💐ಪ್ರತಿಮಾನಾಟಕದ ಒಂದು ಸುರಭಿ💐
*शुल्के विपणितं राज्यं पुत्रार्थे यदि याच्यते । तस्यालोभोsत्र नास्माकं भ्रातृराज्यापहारिणाम् ।।*
_ಕಂಚುಕಿಯು ಕೈಕೇಯಿಯು ನಿನಗೆ ಅನ್ಯಾಯ ಮಾಡಿದ್ದಾಳೆ ಎಂದು ನುಡಿದಾಗ ರಾಮನಾಡುವ ಮಾತು. ಅವಳು ಕೇಳಿದ್ದು ಸರಿಯಾಗಿಯೇ ಇದೆ.ಅಮ್ಮನ ತಪ್ಪೊಂದೂ ನನಗೆ ಕಾಣುತ್ತಿಲ್ಲ. ಏಕೆಂದರೆ ದಶರಥನು ವಿವಾಹದ ಸಮಯದಲ್ಲಿ ವಿಶೇಷವಾಗಿ ದಕ್ಷಿಣೆಯ ರೂಪದಲ್ಲಿ ಮಾತುಗಳಲ್ಲಿ ಕೊಡಲ್ಪಟ್ಟ ರಾಜ್ಯವನ್ನು ಮಗನಿಗಾಗಿ ಕೇಳಿದರೆ ಅದು ಅವಳ ಕರ್ತವ್ಯ. ಅದು ನನಗೆ ವಂಚನೆ ಮಾಡಲೆಂಬ ಕಾರಣದಿಂದಲ್ಲ.ಮದುವೆಯ ಸಮಯದಲ್ಲಿಯೇ ಮುಂದೆ ಇವಳ ಮಗನು ರಾಜ್ಯವನ್ನಾಳುವನು ಎಂದು ಒಪ್ಪಿಯೇ ನನ್ನ ತಂದೆ ಅಮ್ಮನ ಕೈ ಹಿಡಿದದ್ದಲ್ಲವೇ! ಈ ವಿಷಯದಲ್ಲಿ ಅವಳ ಲೋಭ ಎಂದು ಹೇಳಲಾಗದು.ಅದಕ್ಕೆ ಹೊರತಾಗಿ ಸಹೋದರನ ರಾಜ್ಯವನ್ನು ನಾನು ಅಪೇಕ್ಷಿಸಿದರೆ ಅದು ಲೋಭವಾಗುತ್ತದೆ ಅಥವಾ ಸಹೋದರನಿಗೆ ನ್ಯಾಯವಾಗಿ ದೊರೆಯಬೇಕಿದ್ದ ರಾಜ್ಯದ ಅಧಿಕಾರ ನನ್ನಿಂದ ಅಪಹರಿಸಲ್ಪಂಟ್ಟಂತೆ ಆಗುವುದು. ಹಾಗಾಗಿ ಅಭಿಷೇಕದಲ್ಲಿ ನನ್ನ ಬಯಕೆಯೇ ತಪ್ಪು. ಕೈಕೇಯಿಯ ವರಯಾಚನೆಯಲ್ಲಿ ಅಲ್ಲ.ಇನ್ನೂ ಮುಂದುವರೆಯುತ್ತಾ ಅಮ್ಮನ ನಿಂದನೆಯ ಮಾತೊಂದೂ ಆಡಬೇಡ ಎಂದು ಗದರಿಸುತ್ತಾನೆ ರಾಮ.ಇಲ್ಲಿ ರಾಮನ ಹೃದಯ ವೈಶಾಲ್ಯವನ್ನು ನಾವು ಗುರುತಿಸಬಹುದು. ತಮ್ಮನಿಗೆ ರಾಜ್ಯ ದೊರಕುವುದರಲ್ಲಿ ಅವನಿಗೆ ಸಂತೋಷವೇ ಇದೆ.ಹಾಗೆಯೇ ಕೈಕೇಯಿಯ ಬಗೆಗೆ ಅಸಮಾಧಾನ ಎಳ್ಳಷ್ಟೂ ಕಂಡುಬರುವುದಿಲ್ಲ.ಇದೇ ಧರ್ಮ.ಪುರಂದರ ದಾಸರು ಇದನ್ನೇ ಹೇಳಿದ್ದು -ವಿಷವಿಕ್ಕಿದವಗೆ ಷಡ್ರಸವನುಣಿಸಬೇಕು ಎಂದು. ರಾಮನ ವರ್ತನೆ ಅದನ್ನು ಸಾಕ್ಷಾತ್ಕರಿಸಿದೆ.ನಮಗೂ ರಾಮನ ಈ ನಡತೆ ಆದರ್ಶ._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.
*शुल्के विपणितं राज्यं पुत्रार्थे यदि याच्यते । तस्यालोभोsत्र नास्माकं भ्रातृराज्यापहारिणाम् ।।*
_ಕಂಚುಕಿಯು ಕೈಕೇಯಿಯು ನಿನಗೆ ಅನ್ಯಾಯ ಮಾಡಿದ್ದಾಳೆ ಎಂದು ನುಡಿದಾಗ ರಾಮನಾಡುವ ಮಾತು. ಅವಳು ಕೇಳಿದ್ದು ಸರಿಯಾಗಿಯೇ ಇದೆ.ಅಮ್ಮನ ತಪ್ಪೊಂದೂ ನನಗೆ ಕಾಣುತ್ತಿಲ್ಲ. ಏಕೆಂದರೆ ದಶರಥನು ವಿವಾಹದ ಸಮಯದಲ್ಲಿ ವಿಶೇಷವಾಗಿ ದಕ್ಷಿಣೆಯ ರೂಪದಲ್ಲಿ ಮಾತುಗಳಲ್ಲಿ ಕೊಡಲ್ಪಟ್ಟ ರಾಜ್ಯವನ್ನು ಮಗನಿಗಾಗಿ ಕೇಳಿದರೆ ಅದು ಅವಳ ಕರ್ತವ್ಯ. ಅದು ನನಗೆ ವಂಚನೆ ಮಾಡಲೆಂಬ ಕಾರಣದಿಂದಲ್ಲ.ಮದುವೆಯ ಸಮಯದಲ್ಲಿಯೇ ಮುಂದೆ ಇವಳ ಮಗನು ರಾಜ್ಯವನ್ನಾಳುವನು ಎಂದು ಒಪ್ಪಿಯೇ ನನ್ನ ತಂದೆ ಅಮ್ಮನ ಕೈ ಹಿಡಿದದ್ದಲ್ಲವೇ! ಈ ವಿಷಯದಲ್ಲಿ ಅವಳ ಲೋಭ ಎಂದು ಹೇಳಲಾಗದು.ಅದಕ್ಕೆ ಹೊರತಾಗಿ ಸಹೋದರನ ರಾಜ್ಯವನ್ನು ನಾನು ಅಪೇಕ್ಷಿಸಿದರೆ ಅದು ಲೋಭವಾಗುತ್ತದೆ ಅಥವಾ ಸಹೋದರನಿಗೆ ನ್ಯಾಯವಾಗಿ ದೊರೆಯಬೇಕಿದ್ದ ರಾಜ್ಯದ ಅಧಿಕಾರ ನನ್ನಿಂದ ಅಪಹರಿಸಲ್ಪಂಟ್ಟಂತೆ ಆಗುವುದು. ಹಾಗಾಗಿ ಅಭಿಷೇಕದಲ್ಲಿ ನನ್ನ ಬಯಕೆಯೇ ತಪ್ಪು. ಕೈಕೇಯಿಯ ವರಯಾಚನೆಯಲ್ಲಿ ಅಲ್ಲ.ಇನ್ನೂ ಮುಂದುವರೆಯುತ್ತಾ ಅಮ್ಮನ ನಿಂದನೆಯ ಮಾತೊಂದೂ ಆಡಬೇಡ ಎಂದು ಗದರಿಸುತ್ತಾನೆ ರಾಮ.ಇಲ್ಲಿ ರಾಮನ ಹೃದಯ ವೈಶಾಲ್ಯವನ್ನು ನಾವು ಗುರುತಿಸಬಹುದು. ತಮ್ಮನಿಗೆ ರಾಜ್ಯ ದೊರಕುವುದರಲ್ಲಿ ಅವನಿಗೆ ಸಂತೋಷವೇ ಇದೆ.ಹಾಗೆಯೇ ಕೈಕೇಯಿಯ ಬಗೆಗೆ ಅಸಮಾಧಾನ ಎಳ್ಳಷ್ಟೂ ಕಂಡುಬರುವುದಿಲ್ಲ.ಇದೇ ಧರ್ಮ.ಪುರಂದರ ದಾಸರು ಇದನ್ನೇ ಹೇಳಿದ್ದು -ವಿಷವಿಕ್ಕಿದವಗೆ ಷಡ್ರಸವನುಣಿಸಬೇಕು ಎಂದು. ರಾಮನ ವರ್ತನೆ ಅದನ್ನು ಸಾಕ್ಷಾತ್ಕರಿಸಿದೆ.ನಮಗೂ ರಾಮನ ಈ ನಡತೆ ಆದರ್ಶ._
📜ಸಂಗ್ರಹ✍ಶ್ರೀನಿಧಿ ಅಭ್ಯಂಕರ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ