ಧರ್ಮಾಚರಣೆ ೯೫
ಧರ್ಮಾಚರಣೆ-೯೫
ಸ ತು ಸೋಮಘೃತೈರ್ದೇವಾಂಸ್ತರ್ಪಯೇದ್ಯೋನ್ವಹಂ ಪಠೇತ್ | ಸಾಮಾನಿ ತೃಪ್ತಿಂ ಕುರ್ಯಾಚ್ಚ ಪಿತೃಣಾಂ ಮಧುಸರ್ಪಿಷಾ ||ಯಾಜ್ಞವಲ್ಕ್ಯ ಸ್ಮೃತಿ||
ನಿತ್ಯವೂ ಸಾಮವೇದದ ಕೆಲವು ಸಾಮಗಳನ್ನಾದರೂ ಹಾಡಿದರೆ ಅವರು ದೇವತೆಗಳನ್ನು ಸೋಮರಸ-ತುಪ್ಪದಿಂದ ತೃಪ್ತಿಪಡಿಸಿದ ಪುಣ್ಯವನ್ನೂ, ಪಿತೃಗಳನ್ನು ಜೇನು ಹಾಗೂ ತುಪ್ಪದಿಂದ ತೃಪ್ತಿಪಡಿಸಿದ ಪುಣ್ಯಭಾಜನರಾಗುತ್ತಾರೆ. ವೇದಾನಾಂ ಸಾಮವೇದೋಸ್ಮಿ ಎಂದ ಕೃಷ್ಣನ ಮಾತಿನಂತೆ ಸಾಮಗಾನವು ದೇವತೆಗಳಿಗೆ ಅತ್ಯಂತ ಪ್ರಿಯ. ಅದು ಉಳಿದ ಮಂತ್ರಗಳಿಗಿಂತ ಹೆಚ್ಚಿನ ಫಲದಾಯಕ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ