ಧರ್ಮಾಚರಣೆ ೯೬

ಧರ್ಮಾಚರಣೆ-೯೬

ಮೇದಸಾ ತರ್ಪಯದ್ದೇವಾನಥರ್ವಾಂಗಿರಸಃ ಪಠನ್ | ಪಿತೃಂಶ್ಚ ಮಧುಸರ್ಪಿಭ್ಯಾಮನ್ವಹಂ ಶಕ್ತಿತೋ ದ್ವಿಜಃ || ಯಾಜ್ಞವಲ್ಕ್ಯ ಸ್ಮೃತಿ||

ಅಂಗಿರಸಮಹರ್ಷಿ ಕಂಡುಕೊಂಡ ಅಥರ್ವವೇದದ ಮಂತ್ರಗಳನ್ನು ಯಾರು ಪಠಿಸುವನೋ ಅವನು ಪಶುಗಳ ಮೇದಸ್ಸನ್ನು ದೇವತೆಗಳಿಗೆ ಅರ್ಪಿಸಿದ ಪುಣ್ಯವನ್ನೂ, ಪಿತೃಗಳಿಗೆ ಜೇನು ಮತ್ತು ತುಪ್ಪಗಳನ್ನು ಅರ್ಪಿಸಿದ ಪುಣ್ಯಕ್ಕೆ ಪಾತ್ರನಾಗುತ್ತಾನೆ. ನಮ್ಮ ಶ್ರುತಿ-ಸ್ಮೃತಿಗಳು ಹಿಂಸೆಯನ್ನು ಎಂದಿಗೂ ಪ್ರಚೋದಿಸಿಲ್ಲ. ಬರಿದೆ ವೇದದ ದಿನಂಪ್ರತಿ ಪಾರಾಯಣವು ಪಶುಬಲಿ ನೀಡಿದ ಪುಣ್ಯವನ್ನು ತಂದುಕೊಡುವ ಕಾರಣ ಪಶುವನ್ನು ಕೊಲ್ಲುವ ಪಶುಯಾಗ ಮಾಡುವ ಅವಶ್ಯಕತೆ ಇಲ್ಲವೆಂದು ಸ್ಪಷ್ಟವಾಗಿ ಸಾರಿದೆ. ಅಹಿಂಸೆಯನ್ನು ಸನಾತನ ಗ್ರಂಥಗಳು ಪ್ರತಿಪಾದಿಸಿದಷ್ಟು ಬಹುಶಃ ಬುದ್ಧನೂ ಪ್ರತಿಪಾದಿಸಿಲ್ಲ‌. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩