ಧರ್ಮಾಚರಣೆ ೧೨೪

ಧರ್ಮಾಚರಣೆ-೧೨೪

ಭೂಶುದ್ಧಿಮಾರ್ಜನಾದ್ದಾಹಾತ್ಕಾಲಾದ್ಗೋಕ್ರಮಣಾಸ್ತಥಾ | ಸೇಕಾದುಲ್ಲೇಪಾದ್ಗೃಹಂ ಮಾರ್ಜನಲೇಪನಾತ್ || ಯಾಜ್ಞವಲ್ಕ್ಯ ಸ್ಮೃತಿ||

ಭೂಶುದ್ಧಿ ಮಾಡಬೇಕಾದರೆ ಪೊರಕೆಯಿಂದ ಗುಡಿಸಬೇಕು. ಹೋಮ-ಹವನ ಮಾಡುವುದರಿಂದ ಶುದ್ಧವಾಗುತ್ತದೆ. ಉದಕಶಾಂತಿ ಮೊದಲಾದವುಗಳ ಜಲಪ್ರೋಕ್ಷಣೆಯಿಂದ ಶುದ್ಧವಾಗುವುದು. ಗೋ ಸಂಚಾರದಿಂದ ಸರ್ವಶುದ್ಧಿ ಉಂಟಾಗುವುದು. ಗೋಮೂತ್ರ-ಗೋಮಯದ ಸಿಂಪಡಣೆಯಿಂದ ಪವಿತ್ರವಾಗುವುದು. ಸೆಗಣಿ ಸಾರಿಸುವುದರಿಂದಲೂ ಇದನ್ನು ಸಾಧಿಸಬಹುದು. ಹೆರಿಗೆಯಾದಾಗ-ಮೃತರಾದಾಗ-ಸ್ನಾನ,ಪೂಜೆ ಮಾಡದೇ ಉಣ್ಣಾಗ- ನಾಯಿ,ಹಂದಿ, ಕತ್ತೆ ಪ್ರವೇಶಿಸಿದಾಗ- ಇದ್ದಿಲು,ತೌಡು, ಕೂದಲು, ಕೆಟ್ಟ ಬೂದಿಯಿಂದ- ಒಂಟೆ,ಕೋಳಿ ಮೊದಲಾದವುಗಳ ವಾಸದಿಂದ ಅಶುದ್ಧವೆನಿಸಿದಾಗ ಈ ಮೇಲಿನ ಉಪಾಯಗಳನ್ನು ಅನುಸರಿಸಬೇಕು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩