ರಾಮಾಯಣ ೧೮೧
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೮೧🏝📖 *ತಮೇವ ಹತ್ವಾ ಸಬಲಂ ಸಬಾಂಧವಂ ವಿರಾವಣಂ ರಾವಣಮುಗ್ರಪೌರುಷಮ್ | ಸ್ವರ್ಲೋಕಮಾಗಚ್ಛ ಗತಜ್ವರಶ್ಚಿರಂ ಸುರೇಂದ್ರಗುಪ್ತಂ ಗತದೋಷಕಲ್ಮಷಮ್ ||* _ದೇವತೆಗಳ ಪ್ರಾರ್ಥನೆ ಮಹಾವಿಷ್ಣುವನ್ನು ಕುರಿತು- ಹೇ ದೇವದೇವ, ಸೈನ್ಯ ಹಾಗೂ ಬಂಧುಸಮೇತನಾದ, ಅತ್ಯುಗ್ರಪರಾಕ್ರಮಿಯಾದ, ಸರ್ವಜನರಿಗೂ ದುಃಖದಾಯಕನಾದ, ರಾವಣನ ವಧೆ ಮಾಡಿ ದೇವತೆಗಳ ಚಿರಕಾಲದ ಜ್ವರವನ್ನು ನಿವಾರಿಸಿ ಇಂದ್ರನ ಆಳ್ವಿಕೆಯಲ್ಲಿ ರಕ್ಷಿತವಾದ ಈ ಸ್ವರ್ಗಕ್ಕೆ ಆಗಮಿಸು. ರಾವಣನ ಪರಾಕ್ರಮದ ಬಗೆಗೆ ದೇವತೆಗಳಿಗೆ ಪೂರ್ಣ ಅರಿವಿದೆ. ಉಗ್ರಪೌರುಷ ಎಂದು ಕರೆಯುತ್ತಾರೆ. ಅವನ ಪರಾಕ್ರಮ ಸಹಿಸಲು ಅಸಾಧ್ಯ. ಹಾಗಾಗಿಯೇ ಅವನಿಂದ ದೇವತೆಗಳಿಗೆ ಚಿರಕಾಲದ ಜ್ವರ ಅಥವಾ ಬಾಧೆ. ಬಹುಕಾಲ ಒಂದೇ ಸ್ಥಾನದಲ್ಲಿ ನೆಲೆನಿಂತ ಬಾಧಾಗ್ರಹದಂತಿರುವನು ಇ ದುಷ್ಟ. ಅವನನ್ನು ಬಲ ಹಾಗೂ ಬಂಧು ಎರಡರ ಸಹಿತ ಮುಗಿಸು ಎನ್ನುತ್ತಾರೆ. ಬಲ ಉಳಿದರೆ ಇನ್ನೊಬ್ಬ ಬಂದು ಪೀಡಿಸಿಯಾನು. ಬಂಧುಗಳು ಉಳಿದರೆ ಅದೇ ಮನಸ್ಥಿತಿ ಲೋಕಕ್ಕೆ ತೊಂದರೆ ಕೊಟ್ಟೀತು. ಹಾಗಾಗಿ ದುಷ್ಟತನಕ್ಕೆ ಬೆಂಗಾವಲಾದ ಬಲವನ್ನೂ-ಬಂಧವನ್ನೂ ಕಳಚಿಬಿಡಬೇಕು. ಯುದ್ಧದ ಪೂರ್ವದಲ್ಲಿ ಹನುಮಂತ ಸುಮಾರಾಗಿ ಈ ಕೆಲಸ ಮಾಡುತ್ತಾನೆ. ಇಷ್ಟೆಲ್ಲಾ ಮಾಡಿ ನೀನು ಅಲ್ಲೇ ವಾಸಮಾಡದಿರು. ಹರಿಯ ನೆಲೆ ಇಲ್ಲದಿರೆ ನಮ್ಮ ಅಧಿಕಾರ-ಸುಖಗಳು ಹರಿದುಹಂಚಿಹೋದೀತು. ಹಾಗಾಗಿ ಆದಷ್ಟು ಶೀಘ್ರ ಸುರಲೋಕಕ್ಕೆ ಬಂದುಬಿಡು ಎನ್ನುವರು ಅ...