ಪೋಸ್ಟ್‌ಗಳು

ಆಗಸ್ಟ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಹಾಭಾರತ ವಿಮರ್ಶೆ

ಸತ್ಯದ ಹುತ್ತ ಭಾಗ-೨ ಅರ್ವಾಚೀನ ಕವಿಗಳ ಉದ್ದೇಶವಾದರೂ ಏನು? ಪ್ರಸಂಗ-೨ ದುರ್ಯೋಧನನ ಅಪಮಾನ ರಾಜಸೂಯ ಯಜ್ಞ ಮುಗಿದು ಎಲ್ಲಾ ರಾಜರು ಕೃಷ್ಣಾದಿಗಳೂ ಕೂಡ ತಮ್ಮ ತಮ್ಮ ಊರಿಗೆ ಹಿಂತಿರುಗಿದ್ದರೂ ದುರ್ಯೋಧನ ಹಾಗೂ ಶಕುನಿ ಮಾತ್ರ ಅಲ್ಲಿಯೇ ನೆಲೆಸಿರುತ್ತಾರೆ.  ಆ ಸಂದರ್ಭದಲ್ಲೊಮ್ಮೆ ದುರ್ಯೋಧನ ಅಲ್ಲಿಯ ನೆಲಜಲದ ವ್ಯತ್ಯಾಸ ತಿಳಿಯದೇ ಜಾರಿ ಬೀಳುತ್ತಾನೆ ಹಾಗೂ ತಲೆ ಹೊಡೆದುಕೊಳ್ಳುತ್ತಾನೆ. ಈ ಸಮಯದಲ್ಲಿ ಅಲ್ಲಿ ಹಾಜರಿದ್ದ ಭೀಮಾದಿಗಳು ಹಾಸ್ಯ ಮಾಡುತ್ತಾರೆ. ಈ ಅಪಮಾನದ ಪ್ರಸಂಗದಲ್ಲಿ ದ್ರೌಪದಿಯ ಪಾತ್ರ ಏನೂ ಇಲ್ಲ ವ್ಯಾಸರ ಕೃತಿಯ ಪ್ರಕಾರ. ಆದರೆ ಮುಂದಿನ ಮಹಾಭಾರತ ಆಧರಿಸಿದ ಕೃತಿಗಳು ಇಲ್ಲಿ ದ್ರೌಪದಿಯನ್ನೂ ಎಳೆತಂದು ಅವಳ ಕೈಯಲ್ಲೂ ಜೋರಾಗಿ ನಕ್ಕಿಸಿ ಅಪಮಾನ ಮಾಡಿಸುತ್ತಾರೆ.  ಇಲ್ಲಿ ದ್ರೌಪದಿಯು ಅಪಮಾನ ಮಾಡಿದ್ದಕ್ಕೆ ಪ್ರತಿಯಾಗಿ ಮುಂದೆ ದುರ್ಯೋಧನ ವಸ್ತ್ರ ಎಳೆಸಿ ಅಪಮಾನ ಮಾಡಿದನೆಂದು ದುರ್ಯೋಧನನ ಸಮರ್ಥನೆಗೆ ಇದನ್ನು ಬಳಸಿದ್ದಾರೆ. ವ್ಯಾಸ ಭಾರತದ ಪ್ರಕಾರ ದ್ರೌಪದಿಯ ಪಾತ್ರವೇ ಇಲ್ಲದ ಪ್ರಕರಣವದು. ಆದರೆ ದುರ್ಯೋಧನನು ತನ್ನ ತಂದೆಯ ಬಳಿ ಈ ಪ್ರಸಂಗ ವಿವರಿಸುವಾಗ ಕೃಷ್ಣನನ್ನೂ ದ್ರೌಪದಿಯನ್ನು ಸೇರಿಸಿದ್ದಾನೆ.  ಇದು ಅವನ ದೌಷ್ಟ್ಯತೆಗೆ ಸಾಕ್ಷಿಯೇ ಹೊರತು ನಿಜಕ್ಕಾದ ಘಟನೆ ಅಲ್ಲ. ನಡೆದ ಘಟನೆಗೆ ಒಂದಷ್ಟು ಸೇರಿಸಿ ವೈಭವೀಕರಿಸುವುದು, ತನ್ಮೂಲಕ ತನ್ನ ಉದ್ದೇಶ ಸಾಧಿಸುವುದು ಹೊರತು ನಿಜವಿಷಯ ಅದಲ್ಲ.  ಎಲ್ಲಾ ರಾಜರು ಹಿಂತಿರುಗಿ...

ಮಹಾಭಾರತ ವಿಮರ್ಶೆ

ಸತ್ಯದ ಹುತ್ತ ಭಾಗ-೧ ಅರ್ವಾಚೀನ ಕವಿಗಳ ಉದ್ದೇಶವಾದರೂ ಏನು? ಮಹಾಭಾರತವೆಂಬ ನಿಷ್ಪಕ್ಷಪಾತಿ ವ್ಯಾಸರ ಮೂಲಕೃತಿಯನ್ನು ತಮಗೆ ಬೇಕಾದಂತೆ  ಬದಲಿಸಿ ಪಾತ್ರಗಳ ನೈಜತೆಯನ್ನು ಮರೆಮಾಚಿ ಮಾಡಹೊರಟಿದ್ದಾದರೂ ಏನು ಎಂಬುದಕ್ಕೆ ಉತ್ತರ ಎಂದಿಗೂ ಸಿಗಲಾರದು. ಪ್ರಸಂಗ -೧ ದ್ರೌಪದಿ ಸ್ವಯಂವರ ದ್ರೌಪದಿ ಸ್ವಯಂವರದಲ್ಲಿ ಶಲ್ಯ ಜರಾಸಂಧ ದುರ್ಯೋಧನ ಕರ್ಣ ಮೊದಲಾದ ಎಲ್ಲಾ ವೀರರು ಪಾಲ್ಗೊಂಡಿದ್ದರೂ ಯಾರೊಬ್ಬರೂ ಧನುಸ್ಸನ್ನು ಎತ್ತಲು ಸಮರ್ಥರಾಗುವುದಿಲ್ಲ. ಆಗ ಬ್ರಾಹ್ಮಣ ವೇಷಧಾರಿ ಅರ್ಜುನ ಯಂತ್ರ ಭೇದಿಸುತ್ತಾನೆ. ಮಹಾಭಾರತದ ಮೂಲ ಆವೃತ್ತಿಯಂತೆ ಈ ಸಂದರ್ಭದಲ್ಲಿ ದ್ರೌಪದಿಯ ಮಾತೂ ಇಲ್ಲ. ದೃಷ್ಟದ್ಯುಮ್ನ ಈ ಸಭೆಯ ಸಂಯೋಜಕ. ಕರ್ಣನನ್ನು ಮೆರೆಸಲು ಹೊರಟ ಮುಂದಿನ ಕವಿಗಳು ಅಥವಾ ದಾರ್ಶನಿಕರು ಈ ಸಂದರ್ಭದಲ್ಲಿ ದ್ರೌಪದಿಯನ್ನು ಎಳೆತಂದು ಅವಳು ಸೂತಪುತ್ರನೆಂದು ಕರ್ಣನನ್ನು ತಡೆದಳು ಎಂದಿದ್ದಾರೆ. ಇದರ ಅಗತ್ಯ ಏನಿತ್ತು? ನಿಜಕ್ಕಾದರೆ ಉಳಿದ ಕ್ಷಾತ್ರಸಭೆ ಅರ್ಜುನನು ಬ್ರಾಹ್ಮಣನೆಂದೆಣಿಸಿ ಯುದ್ಧ ಮಾಡಹೊರಟಾಗ ಕರ್ಣನು ಅರ್ಜುನನನ್ನು ಮನಸಾರೆ ಪ್ರಶಂಸಿಸುತ್ತಾನೆ. ಧನುರ್ವೇದವೇ ಮೂರ್ತಿವೆತ್ತಂತಿರುವ ಈ ಯುವಕ ನಿಜಕ್ಕೂ ಇದಕ್ಕೆ ಅರ್ಹನೆನ್ನುತ್ತಾನೆ. ಈ ಸಂದರ್ಭದ ಕರ್ಣನ ಗುಣಗ್ರಾಹಿತ್ವ ಮೆಚ್ಚುವುದು ಬಿಟ್ಟು ವಿನಾಕಾರಣ ದ್ರೌಪದಿಯನ್ನು ಎಳೆತಂದು ಅವಳ ಮಾತಿಗೊಂದು ಜಾತಿಯ ಬಣ್ಣ ಬಳೆಯುವ ಉದ್ದೇಶ ಏನು?  ಮೂಲ ಕೃತಿಯನ್ನು ಆಧಾರವಾಗಿಟ್ಟುಕೊಂಡು ತಾವು ಏನೇ ಬರೆಯಲಿ ...

ಧರ್ಮಾಚರಣೆ ೧೭

        ಧರ್ಮಾಚರಣೆ---೧೭ ವೇದಸ್ವೀಕರಣಂ ಪೂರ್ವಂ ವಿಚಾರೋಭ್ಯಸನಂ ಜಪಃ | ತದ್ದಾನಂ ಚೈವ ಶಿಷ್ಯೇಭ್ಯೋ ವೇದಾಭ್ಯಾಸೋ ಹಿ ಪಂಚಧಾ || ದಕ್ಷವಚನ|| ವೇದಾಭ್ಯಾಸವೆಂದರೆ ಅದು ಕೇವಲ ಯಾರದ್ದೋ ಉಪದೇಶ ಅಥವಾ ಧ್ವನಿ ಸುರುಳಿ ಕೇಳಿ ಅಥವಾ ಪುಸ್ತಕ ಓದಿ ನಡೆಯುವಂತಹದಲ್ಲ. ಐದು ಹಂತಗಳಲ್ಲಿ ವೇದಾಭ್ಯಾಸ ಶಾಸ್ತ್ರೋಕ್ತವಾಗಿದೆ. ಮೊದಲು ಗುರುಗಳ ಬಳಿ ನಿಯಮದಿಂದ ಕಲಿಯುವುದು, ನಂತರ  ವೇದಾರ್ಥದ ಹಾಗೂ ಮಂತ್ರಗಳ ಪ್ರಯೋಗದ ಬಗ್ಗೆ ಅಭ್ಯಾಸ ಮಾಡಬೇಕು. ಸದಾ ವೇದಚಿಂತನೆಯಲ್ಲಿ ಅಲ್ಲಿ ಪರಮಾತ್ಮನ ಬಗೆಗಿನ ಜ್ಞಾನದ ಚಿಂತನೆಯಲ್ಲಿ ತೊಡಗಬೇಕು. ಅನಂತರ ಕಲಿಯಲು ಬಯಸುವ ಯೋಗ್ಯ ಶಿಷ್ಯರಿಗೆ ಉಪದೇಶಿಸಬೇಕು. ಹೀಗೆ ಐದು ಹಂತದ ಅಭ್ಯಾಸ ಮಾಡಿದವನನ್ನು ವೇದಮೂರ್ತಿ ಅಂತಲೋ, ವಿಪ್ರನೆಂದೋ, ವೇದಬ್ರಹ್ಮನೆಂದೋ ಕರೆಯಬಹುದು. ಉಳಿದವರು ಮೂರ್ತಿಗಳು ಮಾತ್ರ. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೧೬

    ಧರ್ಮಾಚರಣೆ---೧೬ ಸ್ವಶಾಖೋಪನಿಷದ್ಗೀತಾ ವಿಷ್ಣೋರ್ನಾಮಸಹಸ್ರಕಮ್ | ರುದ್ರಂ ಪುರುಷಸೂಕ್ತಂ ಚ ನಿತ್ಯಮಾವರ್ತಯೇದ್ಗೃಹೀ || ಸ್ಮೃತಿ || ಗೃಹಸ್ಥನಾದವನು ತಾನು ದಿನವೂ ತನ್ನ ಶಾಖೆಯ ಅಂದರೆ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದದ ತನ್ನ ಗೋತ್ರಕ್ಕೆ ಸಂಬಂಧಿಸಿದ ಶಾಖೆಯ ಉಪನಿಷತ್ತನ್ನು, ಭಗವದ್ಗೀತೆಯನ್ನು, ವಿಷ್ಣುಸಹಸ್ರನಾಮವನ್ನು, ರುದ್ರವನ್ನು, ಪುರುಷಸೂಕ್ತವನ್ನು ಪಠಿಸಬೇಕು. ಇದು ನಮ್ಮ ಬದುಕಿನಲ್ಲಿ ಪಾಪಗಳನ್ನು ಕಳೆದು ಮುಕ್ತಿಯೆಡೆಗೆ ಮಾರ್ಗವನ್ನು ತೋರಿಸುತ್ತದೆ. ಇವುಗಳನ್ನು ತಿಳಿಯದವನು ಅರ್ಥವನ್ನಾದರೂ ತಿಳಿಯುವ ಪ್ರಯತ್ನ ಮಾಡಬೇಕು. ಸಂಗ್ರಹ : ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೧೫

    ಧರ್ಮಾಚರಣೆ -----೧೫ ಗುಡೌದನಂ ಪಾಯಸಂ ಚ ಹವಿಷ್ಯಂ ಕ್ಷೀರಷಾಷ್ಟಿಕಮ್ | ದಧ್ಯೋದನಂ ಹವಿಶ್ಚೂರ್ಣಂ ಮಾಂಸಂ ಚಿತ್ರಾನ್ನಮೇವ ಚ || ಯಾಜ್ಞವಲ್ಕ್ಯ ಸ್ಮೃತಿ || ನವಗ್ರಹಗಳಿಗೆ ಹೋಮದಲ್ಲಿ ಅರ್ಪಿಸಬೇಕಾದ ಅನ್ನದ ಬಗ್ಗೆ ಹೇಳಿದ್ದಾರೆ - ಸೂರ್ಯನಿಗೆ ಬೆಲ್ಲದ ಅನ್ನ, ಚಂದ್ರನಿಗೆ ಹಾಲನ್ನ, ಕುಜನಿಗೆ ಹವಿಷ್ಯಾನ್ನ, ಬುಧನಿಗೆ ಅರವತ್ತು ದಿನಗಳಲ್ಲಾಗುವ ಅಕ್ಕಿಯ ಹಾಲನ್ನ, ಗುರುವಿಗೆ ಮೊಸರನ್ನ, ಶುಕ್ರನಿಗೆ ತುಪ್ಪದ ಅನ್ಮ, ಶನಿಗೆ ಎಳ್ಳು ಸೇರಿಸಿದ ಅನ್ನ, ರಾಹುವಿಗೆ ಮಾಂಸಕ್ಕೆ ಸಮಾನವಾದ ಉದ್ದಿನ ಅನ್ನ, ಕೇತುವಿಗೆ ಚಿತ್ರಾನ್ನ. ಹೀಗೆ ಆಯಾ ಗ್ರಹಗಳ ಪ್ರೀತ್ಯರ್ಥ ಅರ್ಪಿಸಬೇಕು. ನಮಗೆ ಹೇಗೆ ಇಷ್ಟಾನಿಷ್ಟಗಳ ಭೇದವಿದೆಯೋ ಗ್ರಹಗಳಿಗೂ ಅಂತೆಯೇ ಇರುತ್ತದೆ. ಎಲ್ಲರಿಗೂ ಒಂದೇ ರೀತಿಯ ಅರೆಬೆಂದ  ಅನ್ನ ಅರ್ಪಿಸಿ ಅವರವರ ಫಲ ಬೇಡುವುದು ವ್ಯರ್ಥ. ಸಂಗ್ರಹ : ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೧೪

    ಧರ್ಮಾಚರಣೆ-----೧೪ ವಿದ್ಯಾಕರ್ಮವಯೋ ಬಂಧುವಿತ್ತೈರ್ಮಾನ್ಯಾ ಯಥಾಕ್ರಮಮ್ | ಏತೈಃ ಪ್ರಭೂತೈಃ ಶೂದ್ರೋಪಿ ವಾರ್ಧಕೇ ಮಾನಮರ್ಹತಿ || ಯಾಜ್ಞವಲ್ಕ್ಯ ಸ್ಮೃತಿ|| ಅಪಾರವಾದ ವಿದ್ಯೆ ಉಳ್ಳವರು, ಸತ್ಕರ್ಮಾಚರಣೆಯಲ್ಲಿ ತೊಡಗಿದವರು, ವಯಸ್ಸಿನಲ್ಲಿ ಹಿರಿಯರು, ಧನಿಕರನ್ನು ಕ್ರಮವಾಗಿ ಗೌರವಿಸಬೇಕು‌. ಮೊದಲು ಜ್ಞಾನಿಗಳನ್ನು, ನಂತರ ಪ್ರಾಮಾಣಿಕವಾಗಿ ದುಡಿಯುವವರನ್ನು, ನಂತರ ಹಿರಿಯರನ್ನು, ಕೊನೆಯದಾಗಿ ಧನಿಕರನ್ನು ಗೌರವಿಸಬೇಕು‌. ಈ ಗುಣಗಳಿಂದ ಯುಕ್ತನಾದ ಹಿರಿಯ  ಶೂದ್ರನನ್ನೂ ಗೌರವಿಸಬೇಕು‌. ಗುಣಗ್ರಾಹಿತ್ವಕ್ಕೆ ಜಾತಿ-ಮತ-ಲಿಂಗ-ದೇಶಗಳ ಭೇದವಿಲ್ಲ. ವಿದ್ವಾಂಸರು ಯಾವ ಕುಲದವರಾದರೂ ಎಂದಿಗೂ ಪೂಜ್ಯರು. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೧೩

      ಧರ್ಮಾಚರಣೆ-----೧೩ ವಿರುದ್ಧಂ ವರ್ಜಯೇತ್ಕರ್ಮ ಪ್ರೇತಧೂಮಂ ನದೀತರಮ್ | ಕೇಶಭಸ್ಮತುಷಾಂಗಾರ ಕಪಾಲೇಷು ಚ ಸಂಸ್ಥಿತಿಮ್ || ಯಾಜ್ಞವಲ್ಕ್ಯ ಸ್ಮೃತಿ || ದೇಶ, ಗ್ರಾಮ, ಕುಲಾಚಾರ, ಆರೋಗ್ಯ, ಆಯುಷ್ಯ ಇವುಗಳಿಗೆ ವಿರುದ್ಧವಾದ ಕರ್ಮ ಮಾಡಬಾರದು. ಯಾವ ಯಾವ ದೇಶದಲ್ಲಿ, ಗ್ರಾಮಗಳಲ್ಲಿ, ಮನೆಗಳಲ್ಲಿ ಏನೇನು ಸಂಪ್ರದಾಯ ಇದೆಯೋ ಅದನ್ನು ಗೌರವಿಸಬೇಕು. ನಮ್ಮ ಆರೋಗ್ಯ ಅಥವಾ ಆಯುಷ್ಯಕ್ಕೆ ಹಾನಿ ತರುವ ಸಂಪ್ರದಾಯ ಬಿಡಬೇಕು. ಶವ ಸುಡುವಾಗ ಬರುವ ಹೊಗೆ ಸೇವಿಸಬಾರದು. ಇಹಪರದಲ್ಲಿ ಅದು ಹಾನಿಕಾರಕ. ಪ್ರವಾಹದಲ್ಲಿ ಈಜುವ ಸಾಹಸ ಎಂದಿಗೂ ಸಲ್ಲದು. ಕೂದಲು, ಬೂದಿ, ಹೊಟ್ಟು, ಕೆಂಡ, ಹೆಂಚುಗಳ ಮೇಲೆ ಕುಳಿತುಕೊಳ್ಳಬಾರದು. ಮೊದಲಾಗಿ ಅಶುಚಿ, ಎರಡನೆಯದಾಗಿ ಸುಡುವ, ಬೀಳುವ, ಗಾಯ ಮಾಡಿಕೊಳ್ಳುವ ಪ್ರಸಂಗ ಬಂದೀತು.  ಸಂಗ್ರಹ : ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೧೨

   ಧರ್ಮಾಚರಣೆ---- ೧೨ ಅಸ್ನಾತ್ವಾ ವೈ ನ ಭುಂಜೀತ ತಥೈವಾಗ್ನಿಮಪೂಜ್ಯ ಚ | ನ ಪರ್ಣಪೃಷ್ಠೇ ಭುಂಜೀತ ರಾತ್ರೌ ದೀಪಂ ವಿನಾ ತಥಾ || ಪರಾಶರ ಸ್ಮೃತಿ || ಸ್ನಾನ ಮಾಡದೇ ಉಣ್ಣಬಾರದು. ದೇಹ ಶುದ್ಧಿ ಇಲ್ಲದಾಗ ಉಂಡ ಆಹಾರವು ಮಲಿನವಾಗಿ ರೋಗಗಳಿಗೆ ಆಹ್ವಾನ ನೀಡಿದಂತಾಗುವುದು. ಅಗ್ನಿ ಪೂಜೆ ಮಾಡದೆಯೂ ಆಹಾರ ಸ್ವೀಕರಿಸಬಾರದು. ದೇಹದ ಒಳಗೂ ಅಗ್ನಿ ಬೇಕು. ಆಹಾರ ಬೇಯಲೂ ಅಗ್ನಿ ಬೇಕು. ಇಂತಹ ಅಗ್ನಿಯ ಪ್ರಾರ್ಥನೆ ನಮ್ಮ ಇಹಪರಗಳ ಬದುಕಿಗೆ ಮಾರ್ಗದರ್ಶಕ. ಎಲೆಯಲ್ಲಿ ಊಟ ಮಾಡುವಾಗ ಅದರ ಹಿಂಭಾಗ ಸಲ್ಲದು. ಕ್ರಿಮಿ ಕೀಟಗಳಿಗೆ ಆಧಾರವಾದದ್ದು ಪರ್ಣಪೃಷ್ಠ. ಅಲ್ಲದೇ ಅದರ ಒರಟುತನವೂ ಉಣ್ಣಲು ಅಸಹಕಾರಿ. ಇನ್ನು ರಾತ್ರಿಯಲ್ಲಿ  ಬೆಳಕಿಲ್ಲದೆ ಕತ್ತಲಲ್ಲಿ ಉಣ್ಣಬಾರದು. ಹುಳು ಹುಪ್ಪಟೆಗಳು ಕೂದಲು ಮೊದಲಾದವು ಉದರ ಸೇರಬಾರದು. ಹಾಗಾಗಿಯೇ ಹಿಂದುಗಳಲ್ಲಿ ರಾತ್ರಿ ಭೋಜನ ನಿಷಿದ್ಧ. ಜೈನರಲ್ಲಿ ಸೂರ್ಯಾಸ್ತದ ನಂತರದ ಭೋಜನ ನಿಷಿದ್ಧ. ಒಂದು ವೇಳೆ ಮಾಡುವುದಾದರೂ ಬೆಳಕಿನಲ್ಲಿ ನಿಧಾನಕ್ಕೆ ಉಣ್ಣಬೇಕು. ಹೀಗೆ ಸೇವಿಸುವ ಆಹಾರ ಬದುಕಿಗೆ ಪೂರಕ. ಇಲ್ಲದಿದ್ದರೆ ಅದೇ ದುಃಖಕಾರಕ. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೧೧

     ಧರ್ಮಾಚರಣೆ-----೧೧ ದದ್ಯಾತ್ಪೂರ್ವಮುಖೋ ದಾನಂ ಗೃಹ್ಣೀಯಾದುತ್ತರಾಮುಖಃ | ಆಯುರ್ವಿವರ್ಧತೇ ದಾತುಃ ಗೃಹೀತುಃ ಕ್ಷೀಯತೇ ನ ತತ್ || ಅಗ್ನಿಪುರಾಣ ದಾನ ನೀಡುವಾಗ ಪೂರ್ವದಿಕ್ಕಿಗೆ ತಿರುಗಿ ಅಥವಾ ಅಭಿಮುಖವಾಗಿ ನೀಡಬೇಕು. ಸ್ವೀಕರಿಸುವವನು ಉತ್ತರಾಭಿಮುಖವಾಗಿ ಇರಬೇಕು. ಇಂತಹ ನಿಯಮ ಪಾಲನೆಯು ಕೊಡುವವನ ಆಯುಸ್ಸನ್ನು ಹೆಚ್ಚಿಸುವುದು. ಅಂತೆಯೇ ಸ್ವೀಕರಿಸುವವನ ಆಯುಷ್ಯವೂ ಕ್ಷೀಣಿಸಲಾರದು.   ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೧೦

       ಧರ್ಮಾಚರಣೆ---- ೧೦ ಶ್ರದ್ಧಯಾ ಕರ್ಮ ಕುರ್ವೀತ ಧೌತವಸ್ತ್ರಧರೋ ಭವೇತ್ | ಅವ್ಯಗ್ರೋಲಂಕೃತೋ ಮೌನೀ ದಂಭಾಸೂಯಾದಿವರ್ಜಿತಃ || ಸಂಸ್ಕಾರರತ್ನಮಾಲಾ ನಾವು ಯಾವ ಕರ್ಮಗಳನ್ನು ಮಾಡುವುದಿದ್ದರೂ ಅವುಗಳಲ್ಲಿ ಈ ಲಕ್ಷಣಗಳು ಇರಬೇಕು. ಮಾಡುವ ಕರ್ಮದಲ್ಲಿ ಅತ್ಯಂತ ಶ್ರದ್ಧೆ, ಬಿಳಿ ಬಟ್ಟೆ ಅಥವಾ ಸ್ವಚ್ಛವಾದ ವಸ್ತ್ರ ( ಕೊಳೆಯನ್ನು ಗುರುತಿಸುವುದು ಸುಲಭ) , ಯಾವ ಕಾರಣಕ್ಕೂ ಕೋಪ ಮಾಡಿಕೊಳ್ಳಬಾರದು, ಕೂದಲು ಕೆದರದೆ ಶಿಖೆಯನ್ನು ಕಟ್ಟಿಕೊಂಡು ಸ್ತ್ರೀಯರಾದರೆ ಕೇಶಕಟ್ಟಿಕೊಂಡು, ತಿಲಕ ಮೊದಲಾದವುಗಳಿಂದ ಅಲಂಕೃತರಾಗಿ, ಮೌನವಾಗಿ, ದ್ವೇಷ ಅಸೂಯೆ ಮೊದಲಾದ ಕಪಟತನವನ್ನು ಬಿಟ್ಟು ದೇವತೆಯನ್ನು ಧ್ಯಾನಿಸುತ್ತಾ ಮುಂದುವರಿಯಬೇಕು. ಪೂಜೆಗೆ ಅದರದ್ದೇ ಆದ ನಿಯಮಗಳನ್ನು ಪಾಲಿಸಬೇಕು. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೯

     ಧರ್ಮಾಚರಣೆ-----  ೯ ಕೌಶೇಯಂ ಕಂಬಲಂ ಚೈವ ಅಜಿನಂ ಪಟ್ಟಮೇವ ಚ | ದಾರುಜಂ ತಾಲಪತ್ರಂ ವಾ ಆಸನಂ ಪರಿಕಲ್ಪಯೇತ್ || ಕೃಷ್ಣಾಜಿನೇ ಜ್ಞಾನಸಿದ್ಧಿರ್ಮೋಕ್ಷಶ್ರೀರ್ವ್ಯಾಘ್ರಚರ್ಮಣಿ | ಕುಶಾಸನೇ ವ್ಯಾಧಿನಾಶಃ ಸರ್ವೇಷ್ಟಂ ಚಿತ್ರಕಂಬಲೇ|| ವ್ಯಾಸವಚನ. ರೇಷ್ಮೆ ಬಟ್ಟೆ, ಕಂಬಳಿ, ಚರ್ಮ, ಮಣೆ ಮೊದಲಾದ ಮರದ ನಿರ್ಮಿತಿಗಳು, ತಾಳೆಎಲೆ, ದರ್ಭಾಸನ ಮೊದಲಾದವುಗಳು ಶುಭಕರ್ಮಗಳಲ್ಲಿ ಆಸನವಾಗಿ ಸ್ವೀಕರಿಸಬೇಕಾದವು. ಬರಿದೆ ನೆಲದಲ್ಲಿ ಕೂತು ಆರೋಗ್ಯಕ್ಕೂ ಹಾನಿ, ಶಾಸ್ತ್ರಕ್ಕೂ ಅಪಚಾರ.  ಕೃಷ್ಣಮೃಗಾಜಿನವು ಜ್ಞಾನ ಸಿದ್ಧಿಯನ್ನು, ವ್ಯಾಘ್ರಾಜಿನವು ಮೋಕ್ಷಸಂಪತ್ತನ್ನೂ, ದರ್ಭಾಸನದಿಂದ ಅರೋಗತೆಯೂ, ಚಿತ್ರವರ್ಣದಕಂಬಳಿಯು ಇಷ್ಟಾರ್ಥವನ್ನು ಕೊಡುವುದು. ಸತ್ತ ಮೃಗದ ಚರ್ಮ ಹೊರತು ಸಾಯಿಸಿದ್ದಲ್ಲ. ಪ್ರಾಣಿವಧೆ ಮೇಲೆ ಆಸನ ಕೊಟ್ಟೀತು. ಒಟ್ಟಾರೆ ಆಸನದಲ್ಲಿ ಆಸೀನರಾಗಿಯೇ ಕರ್ಮಗಳಲ್ಲಿ ತೊಡಗಬೇಕು. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೮

     ಧರ್ಮಾಚರಣೆ---- ೮ ಇಕ್ಷುರ್ಮಧು ಘೃತಂಚೈವ ಪಯೋ ದಧಿ ಸಹೈವ ತು| ಪ್ರಸ್ಥಪ್ರಮಾಣಂ ವಾ ಗ್ರಾಹ್ಯಂ ಮಧುಪರ್ಕಮಿಹೋಚ್ಯತೇ || ಸುಧಾನಿಧಿ ಗ್ರಂಥ | ಯಜ್ಞಗಳಲ್ಲಿ, ಪೂಜಾದಿಗಳಲ್ಲಿ ಮಧುಪರ್ಕ ಕೊಡುವ ಕ್ರಮ ಉಂಟು. ಆ ಮಧುಪರ್ಕದ ಕ್ರಮ ಹೀಗಿದೆ  ಕಬ್ಬಿನ ಹಾಲು- ಜೇನು- ತುಪ್ಪ- ಮೊಸರು ಇಷ್ಟನ್ನೂ ಒಂದು ದೊಡ್ಡ ಪಾತ್ರೆಯಲ್ಲಿ ತುಂಬುವಷ್ಟು ಅಂದರೆ ಪ್ರತಿಯೊಂದನ್ನೂ ಸುಮಾರು ಒಂದು ದೊಡ್ಡ ತಂಬಿಗೆಯಷ್ಟು ಕೊಟ್ಟಾಗ ಅದು ಮಧುಪರ್ಕ ಎನಿಸುವುದು. ಸಾರಭೂತವಾದ ಈ ದ್ರವ್ಯಗಳ ಸೇವನೆಯು ಯಾರಿಗೆ ತಾನೇ ತೃಪ್ತಿ ತರದು! ದೇವರಿಗೆ ಕೊಡುವಾಗಲೂ ಉತ್ತಮ ದ್ರವ್ಯವನ್ನೇ ನೀಡಬೇಕು, ಹಾಗಲ್ಲದೆ ನಾವು ಹೇಗೆ ಸುಖ  ಬಯಸಲು ಸಾಧ್ಯ?  ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೭

       ಧರ್ಮಾಚರಣೆ----- ೭ ಪರಶಯ್ಯಾಸನೋದ್ಯಾನ ಗೃಹಯಾನಾನಿ ವರ್ಜಯೇತ್ | ಅದತ್ತಾನ್ಯಗ್ನಿಹೀನಸ್ಯ ನಾನ್ನಮದ್ಯಾದನಾಪದಿ || ಯಾಜ್ಞವಲ್ಕ್ಯಸ್ಮೃತಿ . ಇನ್ನೊಬ್ಬರಿಗೆ ಸಂಬಂಧಿಸಿದ ಹಾಸಿಗೆ, ಆಸನ, ಉದ್ಯಾನ ಅಥವಾ ತೋಟ, ಮನೆ, ವಾಹನಗಳ ಬಳಕೆ ಅವರ ಅನುಮತಿ ಇಲ್ಲದೇ ಎಂದಿಗೂ ಸರಿಯಲ್ಲ. ಪ್ರತಿಯೊಬ್ಬರಿಗೂ ಒಂದಷ್ಟು ಮೋಹ ಇರುವ ಕಾರಣ ಆ ವಸ್ತುಗಳ ಅನುಮತಿ ಇಲ್ಲದ ಬಳಕೆ ಕಲಹಾದಿಗಳನ್ನು ಅಥವಾ ನಮಗೆ ಆಪತ್ತನ್ನು ತಂದುಕೊಡಬಲ್ಲದು. ಅದೇ ರೀತಿ ಪರರ ಆಹಾರಾದಿಗಳನ್ನು ಕೇಳದೇ  ಸ್ವೀಕರಿಸಲೂಬಾರದು. ಅಗ್ನಿ ಆರಾಧನೆ ಮಾಡದ  ವಿಪ್ರನಿರಲಿ ಯಾರೇ ಇರಲಿ ಅವರ ಅನ್ನವನ್ನೂ ಉಣ್ಣಬಾರದು. ಪ್ರತೀ ಮಾನವನಿಗೂ  ಒಂದಲ್ಲಾ ಒಂದು ಬಗೆಯ ಅಗ್ನಿಪೂಜೆ ವಿಹಿತವಾಗಿದೆ. ಹಾಗೆ ಮಾಡದೆ ಉಣ್ಣುವ ಅನ್ನ ಕೆಟ್ಟ ಅನ್ನ ಅಥವಾ ಕಳ್ಳತನದ ಅನ್ನವಾಗುವುದು. ಅಂತಹ ಅನ್ನವನ್ನು ಪ್ರಾಣ ಹೋಗುವ ಸಂದರ್ಭ ಬಿಟ್ಟು ಉಳಿದ ಸಮಯ ತಿನ್ನಬಾರದು.  ಸಂಗ್ರಹ : ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೬

      ಧರ್ಮಾಚರಣೆ ----- ೬ ಸ್ನಾನಂ ಸಂಧ್ಯಾಜಪೋ ಹೋಮೋ ದೇವತಾನಾಂ ಚ ಪೂಜನಮ್ |  ಆತಿಥ್ಯಂ ವೈಶ್ವದೇವಂ ಚ ಷಟ್ ಕರ್ಮಾಣಿ ದಿನೇ ದಿನೇ || ಪರಾಶರಸ್ಮೃತಿ ಪ್ರತಿದಿನವೂ ಈ ಆರು ಕರ್ಮಗಳನ್ನು ಬ್ರಹ್ಮಾನಂದ ಬಯಸುವ ವ್ಯಕ್ತಿ ಮಾಡಬೇಕು. ಬ್ರಾಹ್ಮೀ ಮುಹೂರ್ತದಲ್ಲಿ ಸ್ನಾನ, ಸಂಧ್ಯಾವಂದನೆ- ಜಪ ಅಥವಾ ಧ್ಯಾನ, ಅಗ್ನಿಹೋತ್ರ ಅಥವಾ ಔಪಾಸನೆ, ದೇವಪೂಜೆ, ಮನೆಗೆ ಬಂದ ಅತಿಥಿಗೆ ಉಪಚಾರ, ಅನ್ನವನ್ನು ಉಣ್ಣುವ ಮೊದಲು ದೇವನಿಗೆ ಸಮರ್ಪಣೆ ಅಥವಾ ವೈಶ್ವದೇವ. ಇವು ನಮ್ಮ ಕೆಲಸಗಳನ್ನು ಪವಿತ್ರಗೊಳಿಸುತ್ತವೆ. ಸಂಗ್ರಹ : ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೫

        ಧರ್ಮಾಚರಣೆ------ ೫  ನ ಸ್ನಾನಮಾಚರೇದ್ಭುಕ್ತ್ವಾ ನಾತುರೋ ನ ಮಹಾನಿಶಿ | ನ ವಾಸೋಭಿಃ ಸಹ ಸ್ನಾನಂ ನಾವಿಜ್ಞಾತೇ ಜಲಾಶಯೇ|| ಮನುವಚನ. ಉಜ್ವಲಾ ಗ್ರಂಥ. ಸ್ನಾನವನ್ನು ಎಂದಿಗೂ ಭೋಜನದ ಕೂಡಲೇ ಮಾಡಬಾರದು. ಇದು ವಮನ ಮೊದಲಾದ ತೊಂದರೆಗೆ ಕಾರಣವಾದೀತು.ದೇಹದಲ್ಲಿ ಶಕ್ತಿ ಇಲ್ಲದಿದ್ದಾಗ ಅಥವಾ ರೋಗಿಷ್ಠನಾದಾಗಲೂ ಸ್ನಾನ ಮಾಡಬಾರದು.ಏಕೆಂದರೆ ಅಂತಹ ಸ್ನಾನವೇ ಅಪಾಯಕ್ಕೆ ಕಾರಣವಾದೀತು. ಮಧ್ಯರಾತ್ರಿಯ ಸಮಯದಲ್ಲಿ ಸೆಕೆ ಎಂದೋ ಅಥವಾ ಕ್ಷುಲ್ಲಕ ಕಾರಣಗಳಿಗಾಗಿ ಸ್ನಾನ ಮಾಡಬಾರದು. ಆ ಸಮಯ ಸ್ನಾನಕ್ಕೆ ಯೋಗ್ಯ ಸಮಯವಲ್ಲ. ಅನೇಕ ಬಟ್ಟೆಗಳನ್ನು ಧರಿಸಿ ಸ್ನಾನ ಮಾಡಬಾರದು. ಇದು ದೇಹಶುದ್ಧಿ ಮಾಡದೇ ವಸ್ತ್ರಶುದ್ಧಿ ಮಾತ್ರ ಉಂಟುಮಾಡೀತು. ಗುರುತು ಪರಿಚಯ ಇಲ್ಲದ ನೀರಿನ ಜಾಗದಲ್ಲಿ ಅಂದರೆ ಕೆರೆ- ಸರೋವರ-ಕಲ್ಯಾಣಿ-ನದಿ ಮೊದಲಾದ ಪ್ರದೇಶಗಳಲ್ಲಿ ನೀರಿದೆಯೆಂದು ಸ್ನಾನ ಮಾಡಬಾರದು. ಆಳ-ಅಗಲ, ದುಷ್ಟ ಜಂತುಗಳ ಅರಿವಿಲ್ಲದೇ ಕೊನೇ ಸ್ನಾನ ಆಗಬಹುದು.  ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೪

          ಧರ್ಮಾಚರಣೆ----೪ ವಸ್ತ್ರಪೂತೇನ ತೋಯೇನ ಕಾರ್ಯಂ ಚೈವಾನುಲೇಪನಮ್| ಶಿವಕ್ಷೇತ್ರೇ ಮುನಿಶ್ರೇಷ್ಠಾ ನಾನ್ಯಥಾ ಸಿದ್ಧಿರಿಷ್ಯತೇ||  ಲಿಂಗಪುರಾಣ ಜಲೇನ ವಸ್ತ್ರಪೂತೇನ ಯಃ ಸ್ನಾಪಯತಿ ಕೇಶವಮ್| ಸರ್ವಪಾಪವಿನಿರ್ಮುಕ್ತಃ ಶತಾಬ್ದಂ ಮೋದತೇ ದಿವಿ|| ಪೂಜೆಗೆ ಬಳಸುವ ನೀರನ್ನು ಸರ್ವಥಾ ವಸ್ತ್ರದಿಂದ ಶೋಧಿಸಿ ಬಳಸಬೇಕು. ಕ್ರಿಮಿಕೀಟಗಳು, ಅವುಗಳ ಮಲಾದಿಗಳು, ಗಿಡಗಂಟಿ, ಎಲೆ ಮೊದಲಾದ ಪಾರಿಸರಿಕ ಮಲಗಳಿಂದ ರಹಿತವಾದ ನೀರಿನಿಂದ ಪೂಜಿಸಿದರೆ ಶೈವ-ವೈಷ್ಣವಾದಿ ಸಕಲರಿಗೂ ಕ್ಷೇಮ. ನಾವು ಕುಡಿಯಲು ಹೇಗೆ ಉತ್ತಮ ನೀರನ್ನು ಬಳಸುವೆವೋ ದೇವಪೂಜೆಗೂ ಅದೇ ಭಾವ ಇರಬೇಕು. ' ಯದ್ಭಾವಂ ತದ್ಭವತಿ' ಬಾವಿಯಿಂದ ಅಥವಾ ನಲ್ಲಿಯಿಂದ ಹಿಡಿದು ಹಾಗೆಯೇ ಬಳಸುವುದು ಉಚಿತವಲ್ಲ. ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೩

      ಧರ್ಮಾಚರಣೆ ---೩ ಋಷಿರ್ಗುರುತ್ವಾತ್ ಶಿರಸಿ, ಛಂದೋಕ್ಷರತ್ವಾತ್ ಮುಖೇ, ಧ್ಯೇಯತ್ವಾತ್ ಹೃದಿ ದೇವತಾ. ಮೂಲ- ಸಂಧ್ಯಾ ಭಾಷ್ಯ.  ಯಾವುದೇ ಮಂತ್ರವನ್ನು ಹೇಳುವಾಗ ಋಷಿ ಛಂದಸ್ಸು ದೇವತೆಯನ್ನು ಸ್ಮರಿಸಬೇಕು. ಹಾಗೆ ಸ್ಮರಿಸುವ ಕಾಲದಲ್ಲಿ ಋಷಿಗಳ ಹೆಸರು ಹೇಳುವಾಗ ತಲೆಯನ್ನು ಮುಟ್ಟಬೇಕು. ಋಷಿಗಳು ಗುರುಪರಂಪರೆಯ ಜನಕರಾದ್ದರಿಂದ ಅವರಿಗೆ ನಮಿಸುತ್ತಿರುವೆ ಎಂಬ ಭಾವವಿರಬೇಕು. ಛಂದಸ್ಸು ಅಕ್ಷರಗಳ ನಿಯಮವಾದ್ದರಿಂದ ಅಕ್ಷರಗಳ ಉಚ್ಚಾರ ಸಾಧನ ಬಾಯಿಗೆ ಅಥವಾ ಅಲ್ಲಿ ನೆಲೆಸಿರುವ ದೇವತೆಗೆ ಸ್ಪರ್ಶದ ಮೂಲಕ ಕೃತಜ್ಞತೆ ಹೇಳಬೇಕು. ಮೂರನೆಯದಾಗಿ ನಮ್ಮ ಹೃದಯದಲ್ಲಿ ವಾಸವಾಗಿರುವ ಆ ಮಂತ್ರದ ದೇವತೆಯನ್ನು ಸ್ಪರ್ಶದ ಮೂಲಕ ನೆನೆಯಬೇಕು. ಯಾವುದೇ ಮಂತ್ರದ ಉಚ್ಚಾರಣಾ ಕಾಲದಲ್ಲಿ ಹೀಗೆ ಮಾಡಿದಾಗ ಗುರುಸ್ಮರಣೆಯೂ, ದೇವನ ಅನುಸಂಧಾನವೂ ಛಂದೋಜ್ಞಾನವೂ ಉಂಟಾಗುತ್ತದೆ.  ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಧರ್ಮಾಚರಣೆ ೨

          ಧರ್ಮಾಚರಣೆ ---೨ ಪೂರ್ವಾಂ ಸಂಧ್ಯಾಂ ಸನಕ್ಷತ್ರಾಂ ಉತ್ತರಾಂ ಸದಿವಾಕರಾಂ| ಉತ್ತರಾಮುಪವಿಶ್ಯೈವ ವಾಗ್ಯತಃ ಸರ್ವದಾ ಜಪೇತ್|| ಬೆಳಗ್ಗಿನ ಸಂಧ್ಯಾವಂದನೆ ಅಥವಾ ಪೂಜಾದಿಗಳನ್ನು ನಕ್ಷತ್ರಗಳು ಕಾಣುತ್ತಿರುವಾಗಲೇ ಆರಂಭಿಸಬೇಕು. ಸೂರ್ಯೋದಯ ಆದ ಮೇಲೆ ಅಥವಾ ಬಿಸಿಲು ಬರುವ ಮುಂಚೆ ನಮ್ಮ ನಿತ್ಯಕರ್ಮ ಶುರುವಾಗಬೇಕು. ಅಂತೆಯೇ ಸಂಜೆಯ ಸಂಧ್ಯಾವಂದನೆ ಸೂರ್ಯನಿರುವಾಗಲೇ ಶ್ರೇಷ್ಠ. ಅರ್ಘ್ಯ- ಗಾಯತ್ರೀ ಜಪ ಬೆಳಿಗ್ಗೆ ನಿಂತು ಮಾಡಬಹುದು. ಸಂಜೆ ಕುಳಿತು ಮಾಡುವುದೊಳಿತು. ಜಪವನ್ನು ಮನದಲ್ಲೇ ಮೆಲುಕು ಹಾಕುತ್ತಾ ಆ ಸವಿತೃದೇವನ ಧ್ಯಾನದೊಂದಿಗೇ ಮಾಡಬೇಕು. ಜೋರಾಗಿ ಗಾಯತ್ರೀ ಜಪ ಸರಿಯಲ್ಲ. ಮನನವೇ ಮಂತ್ರದ ಸಿದ್ಧಿಗೆ ಪೂರಕ. ಆಕರ-ಸ್ಮೃತಿಗಳು ಸಂಗ್ರಹ- ಶ್ರೀನಿಧಿ ಅಭ್ಯಂಕರ್

ಧರ್ಮಾಚರಣೆ ೧

        ಧರ್ಮಾಚರಣೆ-೧ ಪೂಜಾದಿಗಳಲ್ಲಿ ಅಶುದ್ಧಿಯಾದಾಗ ಕಿವಿ ಮುಟ್ಟುವುದು ಏಕೆ? ಅಗ್ನಿರಾಪಶ್ಚ ವೇದಾಶ್ಚ ಸೋಮಃ ಸೂರ್ಯೋನಿಲಸ್ತಥಾ|  ಏತೇ ಸರ್ವೇ ಚ ವಿಪ್ರಾಣಾಂ ಶ್ರೋತ್ರೇ ತಿಷ್ಠಂತಿ ದಕ್ಷಿಣೇ|| ಆಚಮನ ಮಾಡಿ ಬಲಕಿವಿ ಮುಟ್ಟಿದಾಗ ದೋಷವು ಪರಿಹಾರವಾಗುವುದೇ ಹೊರತು ಬರೀ ಕಿವಿ ಮುಟ್ಟಿ ಅಲ್ಲ. ಏಕೆಂದರೆ ಆಚಾರವಂತನ ಬಲ  ಕಿವಿಯಲ್ಲಿ ಅಗ್ನಿ, ಅಪೋದೇವತೆ,ವೇದಗಳು, ಚಂದ್ರ, ಸೂರ್ಯ, ವಾಯುದೇವ ನೆಲೆಸುತ್ತಾರೆ.  ಅಶಕ್ತೌ ತ್ರಿಃ ಪೀತ್ವಾ ಹಸ್ತೌ ಪ್ರಕ್ಷಾಲ್ಯ ಶ್ರೋತ್ರಂ ಸ್ಪೃಶೇತ್ ಎನ್ನುತ್ತದೆ ಸ್ಮೃತ್ಯರ್ಥಸಾರ. ನೀರು ಕುಡಿಯದೇ ದೇವಸ್ಮರಣೆ ಮಾಡದೇ ಕಿವಿ ಮುಟ್ಟಿ ಪ್ರಯೋಜನವಿಲ್ಲ. ಸಂಗ್ರಹ - ಶ್ರೀನಿಧಿ ಅಭ್ಯಂಕರ್

ಪದಶಕ್ತಿ ೩೦

🏹*ಪದಶಕ್ತಿ* ---೩೦🌄 *ಗೃಹಸ್ಥ* _ಗೃಹೇ-ದಾರೇಷು ತಿಷ್ಠತಿ-ಅಭಿರಮತೇ ಇತಿ ಗೃಹಸ್ಥಃ ಎಂಬಂತೆ ಮನೆಯಲ್ಲಿ ಇರುವವ ಅಥವಾ ಪತ್ನಿಯಲ್ಲಿ ಮಾತ್ರ ರಮಿಸುವವ ಎಂಬರ್ಥದ ಸಂಸ್ಕೃತ ಪದ. ಬೇರೆ ಬೇರೆ ಮನೆಗಳಲ್ಲಿ ಬೇರೆ ಬೇರೆ ದಾರರನ್ನು ಅಂದರೆ ಪತ್ನಿಯನ್ನು ಹೊಂದಿದ್ದರೆ ಅವನು ಗೃಹಸ್ಥನಾಗಲಾರ. ಅವನು ಬೇರೆಯೇ ಉಪಾಧಿಯನ್ನು ಪಡೆಯುವನು. ನಮ್ಮ ಧರ್ಮದಲ್ಲಿ ಮಕ್ಕಳಾಗದಿದ್ದಾಗ ಪತ್ನಿಯ ದೈಹಿಕ ತೊಂದರೆ ಅದಕ್ಕೆ ಕಾರಣವಾದಾಗ ಮಾತ್ರ  ಇನ್ನೊಂದು ಮದುವೆಗೆ ಸಮ್ಮತಿ ಇತ್ತೇ ಹೊರತು ಬೇರಾವ ಸಂದರ್ಭದಲ್ಲೂ ಅಲ್ಲ. ರಾಮನ ನಡೆಯೇ ಅದಕ್ಕೆ ಮಾದರಿ._ _ವಿದ್ಯೆಯನ್ನು ಅಭ್ಯಸಿಸಿ ಬಂದವನು ಮುಂದೆ ಈ ಆಶ್ರಮವನ್ನು ಪ್ರವೇಶಿಸುವ ಕಾರಣ ಅವನಿಗೂ ಈ ಪದದ ಪ್ರಯೋಗವಿದೆ. ಸ್ನಾತಕನೂ ಒಂದರ್ಥದ ಗೃಹಸ್ಥನು. ಮನೆಯ ಒಡೆಯನು ಮನೆಯಲ್ಲೇ ಇರುವವನಾದ್ದರಿಂದ ಮಡದಿ ಇಲ್ಲದಿದ್ದರೂ ಗೃಹಸ್ಥ. ಬೃಹತ್ ಕುಟುಂಬ ಹೊಂದಿದ ಬೃಹ್ಮಚಾರಿ ವ್ಯಕ್ತಿಯೂ ಕುಟುಂಬದ ಒಡನಾಟ ಆತ್ಮೀಯತೆಯ ಕಾರಣ ಗೃಹಸ್ಥನು.ಹಾಗಾಗಿ ಯಾರೂ ಮದುವೆಯಾಗದೇ ಹೇಗೆ ನಾನು ಗೃಹಸ್ಥ ಎಂದು ಕೊರಗಬೇಕಿಲ್ಲ. ಎಲ್ಲರೊಳಗೊಂದಾಗಿ ಬದುಕಿದರೆ ಅವನೇ ಗೃಹಸ್ಥ._ _ಇವರಲ್ಲಿ ಎರಡು ವಿಧ- ಉದಾಸೀನ ಹಾಗೂ ಸಾಧಕ. ಅನೇಕ ಪ್ರಸಿದ್ಧ ಅಪ್ರಸಿದ್ಧ ವ್ಯಕ್ತಿಗಳು ಈ ಉದಾಸೀನರು. ಮದುವೆಯಾಗಿಯೂ ದೇವ ಋಣ ಪಿತೃ ಋಣ ಋಷಿ ಋಣ ತೀರಿಸುವ ಗೋಜಿಗೆ ಹೋಗದೇ ಮಡದಿಯನ್ನೂ ದುಡ್ಡನ್ನೂ ಬಿಟ್ಟು ಒಬ್ಬನೇ ಸಂಚರಿಸುವ ಮಂದಿ. ಇವರಲ್ಲಿ ಸ್ವಾರ್ಥವೋ ಪರಾರ್ಥವೋ ಯಾವ ಉದ್ದೇ...

ಅನುವಾದಿತ ಕಥೆ ೧೩

अनूदित कथावलि:--१३ अपात्र दानम्   पुरा एक: कृपण: धनिक: वसति स्म । तस्य समीपे अपारधनपत्राणि , रजत-सुवर्ण- वज्राभरणानि तथा नाणकानि आसन्। तस्य एक: पुत्र: आसीत् ।  यदाकदा कश्चित् याचक: आगच्छति चेत् कुत:-कस्मै-किमर्थम् इत्यादि बहु प्रश्नान् पृष्ट्वा यदि अवश्यं देयम् इति मनसि आयाति चेत् तर्हि धनं ददाति स्म स:। नो चेत् एकं नाणकमपि न यच्छति स्म अन्यस्मै। लक्ष्मी: चञ्चला, स्ववशे नानीता चेत् परवशं गच्छति, व्यय: सावधानतया कर्तव्यम् इति। तस्य पत्नी तु पत्यु: कृपणत्वेन अपरितुष्टा  मनसि दु:खम् अनुभवति स्म। सा पुत्रम् आहूय सर्वदा एवं बोधयति स्म - वत्स! परोपकारार्थमेव भगवता अस्मत्कृते बहुधनं दत्तम् । येषां अवश्यं भवति तेषां कृते विनाप्रश्नं धनं दातव्यम् । कुत इति चेत् अत्र स्वामी केवलं भगवानेव। वयं वितरका: एव इति। भवान् आगामिनि काले दानी भविष्यति किल इति। पुत्र: मातु: वचनै: प्रभावित: । जननी एव प्रथमाध्यापिका किल।  कालो गत: । स: धनी विधे: आह्वानं स्वीकृत्य दिवङ्गत: । पुत्र: सर्वा: सम्पद: प्राप्तवान् । अचिरादेव स: तस्य ग्रामस्य चतुर्षु दिक्षु धर्मशालां स्थापितवान् । तत्र य: कश्चन...

ಅನುವಾದಿತ ಕಥೆ ೧೪

अनूदित कथावलि: -१४            .......आत्मैव हि आत्मन: बन्धु:..... नगरे गणकतन्त्रांशनिर्माणसंस्थायां एक: बहुकालात् कार्यं करोति स्म। तस्य सहोद्योगिन: तं सदा  दूरीकुर्वन्ति स्म । स: सर्वदा एवं चिन्तयति स्म - भाविनि जीवने अहं उन्नतस्थानं प्राप्स्यामि , मम स्वप्ना: सर्वे सत्यं भविष्यन्ति तथा अहं यत्र कुत्रापि  गमिष्यामि तत्र सर्वत्र जना: मम स्वागतं करिष्यन्ति इत्यादि। किंतु तादृशदिनानि न तस्मै आगतानि इत: पर्यन्तम्। तत्र कारणानि बहूनि वर्तन्ते- अनाकर्षकं  व्यक्तित्वं,  वचनेषु माधुर्यताया: अभाव: , विचित्रा अङ्गचेष्टा इत्यादय:।  स: सदा तदेव चिन्तयति स्म - कथं जना: मम मित्रताम्  अङ्गीकुर्यु:, कथमहं तै: साकं सुमधुरं भाषणं करोमि, कथं मम साङ्गत्यं सर्वे वाञ्छेयु: इत्यादि। निद्रायां , जागृदवस्थायां , वासप्रकोष्ठे एवं यत्रकुत्रापि तस्य मन: चिन्तामग्नं भवति स्म ।  एतस्मिन्नेव काले  कार्यक्षेत्रे एका भुवनमनोहरी तरुणी  तस्य मन: आकर्षितवती  । एष: तु सा कदा मया ऊढा भवतीत्येव चिन्तयति स्म। एकस्मिन् दिने स: सहोद्योगिन:  नृ...

ಅನುವಾದಿತ ಕಥೆ ೧೫

अनूदित कथावलि: -१५ 'कश्चिद्यतति सिद्धये'  ग्रामस्य मार्ग: स: | जनसम्मर्द: तादृश: नासीत् । तत्र गच्छन् एक: श्रान्त: वृक्षस्याध: किञ्चित् कालं सुप्तवान् । मनसि एवं विचारयामास  ' कीदृश: भाग्यहीनोsहं, दैवं कीदृशं सहायमपि न करोति मम, हे विधे, कुत: मम एतावन्ति कष्टानि ' इत्यादि। अनुक्षणं निद्रालिङ्गितो बभूव । बहुकालात् जागृतो भूत्वा उपरिस्थां वृक्षशाखां दृष्टवान् , तत्र आम्रफलपूर्णा: शाखा: । रसना अविलम्बेन आशां उत्पादितवती। किं तु अलसेन  तेन एवं चिन्तितम्- एकस्मिन्नेव वृक्षे बहव: पक्वा: आम्रा: वर्तन्ते । पूर्वपुण्यमस्ति  चेत् केचन आम्रा: लभेयु: । तानि खादित्वा आनन्दम् आप्नोमि ' इति ।  अचिरादेव केचन युवान: तत्र आगत्य आम्रवृक्षं दृष्ट्वा खादितुं उत्सुका:। तेषु द्वित्रय: वृक्षावरोहणं कृतवन्त: । अन्ये तै: पातितान् स्यूते स्थापितवन्त:। तैरेक: एतं निद्रितं प्रति उच्चै: उक्तवान् - भो ज्येष्ठ, फलानि पक्वानि मधुराणि सन्ति, अवश्यं चेत् यथेष्टं स्वीकुरु ' इति। तदापि तेन चिन्तितम् -' मम कृते इति विधिना निश्चितं फलं निश्चयेन मया प्राप्स्यते। कुत: उत्थाय गच्छामि ' इति।  तत:...

ಅನುವಾದಿತ ಕಥೆ ೧೬

अनूदित कथावलि: -१६ ' युक्तियुक्तं वचो ग्राह्यं बालादपि शुकादपि'  अस्माकं देशे विरागिषु श्रेष्ठ: बङ्गालदेशीय: रामकृष्ण परमहंस महोदय: । एकदा स: गुरुणा तोतापुरिणा सह स्नातुं नदीं गतवान् । गुरो: नित्यं अवश्यम् एकम् कार्यमासीत् । प्रत्यहं स्नानार्थमानीतं कमण्डलुं तिन्त्रिण्या  सुवर्णमिव यावत् न शोभते तावत्पर्यन्तं मार्जयति स्म ।  एकस्मिन् दिने यावत् गुरु: मार्जने निमग्न: तावत् किमपि आलोच्य रामकृष्ण: एवमुक्तवान् - आचार्य, भवान् कमण्डलुं बहुकालं कुत: मार्जयति ' इति। तदा गुरुणा उक्तम् - न किम्, केवलं शुद्ध्यर्थमेव। अस्माकं जीवने प्रत्येकस्मिन्नपि विषये शुद्धि: आवश्यकी ' इति।  तदा शिष्येणोक्तम् - आचार्य, एवं वा, तथा सति एतज्जडस्य कमण्डलो: मार्जनं विहाय अस्माकं अन्त:करणस्य अविरतं मार्जनं क्रियते चेत् एवमादि बहि:शुद्धि: नावश्यकी किल! ' इति।  तस्य वच: श्रुत्वा काष्ठमौन: गुरु: तस्य पादाभिवन्दनं चकार। तथा एवमुक्तं च तेन - एवंरूपं सामान्य विषयम् अप्यहं न चिन्तितवान्। अहं तु इत:पर्यन्तं भौतिकशुद्धौ  निमग्न: आसम् । तथा अहं तव गुरु: इति मम अहङ्कारोपि आसीत्, किंतु अद्यप्रभृति...