ಪೋಸ್ಟ್‌ಗಳು

धर्म शास्त्र

प्रेतकर्माण्यनिर्वर्त्य चरेन्नाभ्युदयक्रियाम् ।  आ चतुर्थं ततः पुंसि पञ्चमे शुभदं भवेत्।। ಮೇಧಾತಿಥಿ:| ಕುಟುಂಬದ ಸದಸ್ಯರು ತೀರಿದಾಗ ಮೂರು ತಲೆಯವರು ಆ ಅಂತ್ಯಕ್ರಿಯೆ ಹಾಗೂ ಮಾಸಿಕಗಳು ಮುಗಿಯುವ ಮುನ್ನ ಅಭ್ಯುದಯ ಎಂದರೆ ಶುಭ ಕರ್ಮಗಳನ್ನು ಮಾಡುವಂತಿಲ್ಲ. ನಾಲ್ಕನೆಯವರೆಗೆ ಇದು ಮುಂದುವರೆಯುವುದು. ಐದನೇ ತಲೆಮಾರು ಆದಾಗ ಮುಂದುವರಿಯಲು ಅಡ್ಡಿ ಇಲ್ಲ. ಒಟ್ಟಿಗೆ ಎಲ್ಲವನ್ನೂ ಮುಗಿಸಿ ಸಪಿಂಡೀಕರಣ ಮಾಡಿದರೂ ಪ್ರೇತವು ಯಮಲೋಕ ಸೇರುವ ಮುನ್ನವೇ ಇಲ್ಲಿ ಪೀಪಿ ಊದುವುದು ಮೂರು ತಲೆಯವರಿಗೆ ಎಂದಿಗೂ ಸಲ್ಲದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್.

धर्मशास्त्रम्

                ಧರ್ಮಶಾಸ್ತ್ರ यद्ददासि विशिष्टेभ्यो यदश्नासि दिने दिने। तत्ते वित्तमहं मन्ये शेषं कस्यापि रक्षसि।। व्यासः। ಸಂಪಾದಿಸಿದ ದುಡ್ಡನ್ನು ಪಾತ್ರರಿಗೆ ದಾನ ಮಾಡಿದಾಗ ಹಾಗೂ ಹಸಿದವರಿಗೆ ಉಣಿಸಿದಾಗ ಆ ಧನವು ನಮ್ಮದೆಂದು ಕರೆಸಿಕೊಂಡು ಸಾರ್ಥಕವಾಗುವುದು. ಇದೆರಡಕ್ಕೂ ಉಪಯೋಗವಿಲ್ಲದ ದಾನಕ್ಕೂ- ಉಣಿಸಲೂ ಪ್ರಯೋಜನಕ್ಕೆ ಬಾರದ ದುಡ್ಡು ನಮ್ಮದೆಂದು ಹೇಗೆ ಕರೆಸಿಕೊಳ್ಳುವುದು! ಧನ ಸಂಪಾದನೆಯ ಉದ್ದೇಶ ಭೋಗವಲ್ಲ. ಹಂಚಿ ತಿನ್ನುವುದೇ ಪ್ರಧಾನ ಉದ್ದೇಶ. ಜೇನಿನಂತೆ ಕೇವಲ ಸಂಗ್ರಹದಲ್ಲಿ ರತನಾದರೆ ಕಡೆಗೊಮ್ಮೆ ಯಾರಾದರೂ ಕೊಂಡೊಯ್ಯುವರು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್.

धर्मशास्त्रम्

               ಧರ್ಮಶಾಸ್ತ್ರ प्रत्युद्वाहो नैव कार्यो नैकस्मै दुहितृद्वयम् । न चैकजन्ययोः पुंसोः एकजन्ये तु कन्यके।। ತನ್ನ ಮಗಳನ್ನು ಯಾರ ಮಗನಿಗೆ ಮದುವೆ ಮಾಡಿಕೊಟ್ಟಿರುತ್ತಾರೋ ಅಲ್ಲಿಯ ಕನ್ಯೆಯನ್ನು ತನ್ನ ಮಗನಿಗೆ ತಂದುಕೊಳ್ಳುವುದು ಸರಿಯಲ್ಲ. ಕೊಡುಕೊಳ್ಳುವ ವ್ಯಾಪಾರವಾಗುವುದು. ಒಂದು ಕೊಟ್ಟು ಒಂದು ತರುವುದು ವ್ಯಾಪಾರದಲ್ಲಿ ಮಾತ್ರವೇ ಹೊರತು ವಿವಾಹಾದಿಗಳಲ್ಲಿ ಸಲ್ಲದು. ಒಬ್ಬನಿಗೇ ಇಬ್ಬರನ್ನು ಧಾರೆಯೆರೆಯಬಾರದು. ಇಬ್ಬರು ಸೋದರರಿಗೆ ಇಬ್ಬರು ಸೋದರಿಯರನ್ನು ಎಂದಿಗೂ ದಾನಮಾಡಬಾರದು. ಸೋದರ/ಸೋದರಿ= ಒಂದೇ ಹೊಟ್ಟೆಯಲ್ಲಿ ಹುಟ್ಟಿದ. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

धर्मशास्त्रम्

       ಧರ್ಮಶಾಸ್ತ್ರ ಊರ್ಧ್ವಂ ವಿವಾಹಾತ್ ಪುತ್ರಸ್ಯ ತಥಾ ಚ ವ್ರತಬಂಧನಾತ್ | ಆತ್ಮನೋ ಮುಂಡನಂ ನೈವ ವರ್ಷಂ ವರ್ಷಾರ್ಧಮೇವ ಚ|| ಮಾಸಮನ್ಯತ್ರ ಸಂಸ್ಕಾರೇ ತ್ರಿಮಾಸಂ ಚೌಲಕರ್ಮಣಿ | ಪಿಂಡದಾನಂ ಮೃದಾ ಸ್ನಾನಂ ನ ಕುರ್ಯಾತ್ತಿಲತರ್ಪಣಮ್|| ಧರ್ಮಶಾಸ್ತ್ರ ಕರದೀಪಿಕಾ|| ಮಗನ/ಮಗಳ ವಿವಾಹ ಅಥವಾ ಉಪನಯನ ನಡೆದು ಒಂದು ವರ್ಷ ಅಥವಾ ಆರು ತಿಂಗಳು ಮುಂಡನ ಕೂಡದು. ಆಯುಷ್ಕರ್ಮವು ಕೆಲವು ನಿಷಿದ್ಧ ಸಮಯದಲ್ಲಿ ಆಯುಷ್ಯವನ್ನು ಕಳೆಯಬಹುದು.ಬೇರೆ ಸಂಸ್ಕಾರಗಳಲ್ಲಿ ಒಂದು ತಿಂಗಳು ಮಾಡುವಂತಿಲ್ಲ. ಚೂಡಾಕರ್ಮವಾದರೆ ಮೂರು ತಿಂಗಳು ಮಾಡುವಂತಿಲ್ಲ. ಇದಿಷ್ಟೇ ಅಲ್ಲದೆ ಪಿಂಡಪ್ರಧಾನ, ಮೃತ್ತಿಕಾಸ್ನಾನ, ತಿಲತರ್ಪಣಗಳೂ ಕೂಡ ನಿಷಿದ್ಧವಾಗಿವೆ. ತ್ರಿಪುರುಷರ ಜ್ಞಾತಿಗಳಿಗೆ ಅಂದರೆ ಪಿತೃ-ಪಿತಾಮಹ-ಪ್ರಪಿತಾಮಹ ಸಂಬಂಧಿಗಳಿಗೆ ಅನ್ವಯಿಸುತ್ತದೆ. ಕಟ್ಟಿಂಗ್ , ಶೇವಿಂಗ್ ಮಾಡುವ ಮುನ್ನವೂ ಇಂತಹ ವಿಷಯಗಳನ್ನು ಗಮನಿಸುವುದು ಒಳಿತು. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

धर्मशास्त्रम्

                ಧರ್ಮಶಾಸ್ತ್ರन ज्येष्ठयोर्विवाहः स्यात् ज्येष्ठमासे विशेषतः। द्वौ ज्येष्ठौ मध्यमौ प्रोक्तौ एकज्येष्ठं सुखावहम् ।।ಹುಡುಗನು ಮನೆಯಲ್ಲಿ ಹಿರಿಯ,  ಹುಡುಗಿಯೂ ಜ್ಯೇಷ್ಠಳು. ಹೀಗಿರುವಾಗ ಅವರ ನಡುವೆ ಜಾತಕಾದಿಗಳು ಹೊಂದಿಕೆ ಆದರೂ ಮದುವೆ ಮಾಡುವಂತಿಲ್ಲ. ಒಂದು ವೇಳೆ ಮಾಡುವುದೇ ಆದರೂ ಜ್ಯೇಷ್ಠ ಮಾಸದಲ್ಲಿ ಯಾವ ಕಾರಣಕ್ಕೂ ಮಾಡಕೂಡದು. ಮೂರು ಜ್ಯೇಷ್ಠಗಳ ಸಂಗಮವು ನಾಶಕಾರಕ‌. ಎರಡು ಮಧ್ಯಮ. ಒಂದು ಮಾತ್ರ ಶಾಸ್ತ್ರಸಮ್ಮತ ಅಂದರೆ ಜ್ಯೇಷ್ಠ ಮಾಸದಲ್ಲಿ ಮಾಡುವುದಾದರೆ ಮಕ್ಕಳು ಕನಿಷ್ಠರೂ, ಬೇರೆ ಮಾಸದಲ್ಲಿ ಮಾಡುವುದಾದರೆ ಒಬ್ಬ ಜ್ಯೇಷ್ಠ ಇನ್ನೊಬ್ಬಳು ಮಧ್ಯಮ ಅಥವಾ ಕನಿಷ್ಠ. ಒಬ್ಬರೇ ಮಕ್ಕಳಿರುವಲ್ಲಿ ಈ ನಿಯಮ ಅನ್ವಯಿಸುವುದಿಲ್ಲ. ಒಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಮಾತ್ರ ಜ್ಯೇಷ್ಠ ಕನಿಷ್ಠ ಎಂಬ ವಿಭಾಗ. ಲೇಖನ: ಶ್ರೀನಿಧಿ ಅಭ್ಯಂಕರ

काव्यस्य सौन्दर्यम्

प्रकृत्याः प्रथमो भागः उमा देवी यशस्विनी।व्यक्तः सर्वमयो विश्वः स्र्तीसंज्ञो लोकभावनः।। हरिवंश।  ತಾಯಿ ಉಮೆಯು ಪ್ರಕೃತಿಯ ಮುಖ್ಯಭಾಗವಾಗಿದ್ದಾಳೆ.‌ಅವಳಿಂದಾಗಿಯೇ ಲೋಕವು ಸ್ತ್ರೀ ಸಂಜ್ಞೆಯನ್ನು ಪಡೆದಿದೆ. ಪ್ರಕೃತಿ ಮತ್ತು ಪುರುಷರಲ್ಲಿ ಪ್ರಕೃತಿಯೆಂದರೆ ಆ ತಾಯಿ ಉಮೆ . ಕಾಳಿದಾಸನು ಇದೇ ಅರ್ಥದಲ್ಲಿ ಮಾತಾಪಿತರನ್ನು  ಪಾರ್ವತೀಪರಮೇಶ್ವರರನ್ನು ಅಥವಾ ಪಾರ್ವತೀಪ- ರಮೇಶ್ವರನನ್ನು ವಂದಿಸುತ್ತೇನೆ ಎಂದದ್ದು. ಆ ನಾವೂ ಜಗನ್ಮಾತೆಯನ್ನು ನೆನೆಯೋಣ. वागर्थाविव सम्पृक्तौ वागर्थप्रतिपत्तये जगतः पितरौ वन्दे पार्वतीपरमेश्वरौ।। ಸಂಗ್ರಹ ಶ್ರೀನಿಧಿ ಅಭ್ಯಂಕರ್

धर्मशास्त्रम्

              ಧರ್ಮಶಾಸ್ತ್ರ ಅಭಿಜಿತ್ ಸರ್ವಕಾರ್ಯೇಷು ಶಸ್ತಂ ನಾತ್ರೋಪನಾಯನಮ್ | ಅಭಿಜಿತ್ ಸರ್ವದೇಶೇಷು ಮುಖ್ಯಂ ದೋಷವಿನಾಶಕೃತ್ || ಸೂರ್ಯಾಚ್ಚತುರ್ಥಂ ಯಲ್ಲಗ್ನಮಭಿಜಿತ್ಸಂಜ್ಞಿತಂ ಚ ತತ್|| ಸಂಗ್ರಹ|| ಶುಭಕರ್ಮಗಳಲ್ಲಿ ಅಭಿಜಿತ್ ಲಗ್ನ ಅತ್ಯಂತ ಶ್ರೇಷ್ಠವಾದರೂ ಉಪನಯನಕ್ಕೆ ಆ ಲಗ್ನ ಆಗುವುದಿಲ್ಲ. ಈ ಲಗ್ನವು ವಿವಾಹಾದಿಗಳಲ್ಲಿ ಗ್ರಹಸ್ಥಿತಿಯಿಂದ ಉಂಟಾಗುವ ಅನೇಕ ದೋಷಗಳನ್ನು ನಾಶನಾಡುತ್ತದೆ. ಸೂರ್ಯನು ಆ ಮಾಸದಲ್ಲಿ ಯಾವ ಲಗ್ನದಲ್ಲಿ ಉದಯವಾಗುವನೋ ಅದರಿಂದ ನಾಲ್ಕನೆಯ ಲಗ್ನವೇ ಅಭಿಜಿತ್ ಲಗ್ನ.   ಶ್ರೀನಿಧಿ ಅಭ್ಯಂಕರ್