ಧರ್ಮಾಚರಣೆ ೩೩

     ಧರ್ಮಾಚರಣೆ--- ೩೩

ಇಷ್ಟೋ ವಾ ಯದಿ ವಾ ದ್ವೇಷ್ಯೋ ಮೂರ್ಖಃ ಪಂಡಿತ ಏವ ವಾ | ಸಂಪ್ರಾಪ್ತೋ ವೈಶ್ವದೇವಾಂತೇ ಸೋತಿಥಿಃ ಸ್ವರ್ಗ ಸಂಕ್ರಮಃ || ಪರಾಶರ ಸ್ಮೃತಿ||

ಊಟದ ಸಮಯಕ್ಕೆ ಬಂದ ಅತಿಥಿಗೆ ಎಂದೂ ಅನ್ನ ನಿರಾಕರಿಸಬಾರದು. ಬಂಧು-ಮಿತ್ರರಾಗಲಿ, ಶತ್ರುವಾಗಲಿ, ಮೂರ್ಖನಾಗಲಿ- ಪಂಡಿತನಾಗಲಿ ಯಾವ ವರ್ಣ- ಧರ್ಮದವರಾದರೂ ವೈಶ್ವದೇವ ಮಾಡಿ ಕೆಲವು ಕ್ಷಣ ಕಾದು ಬಂದರೆ ಊಟ ಬಡಿಸಿ ನಂತರ ತಾನು ಉಣ್ಣಬೇಕು. ಅಂತಹ ಸಮಯದ ಅತಿಥಿಯು ಸ್ವರ್ಗವನ್ನೇ ನಮ್ಮ ಪಾಲಿಗೆ ಕರುಣಿಸುತ್ತಾನೆ. ಕರೆಯದೇ ಬಂದ ಅಂತಹ ವ್ಯಕ್ತಿಯಲ್ಲಿ ಭಗವಂತನ ಸಾನ್ನಿಧ್ಯ ಇರುವ ಕಾರಣ ಮಡಿ- ಮೈಲಿಗೆ ಹೆಚ್ಚೇನೂ ವಿಚಾರಿಸದೆ ಅನ್ನ ಕೊಡಬೇಕು‌. ಹಿಂದೂ ಧರ್ಮದ ಅನ್ನದಾನದ ಶ್ರೇಷ್ಠ ಪರಂಪರೆ ಇದೇ ಆಗಿದೆ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩