ಮಹಾಭಾರತ ೪೯
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೪೯
*ಅಥಾಬ್ರವೀತ್ಪುಷ್ಕರಾಕ್ಷಃ ಪ್ರಹಸನ್ನಿವ ಭಾರತ ವನೇಚರಸ್ಯ ಕಿಮಿದಂ ಕಾಮೇನಾಲೋಡ್ಯತೇ ಮನಃ*
_ರೈವತಕ ಪರ್ವತದಲ್ಲಿ ಉತ್ಸವ ನಡೆಯುತ್ತಿದ್ದಾಗ ಅರ್ಜುನನ ಕಣ್ಣು ಸುಭದ್ರೆಯ ಮೇಲೆ ಬೀಳುತ್ತದೆ. ಆಗ ಕೃಷ್ಣ ಹೀಗೆ ತಮಾಷೆ ಮಾಡುತ್ತಾನೆ. ಏನಿದು, ಕಾಡಿನಲ್ಲಿ ಸಂಚರಿಸುತ್ತಿರುವವನ ಮನಸ್ಸನ್ನು ಕಾಮನು ಕಲಕುತ್ತಿದ್ದಾನೆ! ಅರ್ಜುನ ಅಣ್ಣನು ಏಕಾಂತದಲ್ಲಿದ್ದಾಗ ಪ್ರವೇಶಿಸಿದ ಪ್ರಾಯಶ್ಚಿತ್ತಕ್ಕೆ ಹನ್ನೆರಡು ವರ್ಷ ವನವಾಸವೆಂದು ಹೊರಟವನು. ಇಲ್ಲಿ ನೋಡಿದರೆ ಎರಡು ಮದುವೆ ಆಗಿ ಮೂರನೇ ಹೆಣ್ಣಿಗೆ ಬಲೆ ಬೀಸುತ್ತಿದ್ದಾನೆ.ಹಾಗಾಗಿ ಕೃಷ್ಣ ತಮಾಷೆ ಮಾಡುತ್ತಾನೆ. ಮುಂದೆ ಅವನೇ ಉಪಾಯವನ್ನೂ ನುಡಿಯುತ್ತಾನೆ._
*ಸ್ವಯಂವರಃ ಕ್ಷತ್ರಿಯಾಣಾಂ ವಿವಾಹಃ ಪುರುಷರ್ಷಭ ಸ ಚ ಸಂಶಯಿತಃ ಪಾರ್ಥ ಸ್ವಭಾವಸ್ಯಾನಿಮಿತ್ತತಃ* *ಪ್ರಸಹ್ಯ ಹರಣಂ ಚಾಪಿ ಕ್ಷತ್ರಿಯಾಣಾಂ ಪ್ರಶಸ್ಯತೇ ವಿವಾಹಹೇತೋಃ ಶೂರಾಣಾಮಿತಿ ಧರ್ಮವಿದೋ ವಿದುಃ*
_ಈಕೆ ಸಾರಣನ ಸಹೋದರಿ. ನನ್ನ ತಂಗಿ. ಇವಳಲ್ಲಿ ಮನಸ್ಸಿದ್ದರೆ ನಾನೇ ತಂದೆಗೆ ಹೇಳುವೆನು. ಕ್ಷತ್ರಿಯರಿಗೆ ಸ್ವಯಂವರವು ವಿಹಿತ. ಆದರೆ ಸ್ತ್ರೀಯರ ಸ್ವಭಾವ ಅರಿಯುವುದು ಅಶಕ್ಯ. ಈಗ ಒಬ್ಬನ ಮೇಲೆ ಮನಸ್ಸಿದ್ದವರು ಕೊನೇ ಘಳಿಗೆಯಲ್ಲಿ ಮತ್ತೊಬ್ಬನನ್ನು ವರಿಸಬಹುದು. ಹಾಗಾಗಿ ಬಲಾತ್ಕಾರವಾಗಿ ಕನ್ಯೆಯನ್ನು ಅಪಹರಿಸಿಕೊಂಡು ಹೋಗುವುದು, ಅನಂತರ ವಿವಾಹವಾಗುವುದು ಕ್ಷತ್ರಿಯರಿಗೆ ಪ್ರಶಸ್ತವಾದುದು. ಅರ್ಜುನ, ನೀನು ನನ್ನ ತಂಗಿಯನ್ನು ಅಪಹರಿಸಿಕೊಂಡು ಹೋಗಿ ವಿವಾಹವಾಗು ಎಂದು ಕೃಷ್ಣನು ಉಪಾಯ ಹೇಳಿಕೊಟ್ಟನು.ಅರ್ಜುನನು ಒಡನೆಯೇ ದೂತನನ್ನು ಅಣ್ಣನ ಬಳಿಗೆ ಕಳುಹಿಸಿ ಅಣ್ಣನ ಒಪ್ಪಿಗೆ ಪಡೆದು ಆ ಕಾರ್ಯವನ್ನು ಸಾಧಿಸಿದನು. ಅಣ್ಣನೇ ತಂಗಿಯನ್ನು ಅಪಹರಿಸಿ ಮದುವೆ ಮಾಡಿಕೊ ಎನ್ನುವ ಪ್ರಸಂಗ ಇದೇ ಮೊದಲು-ಇದೇ ಕೊನೆ ಇರಬಹುದು. ಪೂರ್ವಾಪರ ಜ್ಞಾನ ಉಳ್ಳ ಕೃಷ್ಣನ ಮಾತಾದ್ದರಿಂದ ಅದು ಸಾಧು. ಸಾಮಾನ್ಯರ ಅಂತಹ ನಡತೆ ಎಂದಿಗೂ ಅಸಾಧು._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ