ಧರ್ಮಾಚರಣೆ ೨೬
ಧರ್ಮಾಚರಣೆ-- ೨೬
ವಸವಃ ಪಿತರೋ ಜ್ಞೇಯಾ ರುದ್ರಾ ಜ್ಞೇಯಾಃ ಪಿತಾಮಹಾಃ | ಪ್ರಪಿತಾಮಹಾಸ್ತಥಾದಿತ್ಯಾಃ ಶ್ರುತಿರೇಷಾ ಸನಾತನೀ || ಮನುಸ್ಮೃತಿ, ದೇವಲ ವಚನ || ವಸುರುದ್ರಾದಿತಿಸುತಾಃ ಪಿತರಃ ಶ್ರಾದ್ಧ ದೇವತಾಃ | ಯಾಜ್ಞವಲ್ಕ್ಯ ಸ್ಮೃತಿ||
ಶ್ರಾದ್ಧದಲ್ಲಿ ವಸು-ರುದ್ರ-ಆದಿತ್ಯ ರೆಂದು ತಂದೆ-ಅಜ್ಜ-ಮುತ್ತಜ್ಜ ಅಥವಾ ತಾಯಿ-ಅಜ್ಜಿ- ಮುತ್ತಜ್ಜಿ ಇತ್ಯಾದಿ ಉಚ್ಚಾರಣೆ ಮಾಡಲು ಈ ಶ್ಲೋಕವು ಆಧಾರರೂಪವಾದುದು.ವಸುಗಳು ಪಿತೃಗಳೆಂದು ಗುರುತಿಸಲ್ಪಟ್ಟರೆ, ರುದ್ರರು ಪಿತಾಮಹರು, ಆದಿತ್ಯರು ಪ್ರಪಿತಾಮಹರು. ಇದನ್ನೇ ಯಾಜ್ಞವಲ್ಕ್ಯರು ಹೇಳಿದ್ದು ಅಷ್ಟವಸುಗಳು, ಏಕಾದಶ ರುದ್ರರು, ದ್ವಾದಶ ಆದಿತ್ಯರೆಂಬ ಅದಿತಿ ಸುತರು ಪಿತೃದೇವತೆಗಳೆಂದು ಪ್ರಸಿದ್ಧರಾದವರು. ಹಾಗಾಗಿ ಯಾವ ಶ್ರಾದ್ಧ ಮಾಡುವುದಿದ್ದರೂ ನಮ್ಮ ಹಿರಿಯರನ್ನು ಈ ರೂಪದಲ್ಲಿ ಕಲ್ಪಿಸಿ ಪೂಜಿಸಬೇಕು. ಪಿತೃಗಳು ಯಾವ ರೂಪದಲ್ಲಿದ್ದರೂ ಈ ದೇವತೆಗಳು ಅವರಿಗೆ ಪೂಜೆಯನ್ನು ತಲುಪಿಸುತ್ತಾರೆ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ