ಧರ್ಮಾಚರಣೆ ೨

          ಧರ್ಮಾಚರಣೆ ---೨

ಪೂರ್ವಾಂ ಸಂಧ್ಯಾಂ ಸನಕ್ಷತ್ರಾಂ ಉತ್ತರಾಂ ಸದಿವಾಕರಾಂ| ಉತ್ತರಾಮುಪವಿಶ್ಯೈವ ವಾಗ್ಯತಃ ಸರ್ವದಾ ಜಪೇತ್||

ಬೆಳಗ್ಗಿನ ಸಂಧ್ಯಾವಂದನೆ ಅಥವಾ ಪೂಜಾದಿಗಳನ್ನು ನಕ್ಷತ್ರಗಳು ಕಾಣುತ್ತಿರುವಾಗಲೇ ಆರಂಭಿಸಬೇಕು. ಸೂರ್ಯೋದಯ ಆದ ಮೇಲೆ ಅಥವಾ ಬಿಸಿಲು ಬರುವ ಮುಂಚೆ ನಮ್ಮ ನಿತ್ಯಕರ್ಮ ಶುರುವಾಗಬೇಕು. ಅಂತೆಯೇ ಸಂಜೆಯ ಸಂಧ್ಯಾವಂದನೆ ಸೂರ್ಯನಿರುವಾಗಲೇ ಶ್ರೇಷ್ಠ. ಅರ್ಘ್ಯ- ಗಾಯತ್ರೀ ಜಪ ಬೆಳಿಗ್ಗೆ ನಿಂತು ಮಾಡಬಹುದು. ಸಂಜೆ ಕುಳಿತು ಮಾಡುವುದೊಳಿತು. ಜಪವನ್ನು ಮನದಲ್ಲೇ ಮೆಲುಕು ಹಾಕುತ್ತಾ ಆ ಸವಿತೃದೇವನ ಧ್ಯಾನದೊಂದಿಗೇ ಮಾಡಬೇಕು. ಜೋರಾಗಿ ಗಾಯತ್ರೀ ಜಪ ಸರಿಯಲ್ಲ. ಮನನವೇ ಮಂತ್ರದ ಸಿದ್ಧಿಗೆ ಪೂರಕ.

ಆಕರ-ಸ್ಮೃತಿಗಳು

ಸಂಗ್ರಹ- ಶ್ರೀನಿಧಿ ಅಭ್ಯಂಕರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩