆಸಬೇಕು. ಸ್ವರ್ಗವಾಸಿಗಳೆಂದಾಕ್ಷಣ ಮುಕ್ತಿ ಸಿಕ್ಕಿತೆಂದಲ್ಲ, ಹಾದಿ ಹತ್ತಿರವಿದೆ, ಬೇಕಾದರೆ ಭಕ್ತಿಯಿಂದ ಪಡೆಯಬಹುದು._ ಕನ್ನಡದ ದಾಸರು ಸ್ವರ್ಗ ಎಂಬ ಅರ್ಥದಲ್ಲಿ ಈ ಸ್ವಾರಾಜ್ಯವನ್ನು ಬಳಸಿದ್ದಾರೆ.  _ಶ್ಯಾಮಸುಂದರಾ ರಾಜರಾಜಪೂಜ್ಯ ಸ್ವಾರಾಜ್ಯ ಚೆನ್ನಕೇಶವಾ  ಸ್ವರ್ಗಾಧಿಪ ಚೆನ್ನಕೇಶವನೇ ಎಂದು ಸ್ತುತಿಸಿದ್ದಾರೆ‌._ _ಇಂದ್ರನು ನಮಗೂ ಸ್ವ ಎಂದರೆ ಸಂಪತ್ತನ್ನು, ದೇವತ್ವವನ್ನು, ಸ್ವರ್ಗವನ್ನೂ ಕರುಣಿಸಲೆಂದು ಪ್ರಾರ್ಥಿಸೋಣ._ ಸಂಗ್ರಹ: ಶ್ರೀನಿಧಿ ಅಭ್ಯಂಕರ್

ರಾಮಾಯಣ ೧೪೯

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೯🏝📖     *ಹ್ಲಾದಯನ್ಸರ್ವಗಾತ್ರಾಣಿ ಮನಾಂಸಿ ಹೃದಯಾನಿ ಚ | ಶ್ರೋತ್ರಾಶ್ರಯಸುಖಂ ಗೇಯಂ ತದ್ಬಭೌ ಜನಸಂಸದಿ || ತತಸ್ತು ತೌ ರಾಮವಚಃಪ್ರಚೋದಿತಾವಗಾಯತಾಂ ಮಾರ್ಗವಿಧಾನಸಂಪದಾ | ಸ ಚಾಪಿ ರಾಮಃ ಪರಿಷದ್ಗತಃ ಶನೈರ್ಬುಭೂಷಯಾ ಸಕ್ತಮನಾ ಬಭೂವ ಹ ||* _ಲವಕುಶರು ಆಸ್ಥಾನದಲ್ಲಿ ರಾಮನ ಇಚ್ಛೆಯಂತೆ ಗಾನವನ್ನು ಆರಂಭಿಸದರು. ಅವರ ದಿವ್ಯಗಾಯನವು ಎಲ್ಲರ ಶರೀರಕ್ಕೆ- ಮನಸ್ಸಿಗೆ- ಹೃದಯಕ್ಕೆ  ಆಹ್ಲಾದವನ್ನು ತಂದುಕೊಟ್ಟಿತು. ಅರ್ಥವಾಗುವಂತಹ ಭಾಷೆ ಹಾಗೂ ಮಧುರಧ್ವನಿಯಲ್ಲಿ ರಾಮಚರಿತೆಯನ್ನು ಹಾಡುತ್ತಿದ್ದಾಗ ಕೇಳುಗರ ಹೃದಯ ತುಂಬಿಬಂತು. ಮನಸ್ಸು ಆನಂದದ ಅಲೆಯಲ್ಲಿ ತೇಲಲಾರಂಭಿಸಿತು. ಶರೀರವೂ ಆಯಾಸ ಹೊಂದದೇ ಬಹಳ ಹೊತ್ತು ಕೇಳುವ ಅವಕಾಶವನ್ನು ಒದಗಿಸಿತು. ಆ ಗಾನವು ಕಿವಿಗಳಿಗೆ ಅತ್ಯಂತ ಸುಖದಾಯಕವಾದ ಕಾರಣ ಜನರು ಸ್ವಲ್ಪವೂ ಶಬ್ದವಾಗದಂತೆ ಮೈಯೆಲ್ಲ ಕಿವಿಯಾಗಿ ಆಲಿಸಿ ಆನಂದಿಸಿದರು. ಹಿಂದಿನ ದಿನದ ಜನರ ಆಸಕ್ತಿ ಕಂಡ ರಾಮನು ಮತ್ತೆ ಅವರ ಗಾಯನವನ್ನು ಮುಂದುವರೆಸುವಂತೆ ವಿನಂತಿಸಿದನು. ಆ ಮಕ್ಕಳು *ಮಾರ್ಗ* ಎಂಬ ಸಂಗೀತ ಸಂಪ್ರದಾಯವನ್ನು ಅನುಸರಿಸಿ ಹೃದಯಮುಟ್ಟುವಂತೆ ಹಾಡಿದರು. ಸಂಗೀತದಲ್ಲಿ ಎರಡು ಪ್ರಕಾರದ ಸಂಪ್ರದಾಯಗಳು ಹಿಂದೆ ಇದ್ದವು- ದೇಶೀ ಹಾಗೂ ಮಾರ್ಗ. ಪ್ರಾಕೃತಗೀತೆಗಳನ್ನು ದೇಶೀ ಸಂಪ್ರದಾಯದಲ್ಲಿ ಹಾಡಿದರೆ, ಸಂಸ್ಕೃತ ಗೀತೆಗಳನ್ನು ಮಾರ್ಗ ಪದ್ಧತಿಯಲ್ಲಿ ಹಾಡುತ್ತಿದ್ದರು. ಇಲ್ಲಿ...

ಧರ್ಮಾಚರಣೆ ೪೩

  ಧರ್ಮಾಚರಣೆ ---೪೩ ರಜಸಾ ಶುದ್ಧ್ಯತೇ ನಾರೀ ವಿಕೃತಿಂ ಸಾ ನ ಗಚ್ಛತಿ | ನದೀ ವೇಗೇನ ಶುದ್ಧ್ಯೇತ ಲೇಪೋ ಯದಿ ನ ದೃಶ್ಯತೇ || ಪರಾಶರ ಸ್ಮೃತಿ|| ಉತ್ತಮಸ್ತ್ರೀಯನ್ನು ಪರಪುರುಷರು ಸ್ಪರ್ಶ- ಕಿರುಕುಳ- ಅನಾಚಾರಗಳಿಂದ ದೂಷಿತಳನ್ನಾಗಿ ಮಾಡಿದರೆ ಅವಳು ರಜಸ್ವಲೆ ಆಗುವುದರಿಂದ ಶುದ್ಧಳಾಗುವಳು‌ . ಅವಳಿಗೆ ಮನಸ್ಸಿಲ್ಲದೆ ತಪ್ಪು ಘಟಿಸಿದ ಪಕ್ಷದಲ್ಲಿ ಮಾತ್ರ ರಜಸ್ವಲೆಯಾಗಿ ಶುದ್ಧಳಾಗುವಳು. ತಾನೇ ಸ್ವತಃ ತಪ್ಪು ಮಾಡಿದರೆ ಪ್ರಾಯಶ್ಚಿತ್ತವಿಲ್ಲದೆ ಶುದ್ಧಳಲ್ಲ. ವೇಗವಾಗಿ ಹರಿಯುವ ನದಿ ನೀರಿಗೆ ಯಾವ ದೋಷವೂ ಇಲ್ಲ. ಎಷ್ಟೇ ಕೊಳೆ- ಕ್ರಿಮಿ- ರಾಸಾಯನಿಕ ಮಿಶ್ರವಾದರೂ ನೀರಿನ ವೇಗಕ್ಕೆ ಅದು ಕೊಚ್ಚಿಕೊಂಡು ಮುಂದೆ ಹೋಗುವುದು. ಗಂಗೆ ಅದೇ ಕಾರಣದಿಂದ ಸದಾ ಶುದ್ಧಳು. ನಿಂತ ನೀರಲ್ಲಿ ಮಲಿನತೆ ಜನಸಂಸರ್ಗದಿಂದ ಸಹಜವಾಗಿ ಹುಟ್ಟುವುದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಧರ್ಮಾಚರಣೆ ೪೨

   ಧರ್ಮಾಚರಣೆ--- ೪೨ ಅಷ್ಟವರ್ಷಾ ಭವೇದ್ಗೌರೀ ನವವರ್ಷಾ ತು ರೋಹಿಣೀ | ದಶವರ್ಷಾ ಭವೇತ್ಕನ್ಯಾ ಅತ ಊರ್ಧ್ವಂ ರಜಸ್ವಲಾ || ಪರಾಶರ ಸ್ಮೃತಿ|| ನಮ್ಮ ಪರಂಪರೆಯಲ್ಲಿ ಅದರಲ್ಲೂ ನವರಾತ್ರಿ ದುರ್ಗಾಪೂಜೆ ತ್ರಿಕಾಲ ಪೂಜೆ ಮೊದಲಾದ ಸಮಯದಲ್ಲಿ ಸ್ತ್ರೀಯನ್ನು ದೇವಿಯೆಂದು ಭಾವಿಸಿ ಪೂಜಿಸುವ ಉಪಚರಿಸುವ ಕ್ರಮ ಇದೆ. ಇದಕ್ಕೆ ಎಷ್ಟು ವರ್ಷದೊಳಗಿನ ಸ್ತ್ರೀಯರು  ಯೋಗ್ಯರು ಎಂದರೆ ಅದಕ್ಕೆ ಶಾಸ್ತ್ರದ ವಚನ ಹೀಗಿದೆ- ಎಂಟು ವರ್ಷದ ಹುಡುಗಿಯನ್ನು ಗೌರೀ ಎನ್ನುತ್ತಾರೆ. ಕೆಲವು ಪೂಜೆಗಳಲ್ಲಿ ಗೌರೀ ಆರಾಧನೆ ಹೇಳಲ್ಪಟ್ಟಿದೆ. ಇನ್ನು ಒಂಭತ್ತು ವರ್ಷದ ಹುಡುಗಿಗೆ ರೋಹಿಣಿ ಎಂಬ ಹೆಸರು. ದಶವರ್ಷದ ಹುಡುಗಿ ಕನ್ಯೆ ಎಂದು ಕರೆಸಿಕೊಳ್ಳುವಳು. ಕನ್ಯೆಯನ್ನು ಕರೆಸಿ ಮಂಗಲವಸ್ತುಗಳನ್ನಿತ್ತು ದೇವೀಪ್ರೀತ್ಯರ್ಥ ಉಪಚಾರ ಮಾಡುವಾಗ ಆಯಾ ವರ್ಷದ ಸ್ತ್ರೀ ಯರನ್ನು ಆರಾಧಿಸಬೇಕು. ಆಗ ಆ ಆರಾಧನೆ ಸಾರ್ಥಕವಾಗುತ್ತದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ರಾಮಾಯಣ ೧೪೮

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೮ 🏝📖     *ಅಹೋ ಗೀತಸ್ಯ ಮಾಧುರ್ಯಂ ಶ್ಲೋಕಾನಾಂ ತು ವಿಶೇಷತಃ| ಚಿರನಿರ್ವೃತ್ತಮಪ್ಯೇತತ್ಪ್ರತ್ಯಕ್ಷಮಿವ ದರ್ಶಿತಮ್ || ಪ್ರವಿಶ್ಯ ತಾವುಭೌ ಸುಷ್ಠು ಭಾವಂ ಸಮ್ಯಗಗಾಯತಾಮ್ | ಸಹಿತೌ ಮಧುರಂ ರಕ್ತಂ ಸ್ವರಸಂಪದಾ ||* _ವಾಲ್ಮೀಕಿ ಮಹರ್ಷಿಗಳ ಆಜ್ಞೆಯಂತೆ ರಾಮಾಯಣವನ್ನು ಸುಮಧುರಕಂಠದಿಂದ ಹಾಡಿದರು. ಅದನ್ನು ಕೇಳಿ ಸ್ವತಃ ಮಹರ್ಷಿಗಳೇ ಬೆರಗಾಗಿ ಮಾಡಿದ ಉದ್ಗಾರ- ನಿಸ್ಚಯವಾಗಿಯೂ ಇವರ ಗಾಯನ ಎಷ್ಟು ಮಧುರ, ಶ್ಲೋಕಗಳಂತೂ ಬಹಳ ಇಂಪಾಗಿವೆ, ಇವರ ಕೋಕಿಲದನಿಯಲ್ಲಿ ಹೊರಟ ಈ ಆಖ್ಯಾನ ಬಹಳ ಕಾಲದವರೆಗೂ ಆ ಕಥೆ ನಮ್ಮ ಕಣ್ಣಮುಂದೆಯೇ ನಡೆದಂತೆ ತೋರುತ್ತಿದೆ. ಷಡ್ಜ ಮೊದಲಾದ ಸಪ್ತಸ್ವರಗಳಿಂದ ಪೂರ್ಣವಾದ ಇವರ ಗಾಯನವು ಪೂರ್ಣವಾಗಿ ಶೋಭಿಸುತ್ತಿದೆ. ಶೃಂಗಾರ- ವೀರ ಮೊದಲಾದ ರಸಗಳನ್ನು ಆಯಾ ಶ್ಲೋಕದಲ್ಲಿ ಯಥಾವತ್ತಾಗಿ ಒಡಮೂಡುವಂತೆ ಹಾಡುತ್ತಿದ್ದಾರೆ. ಒಮ್ಮೆಯೂ ಅಪಸಬ್ದಗಳು ಇವರ ಮೊಗದಿಂದ ಹೊರಹೊಮ್ಮಲಿಲ್ಲ. ಭಾವಪರವಶರಾಗಿ ತಮ್ಮನ್ನೇ ಮರೆತುಹೋದವರಂತೆ ಹಾಡುತ್ತಿರುವರಲ್ಲ ಈ ಮಕ್ಕಳು. ಏನಿದು ಆಶ್ಚರ್ಯ! ಗುರುವೊಬ್ಬ ಶಿಷ್ಯರ ಏಳ್ಗೆ ಅಥವಾ ಸಾಧನೆ ಕಂಡು ಮನದುಂಬಿ ಪ್ರಶಂಸಿಸುವ ಸಾಲುಗಳಿವು. ಸ್ವತಃ ಕರ್ತೃವಿಗೆ ಆನಂದಾಶ್ರು ಉಕ್ಕುವಂತೆ ಮಾಡುವ ರಾಮಾಯಣದ ಶ್ಲೋಕಗಳ ಮಹಿಮೆ ಇದು._ *ಪ್ರೀತಃ ಕಶ್ಚಿನ್ಮುನಿಸ್ತಾಭ್ಯಾಂ ಸಸ್ಮಿತಃ ಕಲಶಂ ದದೌ | ಪ್ರಸನ್ನೋ ವಲ್ಕಲಂ ಕಶ್ಚಿದ್ದದೌ ತಾಭ್ಯಾಂ ಮಹಾತಪಾಃ|| ಅನ್ಯಃ...

ಧರ್ಮಾಚರಣೆ ೪೧

ಧರ್ಮಾಚರಣೆ---೪೧ ಭಸ್ಮನಾ ತು ಭವೇಚ್ಛುದ್ಧಿಃ ಉಭಯೋಸ್ತಾಮ್ರಕಾಂಸ್ಯಯೋಃ| ಜಲಶೌಚೇನ ವಸ್ತ್ರಾಣಾಂ ಪರಿತ್ಯಾಗೇನ ಮೃಣ್ಮಯಮ್ || ಪರಾಶರ ಸ್ಮೃತಿ|| ದೇವಪೂಜೆಗೆ, ಹೋಮಕ್ಕೆ ತಾಮ್ರ ಅಥವಾ ಕಂಚಿನ ಪಾತ್ರೆಗಳ ಬಳಕೆ ಶ್ರೇಷ್ಠ. ಅವುಗಳು ಒಂದೊಮ್ಮೆ ಅಶುಚಿಯಾದರೆ ಅವುಗಳನ್ನು ಗೋಮಯದಿಂದ ಮಾಡಿದ ಭಸ್ಮದಿಂದ ಒರೆಸಿದರೆ ಅವು ಶುದ್ಧವಾಗುತ್ತವೆ. ಹುಳ ಇತ್ಯಾದಿ ಬಂದರೆ, ಸ್ನಾನ ಮಾಡದೆ ಸ್ಪರ್ಶಿಸಿದರೆ, ಕೊಳೆಯಾಗಿದ್ದರೆ ಅಂತಹ ಸಮಯದಲ್ಲಿ ಅವುಗಳಿಗೆ ಭಸ್ಮಲೇಪನ ಮಾಡಿ ಬಳಸಬೇಕು. ಬಟ್ಟೆಗಳು ಅಶುಚಿಯಾದರೆ ನೀರಲ್ಲಿ ಮುಳುಗಿಸಿ ಹಿಂಡಿದರೆ ಶುದ್ಧಿ. ಆದರೆ ಸುಮ್ಮನೆ ಒದ್ದೆಮಾಡಿದರೆ ಅದು ಅಶುದ್ಧ. ಕೀಟಗಳು- ಮಣ್ಣು- ಮಲ- ಸ್ನಾನ ಮಾಡದವರ ಸ್ಪರ್ಶ ಇವುಗಳ ಕಾರಣದಿಂದ ಅಶುಚಿಯಾದ ಪಕ್ಷದಲ್ಲಿ ನೀರಿನಿಂದ ಶುದ್ಧಿ. ಮಣ್ಣು ಹೋಮಕ್ಕೆ ಅಥವಾ ಹಚ್ಚಿಕೊಳ್ಳಲೆಂದೋ ತಂದು ಅಸ್ವಚ್ಛವಾದರೆ ಅದನ್ನು ಬಿಸುಟು ಬೇರೆ ಶುದ್ಧ ಮಣ್ಣನ್ನು ಸ್ವೀಕರಿಸಬೇಕು. ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಧರ್ಮಾಚರಣೆ ೪೦

    ಧರ್ಮಾಚರಣೆ- ೪೦ ಚರೇತ್ಸಾಂತಪನಂ ವಿಪ್ರಃ ಪ್ರಾಜಾಪತ್ಯಮನಂತರಮ್| ತದರ್ಧಂ‌ಚ ಚರೇದ್ವೈಶ್ಯಃ ಪಾದಂ ಶೂದ್ರಸ್ಯ ದಾಪಯೇತ್ || ಪರಾಶರ ಸ್ಮೃತಿ|| ನಮ್ಮ ಧರ್ಮಶಾಸ್ತ್ರಗಳು ಬ್ರಾಹ್ಮಣರಿಗೆ ಅವಕಾಶ ಕೊಟ್ಟಷ್ಟೇ ರೀತಿಯಲ್ಲಿ ತಪ್ಪಿಗೆ ಹೆಚ್ಚಿನ ಶಿಕ್ಷೆಯನ್ನೂ ವಿಧಿಸಿವೆ. ಏಕೆಂದರೆ ಮಾರ್ಗದರ್ಶಕನೇ ತಪ್ಪೆಸಗಿದರೆ ಉಳಿದವರ ಕಥೆ ಏನು ಎಂಬ ಜಾಗೃತೆಯಲ್ಲಿ. ಬ್ರಾಹ್ಮಣನು ಅಕಸ್ಮಾತ್ ಪ್ರಾಣಿವಧೆ ಮಾಡಿದರೆ ಅವನಿಗೆ ಒಂದು ದಿನ ಪಂಚಗವ್ಯ ಮಾತ್ರ ತೀರ್ಥದಷ್ಟು ಕುಡಿದು ಇನ್ನೊಂದು ದಿನ ಉಪವಾಸ ಮಾಡಿ ಶುದ್ಧಿ. ಕ್ಷತ್ರಿಯನಿಗೆ  ಯಾರ ಬಳಿಯೂ ಕೇಳದೇ ಮೂರು ಹೊತ್ತು ತಾನಾಗಿ ಸಿಕ್ಕಿದ ಅನ್ನವನ್ನು ಮೂರು ತುತ್ತುಗಳಷ್ಟು ತಿನ್ನುವುದರಿಂದ ಶುದ್ಧಿ.  ವೈಶ್ಯನಿಗೆ ಇದರ ಅರ್ಧ ಎಂದರೆ ಎರಡು ಹೊತ್ತು ಅಯಾಚಿತವಾಗಿ ಸಿಕ್ಕ ಅನ್ನ ಮೂರು ತುತ್ತು ತಿನ್ನುವ ಶಿಕ್ಷೆಯಿಂದ ಶುದ್ಧಿ. ಶೂದ್ರನಿಗೆ ಕೇವಲ ಒಂದು ಹೊತ್ತು ಹೀಗೆ ಮಾಡಿದರೆ ಸಾಕು. ಜವಾಬ್ದಾರಿ ಹೆಚ್ಚಿದ್ದಷ್ಟೂ ಹೊರೆಯೂ ಹೆಚ್ಚು, ತಪ್ಪೆಸಗಿದರೆ ಶಿಕ್ಷೆಯೂ ವಿಧಿ- ನಿಷೇಧಗಳೂ ಹೆಚ್ಚು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೩೯

   ಧರ್ಮಾಚರಣೆ---೩೯ ನಷ್ಟೇ ಮೃತೇ ಪ್ರವ್ರಜಿತೇ ಕ್ಲೀಬೇ ಚ ಪತಿತೇ ಪತೌ | ಪಂಚಸ್ವಾಪತ್ಸು ನಾರೀಣಾಂ ಪತಿರನ್ಯೋ ವಿಧೀಯತೇ || ಪರಾಶರ ಸ್ಮೃತಿ|| ಪತಿ ಸತ್ತಾಗ ಅಥವಾ ದೀರ್ಘಕಾಲ ಕಾಣೆಯಾದಾಗ , ನಪುಂಸಕನಾಗಿದ್ದಾಗ, ಕೆಟ್ಟ ಕರ್ಮಗಳನ್ನು ಆಚರಿಸುವನಾದರೆ ( ಅತ್ಯಾಚಾರ, ಕೊಲೆ, ಹಿಂಸೆ) ಪತ್ನಿಯು ಇನ್ನೊಂದು ವಿವಾಹವಾಗಲು ಅಡ್ಡಿಯಿಲ್ಲ. ಪತಿಯಾದರೂ ಪತ್ನಿಯ ವಿಷಯದಲ್ಲಿ ಇಂತಹುದೇ ನಿಯಮಕ್ಕೆ ಬದ್ಧನಾಗಿರುತ್ತಾನೆ. ಧರ್ಮದ ನಡೆ ಸ್ತ್ರೀ ಪುರುಷರಿಗೆ ಎಂದಿಗೂ ಸಮಾನವಾಗಿದೆ. ಬಹುಶಃ ರಾಜಾರಾಮ ಮೋಹನರಾಯರು ಇದನ್ನು ಓದಿಯೇ ವಿಧವಾ ವಿವಾಹ ಕಾನೂನು ತಂದರು. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ರಾಮಾಯಣ ೧೪೭

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೭ 🏝📖     *ಪಾಠ್ಯೇ ಗೇಯೇ ಚ ಮಧುರಂ ಪ್ರಮಾಣೈಸ್ರ್ತಿಭಿರನ್ವಿತಮ್ | ಜಾತಿಭಿಃ ಸಪ್ತಭಿರ್ಬದ್ಧಂ ತಂತ್ರೀಲಯಸಮನ್ವಿತಮ್ ||* _ರಾಮಾಯಣ ಕಾವ್ಯದ ಮಹತ್ವ ಸಾರುವ ಶ್ಲೋಕ. ಇದರಲ್ಲಿ ಓದುಗನಿಗೆ  ಮಧುರಾನುಭೂತಿ ತರುವ ವಿಷಯಗಳು ಇವೆ. ಗಾಯನ ಮಾಡಲಂತೂ ಅಕ್ಷರವಿನ್ಯಾಸ ಸೊಗಸಾಗಿದೆ. ಸಂದರ್ಭಕ್ಕನುಗುಣವಾಗಿ ರಾಗಗಳನ್ನು ಜೋಡಿಸಿ ಮಧುರವಾಗಿ ಹಾಡಲು ಅನುಕೂಲವಾಗುವ ಗಾಯನಮಾಧುರ್ಯ ಇದೆ. ಶ್ಲೋಕಗಳು ಮೂರು ಬಗೆಯ ಪ್ರಮಾಣಗಳಿಂದ ಅಥವಾ ಲಕ್ಷಣಗಳಿಂದ ಕೂಡಿವೆ. ಗಾನ- ಧ್ವನಿ- ಪರಿಚ್ಛೇದ. ಗಾಯನ ಯೋಗ್ಯತೆ, ಪದಗಳಿಂದ ಹೊರಹೊಮ್ಮುವ ಧ್ವನಿ ( ಆಂತರಿಕ ಅರ್ಥ) , ಶಬ್ದ ಪರಿಚ್ಛೇದ ಸುಲಭವಾಗಲು ಸಂಧಿ ಸಮಾಸಗಳ ಬಳಕೆ. ಇನ್ನೊಂದು ಬಗೆಯಲ್ಲಿ ನೋಡುವುದಾದರೆ ತ್ರ್ಯಶ್ರ್ಯ- ಚತುರಶ್ರ- ಮಿಶ್ರ. ಹಾಡುವಾಗ ಯಾವ ಯಾವ ಭಾಗಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಿ ರಾಗದ ಅಭಿವ್ಯಕ್ತಿಗೆ ಒದಗಿಬರುವ ಸೌಕರ್ಯ. ( ಈ ವಿಷಯದಲ್ಲಿ ಹೆಚ್ಚಿನ ಮಾಹಿತಿ ಇಲ್ಲ. ಕ್ಷಮಿಸಿ) . ಅಂತೆಯೇ ದ್ರುತ- ಮಧ್ಯಮ- ವಿಲಂಬಿತ ಎಂಬ ಗಾಯನದ ಮೂರು ಪ್ರಕಾರಗಳಿಗೆ ಅನುಸಾರವಾದ ಶ್ಲೋಕ ರಚನೆ ಇಲ್ಲಿದೆ. “द्रुतामध्यमने वृत्तिं प्रयोगार्थे तु मध्यमाम् । शिष्याणामुपरोधार्थे विलम्बितां समाचरेत्|| ವೇದಾಧ್ಯಯನ ಮಾಡುವ ಸಮಯದಲ್ಲಿ ಪಾಠದ ಕ್ರಮವನ್ನು ಹೇಳುವಾಗ ಈ ಮೂರು ಲಯದ ಕ್ರಮವನ್ನು ಹೇಳುತ್ತಾರೆ. ಅಂತೆಯೇ ನಿಷಾದ- ಋಷಭ-...

ಧರ್ಮಾಚರಣೆ ೩೮

  ಧರ್ಮಾಚರಣೆ-೩೮ ಕಂಡನೀ ಪೇಷಣೀ ಚುಲ್ಲೀ ಉದಕುಂಭೀ ಚ ಮಾರ್ಜನೀ | ಪಂಚಸೂನಾ ಗೃಹಸ್ಥಸ್ಯ ಅಹನ್ಯಹನಿ ವರ್ತತೇ|| ಪರಾಶರ ಸ್ಮೃತಿ||  ಅಕ್ಕಿಯನ್ನು ಅಥವಾ ಧಾನ್ಯಗಳನ್ನು ಒನಕೆಯಿಂದ ಅಥವಾ ಯಂತ್ರಗಳ ಮೂಲಕ ಹೊಟ್ಟು ಬೇರ್ಪಡಿಸುವಿಕೆ, ಅರೆಯುವ ಕಲ್ಲು- ಮಿಕ್ಸಿ ಅಥವಾ ದೊಡ್ಡ ಯಂತ್ರಗಳಿಂದ ಅಡಿಗೆ ಪದಾರ್ಥಗಳನ್ನು ಪುಡಿ ಮಾಡುವುದು, ಬೆಂಕಿಯಲ್ಲಿ ಬೇಯಿಸುವುದು, ನೀರು ಕೊಡಪಾನದಲ್ಲಿ ಅಥವಾ ನಲ್ಲಿಗಳ ಮೂಲಕ ಬಂದಾಗ, ನೀರನ್ನು ಸ್ವಚ್ಛ ಮಾಡಲೆಂದು ಮನೆ ಎದುರಿಗೆ ಅಥವಾ ಎಲ್ಲಾದರೂ ಸಿಂಪಡಿಸಿದಾಗ ಅನೇಕ ಸೂಕ್ಷ್ಮ ಜೀವಿಗಳ ಹಾನಿಯಾಗುತ್ತದೆ. ಭಗವಂತನ ಸೃಷ್ಟಿಯಲ್ಲಿ ನಮಗೆ ಹಾನಿ ಮಾಡುವ ಅಧಿಕಾರ ಎಳ್ಳಷ್ಟೂ ಇಲ್ಲ. ಇದರ ಪ್ರಾಯಶ್ಚಿತ್ತ ಎಂದು ಪಂಚಮಹಾಯಜ್ಞಗಳನ್ನು ವಿಧಾನ ಮಾಡಿದ್ದಾರೆ. ಸ್ವಾಧ್ಯಾಯ, ದೇವಪೂಜೆ, ಪಿತೃಗಳ ಸ್ಮರಣೆ, ಭೂತ- ಕಾಕ ಮೊದಲಾದವುಗಳಿಗೆ ಬಲಿ, ಅತಿಥಿ ಸತ್ಕಾರ ಇವುಗಳಿಂದ ದಿನವೂ ಮಾಡುವ ಪಾಪಗಳಿಂದ ಮುಕ್ತನಾಗುವನು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೩೭

    ಧರ್ಮಾಚರಣೆ----೩೭ ಯೋ ವೇಷ್ಟಿತಶಿರಾಭುಂಕ್ತೇ ಯೋ ಭುಂಕ್ತೇ ದಕ್ಷಿಣಾಮುಖಮ್ | ವಾಮಪಾದಕರಃ ಸ್ಥಿತ್ವಾ ತದ್ವೈರಕ್ಷಾಂಸಿ ಭುಂಜತೇ || ಪರಾಶರ ಸ್ಮೃತಿ||  ತಲೆಗೆ ಮುಂಡಾಸು ಅಥವಾ ಉತ್ತರೀಯವನ್ನು ಕಟ್ಟಿಕೊಂಡು ಊಟ ಮಾಡಬಾರದು. ದಕ್ಷಿಣ ದಿಕ್ಕಿಗೆ ಮುಖಮಾಡಿ ಉಣ್ಣಬಾರದು. ಹೇಗೆ ಉತ್ತರಕ್ಕೆ ತಲೆ ಹಾಕಿ ನಿದ್ರಿಸಬಾರದೋ ಅಂತೆಯೇ ದಕ್ಷಿಣಕ್ಕೆ ಮುಖ ಮಾಡಿ ಉಣ್ಣಬಾರದು. ಎಡಕಾಲ ಮೇಲೆ ಕೈ ಊರಿ  ಊಟ ಮಾಡಬಾರದು. ಊಟ ಮಾಡುವಾಗ ಎಲೆಯಲ್ಲಾದರೆ ಎಡಗೈ ಎಲೆ ತುದಿಗೆ ಇಟ್ಟುಕೊಳ್ಳಬೇಕು, ತಟ್ಟೆಯಲ್ಲಾದರೆ ಹಾಗೆ ಆಗದಿದ್ದರೂ ಎಡಗಾಲ ಮೇಲೆ ಇಡಬಾರದು. ಬೇಕಾದರೆ ಹೃದಯವನ್ನು ಸ್ಪರ್ಶಿಸಿ ಭಗವಂತನನ್ನು ಚಿಂತಿಸುತ್ತಾ ಉಣ್ಣಬಹುದು. ಈ ಮೂರು ನಿಯಮ ಅಚರಿಸದಿದ್ದರೆ ನಾವು ತಿಂದ ಅನ್ನ ರಾಕ್ಷಸರ ಪಾಲಾಗಿ ರಾಕ್ಷಸರ ಗುಣಗಳಾದ ಕ್ರೋಧ-ಅತಿಕಾಮ-ಅತಿನಿದ್ರೆ- ಲಾಲಸೆ ಮೊದಲಾದವು ಒಡಮೂಡುತ್ತವೆ. ಹಾಗಾಗಿ ಊಟವನ್ನು ಹೇಗೆ ಬೇಕಾದರೂ ಮಾಡಿದರೆ ಬದುಕೂ ದಾರಿತಪ್ಪುತ್ತದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೩೬

    ಧರ್ಮಾಚರಣೆ---೩೬ ಸುಕ್ಷೇತ್ರೇ ವಾಪಯೇತ್ ಬೀಜಂ ಸುಪಾತ್ರೇ ನಿಕ್ಷಿಪೇದ್ಧನಮ್ | ಸುಕ್ಷೇತ್ರೇ ಚ ಸುಪಾತ್ರೇ ಚ ಹ್ಯುಪ್ತಂ ದತ್ತಂ ನ ನಶ್ಯತಿ || ಪರಾಶರ ಸ್ಮೃತಿ|| ಗಿಡ ನೆಡುವಾಗ ಮಣ್ಣು ಒಳ್ಳೆಯದಿದೆಯೋ, ಬಿಸಿಲು ಹೇಗಿದೆ, ನೀರು ನಿಲ್ಲದ ಪ್ರದೇಶವೋ ( ಭತ್ತ ಮೊದಲಾದವು ಬಿಟ್ಟು) ಇತ್ಯಾದಿ ಯೋಚಿಸಿ ನೆಟ್ಟಾಗ ಆ ಗಿಡ ಮರವಾಗಿ ಬಹುಕಾಲ ಫಲಕೊಡುತ್ತದೆ. ಅಂತೆಯೇ ದಾನ ಮಾಡುವಾಗ ಪಾತ್ರಾಪಾತ್ರ ವಿವೇಚನೆ ಮಾಡಿ ಕೊಡಬೇಕು. ನಮ್ಮ ಬಂಧುಗಳು, ಮಿತ್ರರು, ಪರಿಚಿತರು, ಗುರುಗಳ ಬಂಧುಗಳು ಇತ್ಯಾದಿ ವಿಚಾರ ಮಾಡದೇ ವ್ಯಕ್ತಿಯಲ್ಲಿ ದಾನ ತೆಗೆದುಕೊಳ್ಳುವ ಯೋಗ್ಯತೆ ಎಷ್ಟಿದೆ? ಅದನ್ನು ಜೀರ್ಣಿಸಿಕೊಳ್ಳಲು ಏನಾದರೂ ಸಾಧನೆ ಮಾಡುವನೋ ಎಂಬುದನ್ನು ವಿಚಾರ ಮಾಡಿ ಕೊಟ್ಟಾಗ ಮಾತ್ರ ಬಹುಫಲದಾಯಕ. ಇಲ್ಲದಿದ್ದರೆ ಅರಣ್ಯ ಇಲಾಖೆಯವರ ವನಮಹೋತ್ಸವದ ಗಿಡದಂತೆ ನಾವು ಕೊಟ್ಟ ದಾನದ ಫಲವು ಕ್ಷಣದಲ್ಲೇ ನಾಶವಾಗುವುದು. ಇವೆರಡರ ನಿವೇಶ ಬಹು ಮುಖ್ಯವಾದುದು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೩೫

    ಧರ್ಮಾಚರಣೆ-೩೫ ಶ್ರದ್ಧಯಾ ಚಾನ್ನದಾನೇನ ಪ್ರಿಯಪ್ರಶ್ನೋತ್ತರೇಣ ಚ | ಗಚ್ಛತಶ್ಚಾನುಯಾನೇನ ಪ್ರೀತಿಮುತ್ಪಾದಯೇತ್ ಗೃಹೀ || ಪರಾಶರ ಸ್ಮೃತಿ|| ಗೃಹಸ್ಥನು ಅತಿಥಿಗೆ ಅನ್ನಾದಿಗಳು ಎಷ್ಟಿದ್ದರೂ ಬಿಸಿಬಿಸಿಯಾಗಿ ಶ್ರದ್ಧೆಯಿಂದ ಬಡಿಸಬೇಕು. ಏನೋ ಒಂದು ತಿನ್ನಲಿ ಅಥವಾ ಬೇಗ ಕಳಿಸಿದರಾಯಿತು ಇತ್ಯಾದಿ ಯೋಚಿಸದೇ ಭಗವಂತನೇ ಬಂದಿರುವನೆಂದು ಅವನ ಅನಾದರ ಮಾಡದೆ ಊಟ ಮಾಡಿಸಬೇಕು. ಅತಿಥಿಯ ಜೊತೆಗೆ ಮಧುರಭಾಷಣ ಮಾತ್ರ ಮಾಡಬೇಕು. ಪರನಿಂದೆಯನ್ನೋ, ಭರ್ತ್ಸನೆಯನ್ನೋ ಮಾಡಬಾರದು. ಹೊರಟಾಗ ತಾನೂ ಹತ್ತು ಹೆಜ್ಜೆ ಹೋಗಿ ಬೀಳ್ಕೊಡಬೇಕು. ಇಂತಹ ಅತಿಥಿಸತ್ಕಾರ ಭಗವತ್ಪ್ರೀತಿದಾಯಕ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೩೪

ಧರ್ಮಾಚರಣೆ-೩೪ ನೈಕಗ್ರಾಮೀಣಮತಿಥಿಂ ಸಂಗೃಹ್ಣೀತ ಕದಾಚನ | ಅನಿತ್ಯಮಾಗತೋ ಯಸ್ಮಾತ್ತಸ್ಮಾದತಿಥಿರುಚ್ಯತೇ|| ಪರಾಶರ ಸ್ಮೃತಿ|| ಒಂದೇ ಗ್ರಾಮದ ಮನೆಯವರು ಎಂದಿಗೂ ಅತಿಥಿಗಳಲ್ಲ. ದೂರದಿಂದ ಬಂದಿದ್ದರೆ ಮಾತ್ರ ಅತಿಥಿ. ತನ್ನ ಮನೆಯಲ್ಲೇ ಅನುಕೂಲ ಇರುವಾಗ ಬೇರೆ ಕಡೆ ಆತಿಥ್ಯ ಬಯಸಿ ಹೋಗುವುದು ಪಾಪಕರ. ನಿತ್ಯ ಮನೆಗೆ ಬರುತ್ತಿದ್ದರೆ ಅವರೂ ಅತಿಥಿಗಳಲ್ಲ. ಅವರೆಲ್ಲರೂ ಅಭ್ಯಾಗತರು. ಹೇಳದೇ ಆಕಸ್ಮಿಕವಾಗಿ ಭೋಜನದ ಹೊತ್ತಲ್ಲಿ ಬಳಲಿ ಬಂದರೆ ಅವರು ನಿಜವಾದ ಅತಿಥಿ. ಹಾಗಾಗಿ ಅತಿಥಿ ಸತ್ಕಾರವೆಂದು ಪಕ್ಕದಮನೆಯವರನ್ನು, ಬಂಧುಗಳನ್ನು, ಮಿತ್ರರನ್ನು ಕರೆಯುವುದಲ್ಲ. ಅದು ಮಿತ್ರ- ಬಂಧು ಭೋಜನ. ಎಲ್ಲಿಂದಲೋ ನಮಗೆ ಅರಿವಿಲ್ಲದೆ ಬರುವವರು ಅತಿಥಿಗಳು. ಅಂತಹವರ ಆತಿಥ್ಯವು ದೇವಪ್ರೀತಿಕರ. ಇಹಪರ ಫಲದಾಯಕ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೩೩

     ಧರ್ಮಾಚರಣೆ--- ೩೩ ಇಷ್ಟೋ ವಾ ಯದಿ ವಾ ದ್ವೇಷ್ಯೋ ಮೂರ್ಖಃ ಪಂಡಿತ ಏವ ವಾ | ಸಂಪ್ರಾಪ್ತೋ ವೈಶ್ವದೇವಾಂತೇ ಸೋತಿಥಿಃ ಸ್ವರ್ಗ ಸಂಕ್ರಮಃ || ಪರಾಶರ ಸ್ಮೃತಿ|| ಊಟದ ಸಮಯಕ್ಕೆ ಬಂದ ಅತಿಥಿಗೆ ಎಂದೂ ಅನ್ನ ನಿರಾಕರಿಸಬಾರದು. ಬಂಧು-ಮಿತ್ರರಾಗಲಿ, ಶತ್ರುವಾಗಲಿ, ಮೂರ್ಖನಾಗಲಿ- ಪಂಡಿತನಾಗಲಿ ಯಾವ ವರ್ಣ- ಧರ್ಮದವರಾದರೂ ವೈಶ್ವದೇವ ಮಾಡಿ ಕೆಲವು ಕ್ಷಣ ಕಾದು ಬಂದರೆ ಊಟ ಬಡಿಸಿ ನಂತರ ತಾನು ಉಣ್ಣಬೇಕು. ಅಂತಹ ಸಮಯದ ಅತಿಥಿಯು ಸ್ವರ್ಗವನ್ನೇ ನಮ್ಮ ಪಾಲಿಗೆ ಕರುಣಿಸುತ್ತಾನೆ. ಕರೆಯದೇ ಬಂದ ಅಂತಹ ವ್ಯಕ್ತಿಯಲ್ಲಿ ಭಗವಂತನ ಸಾನ್ನಿಧ್ಯ ಇರುವ ಕಾರಣ ಮಡಿ- ಮೈಲಿಗೆ ಹೆಚ್ಚೇನೂ ವಿಚಾರಿಸದೆ ಅನ್ನ ಕೊಡಬೇಕು‌. ಹಿಂದೂ ಧರ್ಮದ ಅನ್ನದಾನದ ಶ್ರೇಷ್ಠ ಪರಂಪರೆ ಇದೇ ಆಗಿದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಅನುವಾದಿತ ಕಥೆ ೩೦

अनूदित कथावलि: --२०            समयानुसारिणी गति: मतिश्च एकस्मिन् जनपदे एक: राजा प्रशासति स्म। तस्य एकैव पुत्र: आसीत्। सहजतया तद्विषये महतीं प्रीतिं दर्शितवन्तौ तस्य पितरौ । कालक्रमेण स: युवावस्थां प्रविष्ट: । मित्रै: साकं द्वित्रिवारं मृगयार्थं गतवान् । तेन नितरां तुष्ट: स: सप्ताहे चतु:पञ्चवारं यावत् मृगयार्थं गन्तुमारेभे।  पुत्रस्य एतादृशस्वभावेन चिन्तित: पिता तस्मै एवं वारंवारं मृगयार्थं गमनं न साधु भवति, प्रजा: मृगै: पीडिता: चेत् तदा अवश्यं गन्तव्यम् इत्याद्युपदिदेश। परंतु यौवनमदमत्त: राजपुत्र: तस्य वचनं अन्यकर्णेन त्यक्तवान् । तदा राजा मन्त्रिणमाहूय पुत्रस्य राजकार्येषु अनासक्ति: , मित्रै: साकम् अटनार्थं अतीव आसक्ति: , कथं तस्य मन: परिवर्तितव्यम् , किं करणीयं तद्विषये, अहं चिन्ताक्रान्त: अभवम् इत्युक्तवान्। तदा तेनोक्तम् - कालेनैव स: शिक्षितो भवति। भवान् मा कुरु चिन्ता इति ।  तत: काल: गत: । एकदा कुमार: मृगयार्थं वनं गत: । तद्दिने अकस्मात् एकस्य सिंहस्योपरि आक्रमणकाले अश्वात् पतितो बभूव। मृगराजस्तु अनुक्षणमेव तं उपसर्प्य आक्रमितुमारेभे । तदा सह...

ರಾಮಾಯಣ ೧೪೬

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೬ 🏝📖     *ಕೃತ್ವಾಪಿ ತನ್ಮಹಾಪ್ರಾಜ್ಞಃ ಸಭವಿಷ್ಯಂ ಸಹೋತ್ತರಮ್ | ಚಿಂತಯಾಮಾಸ ಕೋನ್ವೇತತ್ಪ್ರಯುಂಜೀಯಾದಿತಿ ಪ್ರಭುಃ||* _ವಾಲ್ಮೀಕಿ ಮಹರ್ಷಿಗಳು ಇಪ್ಪತ್ನಾಲ್ಕು ಸಾವಿರ ಶ್ಲೋಕಗಳುಳ್ಳ, ಐದುನೂರು ಸರ್ಗಗಳಿಂದ ಕೂಡಿದ, ಏಳು ಕಾಂಡರೂಪದ ಮಹಾಕೃತಿಯನ್ನು ರಚಿಸಿ ಹೀಗೆ ಚಿಂತಿಸಿದರು- ಇನ್ನು ಯಾರು ಇದನ್ನು ಚೆನ್ನಾಗಿ ಕಲಿಯುವರು? ಅರಿತು ಪ್ರಚುರಪಡಿಸುವವರು ಯಾರಿರುವರು ಲೋಕದಲ್ಲಿ? ಕೃತಿ ರಚನೆ ಮಾಡಿ ಶಿಷ್ಯರಿಗೆ ಬೋಧಿಸದಿದ್ದರೆ ಅದು ಲೋಕಮುಖದಲ್ಲಿ ಹೇಗೆ ಬೆಳಕು ಕಂಡೀತು. ಹಿಂದೆ ಲಿಪಿಕಾರರು ಹಾಗೂ ಓದುಗರು ಕಡಿಮೆ ಇದ್ದರು. ಲಿಪಿ ಗೊತ್ತಿದ್ದ ಬರಹಗಾರರು ಹಾಗೂ ಬರೆದದ್ದನ್ನು ಓದಲು ಅರಿತವರ ಸಂಖ್ಯೆ ವಿರಳ‌. ಕೇವಲ ಶ್ರುತವಾಗಿ ಅಂದರೆ ಕಿವಿಯಿಂದ ಕಿವಿಗೆ ಗುರುಮುಖೇನ ಕೇಳಿ ಪ್ರಸಾರವಾಗುತ್ತಿತ್ತು. ವೇದ ಶಾಸ್ತ್ರಗಳ ಪಾಠ ಎಷ್ಟು ಸ್ಪಷ್ಟ ಹಾಗೂ ಶುದ್ಧವಾಗಿತ್ತೆಂದರೆ ಒಂದೊಂದು ಊರಿಗೆ ಒಂದೊಂದು ಶಾಸ್ತ್ರ ವೇದ ಹಿಂದೆಯೂ ಇರಲಿಲ್ಲ, ಇಂದೂ ಇಲ್ಲ. ಪುಸ್ತಕ ಅಥವಾ ತಾಳೆಗರಿಯಲ್ಲಿ ಬರೆದು ಓದುವ ಜನರು ಇಲ್ಲದಿದ್ದಾಗ ಹೇಗೆ ರಾಮನ ಚರಿತೆ ಜನರಿಗೆ ಮಾರ್ಗದರ್ಶಕವಾದೀತು ಎಂಬ ಚಿಂತೆ ಮುನಿಗಳನ್ನು ಬಾಧಿಸಿತು. ಗುರುವಿನ ಲಕ್ಷಣವೇ ಅದು. ತಾನು ಕಲಿತದ್ದನ್ನು, ತಾನು ಅರಿತಿದ್ದನ್ನು ಮತ್ತೊಬ್ಬನಿಗೆ ತಿಳಿಸದೇ ಅವನು ಎಂದಿಗೂ ಸಮಾಧಾನ ಹೊಂದಲಾರ. ಯೋಗ್ಯ ವ್ಯಕ್ತಿ ಸಿಕ್ಕಾಗಲೂ ಗೊತ್ತಿರುವುದನ್ನು...

ಧರ್ಮಾಚರಣೆ ೩೨

     ಧರ್ಮಾಚರಣೆ-೩೨ ಧರ್ಮಃ ಶ್ರೇಯಸ್ಸಮುದ್ದಿಷ್ಟಂ ಶ್ರೇಯೋಭ್ಯುದಯಲಕ್ಷಣಮ್| ಅಸ್ಯ ಸಮ್ಯಗನುಷ್ಠಾನಾತ್ ಸ್ವರ್ಗೋ ಮೋಕ್ಷಶ್ಚ ಜಾಯತೇ|| ಭವಿಷ್ಯ ಪುರಾಣ|| ಮಾನವನ ಬದುಕಿನಲ್ಲಿ ಧರ್ಮದ ಆಚರಣೆಗೆ ತುಂಬಾ ಮಹತ್ವ ಇದೆ. ಆಧುನಿಕರನೇಕರ ಪ್ರಶ್ನೆ- ಧರ್ಮಾಚರಣೆಯಿಂದ ಏನು ಪ್ರಯೋಜನ? ಅದಕ್ಕುತ್ತರ ಇಲ್ಲಿದೆ- ಧರ್ಮವೇ ಅತ್ಯಂತ ಪ್ರಶಸ್ತವಾದುದು. ಶ್ರೇಯಸ್ಕರ ಎಂದರೆ ಪ್ರಶಸ್ತ ಅಥವಾ ಉತ್ತಮಮಾರ್ಗ ಎಂದರ್ಥ. ನಮ್ಮ ಬದುಕಿನಲ್ಲಿ ಉತ್ತಮ ಮಾರ್ಗದೆಡೆಗಿನ ನಡೆಯೇ ಉದ್ಧಾರಕಾರಣ. ಇಂತಹ ಸನ್ಮಾರ್ಗದಲ್ಲಿ ಸಾಗುವುದೇ ಕಾಮನೆ ಹೊಂದಿದವನಿಗೆ ಸ್ವರ್ಗವನ್ನು, ನಿಷ್ಕಾಮನಿಗೆ ಮೋಕ್ಷವನ್ನೂ ತಂದುಕೊಡುತ್ತದೆ. ಸನ್ಮಾರ್ಗದ ನಡೆ, ಸಜ್ಜನಿಕೆಯ ಅನುಷ್ಠಾನ ಎಂದೂ ವ್ಯರ್ಥವಲ್ಲ. ಅದು ಆತ್ಮ ಎಷ್ಟು ದೂರ ಕ್ರಮಿಸುವುದೋ ಅಲ್ಲಿಯವರೆಗೂ ಫಲ ಕೊಡುತ್ತಲೇ ಇರುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೩೧

      ಧರ್ಮಾಚರಣೆ ---೩೧ ವಿಹಿತಸ್ಯ ಅನನುಷ್ಠಾನಾತ್ ನಿಂದಿತಸ್ಯ ಚ ಸೇವನಾತ್ | ಅನಿಗ್ರಹಾಚ್ಛೇಂದ್ರಿಯಾಣಾಂ ನರಃ ಪತನಮೃಚ್ಛತಿ || ಯಾಜ್ಞವಲ್ಕ್ಯ ಸ್ಮೃತಿ|| ಜನರು ತಮ್ಮ ವರ್ಣಕ್ಕೆ ವಿಹಿತವಾದ ಕರ್ಮಗಳನ್ನು ಲೋಪವಿಲ್ಲದೆ ಮಾಡಬೇಕು. ಹಾಗೆ ಮಾಡದಿದ್ದರೆ ದೋಷವಿದೆ. ಉ- ಸಂಧ್ಯಾ, ಪೂಜೆ, ದಾನ, ಅಧ್ಯಯನ ಮೊದಲಾದವನ್ನು ಬ್ರಾಹ್ಮಣನು ಆಚರಿಸದಿದ್ದರೆ ದೋಷ ಕಂಡುಬರುವುದು. ಇನ್ನು ನಿಂದಿತ ಕರ್ಮಗಳನ್ನು ಆಚರಿಸುವುದು ಸರ್ವರಿಗೂ ದೋಷಕಾರಕ. ಉ- ಆರರ ಮೇಲೂ ಏಳದಿರುವುದು, ಸ್ನಾನಾದಿಗಳನ್ನು ದಿನವೂ ಮಾಡದಿರುವುದು, ಕುಡಿತ- ಅಮಲು ಸೇವನೆ- ಪರಸ್ತ್ರೀ ಆಕರ್ಷಣೆ ಇತ್ಯಾದಿ. ಮೂರನೆಯದು ಇಂದ್ರಿಯಗಳ ನಿಗ್ರಹ. ಪಂಚ ಕರ್ಮ ಹಾಗೂ ಪಂಚ ಜ್ಞಾನೇಂದ್ರಿಯಗಳ ನಿಗ್ರಹವು ಅವಶ್ಯಕ. ನಾಲಿಗೆ ಚಪಲ- ಮಾತು ಹಾಗೂ ತಿನ್ನುವುದರಲ್ಲಿ, ಕಲಹ- ಅಪಘಾತ-ಅನಾಚಾರಗಳನ್ನು ನೋಡುವ ಚಪಲ ಕಣ್ಣಿಗೆ, ಬೇರೊಬ್ಬರ ಗುಟ್ಟನ್ನು ಕೇಳುವ ಅಥವಾ ಅಶ್ಲೀಲ ಮಾತು ಕೇಳುವ ಚಪಲ ಕಿವಿಗೆ, ಎಲ್ಲಾ ಬಗೆಯ ವಾಸನೆ ಸ್ವೀಕರಿಸುವ ಚಪಲ ಮೂಗಿಗೆ, ಸಿಕ್ಕಿದ್ದನ್ನೆಲ್ಲ ಸ್ಪರ್ಶಿಸುವ ತವಕ ಚರ್ಮಕ್ಕೆ ಹೀಗೆ ಇಂದ್ರಿಯ ನಿಗ್ರಹ ಬಲು ಕಷ್ಟ. ಇವುಗಳ ನಿಗ್ರಹವು ಮಾನವನ ಪತನವನ್ನು ತಡೆಯುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಅನುವಾದಿತ ಕಥೆ ೧೯

अनूदित कथावलि: - १९     गुणेषु क्रियतां यत्न: एकस्मिन् ग्रामे चत्वारि मित्राण्यासन् । तेषां समेषां आशा महती आसीत्। भाविनि जीवने महत्तरं स्थानं वयं प्राप्स्याम:  इति चिन्तितं तै: । तदर्थं सर्वकारीयपरीक्षासु सदा भागं वहन्त: आसन् ।  एकदा ते ग्रामात् बहि:  नद्या: तीरे अटनार्थं तथा जलक्रीड़ार्थं गतवन्त: । तत्र तै: एक: पेरूकफलस्य बृहद्वृक्ष: दृष्ट: । तेषु एक: गूढं तद्वृक्षम्  अवलोक्य झटिति आरुह्य पेरुकं वियुज्य खादितुमारेभे।  अन्ये तमेव कौतुकेन ईक्षितुमारेभिरे । किंतु तत्र अधस्थात् अन्यानि फलानि वृक्षे सन्ति वा न वा इति न दृश्यते स्म।  तेषु द्वितीय: फलं स्यात् कस्याञ्चित्  शाखायां इति मत्वा यावच्छीघ्रं आरुह्य फलं प्राप्य भक्षितवान् ।  तदा अवशिष्टौ द्वौ चिन्तितुमारेभाते - हन्त, फलानि बहूनि न  सन्ति, आवां भाग्यहीनौ , पापिनौ स्व:  इत्यादि। किंतु अचिरादेव ताभ्यां चिन्तितम् - वृक्षस्तु बहुशाखायुक्त: , यत्र कुत्रापि एकं फलं  निश्चयेन स्यादित्यालोच्य सहसा आरोढुमारभेताम् । दशनिमेषाणां अन्वेषणेन ताभ्यां स्वादु पेरूकं प्राप्तं भक्षितं च । ...

ರಾಮಾಯಣ ೧೪೫

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೫ 🏝📖    *ಕಾಮಾರ್ಥಗುಣಸಂಯುಕ್ತಂ ಧರ್ಮಾರ್ಥಗುಣವಿಸ್ತರಮ್ | ಸಮುದ್ರಮಿವ ರತ್ನಾಢ್ಯಂ ಸರ್ವಶ್ರುತಿಮನೋಹರಮ್||*  _ರಾಮಾಯಣದ ಹಿರಿಮೆ ಇಲ್ಲಿದೆ- ಕಾಮವೆಂಬ ಪುರುಷಾರ್ಥವನ್ನು ಧರ್ಮಾನುಸಾರ ಹೇಗೆ ಪಡೆಯಬಹುದೆಂಬುದನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಅಂತೆಯೇ ಧರ್ಮದ ಮಹತ್ವ ಹಾಗೂ ಆಚರಣೆಯ ಪ್ರತಿಪಾದನೆ ಇಲ್ಲಿದೆ. ಅನೇಕ ರತ್ನಗಳಿಂದ ಕೂಡಿದ ಸಮುದ್ರದಂತೆ ಸದ್ವಿಚಾರಗಳ ಸಮುದ್ರ ಈ ಕಾವ್ಯ. ಕೇಳುಗನಿಗೂ, ಓದುಗನಿಗೂ ಎಷ್ಟು ಬಾರಿಯೂ ಮನಸ್ಸಿಗೆ ಮುದ ಕೊಡುವ ಕಾವ್ಯವೊಂದಿದ್ದರೆ ಅದು ರಾಮಾಯಣ. ಪುರುಷಾರ್ಥಗಳ ಪ್ರತಿಪಾದಕ, ಸದ್ವಿಚಾರಗಳ ಗಣಿ, ಸದಾ ಪಠನೀಯ ಹಾಗೂ ಶ್ರವಣೀಯವಾದುದು ಈ ಆದಿಕಾವ್ಯ._ *ವಾಸ್ತುಕರ್ಮವಿಧಾನಂ ಚ ಭರತಾಗಮನಂ ತಥಾ | ಪ್ರಸಾದನಂ ಚ ರಾಮಸ್ಯ ಪಿತುಶ್ಚ ಸಲಿಲಕ್ರಿಯಾಮ್||* _ರಾಮಾಯಣದ ಒಂದೊಂದೇ ಘಟನೆಗಳನ್ನು ಸಂಕ್ಷೇಪವಾಗಿ ಉಲ್ಲೇಖಿಸುತ್ತಾ ಹದಿನಾರನೇ ಶ್ಲೋಕ ಇದಾಗಿದೆ. ಚಿತ್ರಕೂಟಕ್ಕೆ ಭರದ್ವಾಜರ ಅಪ್ಪಣೆ ಪಡೆದು ಹೊರಟ ರಾಮ ಅಲ್ಲಿ ಪರ್ಣಕುಟಿಯನ್ನು ನಿರ್ಮಿಸಿ ಅಲ್ಲಿ ವಾಸ್ತುಪೂಜೆಯನ್ನು ನೆರವೇರಿಸಿದನು. ಇಲ್ಲಿ ಈ ಶ್ಲೋಕ ಉಲ್ಲೇಖಿಸಲು ಮುಖ್ಯ ಕಾರಣ - ವಾಸ್ತುಪೂಜೆ ಎನ್ನುವುದು ಇತ್ತೀಚೆಗೆ ಆರಂಭವಾದದ್ದಲ್ಲ. ಯುಗಯುಗಗಳ ಪೂರ್ವದಲ್ಲೂ ಅದಕ್ಕೆ ಮಾನ್ಯತೆ ಇತ್ತು. ರಾಮನಂತಹ ಅವತಾರಿಯೇ ಅರಣ್ಯದಲ್ಲಿ ಕಟ್ಟಿದ ಪರ್ಣಕುಟಿಯಲ್ಲಿ ವಾಸ್ತು ಪೂಜೆ ಮಾಡಿ ಪ್ರವೇಶಿಸುವುದಾದರೆ ನ...