ಧರ್ಮಾಚರಣೆ ೪೧

ಧರ್ಮಾಚರಣೆ---೪೧

ಭಸ್ಮನಾ ತು ಭವೇಚ್ಛುದ್ಧಿಃ ಉಭಯೋಸ್ತಾಮ್ರಕಾಂಸ್ಯಯೋಃ| ಜಲಶೌಚೇನ ವಸ್ತ್ರಾಣಾಂ ಪರಿತ್ಯಾಗೇನ ಮೃಣ್ಮಯಮ್ || ಪರಾಶರ ಸ್ಮೃತಿ||

ದೇವಪೂಜೆಗೆ, ಹೋಮಕ್ಕೆ ತಾಮ್ರ ಅಥವಾ ಕಂಚಿನ ಪಾತ್ರೆಗಳ ಬಳಕೆ ಶ್ರೇಷ್ಠ. ಅವುಗಳು ಒಂದೊಮ್ಮೆ ಅಶುಚಿಯಾದರೆ ಅವುಗಳನ್ನು ಗೋಮಯದಿಂದ ಮಾಡಿದ ಭಸ್ಮದಿಂದ ಒರೆಸಿದರೆ ಅವು ಶುದ್ಧವಾಗುತ್ತವೆ. ಹುಳ ಇತ್ಯಾದಿ ಬಂದರೆ, ಸ್ನಾನ ಮಾಡದೆ ಸ್ಪರ್ಶಿಸಿದರೆ, ಕೊಳೆಯಾಗಿದ್ದರೆ ಅಂತಹ ಸಮಯದಲ್ಲಿ ಅವುಗಳಿಗೆ ಭಸ್ಮಲೇಪನ ಮಾಡಿ ಬಳಸಬೇಕು. ಬಟ್ಟೆಗಳು ಅಶುಚಿಯಾದರೆ ನೀರಲ್ಲಿ ಮುಳುಗಿಸಿ ಹಿಂಡಿದರೆ ಶುದ್ಧಿ. ಆದರೆ ಸುಮ್ಮನೆ ಒದ್ದೆಮಾಡಿದರೆ ಅದು ಅಶುದ್ಧ. ಕೀಟಗಳು- ಮಣ್ಣು- ಮಲ- ಸ್ನಾನ ಮಾಡದವರ ಸ್ಪರ್ಶ ಇವುಗಳ ಕಾರಣದಿಂದ ಅಶುಚಿಯಾದ ಪಕ್ಷದಲ್ಲಿ ನೀರಿನಿಂದ ಶುದ್ಧಿ. ಮಣ್ಣು ಹೋಮಕ್ಕೆ ಅಥವಾ ಹಚ್ಚಿಕೊಳ್ಳಲೆಂದೋ ತಂದು ಅಸ್ವಚ್ಛವಾದರೆ ಅದನ್ನು ಬಿಸುಟು ಬೇರೆ ಶುದ್ಧ ಮಣ್ಣನ್ನು ಸ್ವೀಕರಿಸಬೇಕು.


ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩