ಧರ್ಮಾಚರಣೆ ೪೫
ಧರ್ಮಾಚರಣೆ--- ೪೫
ಕ್ಷುತೇ ನಿಷ್ಠೀವನೇ ಚೈವ ದಂತೋಚ್ಛಿಷ್ಟೇ ತಥಾನೃತೇ | ಪತಿತಾನಾಂ ಚ ಸಂಭಾಷೇ ದಕ್ಷಿಣಂ ಶ್ರವಣಂ ಸ್ಪೃಶೇತ್ || ಪರಾಶರ ಸ್ಮೃತಿ||
ಸಭೆಯಲ್ಲಿ ಅಥವಾ ಪ್ರಯಾಣದಲ್ಲಿ ಅಥವಾ ಪೂಜಾದಿಗಳಲ್ಲಿ ತೊಡಗಿದ್ದಾಗ ಸೀನು ಬಂದರೆ, ಆಕಳಿಕೆ ಬಂದರೆ, ಉಗುಳು ಹೊರ ಚೆಲ್ಲಿದರೆ, ಹಲ್ಲಿನಲ್ಲಿ ಏನೋ ಆಹಾರಶೇಷ ಸಿಕ್ಕಿಕೊಂಡು ಕಿರಿಕಿರಿಯೆಂದು ತೆಗೆದಾಗ, ಆಕಸ್ಮಿಕವಾಗಿ ಸುಳ್ಳು ನುಡಿದಾಗ , ಕೆಟ್ಟ ಮನಸ್ಥಿತಿಯ ವ್ಯಕ್ತಿಗಳೊಡನೆ ಸಂಭಾಷಣೆ ಮಾಡಿದಾಗ ದೋಷ ನಿವೃತ್ತಿಗೆ ಬಲಗಿವಿಯನ್ನು ಸ್ಪರ್ಶಿಸಬೇಕು. ಸಮೀಪದಲ್ಲಿ ನೀರಿನ ಲಭ್ಯತೆ ಕಂಡುಬಂದರೆ ಅಚಮನ ಮಾಡಬೇಕು, ಹಾಗಲ್ಲದಿದ್ದರೆ ಬಲಗಿವಿಯ ಸ್ಪರ್ಶದಿಂದ ಶೌಚವು ಸಂಪನ್ನವಾಗುವುದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ