ಪೋಸ್ಟ್‌ಗಳು

ಡಿಸೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪದಶಕ್ತಿ ೩೪

🏹*ಪದಶಕ್ತಿ* ---೩೪🌄 *ನಾರದ* _ನರಸ್ಯ ಧರ್ಮ್ಯಮ್ ಎಂಬ ಅರ್ಥದಲ್ಲಿ ನರರ ಧರ್ಮವನ್ನು ಅತಿಕ್ರಮಿಸದೇ ಸದಾಚಾರದಲ್ಲಿ ಇರುವವನು ನಾರದ. ನಾರಂ ದದಾತಿ ಎಂದರೆ ಪರಮಾತ್ಮವಿಷಯಕ ಜ್ಞಾನ ನೀಡುವವನು ನಾರದ. ( ನಾರ ಎಂದರೆ ಜನರ ಹಾಗೂ ಪರಮಾತ್ಮನ ಎಂಬ ಎರಡೂ ಅರ್ಥಗಳು ಇವೆ. ನರಸಂಬಂಧಿ ಎಂಬುದು ಮುಖ್ಯಾರ್ಥ )_ _ನಾರಂ ಪಿತೃಭ್ಯಃ ದದಾತಿ ಎಂದರೆ ತನ್ನ ಸುಚರಿತದಿಂದ ಪಿತೃಗಳಿಗೆ ಸದಾ ಆಹಾರ ನೀಡುತ್ತಾ ಅವರನ್ನು ಉದ್ಧರಿಸಿದ ಕಾರಣ ನಾರದ. ನಾರಂ ಕಲಹೇನ ದ್ಯತಿ ಎಂದರೆ ಜನರನ್ನು ಕಲಹದಿಂದ ಬೇರ್ಪಡಿಸುವವನು ಎಂಬ ಅರ್ಥದಲ್ಲೂ ನಾರದ. ನುಃ ಇದಂ ನಾರಂ ಎಂದರೆ ಅಜ್ಞಾನ. ಅದರ ನಿವಾರಕನು ಸುಜ್ಞಾನ ಉಪದೇಶಿಸುವ ಮೂಲಕ ನಾರದನು ಮಾಡುತ್ತಾನೆ. ಹೀಗೆ ಅನೇಕ ಅರ್ಥಗರ್ಭಿತ ಪದ ನಾರದ. ಬ್ರಹ್ಮನ ಮಾನಸಪುತ್ರ ಹಾಗೂ ಜನ್ಮಾಂತರದಲ್ಲಿ ದಾಸೀಪುತ್ರನಾಗಿ ಜನಿಸಿಯೂ ನಂತರ ಬ್ರಹ್ಮರ್ಷಿಯಾಗಿ ಬೆಳೆದುನಿಂತ ನಾರದರ ವ್ಯಕ್ತಿತ್ವ ನಮ್ಮೆಲ್ಲರ ಬೆಳವಣಿಗೆಗೆ ಭಗವದಾರಾಧನೆಗೆ ಸದಾ ಪ್ರೇರಕ._ _ವಿಶ್ವಾಮಿತ್ರನ ಪುತ್ರರಲ್ಲಿ ಒಬ್ಬನ ಹೆಸರು, ಭಗವಂತನ ಅವತಾರ ರೂಪಗಳಲ್ಲಿ ಒಂದು, ಗಂಧರ್ವರಲ್ಲಿ ಒಬ್ಬ, ಪ್ರಜಾಪತಿಗಳಲ್ಲಿ ಒಬ್ಬನು ನಾರದ. ಹೀಗೆ ಈ ಹೆಸರು ಬೇರೆಯವರಲ್ಲೂ ಇದೆ. ಆದರೆ ಹೆಚ್ಚಿನ ಬಳಕೆ ನಾರದಮುನಿಯಲ್ಲಿ ನಾರಾಯಣ ಭಕ್ತನಲ್ಲಿ ಮಾತ್ರ._ _*ನಾರದೇನೈಷ ಸಂಪೃಷ್ಟೋ* ಎಂಬುದು ವ್ರತಕಥೆಗಳಲ್ಲಿ ಬರುವ ಸಹಜಸಾಲು. ಜನರ ಕಷ್ಟ ನಿವಾರಣೆಗೆ ನಾರದರು ದೇವನ ಬಳಿ ಪರಿಹಾರ ಕೇಳಿ ದುಃಖಿತರ ಕಣ್ಣೊರೆಸು...

ರಾಮಾಯಣ ೧೫೫

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೫🏝📖   *ಭದ್ರೈರ್ಮಂದ್ರೈರ್ಮೃಗೈಶ್ಚೈವ ಭದ್ರಮಂದ್ರಮೃಗೈಸ್ತಥಾ | ಭದ್ರಮಂದ್ರೈರ್ಭದ್ರಮೃಗೈ ಮೃಗಮಂದ್ರೈಶ್ಚ ಸಾ ಪುರೀ ||* _ವಾಲ್ಮೀಕಿಗಳ ಈ ಶ್ಲೋಕ ನೋಡಿದಾಗ ಮೇಲ್ನೋಟಕ್ಕೆ ಹೇಳಿದ್ದನ್ನೇ ತಿರುಗಿಸಿ ಹೇಳಿದಂತೆ ಕಾಣುತ್ತದೆ. ಆದರೆ ಅರ್ಥ ನೋಡಿದಾಗ ಚಮತ್ಕಾರಿಕ ಶೈಲಿ ಅರಿವಿಗೆ ಬರುತ್ತದೆ. ಹಿಮಾಲಯದಲ್ಲಿ ಹುಟ್ಟಿದ ಭದ್ರ ಜಾತಿಯ ಆನೆಗಳು, ವಿಂಧ್ಯಶ್ರೇಣಿಯಲ್ಲಿ ಹುಟ್ಟಿದ ಮಂದ್ರ ಜಾತಿಯ ಆನೆಗಳು, ಸಹ್ಯಾದ್ರಿ ಯಲ್ಲಿ ಜನಿಸಿದ ಮೃಗ ಜಾತಿಯ ಆನೆಗಳು ಇದ್ದವು. ಆ ಮೂರು ಜಾತಿಗಳ ಆನೆಗಳ ಅನ್ಯೋನ್ಯ ಸಂಪರ್ಕದಿಂದ ಜನಿಸಿದ ಭದ್ರಮಂದ್ರ- ಭದ್ರಮೃಗ- ಮೃಗಮಂದ್ರ ಎಂಬ ಉಪಜಾತಿಗಳ ಆನೆಗಳೂ ಅಸಂಖ್ಯವಾಗಿದ್ದವು. ಭಾರತೀಯರಲ್ಲಿ ಇತಿಹಾಸ ಪ್ರಜ್ಞೆ ಅಥವಾ ಸಾಮಾಜಿಕ ಜೀವನವನ್ನು ಬರಹದಲ್ಲಿ ಇರಿಸುವ ಪ್ರಜ್ಞೆ ಧಾರಾಳವಾಗಿರುವ ಕಾರಣ ಇಂತಹ ಅಪೂರ್ವ ಮಾಹಿತಿ ನಮಗೆ ದೊರಕುತ್ತದೆ. ಪಾಶ್ಚಾತ್ಯರ ಒಬ್ಬನ ಸುತ್ತಲೇ ಗಿರಕಿ ಹೊಡೆಯುವ ಕೃತಕ ಇತಿಹಾಸಗಳಿಗಿಂತ ಪ್ರತಿಯೊಂದು ಸಣ್ಣ ವಿಷಯದ ಬಗ್ಗೆಯೂ ಬೆಳಕು ಚೆಲ್ಲುವ ರಾಮಾಯಣದಂತಹ ಐತಿಹಾಸಿಕ ಗ್ರಂಥಗಳ ಮಹತ್ವ ಮೇಲೆನಿಸುತ್ತದೆ. ಆನೆಗಳ, ಕುದುರೆಗಳ ಹಾಗೂ ಅನೇಕ ಪ್ರಾಣಿಗಳ ಜಾತಿ, ವರ್ತನೆ, ಸಂಖ್ಯೆ ಹೀಗೆ ಮಹರ್ಷಿಗಳ ಕಥಾನಕದಲ್ಲಿ ಬರುವ ವಿವರಣೆ ನೋಡಿದರೆ ಅವರ ಅಪಾರ ಜ್ಞಾನದ ಬಗ್ಗೆ ಗೌರವ ಇನ್ನಷ್ಟು ಹೆಚ್ಚಾಗುತ್ತದೆ._ *ಅಷ್ಟೌ ಬಭೂವುರ್ವೀರಸ್ಯ ತಸ್ಯಾಮಾತ್ಯಾ ಯಶಸ್ವಿ...

ರಾಮಾಯಣ ೧೫೪

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೪🏝📖  *ನ ನಾಸ್ತಿಕೋ ನಾನೃತಕೋ ನ ಕಶ್ಚಿದಬಹುಶ್ರುತಃ | ನಾಸೂಯಕೋ ನ ಚಾಶಕ್ತೋ ನಾವಿದ್ಯಾನ್ವಿದ್ಯತೇ ಕ್ವಚಿತ್ ||* *ವರ್ಣೇಷ್ವಗ್ರ್ಯಚತುರ್ಥೇಷು ದೇವತಾತಿಥಿಪೂಜಕಾಃ | ಕೃತಜ್ಞಾಶ್ಚ ವದಾನ್ಯಾಶ್ಚ ಶೂರಾ ವಿಕ್ರಮಸಂಯುತಾಃ ||* _ಅಯೋಧ್ಯೆಯಲ್ಲಿ ಯಾವೊಬ್ಬ ನಾಸ್ತಿಕನೂ, ಸುಳ್ಳು ಹೇಳುವವನೂ, ಅಲ್ಪವಿದ್ಯೆಯುಳ್ಳವನೂ, ಪರರ ಸಂಪತ್ತು ಅಥವಾ ಅಭಿವೃದ್ಧಿ ಕಂಡು ಮಾತ್ಸರ್ಯಪಡುವವರು, ಕಾರ್ಯಸಾಧನೆಯಲ್ಲಿ ಅಶಕ್ತರೂ ಅಥವಾ ಅಜ್ಞಾನಿಯೂ ಇರಲಿಲ್ಲ. ನಾಸ್ತಿಕ ಎಂದರೆ ಎಲ್ಲರ ಅಸ್ತಿತ್ವ ಒಪ್ಪದೇ ನಿರಾಶಾವಾದಿಯಾಗಿರುವುದು. ಜೀವಜಗತ್ತಿನ ವ್ಯವಸ್ಥೆಯ ದ್ವೇಷಿ  ನಾಸ್ತಿಕನೆನಿಸುತ್ತಾನೆ. ಇನ್ನು ಪರಹಿತಕ್ಕಾಗಿ ಹೇಳುವ ಸುಳ್ಳು ಸುಳ್ಳಲ್ಲ. ಸಜ್ಜನರ- ಲೋಕದ - ಸಮಾಜದ ಹಿತಕ್ಕಾಗಿ ನುಡಿದ ಸುಳ್ಳು ಕ್ಷಮ್ಯ. ಉಳಿದಂತೆ ತನ್ನ ಹಿತಕ್ಕಾಗಿ ಮಾತ್ರ ನುಡಿಯುವ ಸುಳ್ಳಾಡುವವರು ಅಯೋಧ್ಯೆಯಲ್ಲಿ ಇರಲಿಲ್ಲ. ತೃಪ್ತಿ ಎನ್ನುವುದು ಅಯೋಧ್ಯೆಯ ಜನರಲ್ಲಿ ಸಹಜವಾಗಿ ನೆಲೆಸಿದ್ದ ಕಾರಣ ಮಾತ್ಸರ್ಯಕ್ಕೆ ಅವಕಾಶ ಎಂದಿಗೂ ಇರಲಿಲ್ಲ. ಇನ್ನು ಯಾವ ವಿದ್ಯೆಯನ್ನೂ ಸರಿಯಾಗಿ ಅರ್ಜಿಸದೆ ಲೋಕಕ್ಕೆ - ಸಮಾಜಕ್ಕೆ- ತನ್ನ ಕುಟುಂಬಕ್ಕೆ ಭಾರವಾಗಿ ಸಮಾಜವನ್ನು ನಿಂದಿಸುವ ಜನರಾರೂ ಅಲ್ಲಿ ಇರಲಿಲ್ಲ. ಪ್ರತಿಯೊಬ್ಬರೂ ಯಾವುದಾದರೂ ವಿದ್ಯೆಯನ್ನು ಅರ್ಜಿಸಿ ಉತ್ತಮ ರೀತಿಯಲ್ಲಿ ಜೀವನ ನಡೆಸುತ್ತಿದ್ದರು._ _ಇನ್ನೊಂದು ಗಮನಿಸಬೇಕಾದ ಅಂಶ ನಾಲ್ಕು...

ರಾಮಾಯಣ ೧೫೩

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೩🏝📖  *ನಾಕುಂಡಲೀ ನಾಮುಕುಟೀ ನಾಸ್ರಗ್ವೀ ನಾಲ್ಪಭೋಗವಾನ್ | ನಾಮೃಷ್ಟೋ ನಾನುಲಿಪ್ತಾಂಗೋ  ನಾಸುಗಂಧಶ್ಚ ವಿದ್ಯತೇ || ನಾಮೃಷ್ಟಭೋಜೀ ನಾದಾತಾ ನಾಪ್ಯನಂಗದನಿಷ್ಕಧೃಕ್ | ನಾಹಸ್ತಾಭರಣೋ ವಾಪಿ ದೃಶ್ಯತೇ ನಾಪ್ಯನಾತ್ಮವಾನ್ ||* _ಅಯೋಧ್ಯೆಯಲ್ಲಿ ಜನರ ಬದುಕು ಹೇಗಿತ್ತೆಂಬ ವರ್ಣನೆ ಆರನೇ ಸರ್ಗದಲ್ಲಿ ಮುಂದುವರೆಯುತ್ತದೆ. ಹಿಂದಿನ ಜನಗಳಲ್ಲಿ ಅಲಂಕಾರಪ್ರಿಯತೆ, ಜೀವನೋತ್ಸಾಹ, ಜೀವನಪ್ರೀತಿ ಎಷ್ಟಿತ್ತು ಎಂಬುದು ಇವುಗಳಿಂದ ತಿಳಿದುಬರುತ್ತದೆ. ಎಲ್ಲರೂ ಕರ್ಣಕುಂಡಲಧಾರಿಗಳಾಗಿ, ಶಿರಸ್ತ್ರಾಣಗಳನ್ನೂ ( ಟೊಪ್ಪಿಗೆ, ಮುಂಡಾಸು, ಕಿರೀಟ ಮೊದಲಾದವು) ರತ್ನಹಾರಗಳನ್ನೂ ಧರಿಸುತ್ತಿದ್ದರು. ತುಂಬಾ ಬಡತನ ಎಂಬ ಪದವೇ ಅಯೋಧ್ಯೆಯಲ್ಲಿ ಕೇಳಿಸುತ್ತಿರಲಿಲ್ಲ. ತಮ್ಮ ಅಭಿಲಾಷೆಯನ್ನು ಪೂರ್ಣಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದರು. ಯಾರೂ ಸುಳ್ಳಾಡುತ್ತಿರಲಿಲ್ಲ. ಮೈಗೆ ಚಂದನ- ಶ್ರೀಗಂಧ ಮೊದಲಾದವನ್ನು ಪೂಸಿಕೊಂಡು ಸದಾ ನವಯೌವ್ವನಿಗಳಂತೆ ಕಂಗೊಳಿಸುತ್ತಿದ್ದರು. ಕಾಲಕಾಲಕ್ಕೆ ಅಭ್ಯಂಗವನ್ನು ( ಎಣ್ಣೆ ಹಚ್ಚಿ ದೀರ್ಘ ಸ್ನಾನ) ಮಾಡಿ ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಅವರ ದೇಹಗಳಲ್ಲಿ ದುರ್ಗಂಧದ ಛಾಯೆ ಎಂದಿಗೂ ಕಂಡು ಬರುತ್ತಿರಲಿಲ್ಲ. ಎಲ್ಲರೂ ಮೃಷ್ಟಾನ್ನಭೋಜನ ಮಾಡುತ್ತಿದ್ದರು. ( ವ್ರತಗಳಲ್ಲಿ ಉಪವಾಸವನ್ನೂ, ಪ್ರಾಯಶ್ಚಿತ್ತ ಮೊದಲಾದ ಸಂದರ್ಭದಲ್ಲಿ ಒಪ್ಪೊತ್ತನ್ನೂ ಮಾಡುತ್ತಿದ್ದರು. ) ದ...

ಅನುವಾದಿತ ಕಥೆ ೨೨

अनूदित कथावलिः ----- २२                  भक्तिरव्यभिचारिणी १. जटिलस्य भीतिः  काननसमीपस्थे एकस्मिन् ग्रामे जटिलनामको बालकः वसति स्म। सः प्रत्यहं अरण्यमार्गमनुसृत्य शालां गच्छति स्म। सः मार्गः सदा तस्य भीतिजनकः आसीत्। अतः कदाचित् शालां गच्छति कदाचित् न । एवं दिनानि यापयति स्म सः । एकदा सः मातुः सकाशे उक्तवान् - अम्ब, अहं शालां गन्तुं नेच्छामि, तन्मार्गे मया भीतिः अनुभूयते प्रत्यहम्, इतः परं तव सकाशे पठितुमिच्छामीति । तया भणितं -' वत्स , कुतः त्वं बिभेषि, यदाकदा त्वया भीतिः अनुभूता चेत् त्वम् अग्रजं मधुसूदनमाह्वय, सः आगत्य त्वां नेष्यति '  इति । अस्त्विति तदाज्ञां शिरसि धृतवान् ।  ततः एकदा गमनकाले सः अतिशयेन भीतः , झटिति आहूतवान् मधुसूदनम्  ' भो मधुसूदन कुत्रासि, अहं बिभेमि, आगच्छ शीघ्रम् ' इति। कुत्र मधुसूदनः , वा अग्रजः ? न को$पि आगतवान्।  तथापि मातृवचने विश्वस्तेन तेन उच्चैः पुनः द्वित्रिवारं आहूतः मधुसूदनः - अरे आगच्छ, कुतः मां परीक्षसि इति। तथापि  तेन अनागते तारकस्वरेण क्रन्दितुमारेभे । तदा तस्य अवस्थां दृष्ट्व...

ಧರ್ಮಾಚರಣೆ ೫೭

ಧರ್ಮಾಚರಣೆ-೫೭ ಏಕಪಂಕ್ತ್ಯುಪವಿಷ್ಟಾನಾಂ ವಿಪ್ರಾಣಾಂ ಸಹಭೋಜನೇ | ಯದ್ಯೇಕೋಪಿ ತ್ಯಜೇತ್ಪಾತ್ರಂ ಶೇಷಮನ್ನಂ ನ ಭೋಜಯೇತ್ || ಪರಾಶರ ಸ್ಮೃತಿ|| ಒಂದೇ ಪಂಕ್ತಿಯಲ್ಲಿ ಕುಳಿತು ಹಸ್ತೋದಕ ಕೊಟ್ಟು ವಿಪ್ರರು ಅಥವಾ ಜ್ಞಾನಿಗಳು ಉಣ್ಣುತ್ತಿರುವಾಗ ಒಬ್ಬನು ಮಧ್ಯದಲ್ಲಿ ಎದ್ದುಹೋದರೂ ಉಳಿದವರು ಊಟ ಮಾಡುವುದು ಸರಿ ಆಗುವುದಿಲ್ಲ. ಹಾಗಾಗಿ ಊಟ ಮಾಡಲೆಂದು ಕೂತ ಮೇಲೆ ಎಲ್ಲರೊಡನೆ ಒಂದಾಗಿ ಪ್ರಸಾದವೆಂದು ಭುಂಜಿಸಬೇಕು. ಎಲ್ಲಿಗೋ ಹೋಗಬೇಕೆಂದೋ, ಬಡಿಸುವುದು ನಿಧಾನವೆಂದೋ, ಹಸಿವೆ ಕ್ಷೀಣವಿದೆ ಎಂದು ಮಧ್ಯದಲ್ಲಿ ಎದ್ದರೆ ಕುಳಿತವರನ್ನು ಅವಮಾನಿಸಿದ ದೊಡ್ಡ ಪಾಪಕ್ಕೆ ಕಾರಣವಾಗುತ್ತದೆ. ಅಂತಹ ಸಂದರ್ಭದಲ್ಲಿ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳದೇ ಇರುವುದು ಆತ್ಮಕ್ಕೆ ಶ್ರೇಯಸ್ಕರ. ಅದಕ್ಕಾಗಿ ಸಂತರ ಮಾತು *ಉದರ ಭರಣ ನೋಹೇ ಝಾಣಿರೇ ಯಜ್ಞ ಕರ್ಮ* ಎಂದು. ಇದೊಂದು ಯಜ್ಞವೆಂಬ ಭಾವನೆಯಿಂದ ಭುಂಜಿಸತೊಡಗಿದರೆ ಏಳುವ ಪ್ರಸಕ್ತಿ ಎಂದಿಗೂ ಬರದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೫೬

ಧರ್ಮಾಚರಣೆ-೫೬ ತಾಂಬೂಲೇಕ್ಷುಫಲಂ ಚೈವ ಭುಕ್ತಸ್ನೇಹಾನುಲೇಪನೇ | ಮಧುಪರ್ಕೇ ಚ ಸೋಮೇ ಚ ನೋಚ್ಛಿಷ್ಟಂ ಧರ್ಮತೋ ವಿದುಃ || ಪರಾಶರ ಸ್ಮೃತಿ || ತಾಂಬೂಲವನ್ನು ಅನೇಕರು ಒಂದೇ ತಟ್ಟೆಯಿಂದ ಸ್ವೀಕರಿಸುತ್ತಿದ್ದರೂ ಉಚ್ಛಿಷ್ಠ ದೋಷವಿಲ್ಲ. ಕಬ್ಬನ್ನು ಅನೇಕರು ತುಂಡುಗಳನ್ನು ಸ್ವೀಕರಿಸಿದಾಗ ಪರ್ವಭೇದವಿಲ್ಲದಾಗಲೂ ಅಂದರೆ ಒಂದೇ ಗಿಣ್ಣಿನಲ್ಲಿ ಅನೇಕ ತುಂಡನ್ನು ತಿಂದರೂ ಎಂಜಲ ದೋಷವಿಲ್ಲ. ಎಣ್ಣೆ ಅಥವಾ ಜಿಡ್ಡಿನ ಪದಾರ್ಥ ತಿಂದು ಕೈಯ ಜಿಡ್ಡನ್ನು ಅಂಗಗಳಿಗೆ ಲೇಪಿಸಿಕೊಂಡರೆ ದೋಷವಿಲ್ಲ. ಮದುವೆ ಅಥವಾ ದೊಡ್ಡ ಸಮಾರಂಭಗಳಲ್ಲಿ ಮಧುಪರ್ಕ ಒಂದೇ ಪಾತ್ರೆಯಿಂದ ಎಲ್ಲರಿಗೆ ನೀಡುತ್ತಿದ್ದರೂ ಅಲ್ಲೂ ದೋಷವಿಲ್ಲ. ಸೋಮಯಾಗದ ಕಾಲದಲ್ಲಿ ಸೋಮರಸಪಾನ ಏಕಪಾತ್ರದಿಂದಲೇ ಋತ್ವಿಜರಿಗೆ ವಿಹಿತವಾದ ಕಾರಣ ಅಲ್ಲೂ ಉಚ್ಛಿಷ್ಟ ದೋಷ ಇಲ್ಲ.  ಉಳಿದ ಸಂದರ್ಭದಲ್ಲಿ ಎಂಜಲು ದೊಡ್ಡ ದೋಷಕ್ಕೆ ಕಾರಣ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೫೫

 ಧರ್ಮಾಚರಣೆ -೫೫ ಉಪವಾಸೈರ್ವ್ರತೈಃ ಪುಣ್ಯೈಃ ಸ್ನಾನಸಂಧ್ಯಾರ್ಚನಾದಿಭಿಃ | ಜಪಹೋಮದ್ವಯಾ ದಾನೈಃ ಶುದ್ಧ್ಯಂತೇ ಬ್ರಾಹ್ಮಣಾದಯಃ || ಪರಾಶರ ಸ್ಮೃತಿ ||   ಪಕ್ಷಕ್ಕೊಂದಾವರ್ತಿ ಉಪವಾಸ ಅಥವಾ ವಿಶೇಷ ಪರ್ವಗಳಲ್ಲಿ ಆದರೂ ಉಪವಾಸ, ಪ್ರತಿಯೊಂದು ಮಾಸಗಳಲ್ಲಿ ಬರುವ ನಾನಾ ವ್ರತಗಳಲ್ಲಿ ಕೆಲವನ್ನಾದರೂ ಯಥಾಶಕ್ತಿ ಆಚರಿಸುವುದು, ತೀರ್ಥಗಳಲ್ಲಿ ಕೆಲವೊಮ್ಮೆ ಮಿಂದೇಳುವುದು, ಸಂಧ್ಯಾಸಮಯದಲ್ಲಿ ಭಗವಂತನ ಚಿಂತನೆಯಲ್ಲಿ- ಜ್ಞಾನಾರ್ಜನೆಯಲ್ಲಿ ತೊಡಗುವುದು,  ಪರಮಾತ್ಮನನ್ನು ಭಕ್ತಿಯಿಂದ ಕೆಲವು ನಾಮಗಳಿಂದಾದರೂ ಅರ್ಚಿಸುವುದು, ಇಷ್ಟಮಂತ್ರಗಳನ್ನು ಅಥವಾ ದೇವರ ಹೆಸರುಗಳನ್ನು ಯಥಾಶಕ್ತಿ ಜಪಿಸುವುದು, ಯಜ್ಞ ಮಾಡುವುದು, ಸಂಪತ್ತಿನ ಶೇಖರಣೆಗೆ ಗಮನ ಕೊಡುವಂತೆ ಒಂದು ಭಾಗ ಸದಾ ದಾನ ಮಾಡುವುದು ಇವುಗಳು ಎಲ್ಲಾ ಜಾತಿ- ವರ್ಣಗಳ ಪಾಪ ಪರಿಹಾರಕ ಕರ್ಮಗಳು. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೫೪

ಧರ್ಮಾಚರಣೆ-೫೪ ಚಾತುರ್ವರ್ಣ್ಯಸ್ಯ ನಾರೀಣಾಂ ಕೃಚ್ಛ್ರಂ ಚಾಂದ್ರಾಯಣಂ ವ್ರತಮ್ | ಯಥಾ ಭೂಮಿಸ್ತಥಾ ನಾರೀ ತಸ್ಮಾತ್ತಾಂ ನ ತು ದೂಷಯೇತ್ || ಪರಾಶರ ಸ್ಮೃತಿ|| ಯಾವುದೇ ವರ್ಣದ ಸ್ತ್ರೀಯರು ಎಂತಹ ಪಾಪ ಮಾಡಿದರೂ ಅವರಿಗೆ ತುಂಬಾ ದೊಡ್ಡ ಪ್ರಾಯಶ್ಚಿತ್ತ ಅಥವಾ ಶಿಕ್ಷೆ ಎಂದರೆ ಅದು ದಿನಕ್ಕೊಂದು ತುತ್ತು ಹೆಚ್ಚಿಸಿ- ಕಡಿಮೆ ಮಾಡುತ್ತಾ ಒಂದು ದಿನ ಉಪವಾಸ ಇರುವ ಚಾಂದ್ರಾಯಣ ವ್ರತ ಮಾತ್ರ. ಅದಕ್ಕೆ ಮಿಗಿಲಾಗಿ ಯಾವ ಸ್ತ್ರೀಯನ್ನೂ ಶಿಕ್ಷಿಸಬಾರದು. ಏಕೆಂದರೆ ನಮ್ಮ ಪ್ರಜಾಸಂತತಿ ಬೆಳೆಯಲು ಮುಖ್ಯ ಕಾರಣ ಸ್ತ್ರೀ. ಹಾಗಾಗಿ ಧಾನ್ಯ- ಶಾಕ- ಫಲಗಳ ಉತ್ಪತ್ತಿಗೆ ಆಧಾರವಾದ ಭೂಮಿಯನ್ನು ಹೇಗೆ ಜತನದಿಂದ ರಕ್ಷಿಸುವೆವೋ ಅದರಂತೆ ನಮ್ಮ ಸ್ತ್ರೀಯರನ್ನೂ ರಕ್ಷಿಸಬೇಕು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೫೩

   ಧರ್ಮಾಚರಣೆ-೫೩ ಡಾಮರೇ ಸಮರೇ ವಾಪಿ ದುರ್ಭಿಕ್ಷೇ ವಾ ಜನಕ್ಷಯೇ | ವಂದಿಗ್ರಾಹೇ ಭಯಾರ್ತೋ ವಾ ಸದಾ ಸ್ವಸ್ತ್ರೀಂ ನಿರೀಕ್ಷಯೇತ್ || ಪರಾಶರ ಸ್ಮೃತಿ|| ಸ್ತ್ರೀಯರ ವಿಷಯದಲ್ಲಿ ನಮ್ಮ ಸ್ಮೃತಿಗಳು ಎಷ್ಟು ಉತ್ತಮ ಭಾವನೆ- ಗೌರವ ತೋರಿದ್ದಾವೆ ಎನ್ನುವುದಕ್ಕೆ ಈ ಮಾತು ಉತ್ತಮ ಉದಾಹರಣೆ. ಎಲ್ಲೋ ದೊಡ್ಡ ಮಟ್ಟದಲ್ಲಿ ದೊಂಬಿ ನಡೆದಾಗ, ಯುದ್ಧದ ಸಮಯದಲ್ಲಿ, ಕ್ಷಾಮದ ಕಾಲದಲ್ಲಿ, ಸ್ತ್ರೀ ಜನಸಂಖ್ಯೆ ತುಂಬಾ ಕಡಿಮೆ ಇದ್ದಾಗ, ಸೆರೆಯಾಳುಗಳಾಗಿದ್ದಾಗ, ತುಂಬಾ ಹೆದರಿಕೆಯಿಂದ ಕೂಡಿ ಸ್ತ್ರೀಯರು ಅತ್ಯಾಚಾರ ಅಥವಾ ಶೋಷಣೆಗೊಳಗಾಗುವ ಸಂಭವವಿದ್ದಾಗ ಅಥವಾ ಅಂತಹ ದುರ್ಘಟನೆ ನಡೆದಾಗ  ಪತಿಯು ಅವಳನ್ನು ಶಿಕ್ಷಿಸದೇ ಸಮಾಧಾನಿಸಿ  ಅವಳನ್ನು ಪರಿಗ್ರಹಿಸಬೇಕು. ಅಂತಹ ಸಮಯದಲ್ಲಿ ಅವಳು ತನ್ನನ್ನು ರಕ್ಷಿಸಿಕೊಳ್ಳಲು ಅಸಮರ್ಥಳಾಗಿರುತ್ತಾಳೆ. ಪತಿಯು ರಕ್ಷಿಸದಿದ್ದಾಗ ಆದ ಅನಾಹುತಕ್ಕೆ ಅವಳನ್ನು ದೂಷಿಸದೇ ಸ್ತ್ರೀಯ ವಿಷಯದಲ್ಲಿ ಉದಾರತೆಯನ್ನು ತೋರಿಸಬೇಕು. ಇದೇ ಸನಾತನ ಧರ್ಮದ ಶ್ರೇಷ್ಠತೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೫೨

     ಧರ್ಮಾಚರಣೆ- ೫೨ ವಿದ್ಯಮಾನೇಷು ಹಸ್ತೇಷು ಬ್ರಾಹ್ಮಣೋ ಜ್ಞಾನದುರ್ಬಲಃ | ತೋಯಂ ಪಿಬತಿ ವಕ್ತ್ರೇಣ ಶ್ವಯೋನೌ ಜಾಯತೇ ಧ್ರುವಮ್ ||ಪರಾಶರ ಸ್ಮೃತಿ|| ಕೈಗಳು ಸರಿಯಾಗಿದ್ದಾಗ ಅವುಗಳಿಂದ ನೀರನ್ನು   ನಾಯಿ- ಬೆಕ್ಕುಗಳಂತೆ ಬಾಯಿಯಿಂದ ಕುಡಿದ ಮನುಜನು ಮುಂದೆ ಪ್ರಾಣಿಯಾಗಿಯೇ ಹುಟ್ಟುವನು. ನಲ್ಲಿ ಅಥವಾ ತೊರೆ,ಕೆರೆ, ನದಿಯ ನೀರನ್ನು ಕುಡಿಯುವಾಗ ಅಥವಾ ಯಾರಾದರೂ ಕೊಡಪಾನ- ಕಲಶ ಮೊದಲಾದವುಗಳಿಂದ ಕುಡಿಯಲೆಂದು ನೀರು ಸುರಿದಾಗ ಕೈಗಳಿಂದ ಕುಡಿಯಬೇಕು. ಕೈಗಳಿಲ್ಲದ ಮನುಜರಿಗೆ ಮಾತ್ರ ವಿನಾಯಿತಿ ಇದೆ. ಇಲ್ಲದಿದ್ದರೆ ಆ ಎಲ್ಲಾ ನೀರೂ ಎಂಜಲಿಗೆ ಸಮವಾಗುವ ಕಾರಣ ಬ್ರಾಹ್ಮಣನನ್ನು ಉದ್ದೇಶಿಸಿ ಎಲ್ಲರಿಗೂ ಬೋಧಿಸಿರುವುದು. ಭಗವಂತ ಕೊಟ್ಟ ಅಮೂಲ್ಯ ಸಂಪತ್ತು ಎಲ್ಲರ ಬಳಕೆಗೆ ಸಿಗಬೇಕೆಂಬ ಉದಾತ್ತ ಚಿಂತನೆ ಇಲ್ಲಿದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೫೧

          ಧರ್ಮಾಚರಣೆ--೫೧ ಏಕೈಕಂ ಹ್ರಾಸಯೇದ್ಗ್ರಾಸಂ ಕೃಷ್ಣೇ ಶುಕ್ಲೇ ಚ ವರ್ಧಯೇತ್ | ಅಮಾವಾಸ್ಯಾಂ ನ ಭುಂಜೀತ ಹ್ಯೇಷಚಾಂದ್ರಾಯಣೋ ವಿಧಿಃ || ಪರಾಶರ ಸ್ಮೃತಿ| ಧರ್ಮಶಾಸ್ತ್ರದಲ್ಲಿ ಬೃಹತ್ ಪಾಪಗಳಿಗೆ ( ಕೊಲೆ, ಹಿಂಸೆ, ಅತ್ಯಾಚಾರ ಮೊದಲಾದವುಗಳಿಗೆ ಪ್ರಾಯಶ್ಚಿತ್ತ ಇಲ್ಲ ) ಪ್ರಾಯಶ್ಚಿತ್ತ ರೂಪವಾಗಿ ಚಾಂದ್ರಾಯಣ ವ್ರತವನ್ನು ಹೇಳುತ್ತಾರೆ. ಇದು ಬರಿಯ ಪಾಪ ನಿವೇದನೆ ಅಲ್ಲ. ದಿನಕ್ಕೆ ಒಂದು ತುತ್ತಿನಂತೆ ಶುಕ್ಲಪಕ್ಷದ ಪಾಡ್ಯದಿಂದ ಆರಂಭಿಸಿ  ತನಕ ಹದಿನೈದು ತುತ್ತು ತಿನ್ನುವುದು. ನಂತರ ಒಂದೊಂದು ಕಡಿಮೆ ಮಾಡುತ್ತಾ ಅಮಾವಾಸ್ಯೆಯಂದು ಉಪವಾಸ ಮಾಡುವುದು. ಒಂದು ತುತ್ತು ಒಂದು ಮೊಟ್ಟೆಯ ಗಾತ್ರ ಮೀರಬಾರದು. ಮೊದಲ ದಿನ ಕೇವಲ ಒಂದೇ ತುತ್ತು ಊಟ. ಹೀಗೆ ಮಾಡಿದಾಗ ಸಣ್ಣ ಪುಟ್ಟ ಪಾಪಗಳಿಂದ ಉ: ಸುಳ್ಳಾಡುವುದು, ನಿಂದಿಸುವುದು, ಹಂಗಿಸುವುದು, ಅಪ್ರಾಮಾಣಿಕತೆ ಮೊದಲಾದವುಗಳಿಂದ ಶುದ್ಧನಾಗುವನು. ಪ್ರಾಯಶ್ಚಿತ್ತ ಆಚರಿಸಿ ಮತ್ತೆ ಪಾಪ ಮಾಡಿದರೆ ಮತ್ತೆ ಪ್ರಾಯಶ್ಚಿತ್ತ ಇಲ್ಲ. ಮತ್ತೆ ನರಕವೇ ಗತಿ. ಹಾಗಾಗಿ ಚಕ್ರದಂತೆ ಪುನಃಪಾಪ, ಪುನಃ ಪ್ರಾಯಶ್ಚಿತ್ತ ಅಲ್ಲ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೫೦

 ಧರ್ಮಾಚರಣೆ ---೫೦ ಹತೇ ತು ರುಧಿರಂ‌ ದೃಶ್ಯಂ ವ್ಯಾಧಿಗ್ರಸ್ತಃ ಕೃಶೋ ಭವೇತ್ | ಲಾಲಾ ಭವತಿ ದಷ್ಟೇಷು ಏವಮನ್ವೇಷಣಂ ಭವೇತ್ || ಪರಾಶರ ಸ್ಮೃತಿ|| ಧರ್ಮಕಾರ್ಯಗಳನ್ನು ಮಾಡುವಾಗ ದೇಹವು ಸ್ವಸ್ಥವಾಗಿರುವುದು ಅತ್ಯಂತ ಅವಶ್ಯಕವಾದ ವಿಷಯ. ಏಕೆಂದರೆ ಶರೀರಮಾದ್ಯಂ ಖಲು ಧರ್ಮಸಾಧನಮ್ ಎಂಬಂತೆ ಶರೀರ ಸರಿಯಾಗಿದ್ದರೆ ಎಲ್ಲಾ ಆಚರಣೆ. ಗಾಯಗಳಾದಾಗ ರಕ್ತಸ್ರಾವದಿಂದಾಗಿ ಗುರುತಿಸಿ ಉಪಚಾರ ಔಷಧ ಪಡೆಯಬೇಕು‌. ರಕ್ತಸುರಿಯುತ್ತಿದ್ದಾಗ ಯಾವ ಕಾರ್ಯವೂ ತರವಲ್ಲ.  ದೊಡ್ಡ ರೋಗದಿಂದ ಪೀಡಿತರಾದಾಗ ವ್ಯಕ್ತಿ ಕೃಶನಾಗವನು. ಅಂತಹ ಸಮಯದಲ್ಲೂ ಯಾವ ಕರ್ಮಗಳನ್ನು ಮಾಡದೇ ವಿಶ್ರಾಂತಿ ಪಡೆದು ರೋಗಪರಿಹಾರಕ್ಕೆ ಯತ್ನಿಸಬೇಕು. ಸರ್ಪ- ಶ್ವಾನ- ಕರ್ಕಾಟಕ ಮೊದಲಾದ ದುಷ್ಟ ಜಂತುಗಳು ಕಡಿದಾಗ ಅವುಗಳ ಜೊಲ್ಲಿನಿಂದ ಗುರುತಿಸಿ ಕೂಡಲೇ ಪರಿಹಾರ ಕೈಗೊಳ್ಳಬೇಕು, ಇಲ್ಲದಿದ್ದರೆ ಅದೇ ಪ್ರಾಣಾಂತಿಕವಾಗಬಹುದು. ಹಾಗಾಗಿ  ಗಾಯವನ್ನು- ರೋಗವನ್ನು- ಕಡಿತವನ್ನು ಅನ್ವೇಷಿಸಿ ಪರಿಹಾರ ಪಡೆದು ಕರ್ಮಗಳನ್ನು ಮಾಡುವುದೇ ಶಾಸ್ತ್ರ ವಿಹಿತ. ಸುಮ್ಮನೆ ದೇಹವನ್ನು ಹಾಳುಮಾಡಿಕೊಂಡು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದು ಸದಾ ಶಾಸ್ತ್ರ ನಿಷಿದ್ಧ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೪೯

     ಧರ್ಮಾಚರಣೆ--೪೯ ಏಕಾಹಮೇಕಭುಕ್ತಾಶೀ ಏಕಾಹಂ ನಕ್ತಭೋಜನಃ | ಅಯಾಚಿತಮೇಕಮಹಃ ಏಕಾಹಂ ಮಾರುತಾಶನಃ || ಪರಾಶರ ಸ್ಮೃತಿ|| ನಾವು ತಿಳಿದೂ ಕೆಲವೊಮ್ಮೆ ಪಾಪಕಾರ್ಯ ಮಾಡಿ ಅನಂತರ ಹೀಗೆ ಮಾಡಬಾರದಿತ್ತು ಎಂದುಕೊಳ್ಳುತ್ತೇವೆ. ಅಂತಹ ಸಮಯದಲ್ಲಿ ಪ್ರಾಜಾಪತ್ಯ ಎಂಬ ಪ್ರಾಯಶ್ಚಿತ್ತ ಆಚರಿಸಬೇಕು. ಒಂದು ದಿನ ಒಂದು ಹೊತ್ತು ಮಾತ್ರ ಊಟ, ಮರುದಿನ ರಾತ್ರಿ ಮಾತ್ರ ಊಟ, ಅದರ ಮರುದಿನ ಯಾರಾದರೂ ಏನಾದರೂ ಆಹಾರ ಕೊಟ್ಟರೆ ತಿನ್ನುವುದು ಇಲ್ಲದಿದ್ದರೆ ಉಪವಾಸ, ನಾಲ್ಕನೇ ದಿನ ಉಸಿರಾಟ ಮಾತ್ರ ಮಾಡುತ್ತಾ ನೀರು ಕುಡಿಯದೆ ಉಪವಾಸ ಮಾಡಿದಾಗ ಪಾಪದ ಪರಿಣಾಮ ಕಡಿಮೆ ಆಗುವುದು. ದೇಹದಂಡನೆ ಮುಂದೆ ಪಾಪ ಮಾಡದಂತೆ ಮನಸ್ಸನ್ನು ನಿರ್ದೇಶಿಸಿದರೆ ಆಗ ಸಾರ್ಥಕ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1