🌹 ಮೇಘದೂತದ ಒಂದು ಬಿಂದು 🌹
*गत्वा चोर्ध्वं दशमुखभुजोच्छ्वासितप्रस्थसन्धे: कैलासस्य त्रिदशवनिता दर्पणस्यातिथिस्या: | शृङ्गोच्छ्रायै: कुमुदविशदैर्यो वितत्य स्थित: खं राशीभूत: प्रतिदिनमिव त्र्यम्बकस्याट्टहास:||*
_ಹೇ ಆತ್ಮಬಂಧುವೇ, ಹಿಮಾಲಯದ ಆ ಮಾರ್ಗದಲ್ಲಿ ಮುಂದುವರೆಯುತ್ತಾ ಸ್ವಲ್ಪ ಮೇಲ್ಭಾಗವನ್ನು ಕ್ರಮಿಸು. ಅಲ್ಲಿ ರಾವಣನ ತೋಳುಗಳಿಂದ ಸಡಿಲಗೊಳಿಸಲ್ಪಟ್ಟ ಸಂದುಗಳುಳ್ಳ, ಸುರವನಿತೆಯರಿಗೆ ಅಲಂಕಾರ ಮಾಡಿಕೊಳ್ಳಲು ಇರುವ ವಿಶಾಲವಾದ ದರ್ಪಣದಂತೆ ಅತ್ಯಂತ ಪಾರದರ್ಶಕವಾಗಿರುವ ಅಥವಾ ಶುಭ್ರವಾಗಿರುವ, ಕೈಲಾಸಪರ್ವತದ ಅತಿಥಿಯಾಗು. ಅವನ ಕೈ ಲಾಸಾಗಿದ್ದರೂ ( ಭಿಕ್ಷಾಪಾತ್ರೆಯನ್ನು ಧರಿಸಿದ್ದರೂ ಶಿವನ ಸಾನ್ನಿಧ್ಯವೇ ನಿನ್ನನ್ನು ಅನುಗ್ರಹಿಸುವುದು. ಆ ಕೈಲಾಸ ಪರ್ವತವು ನೈದಿಲೆಗಳಂತೆ ಶುಭ್ರವಾದ ಎತ್ತರೆತ್ತರದ ಗಿರಿಶಿಖರಗಳಿಂದ ಆಕಾಶವನ್ನು ವ್ಯಾಪಿಸಿದೆ. ಅದು ಹೇಗಿದೆಯೆಂದರೆ ಪ್ರತಿದಿನವೂ ರಾಶಿಯಾಗುತ್ತಿರುವ ತ್ರ್ಯಂಬಕನ ಅಥವಾ ಮುಕ್ಕಣ್ಣನ ಅಟ್ಟಹಾಸವೆಂಬಂತೆ ಶೋಭಿಸುತ್ತದೆ. ಕವಿ ಹಲವಾರು ಮಾಹಿತಿಗಳನ್ನು ಅಲಂಕಾರಿಕವಾಗಿ ಇಲ್ಲಿ ನೀಡಿದ್ದಾನೆ. ರಾವಣನು ಹಿಂದೆ ಶಿವನ ಕುರಿತು ತಪಸ್ಸನ್ನಾಚರಿಸಿ ಶಿವನು ಪ್ರತ್ಯಕ್ಷನಾಗದಿದ್ದಾಗ ಕೈಲಾಸವನ್ನೇ ಎತ್ತ ಹೊರಟನು. ಆಗ ಸಡಿಲವಾದ ಪರ್ವತದ ಬುಡವು ಈಗಲೂ ಹಾಗೇ ಇದೆ ಎಂಬ ಉತ್ಪ್ರೇಕ್ಷೆ. ಇನ್ನು ಹಿಮವೇ ಪರ್ವತ ರೂಪದಲ್ಲಿ ಇರುವುದನ್ನು ಕವಿ ಸುರನಾರಿಯರ ದರ್ಪಣವೆಂದು ಬಣ್ಣಿಸಿದ್ದಾನೆ. ಅಷ್ಟು ಶುಭ್ರವಾಗಿದೆ ಅಥವಾ ಕನ್ನಡಿಯಂತೆ ಪ್ರತಿಬಿಂಬವು ಕಾಣುವುದೆಂಬ ಭಾವ. ಶಿವನೆಂಬ ಕನ್ನಡಿಯಲ್ಲಿ ಎಲ್ಲವೂ ಸ್ವಚ್ಛವಾಗಿಯೇ ಕಾಣುವುದು. ಶಿವ ಎಂದರೆ ಮಂಗಳ. ಇನ್ನು ಕೊನೆಯದಾಗಿ ನಗುವಿನ ಬಣ್ಣ ಕವಿಕಲ್ಪನೆಯಲ್ಲಿ ಬಿಳಿ. ಅದನ್ನೇ ಅಟ್ಟಹಾಸವೆಂದು ವರ್ಣಿಸಿದ್ದಾನೆ. ಮುಂಜಾನೆಯ ಎಳೆಬಿಸಿಲು ಕೈಲಾಸದ ಶಿಖರಗಳ ಮೇಲೆ ಬಿದ್ದಾಗ ಹೊಂಬಣ್ಣ ಸ್ವಲ್ಪ ಮಿಶ್ರವಾಗಿ ನೈದಿಲೆಯ ಕಾಂತಿಯನ್ನು ತಂದುಕೊಡುವುದೆನ್ನುವ ಭಾವ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
*गत्वा चोर्ध्वं दशमुखभुजोच्छ्वासितप्रस्थसन्धे: कैलासस्य त्रिदशवनिता दर्पणस्यातिथिस्या: | शृङ्गोच्छ्रायै: कुमुदविशदैर्यो वितत्य स्थित: खं राशीभूत: प्रतिदिनमिव त्र्यम्बकस्याट्टहास:||*
_ಹೇ ಆತ್ಮಬಂಧುವೇ, ಹಿಮಾಲಯದ ಆ ಮಾರ್ಗದಲ್ಲಿ ಮುಂದುವರೆಯುತ್ತಾ ಸ್ವಲ್ಪ ಮೇಲ್ಭಾಗವನ್ನು ಕ್ರಮಿಸು. ಅಲ್ಲಿ ರಾವಣನ ತೋಳುಗಳಿಂದ ಸಡಿಲಗೊಳಿಸಲ್ಪಟ್ಟ ಸಂದುಗಳುಳ್ಳ, ಸುರವನಿತೆಯರಿಗೆ ಅಲಂಕಾರ ಮಾಡಿಕೊಳ್ಳಲು ಇರುವ ವಿಶಾಲವಾದ ದರ್ಪಣದಂತೆ ಅತ್ಯಂತ ಪಾರದರ್ಶಕವಾಗಿರುವ ಅಥವಾ ಶುಭ್ರವಾಗಿರುವ, ಕೈಲಾಸಪರ್ವತದ ಅತಿಥಿಯಾಗು. ಅವನ ಕೈ ಲಾಸಾಗಿದ್ದರೂ ( ಭಿಕ್ಷಾಪಾತ್ರೆಯನ್ನು ಧರಿಸಿದ್ದರೂ ಶಿವನ ಸಾನ್ನಿಧ್ಯವೇ ನಿನ್ನನ್ನು ಅನುಗ್ರಹಿಸುವುದು. ಆ ಕೈಲಾಸ ಪರ್ವತವು ನೈದಿಲೆಗಳಂತೆ ಶುಭ್ರವಾದ ಎತ್ತರೆತ್ತರದ ಗಿರಿಶಿಖರಗಳಿಂದ ಆಕಾಶವನ್ನು ವ್ಯಾಪಿಸಿದೆ. ಅದು ಹೇಗಿದೆಯೆಂದರೆ ಪ್ರತಿದಿನವೂ ರಾಶಿಯಾಗುತ್ತಿರುವ ತ್ರ್ಯಂಬಕನ ಅಥವಾ ಮುಕ್ಕಣ್ಣನ ಅಟ್ಟಹಾಸವೆಂಬಂತೆ ಶೋಭಿಸುತ್ತದೆ. ಕವಿ ಹಲವಾರು ಮಾಹಿತಿಗಳನ್ನು ಅಲಂಕಾರಿಕವಾಗಿ ಇಲ್ಲಿ ನೀಡಿದ್ದಾನೆ. ರಾವಣನು ಹಿಂದೆ ಶಿವನ ಕುರಿತು ತಪಸ್ಸನ್ನಾಚರಿಸಿ ಶಿವನು ಪ್ರತ್ಯಕ್ಷನಾಗದಿದ್ದಾಗ ಕೈಲಾಸವನ್ನೇ ಎತ್ತ ಹೊರಟನು. ಆಗ ಸಡಿಲವಾದ ಪರ್ವತದ ಬುಡವು ಈಗಲೂ ಹಾಗೇ ಇದೆ ಎಂಬ ಉತ್ಪ್ರೇಕ್ಷೆ. ಇನ್ನು ಹಿಮವೇ ಪರ್ವತ ರೂಪದಲ್ಲಿ ಇರುವುದನ್ನು ಕವಿ ಸುರನಾರಿಯರ ದರ್ಪಣವೆಂದು ಬಣ್ಣಿಸಿದ್ದಾನೆ. ಅಷ್ಟು ಶುಭ್ರವಾಗಿದೆ ಅಥವಾ ಕನ್ನಡಿಯಂತೆ ಪ್ರತಿಬಿಂಬವು ಕಾಣುವುದೆಂಬ ಭಾವ. ಶಿವನೆಂಬ ಕನ್ನಡಿಯಲ್ಲಿ ಎಲ್ಲವೂ ಸ್ವಚ್ಛವಾಗಿಯೇ ಕಾಣುವುದು. ಶಿವ ಎಂದರೆ ಮಂಗಳ. ಇನ್ನು ಕೊನೆಯದಾಗಿ ನಗುವಿನ ಬಣ್ಣ ಕವಿಕಲ್ಪನೆಯಲ್ಲಿ ಬಿಳಿ. ಅದನ್ನೇ ಅಟ್ಟಹಾಸವೆಂದು ವರ್ಣಿಸಿದ್ದಾನೆ. ಮುಂಜಾನೆಯ ಎಳೆಬಿಸಿಲು ಕೈಲಾಸದ ಶಿಖರಗಳ ಮೇಲೆ ಬಿದ್ದಾಗ ಹೊಂಬಣ್ಣ ಸ್ವಲ್ಪ ಮಿಶ್ರವಾಗಿ ನೈದಿಲೆಯ ಕಾಂತಿಯನ್ನು ತಂದುಕೊಡುವುದೆನ್ನುವ ಭಾವ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ