ಧರ್ಮಾಚರಣೆ-೯೨

ಧರ್ಮಾಚರಣೆ-೯೨

ಯಜ್ಞಾನಾಂ ತಪಸಾಂ ಚೈವ ಶುಭಾನಾಂ ಚೈವ ಕರ್ಮಣಾಮ್ | ವೇದ ಏವ ದ್ವಿಜಾತೀನಾಂ ನಿಶ್ರೇಯಸಕರಃ ಪರಃ || ಯಾಜ್ಞವಲ್ಕ್ಯ ಸ್ಮೃತಿ||

ದ್ವಿಜರಿಗೆ ಮೋಕ್ಷಕ್ಕೆ , ಇಹ-ಪರಗಳಲ್ಲಿ ಸುಖ ಸಿಗಲು ಪ್ರಯೋಜನಕಾರಿಯಾದುದು ವೇದಗಳೇ ಹೊರತು ಬೇರೊಂದಲ್ಲ. ಎಷ್ಟೇ ಯಜ್ಞ- ಯಾಗಗಳನ್ನು ಆಚರಿಸಿ, ಶರೀರ ಶೋಷಿಸುವ ಕೃಚ್ಛ್ರ-ಚಾಂದ್ರಾಯಣ- ಪಂಚಕ ಮೊದಲಾದ ಎಷ್ಟೇ ವ್ರತಗಳನ್ನು ಆಚರಿಸಿ, ಸಂಸ್ಕಾರಗಳನ್ನು ಬಹಳ ಶಾಸ್ತ್ರೋಕ್ತವಾಗಿ ಅದ್ದೂರಿ ಆಚರಿಸಿ ಸ್ವಶಾಖೆಯನ್ನು ಓದದೇ- ದಿನಕ್ಕೊಂದಷ್ಟು ಹೊತ್ತು ವೇದವನ್ನು ಓದಿ ಅರ್ಥ ಮಾಡಿಕೊಳ್ಳಲು ಪ್ರಯತ್ನಪಡದಿದ್ದರೆ ಏನೂ ಪ್ರಯೋಜನವಿಲ್ಲ. ದ್ವಿಜತ್ವ ಸಿದ್ಧಿಗೆ ವೇದವು ಆತ್ಯಂತಿಕವಾಗಿ ಸಹಕಾರಿ. ಅದಿಲ್ಲದ ದ್ವಿಜತ್ವ ದಾರ ಹಾಕಿದ ಕಂಬದಂತೆಯೇ ಸರಿ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩