ಧರ್ಮಾಚರಣೆ ೬೫

ಧರ್ಮಾಚರಣೆ- ೬೫

ಭಾಸ್ಕರಸ್ಯ ಕರೈಃ ಪೂತಂ ದಿವಾ ಸ್ನಾನಂ ಪ್ರಶಸ್ಯತೇ | ಅಪ್ರಶಸ್ತಂ ನಿಶಿ ಸ್ನಾನಂ ರಾಹೋರನ್ಯತ್ರ ದರ್ಶನಾತ್ || ಪರಾಶರ ಸ್ಮೃತಿ||

ಸೂರ್ಯನ ಕಿರಣ ಸ್ಪರ್ಶಿಸಿದ ನೀರಿನಿಂದ ಮಾಡಿದ ಸ್ನಾನ ಅತ್ಯಂತ ಪವಿತ್ರ ಹಾಗೂ ಆರೋಗ್ಯಕಾರಕ. ರಾತ್ರಿ ಸ್ನಾನವು ಎಂದಿಗೂ ಒಳಿತಲ್ಲ. ಗ್ರಹಣಕಾಲದಲ್ಲಿ ಮಾತ್ರ ಸ್ಪರ್ಶ ಹಾಗೂ ಮೋಕ್ಷದ ಪೂರ್ವೋತ್ತರಗಳಲ್ಲಿ ಸ್ನಾನವು ವಿಹಿತ. ಉಳಿದಂತೆ ಬಂಧುಗಳ ಮರಣ ವಾರ್ತೆ ಕೇಳಿದಾಗ, ಮನೆಯಲ್ಲಿ ಮರಣ ಸಂಭವಿಸಿದಾಗ, ಆಸ್ಪತ್ರೆ ಮೊದಲಾದ ಕಡೆ ಹೋಗಿ ಬಂದಾಗ ಶುದ್ಧಿಗಾಗಿ ಸ್ನಾನ ರಾತ್ರಿಯೂ ಮಾಡಬಹುದೇ ಹೊರತು ಸರ್ವದಾ ಅದು ಅಶ್ರೇಯಸ್ಕರ. ಹಾಗಾಗಿ ಸ್ನಾನವೇನಿದ್ದರೂ ಹಗಲು ನಿದ್ರೆಯೇನಿದ್ದರೂ ರಾತ್ರಿ ಎಂಬ ಮಾತು ಸತ್ಯ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩