ಧರ್ಮಾಚರಣೆ ೧೩೦

ಧರ್ಮಾಚರಣೆ-೧೩೦

ದಾನ ನೀಡಲು ಯಾರು ಅಯೋಗ್ಯರು ಎನ್ನುವುದನ್ನು ಮನುಸ್ಮೃತಿ ಹೀಗೆ ಹೇಳಿದೆ-

ವಂಚನೆ ಮಾಡಿ ಬದುಕುವವನೂ, ವೇದವನ್ನು ಮನ್ನಿಸದವನೂ, ಯಾವೊಂದು ವ್ರತ ಮಾಡದವನೂ, ಮಂತ್ರಗಳನ್ನು ಪಠಿಸದವನೂ, ಕೇವಲ ಹುಟ್ಟಿನಿಂದ ಮಾತ್ರ ತಾನು ಈ ಜಾತಿಯವನೆಂದು ಹೇಳಿಕೊಳ್ಳುವವನು ( ಸಂಧ್ಯಾದಿ ಮಾಡದೆ ಹೆಸರಿಗೆ ಬ್ರಾಹ್ಮಣನಾದವನು) , ಅಗ್ನಿಹೋತ್ರ ಹಾಳುಮಾಡುವವನು, ಮಾತಾ-ಪಿತೃ ದ್ವೇಷಿಯೂ, ಪಾಪಕರ್ಮರತನೂ, ಅನರ್ಹರಿಗೂ ವೇದ ಬೋಧಿಸುವವನು, ಧೂರ್ತನು, ದಾನದ ಧನ ದುಷ್ಕರ್ಮಕ್ಕೆ ಬಳಸುವವನು, ಮೂರು ತಲೆಮಾರಿನಿಂದ ಮನೆಯಲ್ಲಿ ಪೂಜೆ ಆಗದೆ ವಾಸಿಸುವವನು, ನಿಂದ್ಯರನ್ನು ಸ್ತುತಿಸುವವನು, ಸಮಯಾನುಸಾರ ನಿತ್ಯಕರ್ಮ ಮಾಡದಿರುವವನಿಗೆ ಕೊಟ್ಟ ದಾನ ಎಲ್ಲಾ ರೀತಿಯಿಂದಲೂ ನಿಷ್ಫಲ. ಹಾಗಾಗಿ ಸುಮ್ಮನೆ ಗೌಜಿ ಆಗಲೆಂದು ಐವತ್ತು ಅಥವಾ ನೂರು ಜನರಿಗೆ  ದಾನ ಕೊಟ್ಟು ಪಾಪ  ಭಾಜನನಾಗಬಾರದು. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩