💐ಪ್ರತಿಮಾನಾಟಕದ ಒಂದು ಪುಷ್ಪ💐
*तप:सङ्ग्रामकवचं नियमद्विरदाङ्कुश: । खलीनमिन्द्रियाश्वानां गृह्यतां धर्मसारथि: ।।*
_ಲಕ್ಷ್ಮಣ ಎಷ್ಟು ಹೇಳಿದರೂ ಕೇಳದೇ ರಾಮನ ಪಾದಸೇವೆಗಾಗಿ ತಾನೂ ಕಾಡಿಗೆ ಬರುತ್ತೇನೆಂದು ಸೀತೆಯ ಬಳಿಯೂ ನಿವೇದಿಸಿಕೊಳ್ಳುತ್ತಾನೆ. ಸೀತೆ ಅವನ ಆಗಮನಕ್ಕೆ ಒಪ್ಪಿಗೆ ನೀಡಿದಾಗ ಇಬ್ಬರ ಮನದಿಚ್ಛೆಯಂತೆ ರಾಮನೂ ಸಮ್ಮತಿಸಿ ಅವನಿಗೆ ನಾರುಬಟ್ಟೆ ಕೊಡುತ್ತಾ ನುಡಿಯುವ ಮಾತು. ಈ ವಲ್ಕಲವು ತಪಸ್ಸೆಂಬ ಯುದ್ಧದಲ್ಲಿ ಶೂರನು ಧರಿಸಬೇಕಾದ ಕವಚ. ತೊಡು ಇದನ್ನು, ಅನಂತರ ವನದಲ್ಲಿ ತಪಸ್ಸಿಗೆ ತೊಡಗುವಿಯಂತೆ. ಈ ಯುದ್ಧದಲ್ಲಿ ಆನೆಯನ್ನು ವಶಪಡಿಸಿಕೊಳ್ಳಲು ಮುಖ್ಯವಾಗಿ ಬೇಕಾದ ಅಂಕುಶ ಯಾವುದೆಂದರೆ ಅದು ಮನಸ್ಸಿನ ಸಂಯಮ. ಅದನ್ನು ರೂಢಿಸಿಕೊ. ಇಂದ್ರಿಯಗಳೆಂಬ ಕುದುರೆಗಳನ್ನು ನಿಯಂತ್ರಿಸಲು ಬಳಸುವ ಹಗ್ಗ ಅದೂ ಸಂಯಮವೇ. ಇಂದ್ರಿಯಗಳ ನಿಗ್ರಹಕ್ಕೆ ಅಥವಾ ಕುದುರೆಗಳಂತೆ ಎಲ್ಲೆಲ್ಲೋ ಓಡುವ ಅವುಗಳಿಗೆ ಸಂಯಮವೆಂಬ ಹಗ್ಗದ ನಿಯಂತ್ರಣ ಬೇಕು. ಧರ್ಮವೆಂಬ ರಥದ ಸಾರಥಿಯಾಗಿ ಈ ಸಂಯಮದ ಪ್ರತಿನಿಧಿಯಾಗಿರುವ ಈ ನಾರುಬಟ್ಟೆಗಳನ್ನು ತೆಗೆದುಕೊ. ಇಲ್ಲಿ ಸಂಗ್ರಾಮದ ಉಲ್ಲೇಖ ಯುದ್ಧದಂತೆ ಇಲ್ಲೂ ಏಕಾಗ್ರತೆ ತಾಳ್ಮೆ ಬೇಕಾಗುತ್ತದೆ ಎಂಬ ಸೂಚನೆ ಕೊಡಲು. ಇಲ್ಲದಿದ್ದರೆ ತಪಸ್ಸು ಕೆಟ್ಟು ಹೋಗುವುದು. ನಿಯಮಗಳು ಆನೆಗಳಂತೆ ಸ್ವಚ್ಛಂದತೆಯನ್ನು ಪಡೆದು ನಮಗೆ ಬೇಕಾದ ಹಾಗೇ ಮಾಡಿಕೊಳ್ಳದಿರಲು ಸಂಯಮವೆಂಬ ಅಂಕುಶ. ಇಂದ್ರಿಯಗಳನ್ನು ಅಶ್ವಕ್ಕೆ ಹೋಲಿಸಿರುವುದು ಅವುಗಳ ಚಂಚಲತೆ ಚಪಲತೆಯ ಕಾರಣ. ಅವುಗಳ ನಿಯಂತ್ರಣಕ್ಕೂ ಸಂಯಮವೆಂಬ ಹಗ್ಗ ಬೇಕು. ಅಥವಾ ಈ ನಾರುಬಟ್ಟೆಯೇ ಕುದುರೆಗಳ ಕಡಿವಾಣ. ಅದನ್ನು ಉಟ್ಟಾಗ ಇಂದ್ರಿಯಗಳಲ್ಲಿ ತಾನಾಗಿ ಅಲ್ಪವಾದರೂ ಜಾಗೃತಿ ಮೂಡುತ್ತದೆ.ನಾವು ಕೆಲವು ವಸ್ತ್ರ ಧರಿಸಿದಾಗ ತುಂಬಾ ಸಭ್ಯರಂತೆ ತೋರಿಸಿಕೊಳ್ಳುವುದಿಲ್ಲವೇ , ಹಾಗೆಯೇ ಈ ವಲ್ಕಲವೇ ಇಂದ್ರಿಯಗಳ ಸ್ವೇಚ್ಛಾಚಾರಕ್ಕಿರುವ ಕಡಿವಾಣ. ಧರ್ಮವನ್ನು ರಥಕ್ಕೆ ಹೋಲಿಸಿದ್ದು ಉತ್ತಮ ಲೋಕಗಳನ್ನು ತಪಸ್ಸಿನ ಮೂಲಕ ಹೊಂದಲು ಧರ್ಮವನ್ನು ಆಶ್ರಯಿಸಬೇಕಾದ ಅವಶ್ಯಕತೆಯನ್ನು ತಿಳಿಸಲು. ಹೀಗೆ ಇಂತಹ ರಥದ ಸಾರಥಿಯಾಗಿ ಸಾಗಲು ಈ ನಾರು ಬಟ್ಟೆಯೆಂಬ ಚಾವಟಿ ಧರಿಸಿ ತಪಸ್ಸೆಂಬ ಸಂಗ್ರಾಮಕ್ಕೆ ಸಿದ್ಧನಾಗು. ಕ್ಷತ್ರಿಯೋಚಿತವಾದ ಯುದ್ಧ ಉದಾಹರಿಸಿ ಕವಿ ತುಂಬಾ ಸಮಯಪ್ರಜ್ಞೆ ಮೆರೆದಿದ್ದಾನೆ. ನಮ್ಮ ಬದುಕೂ ಒಂದು ಸಂಗ್ರಾಮವೇ ಸರಿ. ನಾನಾ ಗ್ರಾಮಗಳಲ್ಲಿ ನಡೆಯುವ ಸಂಗರವದು. ಅಲ್ಲಿ ಸುಖಿಯಾಗಿ ಬಾಳಲು ನಾರುಬಟ್ಟಯಂತೆ ಸರಳತೆ ಬೇಕು. ಎತ್ತೆತ್ತಲೋ ಸುತ್ತುವ ಮನದ ಆಲೋಚನೆಗಳಿಗೆ ಅಂಕುಶ ಹಾಕಲು ಸಂಯಮ ರೂಢಿಸಿಕೊಳ್ಳಬೇಕು. ನಡೆ ನುಡಿ ಭೂಷಣ ಆಹಾರ ಸರಳವಾಗಿದ್ದಾಗ ಇಂದ್ರಿಯಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅವುಗಳು ನಮ್ಮ ಬಾಳರಥವನ್ನು ಕೆಟ್ಟ ದಾರಿಯಲ್ಲಿ ಕರೆದುಕೊಂಡು ಹೋಗಿ ಬೀಳಿಸಿ ಕೊಲ್ಲುತ್ತವೆ. ನಾವು ಹತ್ತಬೇಕಾಗಿರುವ ರಥಕ್ಕೆ ಧರ್ಮದ ಹೆಸರಿದೆಯೇ ಎಂಬ ಪ್ರಶ್ನೆ ಮಾಡಿಕೊಳ್ಳಬೇಕು. ಧರ್ಮವೆಂದರೆ ಸಮಯ ಸಂದರ್ಭದಲ್ಲಿ ಸರಿ ತಪ್ಪುಗಳ ವಿವೇಚನೆ ಹೊರತು ಯಾವುದೇ ಮತವಲ್ಲ. ಇಂತಹ ಧರ್ಮವೆಂಬ ರಥವೇರಿ ಜೀವನವನ್ನು ಸುಗಮವಾಗಿ ಸಾಗಿಸಬಹುದೆಂಬ ಕವಿಯ ಭಾವ ಸುಂದರವಾಗಿ ಪ್ರಸ್ತುತವಾಗಿದೆ. ಗೀತೆಯ ಮಾತೂ ಇದೇ - ಇಂದ್ರಿಯಾಣಿ ಹಯಾನ್ಯಾಹು: . ಇಂದ್ರಿಯಗಳೇ ಕುದುರೆಗಳು ಅವುಗಳ ನಿಯಂತ್ರಣಕ್ಕೆ ನಾರುಬಟ್ಟೆಯಂತೆ ಇರುವ ಸರಳತೆ ಅತೀ ಅವಶ್ಯ._
📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
*तप:सङ्ग्रामकवचं नियमद्विरदाङ्कुश: । खलीनमिन्द्रियाश्वानां गृह्यतां धर्मसारथि: ।।*
_ಲಕ್ಷ್ಮಣ ಎಷ್ಟು ಹೇಳಿದರೂ ಕೇಳದೇ ರಾಮನ ಪಾದಸೇವೆಗಾಗಿ ತಾನೂ ಕಾಡಿಗೆ ಬರುತ್ತೇನೆಂದು ಸೀತೆಯ ಬಳಿಯೂ ನಿವೇದಿಸಿಕೊಳ್ಳುತ್ತಾನೆ. ಸೀತೆ ಅವನ ಆಗಮನಕ್ಕೆ ಒಪ್ಪಿಗೆ ನೀಡಿದಾಗ ಇಬ್ಬರ ಮನದಿಚ್ಛೆಯಂತೆ ರಾಮನೂ ಸಮ್ಮತಿಸಿ ಅವನಿಗೆ ನಾರುಬಟ್ಟೆ ಕೊಡುತ್ತಾ ನುಡಿಯುವ ಮಾತು. ಈ ವಲ್ಕಲವು ತಪಸ್ಸೆಂಬ ಯುದ್ಧದಲ್ಲಿ ಶೂರನು ಧರಿಸಬೇಕಾದ ಕವಚ. ತೊಡು ಇದನ್ನು, ಅನಂತರ ವನದಲ್ಲಿ ತಪಸ್ಸಿಗೆ ತೊಡಗುವಿಯಂತೆ. ಈ ಯುದ್ಧದಲ್ಲಿ ಆನೆಯನ್ನು ವಶಪಡಿಸಿಕೊಳ್ಳಲು ಮುಖ್ಯವಾಗಿ ಬೇಕಾದ ಅಂಕುಶ ಯಾವುದೆಂದರೆ ಅದು ಮನಸ್ಸಿನ ಸಂಯಮ. ಅದನ್ನು ರೂಢಿಸಿಕೊ. ಇಂದ್ರಿಯಗಳೆಂಬ ಕುದುರೆಗಳನ್ನು ನಿಯಂತ್ರಿಸಲು ಬಳಸುವ ಹಗ್ಗ ಅದೂ ಸಂಯಮವೇ. ಇಂದ್ರಿಯಗಳ ನಿಗ್ರಹಕ್ಕೆ ಅಥವಾ ಕುದುರೆಗಳಂತೆ ಎಲ್ಲೆಲ್ಲೋ ಓಡುವ ಅವುಗಳಿಗೆ ಸಂಯಮವೆಂಬ ಹಗ್ಗದ ನಿಯಂತ್ರಣ ಬೇಕು. ಧರ್ಮವೆಂಬ ರಥದ ಸಾರಥಿಯಾಗಿ ಈ ಸಂಯಮದ ಪ್ರತಿನಿಧಿಯಾಗಿರುವ ಈ ನಾರುಬಟ್ಟೆಗಳನ್ನು ತೆಗೆದುಕೊ. ಇಲ್ಲಿ ಸಂಗ್ರಾಮದ ಉಲ್ಲೇಖ ಯುದ್ಧದಂತೆ ಇಲ್ಲೂ ಏಕಾಗ್ರತೆ ತಾಳ್ಮೆ ಬೇಕಾಗುತ್ತದೆ ಎಂಬ ಸೂಚನೆ ಕೊಡಲು. ಇಲ್ಲದಿದ್ದರೆ ತಪಸ್ಸು ಕೆಟ್ಟು ಹೋಗುವುದು. ನಿಯಮಗಳು ಆನೆಗಳಂತೆ ಸ್ವಚ್ಛಂದತೆಯನ್ನು ಪಡೆದು ನಮಗೆ ಬೇಕಾದ ಹಾಗೇ ಮಾಡಿಕೊಳ್ಳದಿರಲು ಸಂಯಮವೆಂಬ ಅಂಕುಶ. ಇಂದ್ರಿಯಗಳನ್ನು ಅಶ್ವಕ್ಕೆ ಹೋಲಿಸಿರುವುದು ಅವುಗಳ ಚಂಚಲತೆ ಚಪಲತೆಯ ಕಾರಣ. ಅವುಗಳ ನಿಯಂತ್ರಣಕ್ಕೂ ಸಂಯಮವೆಂಬ ಹಗ್ಗ ಬೇಕು. ಅಥವಾ ಈ ನಾರುಬಟ್ಟೆಯೇ ಕುದುರೆಗಳ ಕಡಿವಾಣ. ಅದನ್ನು ಉಟ್ಟಾಗ ಇಂದ್ರಿಯಗಳಲ್ಲಿ ತಾನಾಗಿ ಅಲ್ಪವಾದರೂ ಜಾಗೃತಿ ಮೂಡುತ್ತದೆ.ನಾವು ಕೆಲವು ವಸ್ತ್ರ ಧರಿಸಿದಾಗ ತುಂಬಾ ಸಭ್ಯರಂತೆ ತೋರಿಸಿಕೊಳ್ಳುವುದಿಲ್ಲವೇ , ಹಾಗೆಯೇ ಈ ವಲ್ಕಲವೇ ಇಂದ್ರಿಯಗಳ ಸ್ವೇಚ್ಛಾಚಾರಕ್ಕಿರುವ ಕಡಿವಾಣ. ಧರ್ಮವನ್ನು ರಥಕ್ಕೆ ಹೋಲಿಸಿದ್ದು ಉತ್ತಮ ಲೋಕಗಳನ್ನು ತಪಸ್ಸಿನ ಮೂಲಕ ಹೊಂದಲು ಧರ್ಮವನ್ನು ಆಶ್ರಯಿಸಬೇಕಾದ ಅವಶ್ಯಕತೆಯನ್ನು ತಿಳಿಸಲು. ಹೀಗೆ ಇಂತಹ ರಥದ ಸಾರಥಿಯಾಗಿ ಸಾಗಲು ಈ ನಾರು ಬಟ್ಟೆಯೆಂಬ ಚಾವಟಿ ಧರಿಸಿ ತಪಸ್ಸೆಂಬ ಸಂಗ್ರಾಮಕ್ಕೆ ಸಿದ್ಧನಾಗು. ಕ್ಷತ್ರಿಯೋಚಿತವಾದ ಯುದ್ಧ ಉದಾಹರಿಸಿ ಕವಿ ತುಂಬಾ ಸಮಯಪ್ರಜ್ಞೆ ಮೆರೆದಿದ್ದಾನೆ. ನಮ್ಮ ಬದುಕೂ ಒಂದು ಸಂಗ್ರಾಮವೇ ಸರಿ. ನಾನಾ ಗ್ರಾಮಗಳಲ್ಲಿ ನಡೆಯುವ ಸಂಗರವದು. ಅಲ್ಲಿ ಸುಖಿಯಾಗಿ ಬಾಳಲು ನಾರುಬಟ್ಟಯಂತೆ ಸರಳತೆ ಬೇಕು. ಎತ್ತೆತ್ತಲೋ ಸುತ್ತುವ ಮನದ ಆಲೋಚನೆಗಳಿಗೆ ಅಂಕುಶ ಹಾಕಲು ಸಂಯಮ ರೂಢಿಸಿಕೊಳ್ಳಬೇಕು. ನಡೆ ನುಡಿ ಭೂಷಣ ಆಹಾರ ಸರಳವಾಗಿದ್ದಾಗ ಇಂದ್ರಿಯಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅವುಗಳು ನಮ್ಮ ಬಾಳರಥವನ್ನು ಕೆಟ್ಟ ದಾರಿಯಲ್ಲಿ ಕರೆದುಕೊಂಡು ಹೋಗಿ ಬೀಳಿಸಿ ಕೊಲ್ಲುತ್ತವೆ. ನಾವು ಹತ್ತಬೇಕಾಗಿರುವ ರಥಕ್ಕೆ ಧರ್ಮದ ಹೆಸರಿದೆಯೇ ಎಂಬ ಪ್ರಶ್ನೆ ಮಾಡಿಕೊಳ್ಳಬೇಕು. ಧರ್ಮವೆಂದರೆ ಸಮಯ ಸಂದರ್ಭದಲ್ಲಿ ಸರಿ ತಪ್ಪುಗಳ ವಿವೇಚನೆ ಹೊರತು ಯಾವುದೇ ಮತವಲ್ಲ. ಇಂತಹ ಧರ್ಮವೆಂಬ ರಥವೇರಿ ಜೀವನವನ್ನು ಸುಗಮವಾಗಿ ಸಾಗಿಸಬಹುದೆಂಬ ಕವಿಯ ಭಾವ ಸುಂದರವಾಗಿ ಪ್ರಸ್ತುತವಾಗಿದೆ. ಗೀತೆಯ ಮಾತೂ ಇದೇ - ಇಂದ್ರಿಯಾಣಿ ಹಯಾನ್ಯಾಹು: . ಇಂದ್ರಿಯಗಳೇ ಕುದುರೆಗಳು ಅವುಗಳ ನಿಯಂತ್ರಣಕ್ಕೆ ನಾರುಬಟ್ಟೆಯಂತೆ ಇರುವ ಸರಳತೆ ಅತೀ ಅವಶ್ಯ._
📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ