ಪೋಸ್ಟ್‌ಗಳು

ಫೆಬ್ರವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅನುವಾದಿತ ಕಥೆ ೨೪

अनूदित कथावलिः ----- २४ उद्योगिनं पुरुषसिंहमुपैति लक्ष्मीः एकस्मिन् जनपदे उत्तमः नृपः एकः आसीत्। तेन प्रजाः पुत्रवत् परिपाल्यन्ते स्म । एकदा सः पौराणां परस्परसहायबुद्धिं  परीक्षितुं  इच्छन् भटान् सर्वान् विहाय प्रधानवीथ्याम् अरुणोदयकाले एव आगतवान् । ततः सः मार्गमध्ये एकं बृहदश्मानं स्थापयामास।  जनैः किं क्रियते कथं वा तेषां प्रक्रिया  भवेत्  इति दृष्टुकामः सः समीपस्थे गुल्मे स्वम्  आच्छाद्य स्थितवान्। सः मार्गः सर्वदा बहुजनैः उपयुज्यमानः आसीत्। केचन राजकुले वसन्तः  जनाः तेनैव मार्गेण गतवन्तः । यः कोsपि अश्मानं मार्गात् दूरीकर्तुं न प्रयतितवान् । बहुभिः वणिजैः सः मार्गः उपयुक्तः , परंतु न कृतः तैरपि यत्नः। अपरे केचित् राजानम् अधिकारि वर्गं च यथेच्छं तर्जयित्वा गताः । किंतु न केनापि दूरीकृतः सः महालोष्टः । तत्रान्तरे एकः शाकविक्रेता मञ्जूषायां शाकान् पूरयित्वा शिरसि निक्षिपन् तत्र आगतः । लोष्टं दृष्ट्वा तेन चिन्तितम् ' हन्त, एतेन लोष्टेन अनेकेषां मार्गे गमनकाले कष्टं भवति,  कथञ्चिदपि एषः दूरीकर्तव्यः मया ' इति  शिरस्थां मञ्जूषां भूमौ स्थापयित्व...

ರಾಮಾಯಣ ೧೫೮

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೮🏝📖    *ಅವೇಕ್ಷಮಾಣಶ್ಚಾರೇಣ ಪ್ರಜಾ ಧರ್ಮೇಣ ರಂಜಯನ್ | ಪ್ರಜಾನಾಂ ಪಾಲನಂ ಕುರ್ವನ್ನಧರ್ಮಂ ಪರಿವರ್ಜಯನ್ ||* _ದಶರಥನ ಕಾಲದ ಆಡಳಿತ ಹೇಗಿತ್ತೆಂದರೆ ರಾಜನಿಷ್ಠರಾದ ಗೂಢಚಾರರಿಂದ ತನ್ನ ದೇಶ ಹಾಗೂ ವಿದೇಶಗಳಲ್ಲಿ ನಡೆಯುತ್ತಿದ್ದ ಪ್ರತಿಯೊಂದು ವಿಷಯಗಳನ್ನೂ ರಾಜನು ಅರಿಯುತ್ತಿದ್ದನು. ಚಾರರು ಹೇಗಿರಬೇಕೆಂದು ಮನುವಿನ ಈ ಮಾತು ಹೇಳಿದೆ- *ವನೇ ವನಚರಾಃ ಕಾರ್ಯಾಃ ಶ್ರಮಣಾ ವಿಟಕಾದಯಃ | ಪರಪ್ರವೃತ್ತಿಜ್ಞಾನಾರ್ಥಂ ಶೀಘ್ರಾಶ್ಚಾರಪರಂಪರಾಃ||*_ _ಕಾಡಿನಲ್ಲಿ ಸಂಚರಿಸುವಾಗ ಕಾಡುಜನಗಳಂತೆ ವ್ಯವಹರಿಸಿ, ಬೇರೆಡೆ ಭಿಕ್ಷುಕರಂತೆ- ಪರಿವ್ರಾಜಕರಂತೆ- ನಟರಂತೆ ನಿಜರೂಪ ಮರೆಮಾಚಿ ಇನ್ನೊಬ್ಬರ ಅಭಿಪ್ರಾಯ ಹಾಗೂ ಕಾರ್ಯಗಳನ್ನು ಶೀಘ್ರವಾಗಿ ಗ್ರಹಿಸುವ ಸಾಮರ್ಥ್ಯ ಹೊಂದಿರುವರಾಗಿರಬೇಕು. ಅಂತಹ ಚಾರರಿದ್ದರೆ ರಾಜರ ಕಾರ್ಯಗಳು ಸುಲಲಿತವಾಗಿ ಸಾಗುತ್ತವೆ. ಅಷ್ಟಲ್ಲದೆ ಪ್ರಜಾಪಾಲನೆಯನ್ನು ಧರ್ಮಮಾರ್ಗದಿಂದ ನಡೆಸುತ್ತಾ ಅಂದರೆ ಜೀವನ ನಡೆಸಲು ಹೊರೆಯಾಗದ ಕರಗಳನ್ನು, ಹಿಂಸೆ ಎನಿಸದ ಕಾನೂನನ್ನು, ಅಪರಾಧಿಗೆ ಮುಂದೆ ಅಪರಾಧ ಎಸಗಲು ಮನಸ್ಸು ತೊಡಗದ ಶಿಕ್ಷೆಯನ್ನು, ಬಡ- ದೀನ- ದುರ್ಬಲರ ವಿಷಯದಲ್ಲಿ ಉದಾರತೆಯನ್ನು ತೋರುವ ಆಡಳಿತವೇ ಧರ್ಮದ ಮಾರ್ಗದಲ್ಲಿ ನಡೆಯುವ ಆಡಳಿತ. ಅಂತಹ ಮಾದರಿ ಆಡಳಿತ ದಶರಥನ ರಾಜ್ಯದಲ್ಲಿತ್ತು. ಇನ್ನೊಂದು ಮುಖ್ಯ ಅಂಶ ಪ್ರಜಾಪಾಲನೆಯಲ್ಲಿ ಅಧರ್ಮವನ್ನು ಎಳ್ಳಷ್ಟೂ ಜಾರಿಗೆ ತರದೇ ಪೂರ್ಣ ...

ಅನುವಾದಿತ ಕಥೆ ೨೩

अनूदित कथावलिः ----- २३ को जानाति क: मूढः कः बुद्धिमान् इति  एकस्मिन् ग्रामे एकः बालकः वसति स्म। जनाः सर्वे तं मूढः इति अपहसन्ति स्म । तस्य मूढतायाः कारणमिदमासीत् - यः कश्चन तद्ग्रामं प्रति आगते ग्रामस्य युवकाः एतस्य मूढतां तेभ्यः दर्शयितुं तत्समीपे तान् नीत्वा एकहस्ते एकरूप्यकस्य नाणकद्वयं , अपरस्मिन् पञ्च रूप्यकाणां एकं नाणकं तस्मै दर्शयन्ति स्म। तस्मिन् अवसरे सः एकरूप्यकस्य नाणकद्वयं स्वीकरोति स्म। तद्दृष्ट्वा एषः मन्दमतिः द्विरूप्यकाणां सकाशात् पञ्च रूप्यकाणां मौल्यं अधिकमित्यपि न जानाति इति तम् अपहसन्ति स्म।  एवं चतुर्मासाः अतीताः । एकदा एकः ग्रामस्थः वृद्धः दूरे अङ्गणे क्रीडतः तस्य मन्दतां दूरीकर्तुकामः तम् आहूतवान् । ततः तेन स्थविरेण सः बालः पृष्टः - रे बाल, कुतः त्वं मूढधिया पञ्च रूप्यकाणि त्यक्त्वा रूप्यकद्वयं केवलम् आगतेभ्यः जनेभ्यः  स्वीकरोषि? त्वम् एतादृशं सरलविषयमपि न जानासि किम् ? इति । तदा तेन एवमुत्तरं दत्तम् -  तात , रूप्यकाणां मौल्यम् अहं सम्यग्जानामि। तत्र रूप्यकद्वयस्य स्वीकारे एकं कारणं विद्यते। एषा क्रीडा चतुर्मासं यावत् प्रचलती अस्ति। यदि मया प...

ರಾಮಾಯಣ ೧೫೭

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೭🏝📖    *ಕಶ್ಚಿನ್ನ ದುಷ್ಟಸ್ತತ್ರಾಸೀತ್ಪರದಾರರತೋ ನರಃ* _ಅಯೋಧ್ಯೆಯಲ್ಲಿ ಎಂತಹ ಜನರಿದ್ದರೆಂದರೆ ಯಾರೂ ದುಷ್ಟರು ಇರಲಿಲ್ಲ. ದೋಷವನ್ನೇ ಗ್ರಹಿಸುವವರು ಅಥವಾ ದೋಷಗಳಿಂದ ತುಂಬಿರುವವರು ದುಷ್ಟರು. ಕೆಡುಕನ್ನು ಬಯಸುವುದು ಹಾಗೂ ಕೆಡುಕನ್ನು ಚಿಂತಿಸುವುದು. ಅಷ್ಟಲ್ಲದೇ ಪರಪತ್ನಿಯನ್ನು ಮೋಹಿಸುವ ವ್ಯಕ್ತಿಗಳು ಅಲ್ಲಿರಲಿಲ್ಲ. ಈಗಿನ ಸಾವಿರಾರು ವ್ಯಾಜ್ಯಗಳಿಗೆ ಮೂಲಕಾರಣ ಪರಸ್ತ್ರೀ ಮೋಹ. ಸಂಪತ್ತಿನ ಅತಿಯಾದ ಸಂಗ್ರಹ, ರಹಸ್ಯವಾದ ಶೇಖರಣೆ, ಅತಿದೇಹಾಭಿಮಾನ ಇವುಗಳ ಮೂಲ ಪರಸ್ತ್ರೀ ಮೋಹ. ಎಂದಾದರೊಂದು ದಿನ ಮಣ್ಣಾಗುವ ದೇಹಕ್ಕೆ ಎಷ್ಟು ಸ್ತ್ರೀಯರು ಸಿಕ್ಕಿದರೇನು- ಸಿಗದಿದ್ದರೇನು ಎಂಬ ವಿಚಾರ ಬಂದಾಗ ಆ ದೋಷ ಹೋದೀತು. ಅಯೋಧ್ಯೆಯಲ್ಲಿ ಅಂತಹ ಘಟನೆಗಳಿಗೆ ಆಸ್ಪದ ಇರಲಿಲ್ಲ. ಹಾಗಾಗಿ ತಮ್ಮ ಸಂಸಾರದಲ್ಲಿ ಸುಖವಾಗಿ ಮತ್ತೊಬ್ಬರ ರೂಪ ಲಾವಣ್ಯ ನೋಡಿ ಕರುಬದೇ ದೇವರದಯೆಯೆಂದು ಇರುತ್ತಿದ್ದರು.ಇದು ಸಾಮಾಜಿಕ ಐಕ್ಯತೆಗೂ ಶಾಂತಿಗೂ ಕಾರಣವಾಗಿತ್ತು._ *ಗುರೌ ಗುಣಗ್ರಹೀತಾಶ್ಚ*  _ಇದು ತುಂಬಾ ಮಾದರಿ ಗುಣ. ತೈತ್ತಿರೀಯ ಉಪನಿಷತ್ತಿನಲ್ಲಿ ಬರುವ ಮಾತು_ *ಯಾನ್ಯಸ್ಮಾಕಗ್ಂ ಸುಚರಿತಾನಿ ತಾನಿ ತ್ವಯೋಪಾಸ್ಯಾನಿ* _ಎಂದು. ಗುರುಗಳು ಉಪದೇಶಿಸುವಾಗ ನಾವು ಮಾಡುವ ಒಳ್ಳೆಯ ಕೆಲಸಗಳನ್ನು ಅನುಸರಿಸು. ಬೇರೆಯದ್ದಲ್ಲ ಎಂದು. ಅದನ್ನೇ ಇಲ್ಲೂ ಹೇಳಿದ್ದಾರೆ- ಗುರುಗಳ ಗುಣಗಳನ್ನು ಗ್ರಹಿಸಿ ಅನುಸರಿಸಬೇಕೇ ಹೊರತ...

ಪದಶಕ್ತಿ ೩೫

🏹*ಪದಶಕ್ತಿ* ---೩೫🌄 *ಅಶ್ವಿನೌ* _*ಪ್ರಶಸ್ತಾಃ ಅಶ್ವಾಃ ಸಂತಿ* _ಎಂಬಂತೆ ಯಾರ ಬಳಿ ಒಳ್ಳೆಯ ಓಡುವ ಕುದುರೆಗಳು ಇವೆಯೋ ಅವರು ಅಶ್ವಿನಿಗಳು. ಇನ್ನೊಂದು ಬಗೆ ನೋಡುವುದಾದರೆ ಅಶ್ವಿನೀ ಎಂದರೆ ಹೆಣ್ಣು ಕುದುರೆ ಅದರಲ್ಲಿ ಹುಟ್ಟಿದ ಕಾರಣ ಇವರು ಅಶ್ವಿನಿಗಳು. ಅಥವಾ ಅಶ್ವರೂಪದ ಜನಕನನ್ನು ಹೊಂದಿದ ಕಾರಣ ದೇವವೈದ್ಯರು ಅಶ್ವಿನಿಗಳೆಂದು ಪ್ರಸಿದ್ಧರಾದರು._   *त्वाष्ट्री तु सवितुर्भार्य्या वडवारूपधारिणी ।    असूयत महाभागा सान्तरीक्षेऽश्विनावुभौ”* _ತ್ವಷ್ಟೃ ಪ್ರಜಾಪತಿಯ ಮಗಳು ಸೂರ್ಯನ ಮೇಲಿನ ಮುನಿಸಿನಿಂದ  ಹೆಣ್ಣು ಕುದುರೆಯ ರೂಪ ತಾಳಿ ವಿಹರಿಸುತ್ತಿದ್ದಾಗ  ಮುನಿಸು ತರವಲ್ಲ ಎಂದು ಅದೇ ರೂಪದಲ್ಲಿ ಸಮೀಪಿಸಿದ ಸೂರ್ಯನ ಸಂಪರ್ಕದಿಂದ ಜನಿಸಿದ ಮಹಿಮರು ಇವರು._ _ಇವರ ಲೋಕಸ್ತುತ್ಯ ಕಾರ್ಯಗಳು ಅನೇಕ. ರುದ್ರನಿಗೆ ಆಹುತಿ ಕೊಡದೇ ವೀರಭದ್ರನಿಂದ ತಲೆಯೇ ಹೋದಾಗ ಆಡಿನ ತಲೆಯನ್ನು ದಕ್ಷನಿಗೆ ಜೋಡಿಸಿದವರು ಇವರು. ಪೂಷಣನಿಗೆ ಹಲ್ಲನ್ನು, ಭಗನಿಗೆ ಕಣ್ಣುಗಳನ್ನು, ವಜ್ರಿ ಎಂದರೆ ಇಂದ್ರನಿಗೆ ಕೈಗಳು ಚಲಿಸುವಂತೆ ಮಾಡಿದ್ದು ( ಬಹುಶಃ ತಮಾಸುರ ಪ್ರಸಂಗದಲ್ಲಿ) ಚಂದ್ರನಿಗೆ ರಾಜಯಕ್ಷ್ಮ ರೋಗದಿಂದ ಮುಕ್ತಿ ಕೊಡಿಸಿದ್ದು, ಭಾರ್ಗವನಿಗೆ ನವಯೌವನ ಕರುಣಿಸಿದ್ದು ಹೀಗೆ ಇವರ ಕಾರ್ಯಗಳು ಅಪಾರ. ಲೋಕಕ್ಕೆ ಉಪಕಾರ ಮಾಡುವ ಬುದ್ಧಿ. ಸಾಂಕ್ರಾಮಿಕ ರೋಗಗಳ ಹಾವಳಿಯ ಕಾಲದಲ್ಲಿ ಅಶ್ವಿನಿಗಳ ಸ್ಮರಣೆಯೇ ರೋಗವನ್ನು ದೂರವಿಡಬಲ್ಲ...

ರಾಮಾಯಣ ೧೫೬

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೬🏝📖    *ಕ್ರೋಧಾತ್ಕಾಮಾರ್ಥಹೇತೋರ್ವಾ ನ ಬ್ರೂಯುರನೃತಂ ವಚಃ* *ಪ್ರಾಪ್ತಕಾಲಂ ತು ತೇ ದಂಡಂ ಧಾರಯೇಯುಃ ಸುತೇಷ್ವಪಿ* _ದಶರಥನ ಮಂತ್ರಿಮಂಡಲ ಹಾಗೂ ಋತ್ವಿಕ್ಮಂಡಲದ ಸದಸ್ಯರು ಎಂದಿಗೂ ಕೋಪದಿಂದಾಗಲೀ ಅಥವಾ ತಮ್ಮ ಆಸೆಯ ಈಡೇರಿಕೆಗೆ ಅಥವಾ ಧನದ ಅಪೇಕ್ಷೆಯಿಂದಲೋ ಸುಳ್ಳಾಡುತ್ತಿರಲಿಲ್ಲ. ಋತ ಎಂದರೆ ಮಾನಸಿಕ ಸತ್ಯ. ಅನೃತ ವು ಇದಕ್ಕೆ ವಿರುದ್ಧವಾದುದು.‌ಇವರು ಮಾನಸಿಕವಾಗಿ ಹಾಗೂ ಮಾತಿನಲ್ಲೂ ಎಂದಿಗೂ ಸತ್ಯದ ಸಂರಕ್ಷಣೆ ಮಾಡುತ್ತಿದ್ದರು. ಒಂದು ರಾಜ್ಯ ಸಮೃದ್ಧವಾಗಿರಲು ಇಂತಹ ಸತ್ಯದ ರಕ್ಷಣೆ ಅವಶ್ಯವಾಗಿರುತ್ತದೆ._ _ಈ ಮಂತ್ರಿಪರಿಷತ್ತು ಅಪರಾಧಿಗೆ ಶಿಕ್ಷೆ ವಿಧಿಸುವುದರಲ್ಲಿ ತುಂಬಾ ಪ್ರಾಮಾಣಿಕವಾಗಿತ್ತು. ಅಪರಾಧಿ ತಮ್ಮ ಮಗನೇ ಆಗಿದ್ದರೂ ಪಕ್ಷಪಾತ ಮಾಡದೇ ಶಿಕ್ಷಿಸುತ್ತಿದ್ದರು. ಅಧಿಕಾರದಲ್ಲಿ ಇರುವವರಿಗೆ ಅತ್ಯಂತ ಅವಶ್ಯವಾದ ಗುಣ ಇಂತಹ ನಿಷ್ಪಕ್ಷಪಾತ ನಡೆ. ದಶರಥನ ಮಂತ್ರಿಗಳು ಹಾಗಾಗಿಯೇ ಶ್ರೇಷ್ಠರೆನಿಸಿದ್ದರು._ *ಅಹಿತಂ ಚಾಪಿ ಪುರುಷಂ ನ ವಿಹಿಂಸ್ಯುರಪಿದೂಷಕಮ್* _ಹೆಚ್ಚಿನ ಅಧಿಕಾರಿಗಳು ತಮಗೆ ಆಗದವರನ್ನು ಶತಾಯಗತಾಯ ಹಣಿಯಲು ಪ್ರಯತ್ನಿಸುತ್ತಾರೆ. ಆದರಿಲ್ಲಿ ಹಾಗಿರಲಿಲ್ಲ ಅಮಾತ್ಯರ ನಡೆ. ಒಬ್ಬನು ವೈಯಕ್ತಿಕವಾಗಿ ತನಗೆ ಶತ್ರುವಾಗಿದ್ದರೂ ನಿರ್ದೋಷಿಯಾಗಿದ್ದರೆ ಅವನನ್ನು ಎಂದಿಗೂ ಅಯೋಧ್ಯೆಯಲ್ಲಿ ಶಿಕ್ಷಿಸುವ ಪರಿಪಾಠ ಇರಲಿಲ್ಲ._ *ಸುತೀಕ್ಷ್ಣದಂಡಾಃ ಸಂಪ್ರೇಕ್ಷ್ಯ ಪುರುಷಸ್ಯ ಬಲಾಬ...

ಧರ್ಮಾಚರಣೆ ೬೬

ಧರ್ಮಾಚರಣೆ-೬೬ ಖಲೇ ಯಜ್ಞೇ ವಿವಾಹೇ ಚ ಸಂಕ್ರಾಂತೌ ಗ್ರಹಣೇ ತಥಾ | ಶರ್ವರ್ಯಾಂ ದಾನಮಸ್ತ್ಯೇವ ನಾನ್ಯತ್ರ ತು ವಿಧೀಯತೇ ||  ಪುತ್ರಜನ್ಮನಿ ಯಜ್ಞೇ ಚ ತಥಾ ಚಾತ್ಯಯಕರ್ಮಣಿ | ರಾಹೋಶ್ಚ ದರ್ಶನೇ ದಾನಂ ಪ್ರಶಸ್ತಂ ನಾನ್ಯಥಾ ನಿಶಿ ||ಪರಾಶರ ಸ್ಮೃತಿ|| ಧಾನ್ಯಗಳನ್ನು ಕುಟ್ಟುವ ಕಾಲ, ಶ್ರೌತ ಯಾಗದ ಕಾಲ ( ಅಹೋರಾತ್ರಿ ನಡೆಯುವ ಅನೇಕ ಶ್ರೌತಯಜ್ಞ ಇವೆ.) ಮದುವೆಯ ಕಾಲದಲ್ಲಿ, ಸಂಕ್ರಾಂತಿಯ ಕಾಲದಲ್ಲಿ, ಗ್ರಹಣ ಕಾಲದಲ್ಲಿ, ಮಕ್ಕಳು ಹುಟ್ಟಿದ ಕಾಲದಲ್ಲಿ, ಆಪತ್ತಿನ ಅಥವಾ ಸಾವಿನ ಸಂದರ್ಭದಲ್ಲಿ ಮಾತ್ರ ರಾತ್ರಿ ದಾನವು ವಿಹಿತ. ಧಾನ್ಯಗಳಿಂದ ಹೊಟ್ಟು ಬೇರ್ಪಡಿಸುವ ಮುನ್ನ ದಾನ ಕೊಡುವ ಪದ್ಧತಿ ಇದೆ. ಯಜ್ಞಗಳಲ್ಲಿ ಸಹಜವಾಗಿ ಇದೆ. ಗೋಧೂಳೀ ಮುಹೂರ್ತದ ವಿವಾಹವಾದರೆ ರಾತ್ರಿ ಕನ್ಯಾದಾನವು ವೇಳೆ ವಿಹಿತ. ಸೂರ್ಯನ ಅನ್ಯರಾಶಿ ಪ್ರವೇಶ ರಾತ್ರಿ ಸಮಯದಲ್ಲಾದರೆ ಆಗಲೇ ದಾನವು ವಿಹಿತ. ಚಂದ್ರಗ್ರಹಣ ಕಾಲದಲ್ಲಿ ದಾನ ಅತ್ಯಂತ ಶ್ರೇಷ್ಠ. ಮಕ್ಕಳು ಹುಟ್ಟಿದ ಕೂಡಲೇ ಯೋಗ್ಯರಿಗೆ ದಾನ ಮಾಡುವುದು ವಿಹಿತ. ಯಾರೋ ಒಬ್ಬರ ಸಾವು ಸಮೀಪಿಸಿದೆ, ಅವರ ಮನದ ಬಯಕೆಯಂತೆ ಹೊತ್ತು ನೋಡದೇ ಕೂಡಲೇ ದಾನ ಮಾಡಬೇಕು. ಅಂತೆಯೇ ಸತ್ತ ಕೂಡಲೇ ಮಾಡುವ ಉದಕುಂಭ ಮೊದಲಾದ ದಾನಗಳು ರಾತ್ರಿಯಾದರೂ  ಪ್ರಶಸ್ತ. ಈ ಸಂದರ್ಭಗಳಲ್ಲಿ ಬಿಟ್ಟು ಉಳಿದಂತೆ ರಾತ್ರಿ ದಾನ ಸರಿಯಲ್ಲ. ಅನ್ನವಿರಲಿ- ವಿದ್ಯೆಯಿರಲಿ, ಧನವಿರಲಿ- ಸನ್ಮಾನವಿರಲಿ ಹಗಲು ನೀಡುವುದು ಉತ್ತಮ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. h...

ಧರ್ಮಾಚರಣೆ ೬೫

ಧರ್ಮಾಚರಣೆ- ೬೫ ಭಾಸ್ಕರಸ್ಯ ಕರೈಃ ಪೂತಂ ದಿವಾ ಸ್ನಾನಂ ಪ್ರಶಸ್ಯತೇ | ಅಪ್ರಶಸ್ತಂ ನಿಶಿ ಸ್ನಾನಂ ರಾಹೋರನ್ಯತ್ರ ದರ್ಶನಾತ್ || ಪರಾಶರ ಸ್ಮೃತಿ|| ಸೂರ್ಯನ ಕಿರಣ ಸ್ಪರ್ಶಿಸಿದ ನೀರಿನಿಂದ ಮಾಡಿದ ಸ್ನಾನ ಅತ್ಯಂತ ಪವಿತ್ರ ಹಾಗೂ ಆರೋಗ್ಯಕಾರಕ. ರಾತ್ರಿ ಸ್ನಾನವು ಎಂದಿಗೂ ಒಳಿತಲ್ಲ. ಗ್ರಹಣಕಾಲದಲ್ಲಿ ಮಾತ್ರ ಸ್ಪರ್ಶ ಹಾಗೂ ಮೋಕ್ಷದ ಪೂರ್ವೋತ್ತರಗಳಲ್ಲಿ ಸ್ನಾನವು ವಿಹಿತ. ಉಳಿದಂತೆ ಬಂಧುಗಳ ಮರಣ ವಾರ್ತೆ ಕೇಳಿದಾಗ, ಮನೆಯಲ್ಲಿ ಮರಣ ಸಂಭವಿಸಿದಾಗ, ಆಸ್ಪತ್ರೆ ಮೊದಲಾದ ಕಡೆ ಹೋಗಿ ಬಂದಾಗ ಶುದ್ಧಿಗಾಗಿ ಸ್ನಾನ ರಾತ್ರಿಯೂ ಮಾಡಬಹುದೇ ಹೊರತು ಸರ್ವದಾ ಅದು ಅಶ್ರೇಯಸ್ಕರ. ಹಾಗಾಗಿ ಸ್ನಾನವೇನಿದ್ದರೂ ಹಗಲು ನಿದ್ರೆಯೇನಿದ್ದರೂ ರಾತ್ರಿ ಎಂಬ ಮಾತು ಸತ್ಯ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೬೪

ಧರ್ಮಾಚರಣೆ-೬೪ ಶಿರಃ ಪ್ರಾವೃತ್ಯ ಕಂಠಂ ವಾ ಮುಕ್ತಕಚ್ಛಶಿಖೋಪಿ ವಾ | ವಿನಾ ಯಜ್ಞೋಪವೀತೇನ ಆಚಾಂತೋಪಿ ಅಶುಚಿರ್ಭವೇತ್ || ಪರಾಶರ ಸ್ಮೃತಿ|| ತಲೆಗೆ ಮುಂಡಾಸು ಅಥವಾ ರುಮಾಲು ಅಥವಾ ಟೊಪ್ಪಿ ಹಾಕಿಕೊಂಡು ಆಚಮನ ಮಾಡಿದರೆ ಪ್ರಯೋಜನವಿಲ್ಲ. ಗೃಹಸ್ಥನಾದರೆ ಕಚ್ಚೆ ಹಾಕಿಕೊಂಡೇ ಆಚಮನ ಮಾಡಬೇಕು. ಕಚ್ಚೆ ಬಿಚ್ಚಿದ್ದು ಆಚಮನ ಮಾಡಿದರೆ ನಿಷ್ಫಲ. ಬ್ರಹ್ಮಚಾರಿಯು ಕಚ್ಚೆ ಹಾಕುವುದೇ ನಿಷಿದ್ಧ. ಅಚಮನ ಮಾಡುವ ಮುನ್ನ ಶಿಖೆ ಬಂಧಿಸಿ ಮಾಡಬೇಕು. ಶಿಖೆಯ ಕೂದಲು ಬಿಟ್ಟುಕೊಂಡು ಮಾಡಿದರೆ ಅಪ್ರಯೋಜಕ. ಇನ್ನು ಉಪನೀತನಾದವರು ಉಪವೀತ ಸದಾ ಧರಿಸಬೇಕು. ಹಾಗಲ್ಲದೆ ಅಂದರೆ ಉಪವೀತ ಧರಿಸದೇ ಮಾಡಿದ ಆಚಮನ ನಿಷ್ಫಲ. ಅಚಮನ ಮಾಡುವ ಮುನ್ನ ಈ ಎಲ್ಲಾ ಅಂಶಗಳ ಕಡೆಗೆ ಗಮನ ಕೊಟ್ಟಾಗ ಮಾತ್ರ ಅದರ ಫಲ ಸಿಗುವುದು‌. ಇಲ್ಲದಿದ್ದರೆ ಕೇವಲ ನೀರು ಕುಡಿದಂತೆ ಮಾತ್ರ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೬೩

ಧರ್ಮಾಚರಣೆ-೬೩ ಜಲೇ ಸ್ಥಲಸ್ಥೋ ನಾಚಾಮೇತ್ ಜಲಸ್ಥಶ್ಚ ಬಹಿಃಸ್ಥಲೇ | ಉಭೇ ಸ್ಪೃಷ್ಟ್ವಾ ಸಮಾಚಾಮೇತ್ ಉಭಯತ್ರ ಶುಚಿರ್ಭವೇತ್ ||  ಪರಾಶರ ಸ್ಮೃತಿ|| ನೀರಿನೊಳಗೆ ಕಾಲಿಟ್ಟು ಹೊರಗೆ ಕೂತುಕೊಂಡು ಆಚಮನ ತರವಲ್ಲ. ಏಕಕಾಲದಲ್ಲಿ ಎರಡೂ ಕಡೆ ಇದ್ದರೆ ಅದು ಅಶುಚಿ. ಒಂದೋ ನೀರಿನಲ್ಲಿ ನಿಂತು ಆಚಮನ ಮಾಡಬೇಕು ಅಥವಾ ನೆಲದಲ್ಲಿ ಕುಳಿತು ಆಚಮನ ಮಾಡಬೇಕು. ನೀರಿನಲ್ಲೂ ಕೆಸರಿನ ಪ್ರದೇಶದಲ್ಲಿ ಆಚಮನ ತರವಲ್ಲ. ಶುದ್ಧ ಹಾಗೂ ಹರಿವು ಇದ್ದ ನೀರು ತುಂಬಾ ಶ್ರೇಷ್ಠ. ಆರೋಗ್ಯದ ಹಾಗೂ ಶಾಸ್ತ್ರೀಯ ದೃಷ್ಟಿಯಿಂದ ಹರಿವು ಇರುವ ತೀರ್ಥಗಳಲ್ಲಿನ ಅಚಮನ ಸರ್ವಶ್ರೇಷ್ಠ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೬೨

ಧರ್ಮಾಚರಣೆ-೬೧ ಸ್ನಾನಾನಿ ಪಂಚಪುಣ್ಯಾನಿ ಕೀರ್ತಿತಾನಿ ಮನೀಷಿಭಿಃ | ಆಗ್ನೇಯಂ ವಾರುಣಂ ಬ್ರಾಹ್ಮಂ ವಾಯವ್ಯಂ ದಿವ್ಯಮೇವ ಚ|| ಪರಾಶರ ಸ್ಮೃತಿ|| ಐದು ಬಗೆಯ ಸ್ನಾನಗಳು ಮಾನವನಿಗೆ ವಿಹಿತವಾಗಿವೆ. ಇಡೀ ಮೈಗೆ ಮಂತ್ರ ಅಥವಾ ದೇವರ ನಾಮ ಉಚ್ಚರಿಸುತ್ತಾ ಗೋಮಯದ ಅಥವಾ ಹೋಮದ ಭಸ್ಮವನ್ನು ಹಚ್ಚಿಕೊಳ್ಳುವುದು ಆಗ್ನೇಯ ಸ್ನಾನ. ನದಿ ಅಥವಾ ತೀರ್ಥಗಳ ನೀರಲ್ಲಿ ಇಡೀ ಮುಳುಗೇಳುವುದು  ವಾರುಣ. ಆಪೋಹಿಷ್ಠಾ ಮೊದಲಾದ ಮಂತ್ರಗಳಿಂದ ನೀರನ್ನು ಪ್ರೋಕ್ಷಿಸಿಕೊಳ್ಳುವುದು ಬ್ರಾಹ್ಮ. ದನದ ಕೊಟ್ಟಿಗೆಯಲ್ಲಿ ದೀರ್ಘಕಾಲ ಕೆಲಸ ಮಾಡುತ್ತಾ ಅಥವಾ ದನದ ಜೊತೆಗೆ ಅಡ್ಡಾಡುತ್ತಾ ಅದರ ಧೂಳಿ ತಾಗಿದರೆ ಅದು ವಾಯವ್ಯ. ಬಿಸಿಲು ಅಥವಾ ಮಳೆಯಲ್ಲಿ ಸಂಪೂರ್ಣ ದೇಹವನ್ನು  ತೋಯಿಸಿದರೆ ಅದು ದಿವ್ಯ. ಈ ಸ್ನಾನಗಳು ಗಂಗಾಸ್ನಾನದ ಫಲವನ್ನು ಶ್ರದ್ಧೆಯಿಂದ ಮಾಡಿದಾಗ ಕೊಡುತ್ತವೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೬೧

ಧರ್ಮಾಚರಣೆ- ೬೧ ದುಸ್ವಪ್ನಂ ಯದಿ ಪಶ್ಯೇತ್ತು ವಾಂತೇ ಚ ಕ್ಷುರಕರ್ಮಣಿ | ಮೈಥುನೇ ಪ್ರೇತಧೂಮೇ ಚ ಸ್ನಾನಮೇವ ವಿಧೀಯತೇ || ಪರಾಶರ ಸ್ಮೃತಿ|| ರಾತ್ರಿ ಅಥವಾ ಹಗಲಿನ ನಿದ್ರೆಯಲ್ಲಿ ಕೆಟ್ಟ ಕನಸನ್ನು ಕಂಡಾಗ, ತಿಂದ ಆಹಾರ ವಾಂತಿಯ ರೂಪದಲ್ಲಿ ಹೊರ ಬಂದಾಗ, ದೇಹದ ಕೇಶಗಳನ್ನು ಕತ್ತರಿಸಿದಾಗ , ಸ್ತ್ರೀ ಸಂಗ/ ಪುರುಷ ಸಂಗ ಮಾಡಿದಾಗ, ಸ್ಮಶಾನದಲ್ಲಿ ಶವಸುಟ್ಟ ಹೊಗೆ ತಾಕಿದಾಗ ಕೂಡಲೇ ಸ್ನಾನದಿಂದ ಶುದ್ಧರಾಗುತ್ತೇವೆ. ಕೆಟ್ಟ ಕನಸಿನ ಪರಿಣಾಮ ಮನಸ್ಸಿನ ಮೇಲೆ ಗಾಢವಾಗಿ ಬಹುಕಾಲ ಇರುತ್ತದೆ. ಅದು ಕೂಡಲೇ ಮಾಡುವ ಸ್ನಾನ ಪೂಜಾದಿಗಳಿಂದ ಅಲ್ಪವಾದರೂ ಮರೆಯಾಗುತ್ತದೆ. ಆಹಾರವು ಅಜೀರ್ಣಾದಿಗಳಿಂದ ವಾಂತಿಯಾದಾಗ ಮೈಯೆಲ್ಲ ಒಂದು ತರಹ ಕಲ್ಮಶದಿಂದ ಕೂಡಿರುವಂತೆ ಭಾಸವಾಗುತ್ತದೆ. ಅಂತಹ ಸಮಯದ ಸ್ನಾನವು ದೇಹಕ್ಕೆ ಒಂದು ಸಮಾಧಾನವನ್ನು ನೀಡುತ್ತದೆ. ಮುಖಕ್ಷೌರ ಇರಲಿ ಶಿರಕ್ಷೌರ ಇರಲಿ ಎಷ್ಟು ಶುದ್ಧ ಮಾಡಿದರೂ ಒಂದೊಂದು ಕೂದಲು ಅಥವಾ ಅವರು ಹಚ್ಚಿದ ಅವಲೇಪಗಳು ಉಳಿದಿರುತ್ತವೆ. ಅಂತಹ ಸಮಯದಲ್ಲಿ ಪೂರ್ಣಶುದ್ಧಿಗೆ ಸ್ನಾನ ಅಗತ್ಯ. ರತಿಯ ಕಾಲದಲ್ಲಿ ದೇಹಕ್ಕೆ ವಸ್ತ್ರಗಳಿಗೆ ಉಂಟಾದ ಕೊಳೆಯ ನಿರ್ಮೂಲಕ್ಕೆ ಸ್ನಾನವು ಎಲ್ಲಾ ರೀತಿಯಿಂದಲೂ ಉತ್ತಮ. ಪ್ರೇತಧೂಮವು ನಮ್ಮ ಮನದ ಮೇಲೆ ಪರಿಣಾಮ ಬೀರಿ ಇನ್ನಷ್ಟು ಜಡತನ ಅಥವಾ ದುಃಖ ಹೇತುವಾಗುತ್ತದೆ. ಹಾಗಾಗಿ ಅಂತಹ ಸಂದರ್ಭದ ಸ್ನಾನವು ಉಲ್ಲಾಸವನ್ನು ನೀಡುತ್ತದೆ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blog...

ಧರ್ಮಾಚರಣೆ ೬೦

   ಧರ್ಮಾಚರಣೆ-೬೦ ಸರ್ವೇಷಾಮೇವ ಪಾಪಾನಾಂ ಸಂಕರೇ ಸಮುಪಸ್ಥಿತಮ್| ದಶಸಾಹಸ್ರಮಭ್ಯಸ್ತಾ ಗಾಯತ್ರೀ ಶೋಧನಂ ಪರಮ್|| ಪರಾಶರ ಸ್ಮೃತಿ|| ಅಗ್ನಿಯನ್ನು ಸಮಾರೋಪಣ ಮಾಡಿ ಪಂಚಯಜ್ಞ ಮಾಡದವನು ಪರಪಾಕನಿವೃತ್ತನು, ಇವುಗಳನ್ನು ಮಾಡಿಯೂ ಪರಾನ್ನದಿಂದ ಬದುಕುವವನು ಪರಪಾಕರತನು, ದಾನ ಮಾಡದ ಗೃಹಸ್ಥ ಅಪಚ. ಇಂತಹವರ ಅನ್ನ ಉಂಡರೆ ಚಾಂದ್ರಾಯಣ ವ್ರತ ಆಚರಿಸಬೇಕು. ಇಂತಹ ಅನೇಕ ಪಾಪಗಳ ಸಂಶಯ ಬಂದಾಗ ಎಲ್ಲದಕ್ಕೂ ಪರಿಹಾರ ರೂಪವಾಗಿ ದಶಸಹಸ್ರ ಗಾಯತ್ರೀ ಜಪ ಮಾಡಬೇಕು. ಗಾಯತ್ರಿಯು ಹೆಸರಿನಂತೆ ಜಪಿಸಿದವನನ್ನು ರಕ್ಷಿಸುವ ಕಾರಣ ಎಲ್ಲಾ ದೋಷವನ್ನು ದೂರಮಾಡಿ ಶ್ರೇಯಸ್ಸನ್ನು ಕರುಣಿಸುತ್ತದೆ. ಹಾಗಾಗಿ ದಿನವೂ ಹೆಚ್ಚು ಹೆಚ್ಚು ಗಾಯತ್ರಿಜಪ ಎಲ್ಲರಿಗೂ ಶ್ರೇಯಸ್ಕರ. ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೫೯

   ಧರ್ಮಾಚರಣೆ - ೫೯ ಮೂತ್ರಮೇಕಪಲಂ ದದ್ಯಾತ್ ಅಂಗುಷ್ಟಾರ್ಧಂ‌ ತು ಗೋಮಯಮ್ | ಕ್ಷೀರಂ ಸಪ್ತಪಲಂ ದದ್ಯಾತ್ ದಧಿ ತ್ರಿಪಲಮುಚ್ಯತೇ | ಘೃತಮೇಕಪಲಂ ದದ್ಯಾತ್ ಪಲಮೇಕಂ ಕುಶೋದಕಮ್ || ಪರಾಶರ ಸ್ಮೃತಿ|| ಪಂಚಗವ್ಯ ಮಾಡುವಾಗ ನಾಲ್ಕು ಚಮಚದಷ್ಟು ಅಥವಾ ಕಾಲು ಲೋಟದಷ್ಟು ಗೋಮೂತ್ರವನ್ನು, ಹೆಬ್ಬೆರಳ ಅರ್ಧದಷ್ಟು ಗೋಮಯವನ್ನು, ಗೋಮೂತ್ರದ ಏಳರಷ್ಟು ಹಾಲನ್ನು, ಮೂರರಷ್ಟು ಮೊಸರನ್ನು, ಮೂತ್ರದಷ್ಟೇ ಪ್ರಮಾಣದ ತುಪ್ಪವನ್ನು ಹಾಗೂ ಕುಶೋದಕವನ್ನು ಹಾಕಬೇಕು. ಹೀಗೆ ಪ್ರಮಾಣಬದ್ಧವಾಗಿ ಮಾಡಿದಾಗ ಅದರ ರಸ ಪರಿಣಾಮಕಾರಿಯಾಗುವುದು‌. ಪದಾರ್ಥಗಳನ್ನು ತಯಾರಿಸುವಾಗ ಮಸಾಲೆಗಳನ್ನು ಹೇಗೆ ಅಗತ್ಯಕ್ಕೆ ತಕ್ಕಂತೆ ಹಾಕುವೆವೋ ಪಂಚಗವ್ಯದ ವಿಷಯದಲ್ಲೂ ಶಾಸ್ತ್ರೋಕ್ತ ಪ್ರಮಾಣ ಅನುಸರಿಸಿದಾಗ ಅದು ದೇಹಶುದ್ಧಿಗೆ ಕಾರಣವಾಗುವುದು.ಇಲ್ಲದಿದ್ದರೆ ಸುಮ್ಮನೆ ಗೋವಿನ ದ್ರವ್ಯ ಮಿಶ್ರಣ ಆಗುವುದೇ ಹೊರತು ಪಂಚಗವ್ಯ ಅಲ್ಲ. ( ಮಾಷ ಎಂದರೆ ಉದ್ದು ಅಥವಾ ಭತ್ತ. ಅದರ ಹತ್ತು ಕರ್ಷ ಪ್ರಮಾಣ. ಅದರ ನಾಲ್ಕು ಒಂದು ಪಲ. )  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1

ಧರ್ಮಾಚರಣೆ ೫೮

  ಧರ್ಮಾಚರಣೆ - ೫೮ ಕ್ಷತ್ರಿಯಶ್ಚಾಪಿ ವೈಶ್ಯಶ್ಚ ಕ್ರಿಯಾವಂತೌ ಶುಚಿವ್ರತೌ | ತದ್ಗೃಹೇ ತು ದ್ವಿಜೈರ್ಭೋಜ್ಯಂ ಹವ್ಯಕವ್ಯೇಷು ನಿತ್ಯಶಃ || ಪರಾಶರ ಸ್ಮೃತಿ|| ಕ್ಷತ್ರಿಯ ಅಥವಾ ವೈಶ್ಯರು ಶ್ರೌತಸ್ಮಾರ್ತ ಕರ್ಮಗಳನ್ನು ಆಚರಿಸುತ್ತಾ ಅಂದರೆ ಸಂಧ್ಯಾವಂದನೆ- ದೇವಪೂಜೆ- ಅಗ್ನಿ ಆರಾಧನೆ-ಅತಿಥಿ ಸತ್ಕಾರ- ಧರ್ಮಾಚರಣೆ ಮೊದಲಾದವುಗಳನ್ನು ನಿಷ್ಠೆಯಿಂದ ಮಾಡುತ್ತಿದ್ದರೆ ದೇವತಾಕಾರ್ಯ ಹಾಗೂ ಪಿತೃಕಾರ್ಯಗಳು ನಡೆಯುವ ದಿನಗಳಲ್ಲಿ ಅಲ್ಲಿ ವಿಪ್ರರು ಉಣ್ಣುವುದಕ್ಕೆ ನಿಷೇಧ ಇಲ್ಲ. ಇವುಗಳನ್ನು ಆಚರಿಸದ ವಿಪ್ರನ ಮನೆಯ ಅನ್ನವೇ ನಿಷಿದ್ಧವಾದುದು‌. ಹಾಗಾಗಿ ಪರಾನ್ನದ ವಿಷಯದಲ್ಲಿ ಎಷ್ಟು ಜಾಗೃತರಾದರೂ ಸಾಲದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್. http://shreenidhiabhyankar.blogspot.com/?m=1