ಧರ್ಮಾಚರಣೆ ೫೨
ಧರ್ಮಾಚರಣೆ- ೫೨
ವಿದ್ಯಮಾನೇಷು ಹಸ್ತೇಷು ಬ್ರಾಹ್ಮಣೋ ಜ್ಞಾನದುರ್ಬಲಃ | ತೋಯಂ ಪಿಬತಿ ವಕ್ತ್ರೇಣ ಶ್ವಯೋನೌ ಜಾಯತೇ ಧ್ರುವಮ್ ||ಪರಾಶರ ಸ್ಮೃತಿ||
ಕೈಗಳು ಸರಿಯಾಗಿದ್ದಾಗ ಅವುಗಳಿಂದ ನೀರನ್ನು
ನಾಯಿ- ಬೆಕ್ಕುಗಳಂತೆ ಬಾಯಿಯಿಂದ ಕುಡಿದ ಮನುಜನು ಮುಂದೆ ಪ್ರಾಣಿಯಾಗಿಯೇ ಹುಟ್ಟುವನು. ನಲ್ಲಿ ಅಥವಾ ತೊರೆ,ಕೆರೆ, ನದಿಯ ನೀರನ್ನು ಕುಡಿಯುವಾಗ ಅಥವಾ ಯಾರಾದರೂ ಕೊಡಪಾನ- ಕಲಶ ಮೊದಲಾದವುಗಳಿಂದ ಕುಡಿಯಲೆಂದು ನೀರು ಸುರಿದಾಗ ಕೈಗಳಿಂದ ಕುಡಿಯಬೇಕು. ಕೈಗಳಿಲ್ಲದ ಮನುಜರಿಗೆ ಮಾತ್ರ ವಿನಾಯಿತಿ ಇದೆ. ಇಲ್ಲದಿದ್ದರೆ ಆ ಎಲ್ಲಾ ನೀರೂ ಎಂಜಲಿಗೆ ಸಮವಾಗುವ ಕಾರಣ ಬ್ರಾಹ್ಮಣನನ್ನು ಉದ್ದೇಶಿಸಿ ಎಲ್ಲರಿಗೂ ಬೋಧಿಸಿರುವುದು. ಭಗವಂತ ಕೊಟ್ಟ ಅಮೂಲ್ಯ ಸಂಪತ್ತು ಎಲ್ಲರ ಬಳಕೆಗೆ ಸಿಗಬೇಕೆಂಬ ಉದಾತ್ತ ಚಿಂತನೆ ಇಲ್ಲಿದೆ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ