ಪದಶಕ್ತಿ ೩೫

🏹*ಪದಶಕ್ತಿ* ---೩೫🌄

*ಅಶ್ವಿನೌ*

_*ಪ್ರಶಸ್ತಾಃ ಅಶ್ವಾಃ ಸಂತಿ* _ಎಂಬಂತೆ ಯಾರ ಬಳಿ ಒಳ್ಳೆಯ ಓಡುವ ಕುದುರೆಗಳು ಇವೆಯೋ ಅವರು ಅಶ್ವಿನಿಗಳು. ಇನ್ನೊಂದು ಬಗೆ ನೋಡುವುದಾದರೆ ಅಶ್ವಿನೀ ಎಂದರೆ ಹೆಣ್ಣು ಕುದುರೆ ಅದರಲ್ಲಿ ಹುಟ್ಟಿದ ಕಾರಣ ಇವರು ಅಶ್ವಿನಿಗಳು. ಅಥವಾ ಅಶ್ವರೂಪದ ಜನಕನನ್ನು ಹೊಂದಿದ ಕಾರಣ ದೇವವೈದ್ಯರು ಅಶ್ವಿನಿಗಳೆಂದು ಪ್ರಸಿದ್ಧರಾದರು._
 
*त्वाष्ट्री तु सवितुर्भार्य्या वडवारूपधारिणी ।    असूयत महाभागा सान्तरीक्षेऽश्विनावुभौ”*

_ತ್ವಷ್ಟೃ ಪ್ರಜಾಪತಿಯ ಮಗಳು ಸೂರ್ಯನ ಮೇಲಿನ ಮುನಿಸಿನಿಂದ  ಹೆಣ್ಣು ಕುದುರೆಯ ರೂಪ ತಾಳಿ ವಿಹರಿಸುತ್ತಿದ್ದಾಗ  ಮುನಿಸು ತರವಲ್ಲ ಎಂದು ಅದೇ ರೂಪದಲ್ಲಿ ಸಮೀಪಿಸಿದ ಸೂರ್ಯನ ಸಂಪರ್ಕದಿಂದ ಜನಿಸಿದ ಮಹಿಮರು ಇವರು._

_ಇವರ ಲೋಕಸ್ತುತ್ಯ ಕಾರ್ಯಗಳು ಅನೇಕ. ರುದ್ರನಿಗೆ ಆಹುತಿ ಕೊಡದೇ ವೀರಭದ್ರನಿಂದ ತಲೆಯೇ ಹೋದಾಗ ಆಡಿನ ತಲೆಯನ್ನು ದಕ್ಷನಿಗೆ ಜೋಡಿಸಿದವರು ಇವರು. ಪೂಷಣನಿಗೆ ಹಲ್ಲನ್ನು, ಭಗನಿಗೆ ಕಣ್ಣುಗಳನ್ನು, ವಜ್ರಿ ಎಂದರೆ ಇಂದ್ರನಿಗೆ ಕೈಗಳು ಚಲಿಸುವಂತೆ ಮಾಡಿದ್ದು ( ಬಹುಶಃ ತಮಾಸುರ ಪ್ರಸಂಗದಲ್ಲಿ) ಚಂದ್ರನಿಗೆ ರಾಜಯಕ್ಷ್ಮ ರೋಗದಿಂದ ಮುಕ್ತಿ ಕೊಡಿಸಿದ್ದು, ಭಾರ್ಗವನಿಗೆ ನವಯೌವನ ಕರುಣಿಸಿದ್ದು ಹೀಗೆ ಇವರ ಕಾರ್ಯಗಳು ಅಪಾರ. ಲೋಕಕ್ಕೆ ಉಪಕಾರ ಮಾಡುವ ಬುದ್ಧಿ. ಸಾಂಕ್ರಾಮಿಕ ರೋಗಗಳ ಹಾವಳಿಯ ಕಾಲದಲ್ಲಿ ಅಶ್ವಿನಿಗಳ ಸ್ಮರಣೆಯೇ ರೋಗವನ್ನು ದೂರವಿಡಬಲ್ಲದು._

*ವೈವಸ್ವತಗೊಂದಿಸುವೆ ಕೋಲೆನಿರರುತಿ ಪ್ರಾವಾಹಿಮಿತ್ರಗುರುಪತ್ನೀಗೆ ವಂದಿಸುವೆ |ಕರಿಮುಖ ವಿಶ್ವಕ್ಸೇನ ಪೌಲಸ್ತ್ಯ ಕೋಲೆ ||ಕರಿಮುಖ ವಿಶ್ವಕ್ಸೇನ ಪೌಲಸ್ತ್ಯ ಅಶ್ವಿನೀಗಳಿರಳೂ ಹಗಲೂ ನಾ ಸ್ಮರಿಸೂವೆಮರುತೂ ನಾಲ್ವತ್ತೊಂಬತ್ತುಗುರುವಿಶ್ವೇದೇವ ಹತ್ತು |ಎರಡು ಅಶ್ವೀನೀ ರುದ್ರರ್ಹನ್ನೊಂದೂ*

_ಪ್ರಾಣೇಶದಾಸರ ಈ ಕೃತಿಯಲ್ಲಿ ಅಶ್ವಿನಿದೇವತೆಗಳನ್ನು ಎರಡೆರಡು ಬಾರಿ  ಉಳಿದವರ ಜೊತೆ ಸ್ಮರಿಸಿದ್ದಾರೆ._

*ಗ್ರಸ್ತಾಂ ಸುಪರ್ಣಸ್ಯ ಬಲೇನ ವರ್ತಿಕಾಮಮುಂಚತಾವಶ್ವಿನೌ ಸೌಭಗಾಯ* 

_ಮಹಾಭಾರತದಲ್ಲಿ ಉಪಮನ್ಯುವಿನ ಆಖ್ಯಾನದ ಸಂದರ್ಭದಲ್ಲಿ ಅವನು ದೃಷ್ಟಿಗಾಗಿ ಸ್ತೋತ್ರ ಮಾಡುವನು‌. ಆದಿಪರ್ವದಲ್ಲಿ ಬರುವ ಆ ಸ್ತೋತ್ರದ ಒಂದು ಪಾದ. ಅಶ್ವಿನೀದೇವತೆಗಳು ನನಗೆ ಮಂಗಳ ಉಂಟುಮಾಡಲಿ, ಈ ಕೂಪ ಬಂಧನದಿಂದ ನನ್ನನ್ನು ಗರುಡನಂತೆ ಬಂದು ಬಿಡುಗಡೆಗೊಳಿಸಲಿ ಎಂಬ ಆಶಯ ಇಲ್ಲಿದೆ._

_ಇಂತಹ ಮೇರು ವ್ಯಕ್ತಿತ್ವದ ದೇವವೈದ್ಯರು ನಮ್ಮ ಅಶಿಸ್ತಿನ ದಿನಚರಿಯಿಂದ ಅಥವಾ ಪಾಪಗಳಿಂದ ಬರುವ ಸಕಲರೋಗಗಳನ್ನು ದೂರ ಮಾಡಲೆಂದು ಪ್ರಾರ್ಥಿಸೋಣ_



ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩